AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವರಾತ್ರಿ ಪ್ರಯುಕ್ತ ಗಂಗಾಜಲ ತುಂಬಿದ 21 ಕಲಶಗಳನ್ನು ಎದೆಯ ಮೇಲಿಟ್ಟು ಪೂಜೆ ಸಲ್ಲಿಸಿದ ಪಾಟ್ನಾದ ಅರ್ಚಕ

Navratri 2021: ಪಾಟ್ನಾದ ದುರ್ಗಾ ದೇವಿಯ ದೇವಸ್ಥಾನದ ಅರ್ಚಕ ನಾಗೇಶ್ವರ ಬಾಬಾ, ಗಂಗಾಜಲ ತುಂಬಿದ 21 ಕಲಶಗಳನ್ನು ತನ್ನ ಎದೆಯ ಮೇಲೆ ಇಟ್ಟುಕೊಂಡು ದುರ್ಗಾದೇವಿಯನ್ನು ಪೂಜಿಸಲು ಆರಂಭಿಸಿದ್ದಾರೆ.

ನವರಾತ್ರಿ ಪ್ರಯುಕ್ತ ಗಂಗಾಜಲ ತುಂಬಿದ 21 ಕಲಶಗಳನ್ನು ಎದೆಯ ಮೇಲಿಟ್ಟು ಪೂಜೆ ಸಲ್ಲಿಸಿದ ಪಾಟ್ನಾದ ಅರ್ಚಕ
ನವರಾತ್ರಿ ಪ್ರಯುಕ್ತ ಎದೆಯ ಮೇಲೆ 21 ಕಲಶಗಳನ್ನು ಇಟ್ಟುಕೊಂಡು ಪೂಜೆ ಕೈಗೊಂಡ ಪಾಟ್ನಾದ ಅರ್ಚಕ
TV9 Web
| Edited By: |

Updated on:Oct 08, 2021 | 11:14 AM

Share

ನವರಾತ್ರಿ ಆಚರಣೆ ಕಳೆದ ಗುರುವಾರದಿಂದ ಪ್ರಾರಂಭವಾಗಿದೆ. ದೇವಿಯ ಆರಾಧನೆಯಲ್ಲಿ ಭಕ್ತರು ಹೇಗೆ ವಿಭಿನ್ನವಾಗಿರುತ್ತಾರೆಯೋ ಅದೇ ರೀತಿ ಭಕ್ತಿಯ ವಿಧಾನವೂ ಸಹ ವಿಭಿನ್ನವಾಗಿರುತ್ತದೆ. ನವರಾತ್ರಿಯ ವಿಶೇಷವಾಗಿ ವಿವಿಧ ಆಚರಣೆಗಳಲ್ಲಿ ಭಕ್ತರು ತೊಡಗಿಕೊಳ್ಳುತ್ತಾರೆ. ಭಕ್ತರು ಕಲಶವನ್ನು ಸ್ಥಾಪಿಸಿ ವಿಶೇಷ ಪೂಜೆ ಕೈಗೊಳ್ಳುವ ಮೂಲಕ ದೇವಿ ದುರ್ಗೆಯ ಮೊರೆ ಹೋಗುತ್ತಾರೆ. ಕೆಲವರು ಒಂಭತ್ತು ದಿನಗಳ ಕಾಲ ನಡೆಯುವ ಈ ನವರಾತ್ರಿ ವಿಶೇಷವಾಗಿ ಉಪವಾಸ ಕೈಗೊಳ್ಳುತ್ತಾರೆ. ಅದೇ ರೀತಿ ಪಾಟ್ನಾದ ಅರ್ಚಕ ಗಂಗಾಜಲ ತುಂಬಿದ 21 ಕಲಶಗಳನ್ನು ಸ್ಥಾಪಿಸಿ ವಿಶೇಷ ಪೂಜೆ ಕೈಗೊಳ್ಳುವ ಆಚರಣೆಯನ್ನು ಮಾಡುತ್ತಿದ್ದಾರೆ. ಅಚ್ಚರಿಯೆಂದರೆ ಅರ್ಚಕರು ತಮ್ಮ ಎದೆಯ ಮೇಲೆ 21 ಕಲಶಗಳನ್ನೂ ಸಹ ಇಟ್ಟುಕೊಂಡು ದೇವಿಯ ಆರಾಧನೆಯಲ್ಲಿ ತೊಡಗಿಕೊಂಡಿದ್ದಾರೆ.

ದುರ್ಗಾದೇವಿಯನ್ನು ಒಂಭತ್ತು ದಿನಗಳ ಕಾಲ ಅದ್ದೂರಿಯಾಗಿ ಪೂಜಿಸಲಾಗುತ್ತದೆ. ಈ ವಿಶೇಷವಾಗಿ ಪಾಟ್ನಾದ ಅರ್ಚಕರು ವಿಶಿಷ್ಟವಾದ ಆಚರಣೆಯನ್ನು ಮಾಡುತ್ತಿದ್ದಾರೆ. ದೇವಸ್ಥಾನದ ಅರ್ಚಕರಾದ ನಾಗೇಶ್ವರ ಬಾಬಾ ಅವರು ಎದೆಯ ಮೇಲೆ ಗಂಗಾಜಲ ತುಂಬಿದ 21 ಕಲಶಗಳನ್ನು ಸ್ಥಾಪಿಸಿದ್ದಾರೆ. ಕಳೆದ 25 ವರ್ಷಗಳಿಂದ ಈ ಆಚರಣೆಯನ್ನು ಮಾಡುತ್ತಿರುವುದಾಗಿ ಎಎನ್ಐ ಜತೆ ಮಾಹಿತಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಪಾಟ್ನಾದ ದುರ್ಗಾ ದೇವಿಯ ದೇವಸ್ಥಾನದ ಅರ್ಚಕ ನಾಗೇಶ್ವರ ಬಾಬಾ, ಗಂಗಾಜಲ ತುಂಬಿದ 21 ಕಲಶಗಳನ್ನು ತನ್ನ ಎದೆಯ ಮೇಲೆ ಇಟ್ಟುಕೊಂಡು ದುರ್ಗಾದೇವಿಯನ್ನು ಪೂಜಿಸಲು ಆರಂಭಿಸಿದ್ದಾರೆ. ನವರಾತ್ರಿ ಮುಗಿಯುವವರೆಗೆ ನನ್ನ ಎದೆಯ ಮೇಲೆ ಕಲಶವನ್ನು ಇಟ್ಟುಕೊಳ್ಳುತ್ತೇನೆ. ಕಳೆದ 25 ವರ್ಷಗಳಿಂದಲೂ ಈ ಆಚರಣೆಯಲ್ಲಿ ತೊಡಗಿಕೊಂಡು ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ.

ಚಿತ್ರಗಳಲ್ಲಿ ನೀವು ಗಮನಿಸುವಂತೆ ಅರ್ಚಕರು ತಮ್ಮ ಎದೆಯ ಮೇಲೆ 21 ಕಲಶಗಳನ್ನು ಇಟ್ಟುಕೊಂಡಿರುವುದನ್ನು ನೋಡಬಹುದು. ನವರಾತ್ರಿಯ ಒಂಭತ್ತು ದಿನಗಳವರೆಗೂ ಅರ್ಚಕರು ಉಪವಾಸ ಮಾಡುತ್ತಾ ಆಚರಣೆಯಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:

ನವರಾತ್ರಿ 2021 ಎರಡನೇ ದಿನ: ದೇವಿ ಬ್ರಹ್ಮಚಾರಿಣಿ ಯಾರು? ಇಲ್ಲಿದೆ ಆಕೆಯ ಮನ ಗೆಲ್ಲುವ ಮಂತ್ರ

Durga Puja: ನವರಾತ್ರಿಯ ಮೊದಲ ದಿನ ಹಳದಿ ಬಣ್ಣ ಶ್ರೇಷ್ಠ; ಈ ವಿಶೇಷ ಶೈಲಿಯ ದಿರಿಸುಗಳನ್ನು ನೀವು ಧರಿಸಬಹುದು

Published On - 11:10 am, Fri, 8 October 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ