AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಕ್ಷ ರೂ ಲಂಚ ಕೇಳಿದ ಪೊಲೀಸರು, ಯುವಕ ಆತ್ಮಹತ್ಯೆ: ಪೊಲೀಸ್​ ಕಾನ್ಸ್​​ಟೇಬಲ್, ಎಸ್​ಐ ಸಸ್ಪೆಂಡ್​

ಯುವಕನ ಸಾವಿನ ಬಳಿಕ ಕೃಷ್ಣಾ ಜಿಲ್ಲೆಯ ಎಸ್​ಪಿ ಸಿದ್ದಾರ್ಥ ಕೌಶಲ್​​ (Krishna district SP Siddarth Kaushal) ಅವರು ಕಾನ್ಸ್​​ಟೇಬಲ್​ ಶಿವರಾಮಕೃಷ್ಣ ಪ್ರಸಾದ್​ನನ್ನು ಅಮಾನತುಗೊಳಿಸಿದ್ದಾರೆ. ಬಳಿಕ, ಸಬ್​ಇನ್ಸ್​​​ಪೆಕ್ಟರ್​​ ದುರ್ಗಾಪ್ರಸಾದ್​ ರಾವ್​​ನನ್ನೂ ಸಸ್ಪೆಂಡ್​ ಮಾಡಿದ್ದಾರೆ.

ಲಕ್ಷ ರೂ ಲಂಚ ಕೇಳಿದ ಪೊಲೀಸರು, ಯುವಕ ಆತ್ಮಹತ್ಯೆ: ಪೊಲೀಸ್​ ಕಾನ್ಸ್​​ಟೇಬಲ್, ಎಸ್​ಐ ಸಸ್ಪೆಂಡ್​
ಲಕ್ಷ ರೂ ಲಂಚ ಕೇಳಿದ ಪೊಲೀಸರು, ಯುವಕ ಆತ್ಮಹತ್ಯೆ: ಪೊಲೀಸ್​ ಕಾನ್ಸ್​​ಟೇಬಲ್, ಎಸ್​ಐ ಸಸ್ಪೆಂಡ್​
TV9 Web
| Updated By: ಸಾಧು ಶ್ರೀನಾಥ್​|

Updated on: Aug 12, 2021 | 9:35 AM

Share

ಗೋದಾವರಿ: ಯುವಕನೊಬ್ಬ ಅಕ್ರಮವಾಗಿ ಸಾರಾಯಿ ಸಾಗಣೆ ಮಾಡಿದ್ದಾನೆ ಎಂದು ಆರೋಪಿಸಿ, ಪೊಲೀಸರು ಲಂಚ ಕೇಳಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣವನ್ನು ಇಲಾಖಾ ತನಿಖೆಗೆ ಒಪ್ಪಿಸಿ, ಸಂಬಂಧಪಟ್ಟ ಪೊಲೀಸ್​ ವರಿಷ್ಠಾಧಿಕಾರಿಯು ಲಂಚ ಕೇಳಿದ ಪೊಲೀಸ್​ ಕಾನ್ಸ್​​ಟೇಬಲ್ ಮತ್ತು ಪೇದೆಯ ಮೇಲೆ ನಿಗಾ ಇಡದ ಸಬ್​​ಇನ್ಸ್​​ಪೆಕ್ಟರ್​​​ನನ್ನು ಸಸ್ಪೆಂಡ್​ ಮಾಡಿದ್ದಾರೆ. 2 ವರ್ಷಗಳ ಹಿಂದಿನ ಹಳೆಯ ಪ್ರಕರಣವೊಂದರಲ್ಲಿ 23 ವರ್ಷದ ಸದರಿ ಯುವಕನಿಂದ ಪೊಲೀಸ್​ ಕಾನ್ಸ್​​ಟೇಬಲ್​ (police constable) ಮೊದಲು ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟು, ಬಳಿಕ ಅಷ್ಟು ಮೊತ್ತ ನೀಡಲಿಲ್ಲವೆಂದರೆ ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿದ್ದ ಎಂದು ತಿಳಿದುಬಂದಿದೆ.

ಮೃತ ಯುವಕನನ್ನು ಪಿ. ಮಜ್ಜಿ ಎಂದು ಗುರುತಿಸಲಾಗಿದ್ದು, ಈತ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿ ಗ್ರಾಮೀಣ ಮಂಡಲದ ಪಿಡಿಮಗೋಯಿ ಗ್ರಾಮದ ನಿವಾಸಿ (Pidimgoyyi village, Rajahmundry) ಎಂದು ತಿಳಿದುಬಂದಿದೆ. ಯುವಕ ಮಜ್ಜಿ ತೆಲಂಗಾಣದಿಂದ ಆಂಧ್ರ ಪ್ರದೇಶಕ್ಕೆ ಎರಡು ಸಾರಾಯಿ ಬಾಟಲ್​ಗಳನ್ನು ಅಕ್ರಮವಾಗಿ ಸಾಗಿಸಿದ್ದಾನೆ ಎಂದು ಕೃಷ್ಣಾ ಜಿಲ್ಲೆಯ ಚಿಲಕಲು ಪೊಲೀಸ್​ ಠಾಣೆಯಲ್ಲಿ 2020 ನೇ ಸಾಲಿನಲ್ಲಿ ಪ್ರಕರಣವೊಂದು ದಾಖಲಾಗಿತ್ತು.

ಒಂದು ವರ್ಷದ ಬಳಿಕ ಚಿಲಕಲು ಪೊಲೀಸ್​ ಠಾಣೆಯ ಕಾನ್ಸ್​​ಟೇಬಲ್​ ಶಿವರಾಮಕೃಷ್ಣ ಪ್ರಸಾದ್ ಎಂಬಾತ ಪ್ರಕರಣದ ಸಂಬಂಧ ಠಾಣೆಗೆ ಬರುವಂತೆ ​ಯುವಕ ಮಜ್ಜಿಗೆ ಸೂಚಿಸಿದ್ದರು. ಅದರಂತೆ ಆತ ಮಂಗಳವಾರ ಠಾಣೆಗೆ ತೆರಳಿದ್ದ. ಆ ವೇಳೆ ಮಜ್ಜಿ ವಿರುದ್ಧ ಪ್ರಕರಣ ಕೈಬಿಡಲು ಒಂದು ಲಕ್ಷ ರೂಪಾಯಿ ನೀಡುವಂತೆ ಸತಾಯಿಸಿದ್ದಾನೆ. ಇಲ್ಲವಾದಲ್ಲಿ ಡ್ರಗ್ಸ್​​ ಕೇಸ್​​ನಲ್ಲಿ ಫಿಟ್​​ ಮಾಡುವುದಾಗಿ ಧಮ್ಕಿ ಹಾಕಿ, ಕಾನ್ಸ್​​ಟೇಬಲ್​ ಬೆದರಿಸಿದ್ದಾನೆ.

ಕಾನ್ಸ್​​ಟೇಬಲ್​ ಶಿವರಾಮಕೃಷ್ಣ ಪ್ರಸಾದ್ ಬೆದರಿಕೆ, ಒತ್ತಡ ತಾಳಲಾರದೆ ಮಜ್ಜಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ರಾಜಮಂಡ್ರಿಗೆ ಮರಳಿದವನೆ ಸೆಲ್ಫಿ ವಿಡಿಯೋ ಮಾಡಿಟ್ಟು, ಅದರಲ್ಲಿ ಆದ್ಯಂತವಾಗಿ ಪ್ರಕರಣದ ವಿವರಣೆ ಹೇಳಿಕೊಂಡಿದ್ದಾನೆ. ಅದೇ ರಾತ್ರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯುವಕನ ಸಾವಿನ ಬಳಿಕ ಕೃಷ್ಣಾ ಜಿಲ್ಲೆಯ ಎಸ್​ಪಿ ಸಿದ್ದಾರ್ಥ ಕೌಶಲ್​​ (Krishna district SP Siddarth Kaushal) ಅವರು ಕಾನ್ಸ್​​ಟೇಬಲ್​ ಶಿವರಾಮಕೃಷ್ಣ ಪ್ರಸಾದ್​ನನ್ನು ಅಮಾನತುಗೊಳಿಸಿದ್ದಾರೆ. ಬಳಿಕ, ಸಬ್​ಇನ್ಸ್​​​ಪೆಕ್ಟರ್​​ ದುರ್ಗಾಪ್ರಸಾದ್​ ರಾವ್​​ನನ್ನೂ ಸಸ್ಪೆಂಡ್​ ಮಾಡಿದ್ದಾರೆ.

ಕಾಫಿ ವ್ಯಾಪಾರದಲ್ಲಿ 1 ಕೋಟಿ ನಷ್ಟ: ಚಿಕ್ಕಮಗಳೂರಿನ ವ್ಯಾಪಾರಿ ಬೆಂಗಳೂರಿನಲ್ಲಿ ಆತ್ಮಹತ್ಯೆ

(Pidimgoyyi Youth Majji suicide as constable demand 1 lakh bribe Krishna district SP Siddarth Kaushal suspends constable si)

ಟೈಟ್​ ಆಗಿ ಪಬ್​ನಲ್ಲಿ ಗಲಾಟೆ ಮಾಡಿದ್ದ ಇನ್ಸ್‌ಪೆಕ್ಟರ್ ಅಮಾನತು
ಟೈಟ್​ ಆಗಿ ಪಬ್​ನಲ್ಲಿ ಗಲಾಟೆ ಮಾಡಿದ್ದ ಇನ್ಸ್‌ಪೆಕ್ಟರ್ ಅಮಾನತು
ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ
ಗವಿಸಿದ್ದಪ್ಪ ಕೊಲೆಗೆ ಮತ್ತೊಂದು ಟ್ವಿಸ್ಟ್: ಸ್ಫೋಟಕ ಅಂಶ ಬಿಚ್ಚಿಟ್ಟ ತಾಯಿ
ಆತ್ಮಹತ್ಯೆಗೆ ಯತ್ನಿಸಿದವನಿಗೆ ಕೊನೆ ಕ್ಷಣದಲ್ಲಿ ಹುಟ್ಟಿತು ಬದುಕಬೇಕೆಂಬ ಆಸೆ
ಆತ್ಮಹತ್ಯೆಗೆ ಯತ್ನಿಸಿದವನಿಗೆ ಕೊನೆ ಕ್ಷಣದಲ್ಲಿ ಹುಟ್ಟಿತು ಬದುಕಬೇಕೆಂಬ ಆಸೆ
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಮನೆಗೆ ಬಂದ ಶುಭಾಂಶು ಶುಕ್ಲಾಗೆ ಪ್ರಧಾನಿ ಮೋದಿಯಿಂದ ಅಪ್ಪುಗೆಯ ಸ್ವಾಗತ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಜೈಲು ಚೆಕ್ ಪೋಸ್ಟ್ ಬಳಿ ವಿಜಯಲಕ್ಷ್ಮಿ ದರ್ಶನ್​ ಕಾರು ತಡೆದ ಜೈಲು ಸಿಬ್ಬಂದಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ಧರ್ಮಸ್ಥಳ ಪ್ರಕರಣ ತನಿಖೆಯಲ್ಲಿ ಏನೇನಾಯ್ತು? ಗೃಹ ಸಚಿವ ಕೊಟ್ಟ ಮಾಹಿತಿ
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ದರ್ಶನ್ ಇಲ್ಲದಿದ್ದರೂ ಈ ವರ್ಷವೇ ಬಿಡುಗಡೆ ಆಗುತ್ತಾ ‘ದಿ ಡೆವಿಲ್’ ಸಿನಿಮಾ?
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ಅಲೆಗಳ ಅಬ್ಬರಕ್ಕೆ ಕಡಲ ತೀರಕ್ಕೆ ಬಂದ ಡಾಲ್ಫಿನ್ ಮೀನು
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಎಲ್ಲರಿಗೂ ಇದೆ ಮಾರಿ ಹಬ್ಬ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ
ದಾರಿಯುಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮುಖ ಕಚ್ಚಿದ ಬೀದಿ ನಾಯಿ