ನರೇಂದ್ರ ಮೋದಿ ಕನ್ಯಾಕುಮಾರಿ ಭೇಟಿ ಬೆನ್ನಲ್ಲೇ ವೈರಲ್​ ಆಯ್ತು 33 ವರ್ಷಗಳ ಹಿಂದಿನ ಫೋಟೊ

ಪ್ರಧಾನಿ ನರೇಂದ್ರ ಮೋದಿ ಕೊನೆಯ ಹಂತದ ಲೋಕಸಭಾ ಚುನಾವಣೆಯ ಪ್ರಚಾರ ಮುಗಿಸಿ ಕನ್ಯಾಕುಮಾರಿಗೆ ತೆರಳಿ ಅಲ್ಲಿನ ವಿವೇಕಾನಂದ ರಾಕ್​ ಸ್ಮಾರಕದಲ್ಲಿ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಈ ನಡುವೆ ಮೋದಿಯವರ ಕನ್ಯಾಕುಮಾರಿ ಭೇಟಿಯ 33 ವರ್ಷಗಳ ಹಿಂದಿನ ಫೋಟೊ ಎಲ್ಲೆಡೆ ವೈರಲ್ ಆಗಿದೆ.

ನರೇಂದ್ರ ಮೋದಿ ಕನ್ಯಾಕುಮಾರಿ ಭೇಟಿ ಬೆನ್ನಲ್ಲೇ ವೈರಲ್​ ಆಯ್ತು 33 ವರ್ಷಗಳ ಹಿಂದಿನ ಫೋಟೊ
ನರೇಂದ್ರ ಮೋದಿ

Updated on: May 31, 2024 | 11:00 AM

ಪ್ರಧಾನಿ ನರೇಂದ್ರ ಮೋದಿ(Narendra Modi) ಕನ್ಯಾಕುಮಾರಿ(Kanniyakumari)ಗೆ ತೆರಳಿದ್ದಾರೆ. ಕೊನೆಯ ಹಂತದ ಚುನಾವಣೆಯ ಪ್ರಚಾರ ಮುಗಿಸಿ ಕನ್ಯಾಕುಮಾರಿಗೆ ಹೋಗಿ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ವಿವೇಕಾನಂದ ರಾಕ್ ಸ್ಮಾರಕದಲ್ಲಿ ಎರಡು ದಿನಗಳ ಕಾಲ ಧ್ಯಾನ ಮಾಡಲಿದ್ದಾರೆ. ಇದರ ಬೆನ್ನಲ್ಲೇ 33 ವರ್ಷಗಳ ಹಿಂದಿನ ಫೋಟೊ ವೈರಲ್ ಆಗಿದೆ. 1 ಡಿಸೆಂಬರ್ 1991 ರಂದು ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಸ್ಮಾರಕದಿಂದ ಪ್ರಾರಂಭವಾಗಿ ಕಾಶ್ಮೀರದಲ್ಲಿ ಕೊನೆಗೊಂಡ ಏಕತಾ ಯಾತ್ರೆಯ ಚಿತ್ರಗಳಾಗಿವೆ.

ನರೇಂದ್ರ ಮೋದಿ ಮತ್ತು ಪಕ್ಷದ ಹಿರಿಯ ನಾಯಕ ಡಾ ಮುರಳಿ ಮನೋಹರ್ ಜೋಶಿ ಸೇರಿದಂತೆ ಎಲ್ಲರೂ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ನಮನ ಸಲ್ಲಿಸುತ್ತಿರುವುದನ್ನು ಕಾಣಬಹುದು. ಏಕತಾ ಯಾತ್ರೆಯು ಡಿಸೆಂಬರ್ 1991 ರಲ್ಲಿ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು ಮತ್ತು 26 ಜನವರಿ 1992 ರಂದು ಶ್ರೀನಗರದಲ್ಲಿ ರಾಷ್ಟ್ರಧ್ವಜಾರೋಹಣದೊಂದಿಗೆ ಕೊನೆಗೊಂಡಿತು.

ಏಕತಾ ಯಾತ್ರೆಯ ನೇತೃತ್ವವನ್ನು ಬಿಜೆಪಿಯ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ವಹಿಸಿದ್ದರು, ಆಗಿನ ಬಿಜೆಪಿ ಕಾರ್ಯಕರ್ತ ನರೇಂದ್ರ ಮೋದಿ ಅವರು ಯಾತ್ರೆಯನ್ನು ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಯೋತ್ಪಾದಕ ಶಕ್ತಿಗಳ ವಿರುದ್ಧ ಭಾರತ ಸದೃಢವಾಗಿ ನಿಲ್ಲುತ್ತದೆ ಮತ್ತು ಒಗ್ಗಟ್ಟಾಗಿ ಉಳಿಯುತ್ತದೆ ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸುವುದು ಈ ಭೇಟಿಯ ಉದ್ದೇಶವಾಗಿತ್ತು.

ಮತ್ತಷ್ಟು ಓದಿ: Modi in Kanniyakumari: ಧ್ಯಾನಕ್ಕೂ ಮುನ್ನ ಕನ್ಯಾಕುಮಾರಿಯ ಭಗವತಿ ಅಮ್ಮನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ

14 ರಾಜ್ಯಗಳಲ್ಲಿ ಹರಡಿರುವ ಈ ಪ್ರಯಾಣವು ಜನರ ಹೃದಯವನ್ನು ಆಳವಾಗಿ ಮುಟ್ಟಿತು ಮತ್ತು ರಾಷ್ಟ್ರೀಯ ಏಕತೆಯ ಕಡೆಗೆ ದೇಶದ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಕನ್ಯಾಕುಮಾರಿಯಲ್ಲಿ 48 ಗಂಟೆಗಳ ಕಾಲ ಧ್ಯಾನ ಮಾಡಲಿರುವ ಮೋದಿ
ಜೂನ್ 1 ರವರೆಗೆ ಕನ್ಯಾಕುಮಾರಿಯಲ್ಲಿರುವ ಧ್ಯಾನ ಮಂಟಪದಲ್ಲಿ 48 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ. 1892ರಲ್ಲಿ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಜಾಗ ಇದೇ.

 

ಸ್ವಾಮಿ ವಿವೇಕಾನಂದರು ದೇಶಾದ್ಯಂತ ಸಂಚರಿಸಿ ಮೂರು ದಿನಗಳ ಕಾಲ ಇಲ್ಲಿ ಧ್ಯಾನ ಮಾಡಿ ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದರು ಎಂದು ಹೇಳಲಾಗುತ್ತದೆ.

2019 ರ ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ಮೋದಿ ಇದೇ ರೀತಿಯ ಆಧ್ಯಾತ್ಮಿಕ ಪ್ರಯಾಣವನ್ನು ಕೈಗೊಂಡಿದ್ದರು. 2019 ರಲ್ಲಿ, ಅವರು ಉತ್ತರಾಖಂಡಕ್ಕೆ ಭೇಟಿ ನೀಡಿದರು ಮತ್ತು ಕೇದಾರನಾಥ ದೇವಾಲಯದ ಬಳಿಯ ಗುಹೆಯಲ್ಲಿ ಧ್ಯಾನ ಮಾಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ