AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಗ ಸಿಕ್ಕಾಪಟೆ ವೈರಲ್ ಆಗ್ತಿದೆ 1990ರಲ್ಲಿ ನಡೆದ ಮದುವೆಯ ರಿಸಪ್ಷನ್​ ಆಮಂತ್ರಣ ಪತ್ರಿಕೆ; ಯಾಕಿರಬಹುದು ನೋಡಿ !

ಅಂದಹಾಗೆ ಇದು 1990ರ ದಶಕದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ವಿವಾಹವೊಂದರ ಆಮಂತ್ರಣ ಪತ್ರಿಕೆಯಾಗಿದ್ದು, ಇದನ್ನು ನೋಡಿದ ಟ್ವೀಟಿಗರು ವಿಧವಿಧದ ಕಾಮೆಂಟ್​ಗಳನ್ನು ಹಾಕಿದ್ದಾರೆ.

ಈಗ ಸಿಕ್ಕಾಪಟೆ ವೈರಲ್ ಆಗ್ತಿದೆ 1990ರಲ್ಲಿ ನಡೆದ ಮದುವೆಯ ರಿಸಪ್ಷನ್​ ಆಮಂತ್ರಣ ಪತ್ರಿಕೆ; ಯಾಕಿರಬಹುದು ನೋಡಿ !
Invitation Card
TV9 Web
| Edited By: |

Updated on: Jul 06, 2021 | 3:48 PM

Share

ಸಾಮಾನ್ಯವಾಗಿ ಮದುವೆಯಲ್ಲಿ ಎರಡು ವಿಚಾರಗಳಿಗೆ ಪ್ರಾಮುಖ್ಯತೆ ಇದೆ. ಒಂದು ಹೊಸದಾಗಿ ಮದುವೆಯಾದ ಜೋಡಿ ಮತ್ತೊಂದು ಅಲ್ಲಿದ್ದ ಊಟ. ಮೊದಲಿನಿಂದಲೂ ಮದುವೆಗೆ ಹೋದ ಜನರ ಗಮನ ಸೆಳೆಯುವುದು ಇದೆರಡೇ ಆಗಿರುತ್ತದೆ. ಒಂದೊಮ್ಮೆ ಜೋಡಿ ಚೆನ್ನಾಗಿಲ್ಲದಿದ್ದರೂ ಊಟವಂತೂ ಚೆನ್ನಾಗಿರಲೇಬೇಕು. ಮದುವೆ ಅಥವಾ ರಿಸಪ್ಷನ್​ಗೆ ಎಷ್ಟು ರೀತಿಯ ಸಿಹಿತಿಂಡಗಳನ್ನು ಮಾಡಿದ್ದರು? ಊಟಕ್ಕೆ ಏನೇನಿತ್ತು? ಎಷ್ಟು ರುಚಿಯಾಗಿತ್ತು ಎಂಬುದೆಲ್ಲ ಪ್ರಮುಖ ಚರ್ಚೆಯ ವಿಷಯವಾಗುತ್ತದೆ. ಒಂದೇ ಒಂದು ಪದಾರ್ಥ, ತಿನಿಸು ಚೆನ್ನಾಗಿ ಇಲ್ಲದಿದ್ದರೂ ಅದೂ ಹೈಲೈಟ್​ ಆಗುತ್ತದೆ.

ಇದೀಗ 90ರ ದಶಕದಲ್ಲಿ ನಡೆದ ಮದುವೆ ರಿಸಪ್ಷನ್​​ನ ಆಮಂತ್ರಣ ಪತ್ರಿಕೆಯ ಫೋಟೋ ಸಿಕ್ಕಾಪಟೆ ವೈರಲ್​ ಆಗಿದೆ. ಅದೇನಪ್ಪಾ ಅಂಥ ವಿಶೇಷ? ಎಂದು ಕೇಳಿದರೆ ಅದರಲ್ಲಿರುವ ಮೆನುಗಳು. ಅದು ನಿಮಗೆ ಹೋಟೆಲ್​ನಲ್ಲಿ ಕೊಡುವ ಮೆನು ಕಾರ್ಡ್​ನ್ನು ನೆನಪಿಸದೆ ಇದ್ದರೆ ಹೇಳಿ..!

Sad Mandalorian ಎಂಬ ಟ್ವಿಟರ್ ಬಳಕೆದಾರರು ಈ ಆಮಂತ್ರಣ ಪತ್ರಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಇದು ನನ್ನ ತಂದೆ-ತಾಯಿ ಮದುವೆಯ ರಿಸಪ್ಷನ್​ನ ಇನ್ವಿಟೇಶನ್​ ಕಾರ್ಡ್​. ನನ್ನ ಕಸಿನ್​​ಗೆ ಅವರ ಮನೆಯಲ್ಲಿ ಸಿಕ್ಕಿದ್ದು ಎಂದು ಬರೆದುಕೊಂಡಿದ್ದಾರೆ. ಅದರಲ್ಲಿ ರಿಸಪ್ಷನ್​ಗೆ ತಯಾರಿಸಲಾದ ತಿಂಡಿಗಳ ಉದ್ದವಾದ ಪಟ್ಟಿಯೇ ಇದೆ. ಅಷ್ಟೇ ಅಲ್ಲ, ವೆಜ್​ ಮತ್ತು ನಾನ್​ವೆಜ್​ ಎಂದು ವಿಂಗಡಿಸಿ ಬರೆಯಲಾಗಿದೆ. 17 ಬಗೆಯ ತಿನಿಸುಗಳಿದ್ದವು. ಅದರಲ್ಲಿ ಏನೇನಿತ್ತು ಎಂಬುದನ್ನು ನೀವೇ ಒಮ್ಮೆ ಓದಿಕೊಂಡುಬಿಡಿ.

ಅಂದಹಾಗೆ ಇದು 1990ರ ದಶಕದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ವಿವಾಹವೊಂದರ ಆಮಂತ್ರಣ ಪತ್ರಿಕೆಯಾಗಿದ್ದು, ಇದನ್ನು ನೋಡಿದ ಟ್ವೀಟಿಗರು ವಿಧವಿಧದ ಕಾಮೆಂಟ್​ಗಳನ್ನು ಹಾಕಿದ್ದಾರೆ. ಇದರಲ್ಲಿ ಹಾಕಲಾಗಿರುವ ಒಂದೊಂದು ತಿನಿಸುಗಳೂ ಬಾಯಲ್ಲಿ ನೀರೂರಿಸುತ್ತವೆ ಎಂದು ಕೆಲವರು ಬರೆದಿದ್ದಾರೆ. ಅಬ್ಬಾ ಎಂದು ಉದ್ಘಾರವನ್ನೂ ಕೆಲವರು ತೆಗೆದಿದ್ದಾರೆ. ಇಲ್ಲಿದೆ ನೋಡಿ ಇನ್ವಿಟೇಶನ್​ ಕಾರ್ಡ್​ ಫೋಟೋ..

ಇದನ್ನೂ ಓದಿ: ಅಪಘಾತಕ್ಕೀಡಾದ ಕಾರಲ್ಲಿ ನನ್ನ ಪುತ್ರ ಚಿದಾನಂದ ಇರಲಿಲ್ಲ: ಡಿಸಿಎಂ ಲಕ್ಷ್ಮಣ ಸವದಿ Photos of wedding menu card is goes viral in Social Media

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ