AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರ: ಸೋಲಾಪುರದಲ್ಲಿ ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಿ ಭಾವುಕರಾದ ಮೋದಿ

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಭಾರತದ ಅತಿದೊಡ್ಡ ಸೊಸೈಟಿಯನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ನಾನು ಚಿಕ್ಕವನಿದ್ದಾಗ ಅಂತಹ ಮನೆಯಲ್ಲಿ ವಾಸಿಸಲು ನನಗೆ ಅವಕಾಶವಿರಬೇಕಿತ್ತು ಎಂದು ಬಯಸಿದ್ದೆ. ಸಾವಿರಾರು ಕುಟುಂಬಗಳ ಕನಸುಗಳು ನನಸಾಗಿರುವುದನ್ನು ನೋಡಿದಾಗ ನನಗೆ ಸಂತೋಷವಾಗುತ್ತದೆ.  ಅವರ ಆಶೀರ್ವಾದವೇ ನನಗೆ ದೊಡ್ಡ ಆಸ್ತಿ ಎಂದು ಭಾವುಕರಾಗಿದ್ದಾರೆ.

ಮಹಾರಾಷ್ಟ್ರ: ಸೋಲಾಪುರದಲ್ಲಿ ಫಲಾನುಭವಿಗಳಿಗೆ ಮನೆ ಹಸ್ತಾಂತರಿಸಿ ಭಾವುಕರಾದ ಮೋದಿ
ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ
|

Updated on:Jan 19, 2024 | 4:03 PM

Share

ಸೋಲಾಪುರ ಜನವರಿ 19: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಜನವರಿ 19) ಮಹಾರಾಷ್ಟ್ರದ (Maharashtra) ಸೋಲಾಪುರದಲ್ಲಿ (Solapur) ಹಲವಾರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು. ದಕ್ಷಿಣ ಮಹಾರಾಷ್ಟ್ರ ನಗರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ, ಸುಮಾರು 2,000 ಕೋಟಿ ರೂಪಾಯಿ ಮೌಲ್ಯದ ಎಂಟು ಅಮೃತ್ (ಪುನರುಜ್ಜೀವ ಮತ್ತು ನಗರ ಪರಿವರ್ತನೆಗಾಗಿ ಅಟಲ್ ಮಿಷನ್) ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮಾಡಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮೋದಿ, ರಾಜಕೀಯ ಎಂದರೆ ಆರೋಪ-ಪ್ರತ್ಯಾರೋಪಗಳೇ. ಆದರೆ ನಮ್ಮ ದಾರಿ ಅಭಿವೃದ್ಧಿ. ಇದರಿಂದಾಗಿ ದೇಶದ ನಾಲ್ಕು ಕೋಟಿ ಜನರಿಗೆ ಮನೆಗಳನ್ನು ನೀಡಲು ಸಾಧ್ಯವಾಯಿತು. ಈ ಜನರು ಎಷ್ಟು ಸಂತೋಷವಾಗಿದ್ದಾರೆ ಎಂದು ಕೇಳಿ. ದೇಶದಲ್ಲಿ ಬಡತನ ನಿರ್ಮೂಲನೆಯ ಘೋಷಣೆಗಳು ಬಹಳ ಕಾಲ ಮೊಳಗಿದವು. ಆದರೆ ಬಡತನ ಹೋಗಲಿಲ್ಲ. ಏಕೆಂದರೆ ಬಡವರ ಹೆಸರಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆದರೆ ಅದರ ಪ್ರಯೋಜನ ಸರಿಯಾದ ಫಲಾನುಭವಿಗೆ ಸಿಗುತ್ತಿಲ್ಲ. ನೀವು ಅನುಭವಿಸಿದ ಕಷ್ಟಗಳು ಈಗ ನಿಮ್ಮ ಮಕ್ಕಳಿಗೆ ನೋಡಲು ಸಿಗುವುದಿಲ್ಲ. ಗುಡಿಸಲಿನ ಬದಲು ಗಟ್ಟಿಯಾದ ಮನೆಯಲ್ಲಿ ವಾಸಕ್ಕೆ ಅವಕಾಶ ಸಿಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೊಲ್ಲಾಪುರದಲ್ಲಿ ಹೇಳಿದ್ದಾರೆ.

ನಮ್ಮ ಕೇಂದ್ರ ಸರ್ಕಾರದ 3 ನೇ ಅವಧಿಯಲ್ಲಿ, ನನ್ನ ಮುಂದಿನ ಅವಧಿಯಲ್ಲಿ, ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿರಲಿದೆ. ನನ್ನ ಮುಂದಿನ ಅವಧಿಯಲ್ಲಿ ನಾನು ಭಾರತವನ್ನು ವಿಶ್ವದ ಅಗ್ರ ಮೂರು ದೇಶಗಳಿಗೆ ತರುತ್ತೇನೆ ಎಂದು ನಾನು ಭಾರತದ ಜನರಿಗೆ ಈ ಭರವಸೆ ನೀಡಿದ್ದೇನೆ. ಇದು ನನ್ನ ಗ್ಯಾರಂಟಿ ಎಂದು ಮೋದಿ ಹೇಳಿದ್ದಾರೆ.

22 ರಂದು ರಾಮಜ್ಯೋತಿ ಬೆಳಗಲು ಕರೆ

ಪಂಢರಪುರದ ವಿಠ್ಠಲ್ ಮತ್ತು ಸಿದ್ದಾಶ್ವರ ಮಹಾರಾಜರು ಮರಾಠಿಯಲ್ಲಿ ನರೇಂದ್ರ ಮೋದಿ ಅವರಿಗೆ ವಂದನೆ ಸಲ್ಲಿಸುವ ಮೂಲಕ ಭಾಷಣ ಆರಂಭಿಸಿದರು. ಜನವರಿ 22 ರಂದು ಭಗವಾನ್ ರಾಮನು ತನ್ನ ಭವ್ಯವಾದ ದೇವಾಲಯದಲ್ಲಿ ಕುಳಿತುಕೊಳ್ಳುತ್ತಾನೆ. ಸಂತರ ಮಾರ್ಗದರ್ಶನದಲ್ಲಿ ನಾನು ಯಮ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇನೆ. ನಿಮ್ಮ ಆಶೀರ್ವಾದದಿಂದ ಹನ್ನೊಂದು ದಿನಗಳ ಕಾಲ ಈ ಉಪವಾಸವನ್ನು ಮಾಡಲಿದ್ದೇನೆ. ಸುದೀರ್ಘ ಕಾಯುವಿಕೆಯ ನಂತರ ನಮ್ಮ ರಾಮಮಂದಿರದ ಕನಸು ನನಸಾಗುತ್ತಿದೆ. 22ರಂದು ಸಂಜೆ ಎಲ್ಲರೂ ತಮ್ಮ ಮನೆಗಳಲ್ಲಿ ರಾಮಜ್ಯೋತಿ ಬೆಳಗಬೇಕು ಎಂದು ನರೇಂದ್ರ ಮೋದಿ ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಭಾವುಕ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಭಾರತದ ಅತಿದೊಡ್ಡ ಸೊಸೈಟಿಯನ್ನು ಇಂದು ಸೋಲಾಪುರದಲ್ಲಿ ಉದ್ಘಾಟಿಸಿದ್ದಾರೆ. ನಾನು ಅದನ್ನು ನೋಡಲು ಹೋಗಿದ್ದೆ.  ನಾನು ಚಿಕ್ಕವನಿದ್ದಾಗ ಅಂತಹ ಮನೆಯಲ್ಲಿ ವಾಸಿಸಲು ನನಗೆ ಅವಕಾಶವಿರಬೇಕಿತ್ತು ಎಂದು ಬಯಸಿದ್ದೆ. ಸಾವಿರಾರು ಕುಟುಂಬಗಳ ಕನಸುಗಳು ನನಸಾಗಿರುವುದನ್ನು ನೋಡಿದಾಗ ನನಗೆ ಸಂತೋಷವಾಗುತ್ತದೆ.  ಅವರ ಆಶೀರ್ವಾದವೇ ನನಗೆ ದೊಡ್ಡ ಆಸ್ತಿ ಎಂದು ಮೋದಿ ಭಾವುಕರಾಗಿದ್ದಾರೆ.

25 ಕೋಟಿ ಜನರು ಬಡತನದಿಂದ ಹೊರಬಂದರು

ದೇಶದ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ನಾವು ದೇಶದ ಬಡವರಿಗೆ ಮಾತ್ರ ಸಾಧನಗಳನ್ನು ಒದಗಿಸಿದ್ದೇವೆ. ಸೌಲಭ್ಯಗಳನ್ನು ಒದಗಿಸಲಾಗಿದೆ. ಅವರೇ ಬಡತನದಿಂದ ಮೇಲೇರಲು ಪ್ರಯತ್ನಿಸಿದರು. ಮಹಾರಾಷ್ಟ್ರದ ಪ್ರಗತಿಗೆ ಮಹಾರಾಷ್ಟ್ರ ಸರ್ಕಾರ ಮತ್ತು ರಾಜ್ಯದ ಜನತೆಯ ಪರಿಶ್ರಮವೇ ಕಾರಣ. ಬಡವರು ಸ್ವ-ಹಣಕಾಸು ಯೋಜನೆಯ ಮೂಲಕ ಸಾಲ ಪಡೆಯುತ್ತಿದ್ದಾರೆ. ನನ್ನ ಖಾತರಿಯಿಂದ ಬಡವರು ಸಾಲ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಮನಗೆದ್ದ ಕೊಳ್ಳೆಗಾಲದ ಕವಿ ಮಂಜುನಾಥ್​ಗೆ ಗಣರಾಜ್ಯೋತ್ಸವದ ಆಹ್ವಾನ

ಇತರೆ ಯೋಜನೆಗಳ ಉದ್ಘಾಟನೆ

ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿಯಲ್ಲಿ ನಿರ್ಮಿಸಲಾದ 90,000 ಕ್ಕೂ ಹೆಚ್ಚು ಮನೆಗಳನ್ನು ಅವರು ಲೋಕಾರ್ಪಣೆ ಮಾಡಿದರು. ಇದಲ್ಲದೆ, ಸೋಲಾಪುರದ ರಾಯನಗರ ಹೌಸಿಂಗ್ ಸೊಸೈಟಿಯ 15,000 ಮನೆಗಳನ್ನು ಸಹ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದರು .ಈ ಫಲಾನುಭವಿಗಳಲ್ಲಿ ಸಾವಿರಾರು ಕೈಮಗ್ಗ ಕಾರ್ಮಿಕರು, ಮಾರಾಟಗಾರರು, ಪವರ್ಲೂಮ್ ಕಾರ್ಮಿಕರು, ಚಿಂದಿ ಆಯುವವರು, ಬೀಡಿ ಕಾರ್ಮಿಕರು ಮತ್ತು ಚಾಲಕರು ಸೇರಿದ್ದಾರೆ. ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದಲ್ಲಿ ಪಿಎಂ-ಸ್ವನಿಧಿಯ 10,000 ಫಲಾನುಭವಿಗಳಿಗೆ ಮೊದಲ ಮತ್ತು ಎರಡನೇ ಕಂತುಗಳ ವಿತರಣೆಯನ್ನು ಮೋದಿ ಪ್ರಾರಂಭಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:31 pm, Fri, 19 January 24

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ