AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿ ಅರ್ಥವಾಗದಿರೋರು ಎದ್ದು ಹೋಗಬಹುದು -ಅಧಿಕಾರಿಯ ಮಾತಿಗೆ ಭುಗಿಲೆದ್ದ ಆಕ್ರೋಶ

ದೆಹಲಿ: ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯ ಆಯೋಜಿಸಿದ್ದ ಆನ್​ಲೈನ್​ ತರಬೇತಿ ವಿಚಾರ ಸಂಕಿರಣ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಆಗಸ್ಟ್​ 18ರಿಂದ 21ರವರೆಗೆ ರಾಷ್ಟ್ರಮಟ್ಟದಲ್ಲಿ ಆಯೋಜಿಸಿಲಾಗಿದ್ದ ಆನ್​​ಲೈನ್​ ಸಂಕಿರಣವು ಮತ್ತೊಂದು ಭಾಷಾ ಸಮರಕ್ಕೆ ಅಣಿಮಾಡಿಕೊಟ್ಟಿದೆ. ಹೌದು, ಆಯುಷ್ ಸಚಿವಾಲಯ ರಾಷ್ಟ್ರಮಟ್ಟದಲ್ಲಿ ಆಯೋಜಿಸಿದ್ದ ಆನ್​ಲೈನ್​ ತರಬೇತಿ ಸಂಕಿರಣದಲ್ಲಿ ಸುಮಾರು 350ಕ್ಕು ಹೆಚ್ಚು ಜನ ಪಾಲ್ಗೊಂಡಿದ್ದರು. ಯೋಗ ತರಬೇತಿ ಕುರಿತು ಆಯೋಜಿಸಲಾಗಿದ್ದ ಈ ಆನ್​ಲೈನ್​ ಸಂಕಿರಣದಲ್ಲಿ ತಮಿಳುನಾಡಿನ ಸುಮಾರು 37 ವೈದ್ಯರು ಸಹ ಭಾಗಿಯಿದ್ದರು. ಈ ವೈದ್ಯರು ಹೇಳುವ ಪ್ರಕಾರ […]

ಹಿಂದಿ ಅರ್ಥವಾಗದಿರೋರು ಎದ್ದು ಹೋಗಬಹುದು -ಅಧಿಕಾರಿಯ ಮಾತಿಗೆ ಭುಗಿಲೆದ್ದ ಆಕ್ರೋಶ
KUSHAL V
|

Updated on: Aug 22, 2020 | 5:35 PM

Share

ದೆಹಲಿ: ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯ ಆಯೋಜಿಸಿದ್ದ ಆನ್​ಲೈನ್​ ತರಬೇತಿ ವಿಚಾರ ಸಂಕಿರಣ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಆಗಸ್ಟ್​ 18ರಿಂದ 21ರವರೆಗೆ ರಾಷ್ಟ್ರಮಟ್ಟದಲ್ಲಿ ಆಯೋಜಿಸಿಲಾಗಿದ್ದ ಆನ್​​ಲೈನ್​ ಸಂಕಿರಣವು ಮತ್ತೊಂದು ಭಾಷಾ ಸಮರಕ್ಕೆ ಅಣಿಮಾಡಿಕೊಟ್ಟಿದೆ. ಹೌದು, ಆಯುಷ್ ಸಚಿವಾಲಯ ರಾಷ್ಟ್ರಮಟ್ಟದಲ್ಲಿ ಆಯೋಜಿಸಿದ್ದ ಆನ್​ಲೈನ್​ ತರಬೇತಿ ಸಂಕಿರಣದಲ್ಲಿ ಸುಮಾರು 350ಕ್ಕು ಹೆಚ್ಚು ಜನ ಪಾಲ್ಗೊಂಡಿದ್ದರು. ಯೋಗ ತರಬೇತಿ ಕುರಿತು ಆಯೋಜಿಸಲಾಗಿದ್ದ ಈ ಆನ್​ಲೈನ್​ ಸಂಕಿರಣದಲ್ಲಿ ತಮಿಳುನಾಡಿನ ಸುಮಾರು 37 ವೈದ್ಯರು ಸಹ ಭಾಗಿಯಿದ್ದರು. ಈ ವೈದ್ಯರು ಹೇಳುವ ಪ್ರಕಾರ ಸಂಕಿರಣದಲ್ಲಿ ನಡೆದ ಬಹಳಷ್ಟು ತರಬೇತಿ ಕ್ಲಾಸ್​ಗಳನ್ನು ಬಹುಪಾಲು ಹಿಂದಿಯಲ್ಲೇ ನಡೆಸಲಾಯಿತು. ವೈದ್ಯರಿಗೆ ಹಿಂದಿ ಅರ್ಥವಾಗದ ಕಾರಣ ಕ್ಲಾಸ್​ಗಳನ್ನು ಇಂಗ್ಲಿಷ್​ನಲ್ಲಿ ನಡೆಸಲು ಮನವಿ ಮಾಡಿದರೂ ಅದಕ್ಕೆ ಯಾರೂ ಸ್ಪಂದಿಸಲಿಲ್ಲ ಎಂದು ತಿಳಿದುಬಂದಿದೆ.

ಈ ನಡುವೆ ಸಂಕಿರಣದ ಅಂತಿಮ ದಿನದಂದು ಆಯುಷ್ ಸಚಿವಾಲಯದ ಕಾರ್ಯದರ್ಶಿಗಳಾದ ವೈದ್ಯ ರಾಜೇಶ್​ ಕೊಟೇಚಾರವರು ತಮ್ಮ ಭಾಷಣವನ್ನು ಹಿಂದಿಯಲ್ಲಿ ಮಾಡಲು ಪ್ರಾರಂಭಿಸಿದ್ದರಂತೆ. ಇದಕ್ಕೆ ತಮಿಳುನಾಡಿನ ವೈದ್ಯರು ದಯವಿಟ್ಟು ಇಂಗ್ಲಿಷ್​ನಲ್ಲಿ ಮಾತನಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಕೊಟೇಚಾರವರು ನನಗೆ ಸಮರ್ಪಕವಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ. ಹಾಗಾಗಿ, ನಾನು ಹಿಂದಿಯಲ್ಲಿ ಮಾತನಾಡುತ್ತೇನೆ. ಹಿಂದಿ ಅರ್ಥವಾಗದೆ ಇರುವವರು ಸೆಷನ್​ ಬಿಟ್ಟು ಹೋಗಬಹುದು ಎಂದು ಹೇಳಿದ್ದಾರಂತೆ.

ಕಾರ್ಯದರ್ಶಿ ಕೊಟೇಚಾರ ಮಾತಿಗೆ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. DMK ಸಂಸದೆ ಕನಿಮೋಳಿ ಮತ್ತು ಕಾಂಗ್ರೆಸ್​ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ P ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಸಹ ಇದನ್ನು ಖಂಡಿಸಿದ್ದಾರೆ. ಸಂಸದೆ ಕನಿಮೋಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಆಗ್ರಹಿಸಿ ಸಹ ಕೇಂದ್ರ ಆಯುಷ್​ ಸಚಿವ ಶ್ರೀಪಾದ್ ನಾಯಕ್​ರಿಗೆ ಪತ್ರ ಬರೆದಿದ್ದಾರೆ.

Follow Us
KUSHAL V
KUSHAL V
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ