AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದಿ ಅರ್ಥವಾಗದಿರೋರು ಎದ್ದು ಹೋಗಬಹುದು -ಅಧಿಕಾರಿಯ ಮಾತಿಗೆ ಭುಗಿಲೆದ್ದ ಆಕ್ರೋಶ

ದೆಹಲಿ: ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯ ಆಯೋಜಿಸಿದ್ದ ಆನ್​ಲೈನ್​ ತರಬೇತಿ ವಿಚಾರ ಸಂಕಿರಣ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಆಗಸ್ಟ್​ 18ರಿಂದ 21ರವರೆಗೆ ರಾಷ್ಟ್ರಮಟ್ಟದಲ್ಲಿ ಆಯೋಜಿಸಿಲಾಗಿದ್ದ ಆನ್​​ಲೈನ್​ ಸಂಕಿರಣವು ಮತ್ತೊಂದು ಭಾಷಾ ಸಮರಕ್ಕೆ ಅಣಿಮಾಡಿಕೊಟ್ಟಿದೆ. ಹೌದು, ಆಯುಷ್ ಸಚಿವಾಲಯ ರಾಷ್ಟ್ರಮಟ್ಟದಲ್ಲಿ ಆಯೋಜಿಸಿದ್ದ ಆನ್​ಲೈನ್​ ತರಬೇತಿ ಸಂಕಿರಣದಲ್ಲಿ ಸುಮಾರು 350ಕ್ಕು ಹೆಚ್ಚು ಜನ ಪಾಲ್ಗೊಂಡಿದ್ದರು. ಯೋಗ ತರಬೇತಿ ಕುರಿತು ಆಯೋಜಿಸಲಾಗಿದ್ದ ಈ ಆನ್​ಲೈನ್​ ಸಂಕಿರಣದಲ್ಲಿ ತಮಿಳುನಾಡಿನ ಸುಮಾರು 37 ವೈದ್ಯರು ಸಹ ಭಾಗಿಯಿದ್ದರು. ಈ ವೈದ್ಯರು ಹೇಳುವ ಪ್ರಕಾರ […]

ಹಿಂದಿ ಅರ್ಥವಾಗದಿರೋರು ಎದ್ದು ಹೋಗಬಹುದು -ಅಧಿಕಾರಿಯ ಮಾತಿಗೆ ಭುಗಿಲೆದ್ದ ಆಕ್ರೋಶ
KUSHAL V
|

Updated on: Aug 22, 2020 | 5:35 PM

Share

ದೆಹಲಿ: ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯ ಆಯೋಜಿಸಿದ್ದ ಆನ್​ಲೈನ್​ ತರಬೇತಿ ವಿಚಾರ ಸಂಕಿರಣ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಆಗಸ್ಟ್​ 18ರಿಂದ 21ರವರೆಗೆ ರಾಷ್ಟ್ರಮಟ್ಟದಲ್ಲಿ ಆಯೋಜಿಸಿಲಾಗಿದ್ದ ಆನ್​​ಲೈನ್​ ಸಂಕಿರಣವು ಮತ್ತೊಂದು ಭಾಷಾ ಸಮರಕ್ಕೆ ಅಣಿಮಾಡಿಕೊಟ್ಟಿದೆ. ಹೌದು, ಆಯುಷ್ ಸಚಿವಾಲಯ ರಾಷ್ಟ್ರಮಟ್ಟದಲ್ಲಿ ಆಯೋಜಿಸಿದ್ದ ಆನ್​ಲೈನ್​ ತರಬೇತಿ ಸಂಕಿರಣದಲ್ಲಿ ಸುಮಾರು 350ಕ್ಕು ಹೆಚ್ಚು ಜನ ಪಾಲ್ಗೊಂಡಿದ್ದರು. ಯೋಗ ತರಬೇತಿ ಕುರಿತು ಆಯೋಜಿಸಲಾಗಿದ್ದ ಈ ಆನ್​ಲೈನ್​ ಸಂಕಿರಣದಲ್ಲಿ ತಮಿಳುನಾಡಿನ ಸುಮಾರು 37 ವೈದ್ಯರು ಸಹ ಭಾಗಿಯಿದ್ದರು. ಈ ವೈದ್ಯರು ಹೇಳುವ ಪ್ರಕಾರ ಸಂಕಿರಣದಲ್ಲಿ ನಡೆದ ಬಹಳಷ್ಟು ತರಬೇತಿ ಕ್ಲಾಸ್​ಗಳನ್ನು ಬಹುಪಾಲು ಹಿಂದಿಯಲ್ಲೇ ನಡೆಸಲಾಯಿತು. ವೈದ್ಯರಿಗೆ ಹಿಂದಿ ಅರ್ಥವಾಗದ ಕಾರಣ ಕ್ಲಾಸ್​ಗಳನ್ನು ಇಂಗ್ಲಿಷ್​ನಲ್ಲಿ ನಡೆಸಲು ಮನವಿ ಮಾಡಿದರೂ ಅದಕ್ಕೆ ಯಾರೂ ಸ್ಪಂದಿಸಲಿಲ್ಲ ಎಂದು ತಿಳಿದುಬಂದಿದೆ.

ಈ ನಡುವೆ ಸಂಕಿರಣದ ಅಂತಿಮ ದಿನದಂದು ಆಯುಷ್ ಸಚಿವಾಲಯದ ಕಾರ್ಯದರ್ಶಿಗಳಾದ ವೈದ್ಯ ರಾಜೇಶ್​ ಕೊಟೇಚಾರವರು ತಮ್ಮ ಭಾಷಣವನ್ನು ಹಿಂದಿಯಲ್ಲಿ ಮಾಡಲು ಪ್ರಾರಂಭಿಸಿದ್ದರಂತೆ. ಇದಕ್ಕೆ ತಮಿಳುನಾಡಿನ ವೈದ್ಯರು ದಯವಿಟ್ಟು ಇಂಗ್ಲಿಷ್​ನಲ್ಲಿ ಮಾತನಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಕೊಟೇಚಾರವರು ನನಗೆ ಸಮರ್ಪಕವಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ. ಹಾಗಾಗಿ, ನಾನು ಹಿಂದಿಯಲ್ಲಿ ಮಾತನಾಡುತ್ತೇನೆ. ಹಿಂದಿ ಅರ್ಥವಾಗದೆ ಇರುವವರು ಸೆಷನ್​ ಬಿಟ್ಟು ಹೋಗಬಹುದು ಎಂದು ಹೇಳಿದ್ದಾರಂತೆ.

ಕಾರ್ಯದರ್ಶಿ ಕೊಟೇಚಾರ ಮಾತಿಗೆ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. DMK ಸಂಸದೆ ಕನಿಮೋಳಿ ಮತ್ತು ಕಾಂಗ್ರೆಸ್​ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ P ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಸಹ ಇದನ್ನು ಖಂಡಿಸಿದ್ದಾರೆ. ಸಂಸದೆ ಕನಿಮೋಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಆಗ್ರಹಿಸಿ ಸಹ ಕೇಂದ್ರ ಆಯುಷ್​ ಸಚಿವ ಶ್ರೀಪಾದ್ ನಾಯಕ್​ರಿಗೆ ಪತ್ರ ಬರೆದಿದ್ದಾರೆ.

Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ