AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾಶ್ಮೀರದ ಜನರೀಗ ಸಂತೋಷವಾಗಿದ್ದಾರೆ, ಅವರಿಗೆ ಪ್ರತ್ಯೇಕತಾವಾದಿಗಳ ಆಟ ಅರ್ಥವಾಗಿದೆ‘-ಭಾರತೀಯ ಸೇನೆ ಲೆಫ್ಟಿನೆಂಟ್​ ಜನರಲ್​

ಮಾಧ್ಯಮಗಳೊಂದಿಗೆ ಮಾತನಾಡುವುದಕ್ಕೂ ಮೊದಲು ಲೆಫ್ಟಿನೆಂಟ್​ ಜನರಲ್​ ಡಿಪಿ ಪಾಂಡೆ​ ಕಾಶ್ಮೀರದ 10 ಆರ್ಮಿ ಶಾಲೆಗಳಲ್ಲಿ ಡಿಜಿಟಲ್​ ತರಗತಿಕೋಣೆಗಳನ್ನು ಉದ್ಘಾಟಿಸಿದರು.

‘ಕಾಶ್ಮೀರದ ಜನರೀಗ ಸಂತೋಷವಾಗಿದ್ದಾರೆ, ಅವರಿಗೆ ಪ್ರತ್ಯೇಕತಾವಾದಿಗಳ ಆಟ ಅರ್ಥವಾಗಿದೆ‘-ಭಾರತೀಯ ಸೇನೆ ಲೆಫ್ಟಿನೆಂಟ್​ ಜನರಲ್​
ಲೆಫ್ಟಿನೆಂಟ್​ ಜನರಲ್​ ಡಿಪಿ ಪಾಂಡೆ
TV9 Web
| Updated By: Lakshmi Hegde|

Updated on:Sep 27, 2021 | 4:04 PM

Share

ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಆಡುತ್ತಿರುವ ಆಟವನ್ನು ಇಲ್ಲಿನ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದು ಭಾರತೀಯ ಸೇನೆ ಲೆಫ್ಟಿನೆಂಟ್​ ಜನರಲ್​ ಡಿಪಿ ಪಾಂಡೆ (Lieutenant General DP Pandey) ಹೇಳಿದ್ದಾರೆ. ಸೇನೆಯ 15 ಕಾರ್ಪ್ಸ್​​ನ  ಜನರಲ್​ ಕಮಾಂಡಿಂಗ್​ ಅಧಿಕಾರಿಯಾಗಿರುವ ಡಿಪಿ ಪಾಂಡೆ ಇಂದು ಜಮ್ಮು-ಕಾಶ್ಮೀರದ ಬೋನಿಯಾರ್​ ಎಂಬಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಕಾಶ್ಮೀರದ ಜನರಿಗೆ ಇಲ್ಲಿನ ಪ್ರತ್ಯೇಕತಾವಾದಿಗಳ ಆಟ ಅರ್ಥವಾಗಿದೆ. ಹೀಗಾಗಿ ಎಲ್ಲ ಚಿಂತೆ ಬಿಟ್ಟು ಅವರೂ ಸಂತೋಷವಾಗಿದ್ದಾರೆ. ಅವರ ಮನಸು ಹಾಳುಮಾಡಲು ಈಗ ಯಾವ ಪ್ರತ್ಯೇಕತಾವಾದಿಗಳೂ ಇಲ್ಲ. ಈಗೀಗ ಕಾಶ್ಮೀರದ ಪರಿಸ್ಥಿತಿಯೂ ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ. 

ಗಡಿ ನಿಯಂತ್ರಣಾ ರೇಖೆ (ಎಲ್​ಒಸಿ) ಬಳಿ ಪರಿಸ್ಥಿತಿ ಈಗ ಉತ್ತಮವಾಗಿದೆ. ಅಲ್ಲಿ ಸಾಕಷ್ಟು ಸೈನಿಕರನ್ನು ನಿಯೋಜನೆ ಮಾಡಿ, ಉಗ್ರರ ನುಸುಳುವಿಕೆಯನ್ನು ನಿಯಂತ್ರಿಸಲಾಗಿದೆ. ಎಂತಹ ಪರಿಸ್ಥಿತಿ ಬಂದರೂ ನಾವು ಎದುರಿಸಲು ಸಜ್ಜಾಗಿರುತ್ತೇವೆ. ಕಾಶ್ಮೀರದ ಜನರು ಎಲ್​ಒಸಿ ಬಳಿ ಏನಾಗಬಹುದು ಎಂಬ ಚಿಂತೆಯನ್ನು ಬಿಟ್ಟುಬಿಡಬೇಕು ಎಂದು ಹೇಳಿದರು. ಸಣ್ಣಪುಟ್ಟ ದಾಳಿ, ಅವಘಡಗಳು ನಡೆಯುತ್ತಲೇ ಇರುತ್ತವೆ. ಆದರೆ ಕಾಶ್ಮೀರದ ಒಟ್ಟಾರೆ ಪರಿಸ್ಥಿತಿ ಈಗ ಸುಧಾರಿಸಿದೆ.  ಇಲ್ಲಿ ಪ್ರವಾಸೋದ್ಯಮವೂ ಅತ್ಯುತ್ತಮವಾಗಿ ಸುಧಾರಿಸಿದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡುವುದಕ್ಕೂ ಮೊದಲು ಕಮಾಂಡರ್​ ಕಾಶ್ಮೀರದ 10 ಆರ್ಮಿ ಶಾಲೆಗಳಲ್ಲಿ ಡಿಜಿಟಲ್​ ತರಗತಿಕೋಣೆಗಳನ್ನು ಉದ್ಘಾಟಿಸಿದರು. ನಮ್ಮ ಜೀವನದಲ್ಲಿ ಇದೀಗ ಪ್ರತಿ ಕ್ಷೇತ್ರದಲ್ಲೂ ತಂತ್ರಜ್ಞಾನದ ಪ್ರಭಾವ ಆಗುತ್ತಿದೆ. ಹಾಗೇ, ಭಾರತೀಯ ಸೇನೆ ಕೂಡ ತನ್ನ ಶಾಲೆಗಳಲ್ಲಿ ತಂತ್ರಜ್ಞಾನ ಆಧಾರಿತ, ಆಧುನಿಕ ಮಾದರಿಯ ಬೋಧನೆ ಮತ್ತು ಕಲಿಕಾ ವಿಧಾನ ಅಳವಡಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್​ನಿಂದ ಉದ್ಯೋಗ ನಷ್ಟ; ಜೋಗ ಪ್ರವಾಸಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡ ಬಾಗಲಕೋಟೆಯ ಯುವಕರು

IPL 2021: ಮಂಕಾದ ಲಂಕಾ ಸ್ಪಿನ್ನರ್‌, ಅಬ್ಬರಿಸದ ಟಿಮ್ ಡೇವಿಡ್! ಕೊಹ್ಲಿ ಭರವಸೆಯನ್ನು ಹುಸಿಗೊಳಿಸಿದ ಹೊಸಬರು

(People of Kashmir understood game played by separatists says Indian Army)

Published On - 4:03 pm, Mon, 27 September 21

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ