AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಘಾತಕ್ಕೀಡಾದ ಕಾರಲ್ಲಿ ನನ್ನ ಪುತ್ರ ಚಿದಾನಂದ ಇರಲಿಲ್ಲ: ಡಿಸಿಎಂ ಲಕ್ಷ್ಮಣ ಸವದಿ

ಕಾರಿನಲ್ಲಿ ನನ್ನ ಮಗ ಇರಲಿಲ್ಲ. ಹೀಗಾಗಿ ಎಫ್​ಐಆರ್​ನಲ್ಲಿಯೂ ಆತನ ಹೆಸರು ಸೇರಿಲ್ಲ. ಏನೇ ಆದರೂ ಅಪಘಾತ ಅಂದ್ರೆ ಅಪಘಾತವೇ. ಪೊಲೀಸರು ಕಾನೂನಿನ ಪ್ರಕಾರ ಕ್ರಮ ಜರುಗಿಸುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದರು.

ಅಪಘಾತಕ್ಕೀಡಾದ ಕಾರಲ್ಲಿ ನನ್ನ ಪುತ್ರ ಚಿದಾನಂದ ಇರಲಿಲ್ಲ: ಡಿಸಿಎಂ ಲಕ್ಷ್ಮಣ ಸವದಿ
ಡಿಸಿಎಂ ಲಕ್ಷ್ಮಣ ಸವದಿ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Jul 06, 2021 | 3:39 PM

Share

ಮೈಸೂರು: ಬಾಗಲಕೋಟೆ ಜಿಲ್ಲೆಯ ಚಿಕ್ಕಹಂಡರಗಲ್ ಕ್ರಾಸ್ ಬಳಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಅಪಘಾತಕ್ಕೀಡಾದ ಕಾರಲ್ಲಿ ನನ್ನ ಪುತ್ರ ಚಿದಾನಂದ ಇರಲಿಲ್ಲ ಎಂದು ಹೇಳಿದರು.

ಕಾರಿನಲ್ಲಿ ನನ್ನ ಮಗ ಇರಲಿಲ್ಲ. ಹೀಗಾಗಿ ಎಫ್​ಐಆರ್​ನಲ್ಲಿಯೂ ಆತನ ಹೆಸರು ಸೇರಿಲ್ಲ. ಏನೇ ಆದರೂ ಅಪಘಾತ ಅಂದ್ರೆ ಅಪಘಾತವೇ. ಪೊಲೀಸರು ಕಾನೂನಿನ ಪ್ರಕಾರ ಕ್ರಮ ಜರುಗಿಸುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದರು. ನನ್ನ ಪುತ್ರ ಕಾರಿನಲ್ಲಿದ್ದರೂ ಅಪಘಾತ ಮಾಡು ಎನ್ನುತ್ತಿರಲಿಲ್ಲ.

ಗಾಯಗೊಂಡವರಿಗೆ ತುರ್ತು ನೆರವು ಒದಗಿಸಲು ನನ್ನ ಮಗ ನೆರವಾಗಿದ್ದಾನೆ. ಆದರೆ ಗಾಯಾಳು ಬೈಕ್ ಸವಾರ ಕೂಡಲೆಪ್ಪ ಬದುಕಿ ಬರಲಿಲ್ಲ. 2 ದಿನಗಳ ನಂತರ ಮೃತರ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳುವೆ. ಅವರ ಕುಟುಂಬಕ್ಕೂ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

ಪೊಲೀಸರಿಂದ ಪಂಚನಾಮೆ ಲಕ್ಷ್ಮಣ ಸವದಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಹುನಗುಂದ ಪೊಲೀಸರು ಪ್ರತ್ಯಕ್ಷದರ್ಶಿಗಳನ್ನು ಸ್ಥಳಕ್ಕೆ ಕರೆಸಿ ಪಂಚನಾಮೆ ಮಾಡಿದರು. ಬಾಗಲಕೋಟೆ ಜಿಲ್ಲೆಯ ಚಿಕ್ಕಹಂಡರಗಲ್ ಕ್ರಾಸ್ ಬಳಿ ನಡೆದಿದ್ದ ಅಪಘಾತ ಸಂಭವಿಸಿತ್ತು.

(Lakshman Savadi Denies his son involvement in Accident Near Hungund)

ಇದನ್ನೂ ಓದಿ: DCM Laxman Savadi Son: ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಬೈಕ್‌ಗೆ ಡಿಕ್ಕಿ.. ಬೈಕ್ ಸವಾರ ಸಾವು

ಇದನ್ನೂ ಓದಿ: ಅಪಘಾತವಾದ ತಕ್ಷಣ ತಂದೆ ಲಕ್ಷ್ಮಣ ಸವದಿಯನ್ನ ಸಂಪರ್ಕಿಸಿದ ಪುತ್ರ; ತಕ್ಷಣ ಬಾಗಲಕೋಟೆ ಎಸ್‌ಪಿಗೆ ಕರೆ ಮಾಡಿದ ಸಚಿವ ಸವದಿ