ತಮ್ಮ ವಿರುದ್ಧ ಘೋಷಣೆ ಕೂಗುತ್ತಿದ್ದ ವಿಪಕ್ಷ ನಾಯಕರಿಗೆ ನೀರು ಕೊಟ್ಟ ಪ್ರಧಾನಿ ಮೋದಿ

|

Updated on: Jul 03, 2024 | 10:16 AM

ಸದನದಲ್ಲಿ ತಮ್ಮ ವಿರುದ್ಧ ಘೋಷಣೆ ಕೂಗುತ್ತಿದ್ದ ವಿಪಕ್ಷ ನಾಯಕರಿಗೆ ಪ್ರಧಾನಿ ಮೋದಿ ನೀರು ಕೊಟ್ಟಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ತಮ್ಮ ವಿರುದ್ಧ ಘೋಷಣೆ ಕೂಗುತ್ತಿದ್ದ ವಿಪಕ್ಷ ನಾಯಕರಿಗೆ ನೀರು ಕೊಟ್ಟ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us on

ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಮಾತನಾಡುತ್ತಿದ್ದ ವೇಳೆ ಅವರ ವಿರುದ್ಧ ಘೋಷಣೆ ಕೂಗುತ್ತಿದ್ದ ವಿರೋಧ ಪಕ್ಷದ ನಾಯಕರಿಗೆ ಮೋದಿ ನೀರು ಕೊಟ್ಟಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ಸಮಯದಲ್ಲಿ ಮೋದಿ ಕಾಂಗ್ರೆಸ್​ ಅನ್ನು ಅರಾಜಕತೆಯನ್ನು ಹರಡುವ ಪಕ್ಷ ಎಂದು ಕರೆದರು, ಎಷ್ಟೇ ಆಲೋಚಿಸಿದರೂ ನಿಮ್ಮ ಉದ್ದೇಶ ಎಂದೂ ಈಡೇರುವುದಿಲ್ಲ ಎಂದು ಹೇಳಿದರು.

ಆ ಸಮಯದಲ್ಲಿ ಪ್ರತಿಪಕ್ಷಗಳ ಸಂಸದರು ಸದನದ ಬಾವಿಗಿಳಿದು ಪ್ರಧಾನಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಗ ಪ್ರಧಾನಿ ಮೋದಿ ನಾಯಕರಿಗೆ ಒಂದು ಲೋಟ ನೀರು ನೀಡಿದರು. ಘೋಷಣೆ ಕೂಗುತ್ತಿದ್ದ ಕಾಂಗ್ರೆಸ್​ ಸಂಸದ ಮಾಣಿಕ್ಕಂ ಠಾಗೋರ್​ ಅವರಿಗೆ ಮೋದಿ ನೀರಿನ ಲೋಟವನ್ನು ನೀಡಿದರು ಆದರೆ ಅವರು ಪ್ರಧಾನಿ ಕೈಯಿಂದ ನೀರು ತೆಗೆದುಕೊಳ್ಳಲು ನಿರಾಕರಿಸಿದರು.

ನಂತರ ಪ್ರಧಾನಿ ಮೋದಿ ಮತ್ತೊಬ್ಬ ಸಂಸದ ಹಿಬಿ ಈಡನ್ ಅವರಿಗೆ ಕೊಟ್ಟರು. ಲೋಟ ತೆಗೆದುಕೊಂಡು ನೀರು ಕುಡಿದರು,ಹೈಬಿ ಈಡನ್ ಕೇರಳದ ಎರ್ನಾಕುಲಂ ಕ್ಷೇತ್ರದ ಕಾಂಗ್ರೆಸ್ ಸಂಸರಾಗಿದ್ದಾರೆ.
ಈ ಪೋಸ್ಟ್ ಅನ್ನು ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ಸುಳ್ಳಿನ ರಾಜಕೀಯ ಮಾಡುತ್ತಿದೆ, ಅರಾಜಕತೆಯನ್ನು ಹರಡುತ್ತಿದೆ, ನೀಟ್‌ನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದೆ ಮತ್ತು ಸೇನಾ ನೇಮಕಾತಿ ಯೋಜನೆ ಅಗ್ನಿವೀರ್ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದರು.

ಮತ್ತಷ್ಟು ಓದಿ: PM Modi Address Parliament Live: ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಲೋಕಸಭೆಯಲ್ಲಿ ಮೋದಿ ಮಾತು

ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದಾಗ ವಿಪಕ್ಷಗಳು ಅವರ ವಿರುದ್ಧ ಘೋಷಣೆ ಕೂಗಿ ಗದ್ದಲವೆಬ್ಬಿಸುತ್ತಲೇ ಇದ್ದರು. ಸ್ಪೀಕರ್ ಓಂ ಬಿರ್ಲಾ ಎರಡು ಬಾರಿ ಎಚ್ಚರಿಕೆ ನೀಡಿದರೂ ವಿಪಕ್ಷಗಳ ಗದ್ದಲ ನಿಲ್ಲಲಿಲ್ಲ.
ಈ ಕುರಿತು ಮಾತನಾಡಿರುವ ಪ್ರಧಾನಿ ಮೋದಿ ನನಗೆ ಕಳೆದ ಮೂರು ಅವಧಿಯಲ್ಲಿ ಇದೆಲ್ಲಾ ಅಭ್ಯಾಸವಾಗಿದೆ.

2014ರಲ್ಲಿ ನಾನು ಮೊದಲ ಬಾರಿಗೆ ಪ್ರಧಾನಿಯಾದಾಗ ಸಂಸತ್​ಗೆ ಬಂದಾಗಲೂ ವಿಪಕ್ಷಗಳು ಇದೇ ರೀತಿ ಕೂಗುತ್ತಿದ್ದರು. ಎರಡನೇ ಬಾರಿಗೆ ಪ್ರಧಾನಿಯಾದಾಗಲೂ ಇದೇ ಮುಂದುವರೆದಿತ್ತು, ಈಗಲೂ ಅದೇ ಇದೆ, ಯಾವ ಗದ್ದಲಕ್ಕೂ ನನ್ನ ಕೆಲಸವನ್ನು ತಡೆಯುವ ತಾಕತ್ತಿಲ್ಲ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ