AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bomb Threat: ಜೈಪುರದಲ್ಲಿ ಇಳಿಸದೇ ಚೀನಾಕ್ಕೆ ಇರಾನ್ ವಿಮಾನ ಕೊಂಡೊಯ್ದ ಪೈಲಟ್​ಗಳು, ಬಾಂಬ್ ಬೆದರಿಕೆ ಹಿಂದೆ ಹಲವು ಅನುಮಾನ

‘ಒಟ್ಟಾರೆ ಪ್ರಕರಣದಲ್ಲಿ ಏನೋ ಒಳಸಂಚು ಇದ್ದಂತೆ ಇದೆ’ ಎಂದು ವಾಯುಪಡೆಯ ನಿವೃತ್ತ ಅಧಿಕಾರಿಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.

Bomb Threat: ಜೈಪುರದಲ್ಲಿ ಇಳಿಸದೇ ಚೀನಾಕ್ಕೆ ಇರಾನ್ ವಿಮಾನ ಕೊಂಡೊಯ್ದ ಪೈಲಟ್​ಗಳು, ಬಾಂಬ್ ಬೆದರಿಕೆ ಹಿಂದೆ ಹಲವು ಅನುಮಾನ
ಇರಾನ್ ವಿಮಾನವು ಪ್ರಸ್ತುತ ಭಾರತದ ವಾಯುಗಡಿಯಿಂದ ಆಚೆ ಹೋಗಿದೆ.Image Credit source: flightradar24
TV9 Web
| Edited By: |

Updated on:Oct 03, 2022 | 1:07 PM

Share

ದೆಹಲಿ: ಇರಾನ್​ನಿಂದ ಚೀನಾಕ್ಕೆ ಹೊರಟಿದ್ದ ‘ಮಹಾನ್’ ವಾಯುಯಾನ ಸಂಸ್ಥೆಯ ಪ್ರಯಾಣಿಕರ ವಿಮಾನದಲ್ಲಿ ಬಾಂಬ್​ ಇರಿಸಲಾಗಿದೆ ಎಂಬ ಬೆದರಿಕೆ ಕೇಳಿಬಂದಿದೆ. ವಿಮಾನವು ಭಾರತದ ವಾಯುಗಡಿಯಲ್ಲಿ ಇದ್ದಾಗ ಪಾಕಿಸ್ತಾನದ ಲಾಹೋರ್ ವಿಮಾನ ನಿಯಂತ್ರಣಾ ಕೇಂದ್ರದಿಂದ (Air Traffic Controller – ATC) ದೆಹಲಿಯ ಎಟಿಸಿಗೆ ಸೋಮವಾರ (ಅ 10) ಮಾಹಿತಿ ರವಾನೆಯಾಯಿತು. ದೆಹಲಿಯ ಎಟಿಸಿ ಸಿಬ್ಬಂದಿ ತಕ್ಷಣ ವಾಯುಪಡೆಗೆ ಮಾಹಿತಿ ರವಾನಿಸಿದರು. ಸಂಭಾವ್ಯ ಅನಾಹುತ ತಪ್ಪಿಸಲು ಜೋಧ್​ಪುರ್ ಮತ್ತು ಆಗ್ರಾ ವಾಯುನೆಲೆಯಲ್ಲಿ ಯುದ್ಧವಿಮಾನಗಳನ್ನು ಸನ್ನದ್ಧ ಸ್ಥಿತಿಗೆ ತರಲಾಯಿತು.

ಇರಾನ್ ರಾಜಧಾನಿ ತೆಹರಾನ್​ನಿಂದ ಚೀನಾದ ನಗರ ಗೌನ್​ಗ್​ಝ್​ಹೌ ಎಂಬಲ್ಲಿಗೆ ವಿಮಾನವು ತೆರಳುತ್ತಿತ್ತು. ಬಾಂಬ್ ಬೆದರಿಕೆ ಕೇಳಿ ಬಂದ ನಂತರ ಸ್ವಲ್ಪ ಸಮಯ ವಿಮಾನವು ಜೈಪುರ-ದೆಹಲಿ ನಡುವಣ ವಾಯುಮಾರ್ಗದಲ್ಲಿ ಎತ್ತರ ತಗ್ಗಿಸಿಕೊಂಡಿದ್ದು ಆತಂಕ ಮೂಡಿಸಿತ್ತು. ವಿಮಾನ ಸಂಚಾರ ನಿಯಂತ್ರಕರು ದೆಹಲಿಯಲ್ಲಿ ವಿಮಾನವನ್ನು ಭೂಸ್ಪರ್ಶ (ಲ್ಯಾಂಡ್) ಮಾಡಲು ಅನುಮತಿ ನಿರಾಕರಿಸಿ, ಜೈಪುರದಲ್ಲಿ ಭೂಸ್ಪರ್ಶ ಮಾಡುವಂತೆ ಸೂಚಿಸಿದರು. ಆದರೆ ಪೈಲಟ್​ಗಳು ದೆಹಲಿಯಿಂದ ಜೈಪುರಕ್ಕೆ ತೆರಳಿದರು ನಿರಾಕರಿಸಿದಾಗ ತುಸುಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಹಂತದಲ್ಲಿ ವಿಮಾನವು ದೆಹಲಿಯಲ್ಲಿ ಲ್ಯಾಂಡ್ ಆಗುವುದನ್ನು ತಡೆಯಲು ಮತ್ತು ಭಾರತದಿಂದ ಹೊರಗೆ ಕಳಿಸಲು ವಾಯುಪಡೆಯು ಯುದ್ಧ ವಿಮಾನಗಳನ್ನು ನಿಯೋಜಿಸಲಾಯಿತು. flightradar24

ಆದರೆ ಹೆಚ್ಚಿನ ಕಾರ್ಯಾಚರಣೆಗೆ ಅವಕಾಶ ಇಲ್ಲದಂತೆ ಪೈಲಟ್​ಗಳು ವಿಮಾನವನ್ನು ಚೀನಾದತ್ತ ಕೊಂಡೊಯ್ದರು. ವಿಮಾನದಲ್ಲಿ ಇರಿಸಿರುವ ಬಾಂಬ್ ಎಂಥದ್ದು ಎಂಬ ಬಗ್ಗೆ ಈವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

‘ವಿಮಾನವು ಪಾಕಿಸ್ತಾನದ ವಾಯುಗಡಿಯ ಮೂಲಕವೇ ಭಾರತಕ್ಕೆ ಬಂದಿದೆ. ಹೀಗಿರುವಾಗ ಅಲ್ಲಿಯೇ ಏಕೆ ವಿಮಾನವನ್ನು ಇಳಿಸಿಕೊಳ್ಳಲಿಲ್ಲ? ದೆಹಲಿಯಲ್ಲಿಯೇ ವಿಮಾನ ಇಳಿಸಬೇಕು ಎಂದು ಪೈಲಟ್​ಗಳು ಯೋಚಿಸಿದ್ದು ಏಕೆ? ಜೈಪುರದಲ್ಲಿ ವಿಮಾನ ಇಳಿಸಲು ನಿರಾಕರಿಸಿ ಮರಳಿ ಚೀನಾಕ್ಕೆ ಕೊಂಡೊಯ್ದದ್ದು ಏಕೆ? ಒಟ್ಟಾರೆ ಪ್ರಕರಣದಲ್ಲಿ ಏನೋ ಒಳಸಂಚು ಇದ್ದಂತೆ ಇದೆ’ ಎಂದು ವಾಯುಪಡೆಯ ನಿವೃತ್ತ ಅಧಿಕಾರಿಯೊಬ್ಬರು ‘ಇಂಡಿಯಾ ಟುಡೇ’ ಸುದ್ದಿವಾಹಿನಿಗೆ ನೀಡಿದ ಲೈವ್ ಸಂದರ್ಶನದಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

Published On - 12:59 pm, Mon, 3 October 22

Follow Us
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ದಿಲೀಪ್ ರಾಜ್ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ ಅಣ್ಣ: ವಿಡಿಯೋ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು