AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bomb Threat: ಜೈಪುರದಲ್ಲಿ ಇಳಿಸದೇ ಚೀನಾಕ್ಕೆ ಇರಾನ್ ವಿಮಾನ ಕೊಂಡೊಯ್ದ ಪೈಲಟ್​ಗಳು, ಬಾಂಬ್ ಬೆದರಿಕೆ ಹಿಂದೆ ಹಲವು ಅನುಮಾನ

‘ಒಟ್ಟಾರೆ ಪ್ರಕರಣದಲ್ಲಿ ಏನೋ ಒಳಸಂಚು ಇದ್ದಂತೆ ಇದೆ’ ಎಂದು ವಾಯುಪಡೆಯ ನಿವೃತ್ತ ಅಧಿಕಾರಿಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ.

Bomb Threat: ಜೈಪುರದಲ್ಲಿ ಇಳಿಸದೇ ಚೀನಾಕ್ಕೆ ಇರಾನ್ ವಿಮಾನ ಕೊಂಡೊಯ್ದ ಪೈಲಟ್​ಗಳು, ಬಾಂಬ್ ಬೆದರಿಕೆ ಹಿಂದೆ ಹಲವು ಅನುಮಾನ
ಇರಾನ್ ವಿಮಾನವು ಪ್ರಸ್ತುತ ಭಾರತದ ವಾಯುಗಡಿಯಿಂದ ಆಚೆ ಹೋಗಿದೆ.Image Credit source: flightradar24
TV9 Web
| Edited By: |

Updated on:Oct 03, 2022 | 1:07 PM

Share

ದೆಹಲಿ: ಇರಾನ್​ನಿಂದ ಚೀನಾಕ್ಕೆ ಹೊರಟಿದ್ದ ‘ಮಹಾನ್’ ವಾಯುಯಾನ ಸಂಸ್ಥೆಯ ಪ್ರಯಾಣಿಕರ ವಿಮಾನದಲ್ಲಿ ಬಾಂಬ್​ ಇರಿಸಲಾಗಿದೆ ಎಂಬ ಬೆದರಿಕೆ ಕೇಳಿಬಂದಿದೆ. ವಿಮಾನವು ಭಾರತದ ವಾಯುಗಡಿಯಲ್ಲಿ ಇದ್ದಾಗ ಪಾಕಿಸ್ತಾನದ ಲಾಹೋರ್ ವಿಮಾನ ನಿಯಂತ್ರಣಾ ಕೇಂದ್ರದಿಂದ (Air Traffic Controller – ATC) ದೆಹಲಿಯ ಎಟಿಸಿಗೆ ಸೋಮವಾರ (ಅ 10) ಮಾಹಿತಿ ರವಾನೆಯಾಯಿತು. ದೆಹಲಿಯ ಎಟಿಸಿ ಸಿಬ್ಬಂದಿ ತಕ್ಷಣ ವಾಯುಪಡೆಗೆ ಮಾಹಿತಿ ರವಾನಿಸಿದರು. ಸಂಭಾವ್ಯ ಅನಾಹುತ ತಪ್ಪಿಸಲು ಜೋಧ್​ಪುರ್ ಮತ್ತು ಆಗ್ರಾ ವಾಯುನೆಲೆಯಲ್ಲಿ ಯುದ್ಧವಿಮಾನಗಳನ್ನು ಸನ್ನದ್ಧ ಸ್ಥಿತಿಗೆ ತರಲಾಯಿತು.

ಇರಾನ್ ರಾಜಧಾನಿ ತೆಹರಾನ್​ನಿಂದ ಚೀನಾದ ನಗರ ಗೌನ್​ಗ್​ಝ್​ಹೌ ಎಂಬಲ್ಲಿಗೆ ವಿಮಾನವು ತೆರಳುತ್ತಿತ್ತು. ಬಾಂಬ್ ಬೆದರಿಕೆ ಕೇಳಿ ಬಂದ ನಂತರ ಸ್ವಲ್ಪ ಸಮಯ ವಿಮಾನವು ಜೈಪುರ-ದೆಹಲಿ ನಡುವಣ ವಾಯುಮಾರ್ಗದಲ್ಲಿ ಎತ್ತರ ತಗ್ಗಿಸಿಕೊಂಡಿದ್ದು ಆತಂಕ ಮೂಡಿಸಿತ್ತು. ವಿಮಾನ ಸಂಚಾರ ನಿಯಂತ್ರಕರು ದೆಹಲಿಯಲ್ಲಿ ವಿಮಾನವನ್ನು ಭೂಸ್ಪರ್ಶ (ಲ್ಯಾಂಡ್) ಮಾಡಲು ಅನುಮತಿ ನಿರಾಕರಿಸಿ, ಜೈಪುರದಲ್ಲಿ ಭೂಸ್ಪರ್ಶ ಮಾಡುವಂತೆ ಸೂಚಿಸಿದರು. ಆದರೆ ಪೈಲಟ್​ಗಳು ದೆಹಲಿಯಿಂದ ಜೈಪುರಕ್ಕೆ ತೆರಳಿದರು ನಿರಾಕರಿಸಿದಾಗ ತುಸುಹೊತ್ತು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಹಂತದಲ್ಲಿ ವಿಮಾನವು ದೆಹಲಿಯಲ್ಲಿ ಲ್ಯಾಂಡ್ ಆಗುವುದನ್ನು ತಡೆಯಲು ಮತ್ತು ಭಾರತದಿಂದ ಹೊರಗೆ ಕಳಿಸಲು ವಾಯುಪಡೆಯು ಯುದ್ಧ ವಿಮಾನಗಳನ್ನು ನಿಯೋಜಿಸಲಾಯಿತು. flightradar24

ಆದರೆ ಹೆಚ್ಚಿನ ಕಾರ್ಯಾಚರಣೆಗೆ ಅವಕಾಶ ಇಲ್ಲದಂತೆ ಪೈಲಟ್​ಗಳು ವಿಮಾನವನ್ನು ಚೀನಾದತ್ತ ಕೊಂಡೊಯ್ದರು. ವಿಮಾನದಲ್ಲಿ ಇರಿಸಿರುವ ಬಾಂಬ್ ಎಂಥದ್ದು ಎಂಬ ಬಗ್ಗೆ ಈವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

‘ವಿಮಾನವು ಪಾಕಿಸ್ತಾನದ ವಾಯುಗಡಿಯ ಮೂಲಕವೇ ಭಾರತಕ್ಕೆ ಬಂದಿದೆ. ಹೀಗಿರುವಾಗ ಅಲ್ಲಿಯೇ ಏಕೆ ವಿಮಾನವನ್ನು ಇಳಿಸಿಕೊಳ್ಳಲಿಲ್ಲ? ದೆಹಲಿಯಲ್ಲಿಯೇ ವಿಮಾನ ಇಳಿಸಬೇಕು ಎಂದು ಪೈಲಟ್​ಗಳು ಯೋಚಿಸಿದ್ದು ಏಕೆ? ಜೈಪುರದಲ್ಲಿ ವಿಮಾನ ಇಳಿಸಲು ನಿರಾಕರಿಸಿ ಮರಳಿ ಚೀನಾಕ್ಕೆ ಕೊಂಡೊಯ್ದದ್ದು ಏಕೆ? ಒಟ್ಟಾರೆ ಪ್ರಕರಣದಲ್ಲಿ ಏನೋ ಒಳಸಂಚು ಇದ್ದಂತೆ ಇದೆ’ ಎಂದು ವಾಯುಪಡೆಯ ನಿವೃತ್ತ ಅಧಿಕಾರಿಯೊಬ್ಬರು ‘ಇಂಡಿಯಾ ಟುಡೇ’ ಸುದ್ದಿವಾಹಿನಿಗೆ ನೀಡಿದ ಲೈವ್ ಸಂದರ್ಶನದಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.

Published On - 12:59 pm, Mon, 3 October 22

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು