AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಡಿದ ವರಗಳ ದಯಪಾಲಿಸುತ್ತಿರುವ ಜಲ; ಕ್ಯೂ ನಿಂತ ಜನ, ಎಲ್ಲಿ ಗೊತ್ತಾ!? ನೋಡಿ

ಮರದಿಂದ ನೀರು ಹೇಗೆ ಬರುತ್ತದೆ, ಇಷ್ಟು ವರ್ಷದಿಂದ ಜರುಗದ ಈ ವಿಸ್ಮಯ ಈಗ ಎಲ್ಲಿಂದ ಬರುತ್ತಿದೆ... ಎಂದು ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿಯ ಪ್ರತಿಷ್ಠಾಪನೆ ದಿನದಂದು ಮುಂಜಾನೆಯೇ ಈ ಜಲಧಾರೆ ಕಾಣಿಸಿಕೊಂಡಾಗ ಅಭಿಯಾನಕ್ಕೆ ಹೆಚ್ಚಿನ ಮಹತ್ವ ಸಿಕ್ಕಿದೆ

ಸಾಧು ಶ್ರೀನಾಥ್​
|

Updated on: Jan 24, 2024 | 2:48 PM

Share

ನಿರ್ಮಲ್ ಜಿಲ್ಲೆಯ ಗ್ರಾಮಾಂತರ ಮಂಡಲದ ಲಂಗ್ಡಾಪುರ ಗ್ರಾಮದಲ್ಲಿ ದೊಡ್ಡ ಅರಳಿ ಮರದಿಂದ ನೀರು ಸುರಿಯುತ್ತಿದೆ. ಅದನ್ನು ವೀಕ್ಷಿಸಲು ಜನರು ದೇವಾಲಯದತ್ತ ದಾಪುಗಾಲು ಹಾಕುತ್ತಿದ್ದಾರೆ. ಅದೀಗ ಯಾತ್ರಾಸ್ಥಳವಾಗಿ ಮಾರ್ಪಟ್ಟಿದೆ. ಇಲ್ಲಿನ ನೀರನ್ನು ತೀರ್ಥವಾಗಿ ಸೇವಿಸಿದರೆ ಭಕ್ತಾದಿಗಳ ಇಚ್ಛೆ ನೆರವೇರುತ್ತದೆ ಎಂಬ ಪ್ರಚಾರದಿಂದ ಭಕ್ತರ ದಂಡು ಇತ್ತ ಹರಿದು ಬರುತ್ತಿದೆ. ಮರದ ಕೊಂಬೆಯಿಂದ ನೀರು ಹರಿಯುವುದನ್ನು ಕಂಡು ಅದು ದೇವರ ಲೀಲೆ ಎಂದು ಮರಕ್ಕೆ ಭಕ್ತರು ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ. ಅರಳಿ ಮರದ ನೀರನ್ನು ಮಹಾ ತೀರ್ಥವೆಂದು ಭಾವಿಸಿ ಸೇವನೆ ಮಾಡುತ್ತಿದ್ದಾರೆ.

ಲಂಗ್ಡಾಪುರ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿರುವ ಅರಳಿ ಮರದಿಂದ ಆಕಸ್ಮಿಕವಾಗಿ ಹನಿ ಹನಿ ನೀರು ಬೀಳುತ್ತಿರುವುದನ್ನು ಭಕ್ತರು ಗಮನಿಸಿದರು. ಈ ಸುದ್ದಿ ಬಾಯಿಂದ ಬಾಯಿಗೆ ಹರಿದು ಭಾರೀ ಸಂಖ್ಯೆಯಯಲ್ಲಿ ಮಹಿಳೆಯರು ಮರದ ಕಡೆಗೆ ಓಡೋಡಿ ಬಂದಿದ್ದಾರೆ. ಇದು ಅಕ್ಕಪಕ್ಕದ ಗ್ರಾಮಗಳಿಗೂ ತಿಳಿಯಿತು, ಈ ವಿಚಿತ್ರ ದೃಶ್ಯವನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಸಹ ಮುಗಿಬಿದ್ದಿದ್ದು ಕಂಡುಬಂತು. ಅರಿಶಿನ ಕುಂಕುಮ ಹೂವು ತೆಂಗಿನಕಾಯಿಗಳಿಂದ ಮರಕ್ಕೆ ವಿಶೇಷ ಪೂಜೆ ಮಾಡಿದ್ದಾರೆ.

ಆದರೆ, ಹೀಗೆ ಮರದಿಂದ ನೀರು ಹೇಗೆ ಬರುತ್ತದೆ, ಇಷ್ಟು ವರ್ಷದಿಂದ ಜರುಗದ ಈ ವಿಸ್ಮಯ ಈಗ ಎಲ್ಲಿಂದ ಬರುತ್ತಿದೆ… ಎಂದು ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿಯ ಪ್ರತಿಷ್ಠಾಪನೆ ದಿನದಂದು ಮುಂಜಾನೆಯೇ ಈ ಜಲಧಾರೆ ಕಾಣಿಸಿಕೊಂಡಾಗ ಅಭಿಯಾನಕ್ಕೆ ಹೆಚ್ಚಿನ ಮಹತ್ವ ಸಿಕ್ಕಿತು. ಆದರೆ, ಕೆಲವರು ಇದು ಕೇವಲ ಪ್ರಕೃತಿಯಲ್ಲಿನ ಬದಲಾವಣೆ. ಅದರಲ್ಲಿ ಯಾವುದೇ ಮಹಿಮೆಯಿಲ್ಲ ಎಂದು ನಂಬುತ್ತಾರೆ. ನಿಸರ್ಗ ಎಲ್ಲೆಲ್ಲೂ ವಿಸ್ಮಯಗಳನ್ನು ತೆರೆದಿಡುತ್ತದೆ.. ಕೆಲವೊಮ್ಮೆ ಅದು ನಮ್ಮ ಕಣ್ಣೆದುರು ಕಾಣಿಸಿಕೊಳ್ಳುತ್ತದೆ.

ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ಉದ್ಯಮಿಗೆ ಹೃದಯಾಘಾತ
ಗೆಳೆಯರೊಂದಿಗೆ ಬ್ಯಾಡ್ಮಿಂಟನ್ ಆಟವಾಡುತ್ತಿದ್ದ ಉದ್ಯಮಿಗೆ ಹೃದಯಾಘಾತ
ಧ್ರುವ ಬಗ್ಗೆ ಅಸಭ್ಯ ಮಾತಾಡಿದ್ದಕ್ಕೆ ಕಾರಣ ತಿಳಿಸಿದ ಕನಕಪುರ ಶ್ರೀನಿವಾಸ್
ಧ್ರುವ ಬಗ್ಗೆ ಅಸಭ್ಯ ಮಾತಾಡಿದ್ದಕ್ಕೆ ಕಾರಣ ತಿಳಿಸಿದ ಕನಕಪುರ ಶ್ರೀನಿವಾಸ್
ಮಕ್ಕಳು ಮೊಬೈಲ್ ಅಡಿಕ್ಷನ್ ಆಗಿರುವ ಲಕ್ಷಣಗಳು ಹೇಗಿರುತ್ತೆ?
ಮಕ್ಕಳು ಮೊಬೈಲ್ ಅಡಿಕ್ಷನ್ ಆಗಿರುವ ಲಕ್ಷಣಗಳು ಹೇಗಿರುತ್ತೆ?
50 ಎಕರೆ ಸವಾಲು ಹಾಕಿದ ಮಾಜಿ ಶಾಸಕರಿಗೆ ವಿಡಿಯೋ ಟಾಂಗ್ ಕೊಟ್ಟ ತಂಗಡಗಿ
50 ಎಕರೆ ಸವಾಲು ಹಾಕಿದ ಮಾಜಿ ಶಾಸಕರಿಗೆ ವಿಡಿಯೋ ಟಾಂಗ್ ಕೊಟ್ಟ ತಂಗಡಗಿ
ಕುಡಿದ ನಶೆಯಲ್ಲಿ ಮಾಡಿದ ಎಡವಟ್ಟಿಗೆ ಸುಟ್ಟು ಕರಕಲಾದ ಬಸ್‌
ಕುಡಿದ ನಶೆಯಲ್ಲಿ ಮಾಡಿದ ಎಡವಟ್ಟಿಗೆ ಸುಟ್ಟು ಕರಕಲಾದ ಬಸ್‌
ಪತ್ನಿಯನ್ನ ಹತ್ಯೆಗೈದ ಪತಿ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಆಯುಕ್ತ
ಪತ್ನಿಯನ್ನ ಹತ್ಯೆಗೈದ ಪತಿ: ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಆಯುಕ್ತ
ಶತಕ ಬಾರಿಸಿ ಇಶಾನ್ ಕಿಶನ್ ದಾಖಲೆ ಮುರಿದ ಪಾಕ್ ಆರಂಭಿಕ
ಶತಕ ಬಾರಿಸಿ ಇಶಾನ್ ಕಿಶನ್ ದಾಖಲೆ ಮುರಿದ ಪಾಕ್ ಆರಂಭಿಕ
ಸಾರ್ವಜನಿಕವಾಗಿ ಮಚ್ಚು ಹಿಡಿದ ಪ್ರಕರಣ: ನಟ ಪ್ರಖ್ಯಾತ್ ಹೇಳಿದ್ದೇನು?
ಸಾರ್ವಜನಿಕವಾಗಿ ಮಚ್ಚು ಹಿಡಿದ ಪ್ರಕರಣ: ನಟ ಪ್ರಖ್ಯಾತ್ ಹೇಳಿದ್ದೇನು?
ಸೆಮಿಫೈನಲ್‌ ಪಂದ್ಯದಲ್ಲಿ ಸತತ 2ನೇ ಶತಕ ಬಾರಿಸಿದ ಸ್ಮರಣ್ ರವಿಚಂದ್ರನ್
ಸೆಮಿಫೈನಲ್‌ ಪಂದ್ಯದಲ್ಲಿ ಸತತ 2ನೇ ಶತಕ ಬಾರಿಸಿದ ಸ್ಮರಣ್ ರವಿಚಂದ್ರನ್
ಅವನ ಸಹವಾಸ ಬೇಡ ಅಂದ್ರೂ ಕೇಳಿಲ್ಲ: ಪ್ರಿಯಕರನ ಅಸಲಿಮುಖ ಬಿಚ್ಚಿಟ್ಟ ಮಂಗಳಮುಖಿ
ಅವನ ಸಹವಾಸ ಬೇಡ ಅಂದ್ರೂ ಕೇಳಿಲ್ಲ: ಪ್ರಿಯಕರನ ಅಸಲಿಮುಖ ಬಿಚ್ಚಿಟ್ಟ ಮಂಗಳಮುಖಿ