AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈಗ ಸಿಕ್ಕಾಪಟೆ ವೈರಲ್ ಆಗ್ತಿದೆ 1990ರಲ್ಲಿ ನಡೆದ ಮದುವೆಯ ರಿಸಪ್ಷನ್​ ಆಮಂತ್ರಣ ಪತ್ರಿಕೆ; ಯಾಕಿರಬಹುದು ನೋಡಿ !

ಅಂದಹಾಗೆ ಇದು 1990ರ ದಶಕದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ವಿವಾಹವೊಂದರ ಆಮಂತ್ರಣ ಪತ್ರಿಕೆಯಾಗಿದ್ದು, ಇದನ್ನು ನೋಡಿದ ಟ್ವೀಟಿಗರು ವಿಧವಿಧದ ಕಾಮೆಂಟ್​ಗಳನ್ನು ಹಾಕಿದ್ದಾರೆ.

ಈಗ ಸಿಕ್ಕಾಪಟೆ ವೈರಲ್ ಆಗ್ತಿದೆ 1990ರಲ್ಲಿ ನಡೆದ ಮದುವೆಯ ರಿಸಪ್ಷನ್​ ಆಮಂತ್ರಣ ಪತ್ರಿಕೆ; ಯಾಕಿರಬಹುದು ನೋಡಿ !
Invitation Card
TV9 Web
| Edited By: |

Updated on: Jul 06, 2021 | 3:48 PM

Share

ಸಾಮಾನ್ಯವಾಗಿ ಮದುವೆಯಲ್ಲಿ ಎರಡು ವಿಚಾರಗಳಿಗೆ ಪ್ರಾಮುಖ್ಯತೆ ಇದೆ. ಒಂದು ಹೊಸದಾಗಿ ಮದುವೆಯಾದ ಜೋಡಿ ಮತ್ತೊಂದು ಅಲ್ಲಿದ್ದ ಊಟ. ಮೊದಲಿನಿಂದಲೂ ಮದುವೆಗೆ ಹೋದ ಜನರ ಗಮನ ಸೆಳೆಯುವುದು ಇದೆರಡೇ ಆಗಿರುತ್ತದೆ. ಒಂದೊಮ್ಮೆ ಜೋಡಿ ಚೆನ್ನಾಗಿಲ್ಲದಿದ್ದರೂ ಊಟವಂತೂ ಚೆನ್ನಾಗಿರಲೇಬೇಕು. ಮದುವೆ ಅಥವಾ ರಿಸಪ್ಷನ್​ಗೆ ಎಷ್ಟು ರೀತಿಯ ಸಿಹಿತಿಂಡಗಳನ್ನು ಮಾಡಿದ್ದರು? ಊಟಕ್ಕೆ ಏನೇನಿತ್ತು? ಎಷ್ಟು ರುಚಿಯಾಗಿತ್ತು ಎಂಬುದೆಲ್ಲ ಪ್ರಮುಖ ಚರ್ಚೆಯ ವಿಷಯವಾಗುತ್ತದೆ. ಒಂದೇ ಒಂದು ಪದಾರ್ಥ, ತಿನಿಸು ಚೆನ್ನಾಗಿ ಇಲ್ಲದಿದ್ದರೂ ಅದೂ ಹೈಲೈಟ್​ ಆಗುತ್ತದೆ.

ಇದೀಗ 90ರ ದಶಕದಲ್ಲಿ ನಡೆದ ಮದುವೆ ರಿಸಪ್ಷನ್​​ನ ಆಮಂತ್ರಣ ಪತ್ರಿಕೆಯ ಫೋಟೋ ಸಿಕ್ಕಾಪಟೆ ವೈರಲ್​ ಆಗಿದೆ. ಅದೇನಪ್ಪಾ ಅಂಥ ವಿಶೇಷ? ಎಂದು ಕೇಳಿದರೆ ಅದರಲ್ಲಿರುವ ಮೆನುಗಳು. ಅದು ನಿಮಗೆ ಹೋಟೆಲ್​ನಲ್ಲಿ ಕೊಡುವ ಮೆನು ಕಾರ್ಡ್​ನ್ನು ನೆನಪಿಸದೆ ಇದ್ದರೆ ಹೇಳಿ..!

Sad Mandalorian ಎಂಬ ಟ್ವಿಟರ್ ಬಳಕೆದಾರರು ಈ ಆಮಂತ್ರಣ ಪತ್ರಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಇದು ನನ್ನ ತಂದೆ-ತಾಯಿ ಮದುವೆಯ ರಿಸಪ್ಷನ್​ನ ಇನ್ವಿಟೇಶನ್​ ಕಾರ್ಡ್​. ನನ್ನ ಕಸಿನ್​​ಗೆ ಅವರ ಮನೆಯಲ್ಲಿ ಸಿಕ್ಕಿದ್ದು ಎಂದು ಬರೆದುಕೊಂಡಿದ್ದಾರೆ. ಅದರಲ್ಲಿ ರಿಸಪ್ಷನ್​ಗೆ ತಯಾರಿಸಲಾದ ತಿಂಡಿಗಳ ಉದ್ದವಾದ ಪಟ್ಟಿಯೇ ಇದೆ. ಅಷ್ಟೇ ಅಲ್ಲ, ವೆಜ್​ ಮತ್ತು ನಾನ್​ವೆಜ್​ ಎಂದು ವಿಂಗಡಿಸಿ ಬರೆಯಲಾಗಿದೆ. 17 ಬಗೆಯ ತಿನಿಸುಗಳಿದ್ದವು. ಅದರಲ್ಲಿ ಏನೇನಿತ್ತು ಎಂಬುದನ್ನು ನೀವೇ ಒಮ್ಮೆ ಓದಿಕೊಂಡುಬಿಡಿ.

ಅಂದಹಾಗೆ ಇದು 1990ರ ದಶಕದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ವಿವಾಹವೊಂದರ ಆಮಂತ್ರಣ ಪತ್ರಿಕೆಯಾಗಿದ್ದು, ಇದನ್ನು ನೋಡಿದ ಟ್ವೀಟಿಗರು ವಿಧವಿಧದ ಕಾಮೆಂಟ್​ಗಳನ್ನು ಹಾಕಿದ್ದಾರೆ. ಇದರಲ್ಲಿ ಹಾಕಲಾಗಿರುವ ಒಂದೊಂದು ತಿನಿಸುಗಳೂ ಬಾಯಲ್ಲಿ ನೀರೂರಿಸುತ್ತವೆ ಎಂದು ಕೆಲವರು ಬರೆದಿದ್ದಾರೆ. ಅಬ್ಬಾ ಎಂದು ಉದ್ಘಾರವನ್ನೂ ಕೆಲವರು ತೆಗೆದಿದ್ದಾರೆ. ಇಲ್ಲಿದೆ ನೋಡಿ ಇನ್ವಿಟೇಶನ್​ ಕಾರ್ಡ್​ ಫೋಟೋ..

ಇದನ್ನೂ ಓದಿ: ಅಪಘಾತಕ್ಕೀಡಾದ ಕಾರಲ್ಲಿ ನನ್ನ ಪುತ್ರ ಚಿದಾನಂದ ಇರಲಿಲ್ಲ: ಡಿಸಿಎಂ ಲಕ್ಷ್ಮಣ ಸವದಿ Photos of wedding menu card is goes viral in Social Media

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ