ಯುದ್ಧನೆಲ ಉಕ್ರೇನ್​​ನಿಂದ ಭಾರತೀಯರ ಸ್ಥಳಾಂತರಕ್ಕೆ ಏರ್​ಫೋರ್ಸ್ ಬಲ; ಕಾರ್ಯಾಚರಣೆಗೆ ಸಾಥ್​ ನೀಡುವಂತೆ ಪ್ರಧಾನಿ ಮೋದಿ ಸೂಚನೆ

ಪ್ರಧಾನಿ ನರೇಂದ್ರ ಮೋದಿ ಸೂಚನೆ ಅನ್ವಯ ಭಾರತೀಯ ವಾಯುಪಡೆ ಉಕ್ರೇನ್​ನಲ್ಲಿರುವ ಭಾರತೀಯರನ್ನು ಏರ್​ಲಿಫ್ಟ್ ಮಾಡುವ ಮೂಲಕ ಸ್ಥಳಾಂತರಿಸಲು ಸಿ-17 ವಿಮಾನವನ್ನು ಬಳಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಯುದ್ಧನೆಲ ಉಕ್ರೇನ್​​ನಿಂದ ಭಾರತೀಯರ ಸ್ಥಳಾಂತರಕ್ಕೆ ಏರ್​ಫೋರ್ಸ್ ಬಲ; ಕಾರ್ಯಾಚರಣೆಗೆ ಸಾಥ್​ ನೀಡುವಂತೆ ಪ್ರಧಾನಿ ಮೋದಿ ಸೂಚನೆ
ಪ್ರಧಾನಿ ಮೋದಿ
Follow us
| Updated By: Lakshmi Hegde

Updated on:Mar 01, 2022 | 1:47 PM

ಉಕ್ರೇನ್​​ನಲ್ಲಿ ರಷ್ಯಾ ಯುದ್ಧ (Russia Attack On Ukraine) ಸಾರಿದಾಗಿನಿಂದಲೂ ಅಲ್ಲಿರುವ ಭಾರತೀಯರನ್ನು ವಾಪಸ್​ ಕರೆತರಲು ಕೇಂದ್ರ ಸರ್ಕಾರ ಎಡಬಿಡದೆ ಪ್ರಯತ್ನ ಮಾಡುತ್ತಲೇ ಇದೆ. ಇಷ್ಟು ದಿನ ಆಪರೇಶನ್​ ಗಂಗಾ (Operation Ganga) ಹೆಸರಿನ ಕಾರ್ಯಾಚರಣೆಯನ್ನು ಏರ್​ ಇಂಡಿಯಾ ವಿಮಾನಗಳ ಮೂಲಕ ನಡೆಸಲಾಗುತ್ತಿತ್ತು.  ಅಂದರೆ ಏರ್​ ಇಂಡಿಯಾ ವಿಮಾನ ಉಕ್ರೇನ್​ನ ನೆರೆ ರಾಷ್ಟ್ರಗಳಾದ ಪೋಲ್ಯಾಂಡ್​, ರೊಮೇನಿಯಾಗಳಿಗೆ ತೆರಳಿ ಅಲ್ಲಿಂದ ಭಾರತೀಯರನ್ನು ಕರೆತರುತ್ತಿದೆ. ಇಲ್ಲಿಯವರೆಗೆ ಏರ್​ ಇಂಡಿಯಾದ ಏಳು ವಿಮಾನಗಳು ಉಕ್ರೇನ್​​ನಲ್ಲಿರುವ ಸುಮಾರು 1600 ಭಾರತೀಯರನ್ನು ವಾಪಸ್ ಕರೆತಂದಿವೆ. ಆದರೆ ಈ ಕಾರ್ಯಾಚರಣೆಗೆ ಇನ್ನು ಭಾರತೀಯ ವಾಯು ಸೇನೆ (Airforce) ಬಲ ಸಿಗಲಿದೆ. ಉಕ್ರೇನ್​​(Ukraine)ನಿಂದ ಭಾರತೀಯರನ್ನು ಸ್ಥಳಾಂತರ ಮಾಡುವ ಕಾರ್ಯಕ್ಕೆ ಸಾಥ್​ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಏರ್​ಫೋರ್ಸ್​ಗೆ ಸೂಚನೆ ನೀಡಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಸೂಚನೆ ಅನ್ವಯ ಭಾರತೀಯ ವಾಯುಪಡೆ ಉಕ್ರೇನ್​ನಲ್ಲಿರುವ ಭಾರತೀಯರನ್ನು ಏರ್​ಲಿಫ್ಟ್ ಮಾಡುವ ಮೂಲಕ ಸ್ಥಳಾಂತರಿಸಲು ಸಿ-17 ವಿಮಾನವನ್ನು ಬಳಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.  ಸದ್ಯ ನಡೆಯುತ್ತಿರುವ ಆಪರೇಶನ್​ ಗಂಗಾ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ, ಸಾಥ್​ ನೀಡುವಂತೆ ಭಾರತೀಯ ವಾಯುಪಡೆಗೆ ಪ್ರಧಾನಿ ಮೋದಿ ಕರೆಕೊಟ್ಟಿದ್ದಾರೆ. ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಜನರನ್ನು ಅಲ್ಲಿಂದ ಕರೆತರುವ ಅನಿವಾರ್ಯತೆ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಲವಾದ ಮೂಲಗಳು ಮಾಹಿತಿ ನೀಡಿವೆ.

ಇನ್ನು ಉಕ್ರೇನ್​ಗೆ ಮಾನವೀಯ ನೆರವು ನೀಡಲು ಭಾರತ ಮುಂದಾಗಿದ್ದು, ಅದಕ್ಕೆ ಕೂಡ ಏರ್​ಫೋರ್ಸ್​ ವಿಮಾನಗಳೇ ಬಳಕೆಯಾಗಲಿವೆ. ಉಕ್ರೇನ್​ ರಾಯಭಾರಿ ಮಾಡಿದ್ದ ಮನವಿ ಮೇರೆಗೆ  ಆಹಾರ, ಇಂಧನಗಳು, ಔಷಧ ಸೇರಿ ಇನ್ನಿತರ ಅಗತ್ಯವಸ್ತುಗಳ ಪೂರೈಕೆ ಮಾಡಲು ಭಾರತ ನಿರ್ಧಾರ ಮಾಡಿದೆ. ಹಾಗೇ, ಇನ್ನೊಂದೆಡೆ ಕೇಂದ್ರದ ನಾಲ್ವರು ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಹರ್ದೀಪ್ ಸಿಂಗ್​ ಪುರಿ, ವಿಕೆ ಸಿಂಗ್​ ಮತ್ತು ಕಿರಣ್​ ರಿಜಿಜು ಉಕ್ರೇನ್​​ನಲ್ಲಿರುವ ಭಾರತೀಯರನ್ನು ರಕ್ಷಿಸಲು ಅಲ್ಲಿಗೆ ತೆರಳುತ್ತಿದ್ದರು. ಹರ್ದೀಪ್​ ಸಿಂಗ್ ಪುರಿ ಇಂದು ಹಂಗೇರಿಯಲ್ಲಿರುವ ಬುಡಾಪೆಸ್ಟ್​ನತ್ತ ತೆರಳುತ್ತಿದ್ದು, ಅದೇ ವಿಮಾನದಲ್ಲಿ ಇನ್ನೊಂದು ಬ್ಯಾಚ್​​ನಲ್ಲಿ ಭಾರತೀಯರು ಆಗಮಿಸಲಿದ್ದಾರೆ.

ಇದನ್ನೂ ಓದಿ: ಉಕ್ರೇನ್ ವಿಚಾರದಲ್ಲಿ ಭಾರತ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿರುವುದಕ್ಕೆ 5 ಮುಖ್ಯ ಕಾರಣಗಳು ಇಲ್ಲಿವೆ

Published On - 1:33 pm, Tue, 1 March 22