AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಡಿದ ವರಗಳ ದಯಪಾಲಿಸುತ್ತಿರುವ ಜಲ; ಕ್ಯೂ ನಿಂತ ಜನ, ಎಲ್ಲಿ ಗೊತ್ತಾ!? ನೋಡಿ

ಮರದಿಂದ ನೀರು ಹೇಗೆ ಬರುತ್ತದೆ, ಇಷ್ಟು ವರ್ಷದಿಂದ ಜರುಗದ ಈ ವಿಸ್ಮಯ ಈಗ ಎಲ್ಲಿಂದ ಬರುತ್ತಿದೆ... ಎಂದು ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿಯ ಪ್ರತಿಷ್ಠಾಪನೆ ದಿನದಂದು ಮುಂಜಾನೆಯೇ ಈ ಜಲಧಾರೆ ಕಾಣಿಸಿಕೊಂಡಾಗ ಅಭಿಯಾನಕ್ಕೆ ಹೆಚ್ಚಿನ ಮಹತ್ವ ಸಿಕ್ಕಿದೆ

ಸಾಧು ಶ್ರೀನಾಥ್​
|

Updated on: Jan 24, 2024 | 2:48 PM

Share

ನಿರ್ಮಲ್ ಜಿಲ್ಲೆಯ ಗ್ರಾಮಾಂತರ ಮಂಡಲದ ಲಂಗ್ಡಾಪುರ ಗ್ರಾಮದಲ್ಲಿ ದೊಡ್ಡ ಅರಳಿ ಮರದಿಂದ ನೀರು ಸುರಿಯುತ್ತಿದೆ. ಅದನ್ನು ವೀಕ್ಷಿಸಲು ಜನರು ದೇವಾಲಯದತ್ತ ದಾಪುಗಾಲು ಹಾಕುತ್ತಿದ್ದಾರೆ. ಅದೀಗ ಯಾತ್ರಾಸ್ಥಳವಾಗಿ ಮಾರ್ಪಟ್ಟಿದೆ. ಇಲ್ಲಿನ ನೀರನ್ನು ತೀರ್ಥವಾಗಿ ಸೇವಿಸಿದರೆ ಭಕ್ತಾದಿಗಳ ಇಚ್ಛೆ ನೆರವೇರುತ್ತದೆ ಎಂಬ ಪ್ರಚಾರದಿಂದ ಭಕ್ತರ ದಂಡು ಇತ್ತ ಹರಿದು ಬರುತ್ತಿದೆ. ಮರದ ಕೊಂಬೆಯಿಂದ ನೀರು ಹರಿಯುವುದನ್ನು ಕಂಡು ಅದು ದೇವರ ಲೀಲೆ ಎಂದು ಮರಕ್ಕೆ ಭಕ್ತರು ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ. ಅರಳಿ ಮರದ ನೀರನ್ನು ಮಹಾ ತೀರ್ಥವೆಂದು ಭಾವಿಸಿ ಸೇವನೆ ಮಾಡುತ್ತಿದ್ದಾರೆ.

ಲಂಗ್ಡಾಪುರ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿರುವ ಅರಳಿ ಮರದಿಂದ ಆಕಸ್ಮಿಕವಾಗಿ ಹನಿ ಹನಿ ನೀರು ಬೀಳುತ್ತಿರುವುದನ್ನು ಭಕ್ತರು ಗಮನಿಸಿದರು. ಈ ಸುದ್ದಿ ಬಾಯಿಂದ ಬಾಯಿಗೆ ಹರಿದು ಭಾರೀ ಸಂಖ್ಯೆಯಯಲ್ಲಿ ಮಹಿಳೆಯರು ಮರದ ಕಡೆಗೆ ಓಡೋಡಿ ಬಂದಿದ್ದಾರೆ. ಇದು ಅಕ್ಕಪಕ್ಕದ ಗ್ರಾಮಗಳಿಗೂ ತಿಳಿಯಿತು, ಈ ವಿಚಿತ್ರ ದೃಶ್ಯವನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಸಹ ಮುಗಿಬಿದ್ದಿದ್ದು ಕಂಡುಬಂತು. ಅರಿಶಿನ ಕುಂಕುಮ ಹೂವು ತೆಂಗಿನಕಾಯಿಗಳಿಂದ ಮರಕ್ಕೆ ವಿಶೇಷ ಪೂಜೆ ಮಾಡಿದ್ದಾರೆ.

ಆದರೆ, ಹೀಗೆ ಮರದಿಂದ ನೀರು ಹೇಗೆ ಬರುತ್ತದೆ, ಇಷ್ಟು ವರ್ಷದಿಂದ ಜರುಗದ ಈ ವಿಸ್ಮಯ ಈಗ ಎಲ್ಲಿಂದ ಬರುತ್ತಿದೆ… ಎಂದು ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿಯ ಪ್ರತಿಷ್ಠಾಪನೆ ದಿನದಂದು ಮುಂಜಾನೆಯೇ ಈ ಜಲಧಾರೆ ಕಾಣಿಸಿಕೊಂಡಾಗ ಅಭಿಯಾನಕ್ಕೆ ಹೆಚ್ಚಿನ ಮಹತ್ವ ಸಿಕ್ಕಿತು. ಆದರೆ, ಕೆಲವರು ಇದು ಕೇವಲ ಪ್ರಕೃತಿಯಲ್ಲಿನ ಬದಲಾವಣೆ. ಅದರಲ್ಲಿ ಯಾವುದೇ ಮಹಿಮೆಯಿಲ್ಲ ಎಂದು ನಂಬುತ್ತಾರೆ. ನಿಸರ್ಗ ಎಲ್ಲೆಲ್ಲೂ ವಿಸ್ಮಯಗಳನ್ನು ತೆರೆದಿಡುತ್ತದೆ.. ಕೆಲವೊಮ್ಮೆ ಅದು ನಮ್ಮ ಕಣ್ಣೆದುರು ಕಾಣಿಸಿಕೊಳ್ಳುತ್ತದೆ.

‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ
ಹೆಚ್ಚುತ್ತಲೇ ಇದೆ ‘ಸು ಫ್ರಮ್ ಸೋ’ ಸಿನಿಮಾ ಶೋ ಸಂಖ್ಯೆ; ಕಲೆಕ್ಷನ್ ಹೇಗಿದೆ?
ಹೆಚ್ಚುತ್ತಲೇ ಇದೆ ‘ಸು ಫ್ರಮ್ ಸೋ’ ಸಿನಿಮಾ ಶೋ ಸಂಖ್ಯೆ; ಕಲೆಕ್ಷನ್ ಹೇಗಿದೆ?
ಮತ್ತೆ ಒಂದಾದ ಜೋಡೆತ್ತು: 40 ವರ್ಷಗಳ ಸ್ನೇಹ ಮುಂದುವರಿಕೆ!
ಮತ್ತೆ ಒಂದಾದ ಜೋಡೆತ್ತು: 40 ವರ್ಷಗಳ ಸ್ನೇಹ ಮುಂದುವರಿಕೆ!