AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನವರಿ 20-21 ರಂದು ತಮಿಳುನಾಡಿನ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ ಮೋದಿ

ಪ್ರಧಾನಿ ನರೇಂದ್ರ ಮೋದಿ ಜನವರಿ 20 ರಂದು, ಸುಮಾರು 11 ಗಂಟೆಗೆ, ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ದೇವಾಲಯದಲ್ಲಿ ವಿವಿಧ ವಿದ್ವಾಂಸರು ಕಂಬ ರಾಮಾಯಣದ ಪದ್ಯಗಳನ್ನು ಪಠಿಸುವುದನ್ನು ಪ್ರಧಾನ ಮಂತ್ರಿಗಳು ಆಲಿಸಲಿದ್ದಾರೆ.

ಜನವರಿ 20-21 ರಂದು ತಮಿಳುನಾಡಿನ ಪ್ರಸಿದ್ಧ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ ಮೋದಿ
ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ
|

Updated on: Jan 18, 2024 | 8:47 PM

Share

ದೆಹಲಿ ಜನವರಿ 18: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು 2024 ರ ಜನವರಿ 20-21 ರಂದು ತಮಿಳುನಾಡಿನ (Tamilnadu) ವಿವಿಧ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ಜನವರಿ 20 ರಂದು, ಸುಮಾರು 11 ಗಂಟೆಗೆ, ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ (Sri Ranganathaswamy Temple)ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗವಹಿಸಲಿದ್ದಾರೆ. ಈ ದೇವಾಲಯದಲ್ಲಿ ವಿವಿಧ ವಿದ್ವಾಂಸರು ಕಂಬ ರಾಮಾಯಣದ ಪದ್ಯಗಳನ್ನು ಪಠಿಸುವುದನ್ನು ಪ್ರಧಾನ ಮಂತ್ರಿಗಳು ಆಲಿಸಲಿದ್ದಾರೆ.

ನಂತರ ಪ್ರಧಾನಿಯವರು ಮಧ್ಯಾಹ್ನ 2 ಗಂಟೆಗೆ ರಾಮೇಶ್ವರಂ ತಲುಪಿ ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ನೆರವೇರಿಸಲಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಪ್ರಧಾನಮಂತ್ರಿಯವರು ಅನೇಕ ದೇವಾಲಯಗಳಿಗೆ ಭೇಟಿ ನೀಡಿದಾಗ ಆಚರಿಸಲಾಗುತ್ತಿರುವ ಅಭ್ಯಾಸವನ್ನು ಮುಂದುವರೆಸಿ, ಅವರು ಈ ದೇವಾಲಯದಲ್ಲಿ ವಿವಿಧ ಭಾಷೆಗಳಲ್ಲಿ (ಮರಾಠಿ, ಮಲಯಾಳಂ ಮತ್ತು ತೆಲುಗು ಮುಂತಾದ) ರಾಮಾಯಣ ಪಠಣದಲ್ಲಿ ಪಾಲ್ಗೊಳ್ಳುತ್ತಾರೆ. ಅದೇ ವೇಳೆ ಈ ದೇವಾಲಯದಲ್ಲಿ ‘ಶ್ರೀ ರಾಮಾಯಣ ಪಾರಾಯಣ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಎಂಟು ವಿಭಿನ್ನ ಸಾಂಪ್ರದಾಯಿಕ ಮಂಡಲಿಗಳು ಸಂಸ್ಕೃತ, ಅವಧಿ, ಕಾಶ್ಮೀರಿ, ಗುರುಮುಖಿ, ಅಸ್ಸಾಮಿ, ಬೆಂಗಾಲಿ, ಮೈಥಿಲಿ ಮತ್ತು ಗುಜರಾತಿ ರಾಮಕಥೆಗಳನ್ನು ಪಠಿಸುತ್ತಾರೆ. ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನದಲ್ಲಿ, ಪ್ರಧಾನಿ ಭಜನಾ ಸಂಧ್ಯಾದಲ್ಲಿ ಭಾಗವಹಿಸುತ್ತಾರೆ. ಜನವರಿ 21 ರಂದು ಧನುಷ್ಕೋಡಿಯ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ಪ್ರಧಾನಮಂತ್ರಿ ದರ್ಶನ ಮತ್ತು ಪೂಜೆ ನೆರವೇರಿಸಲಿದ್ದಾರೆ. ಧನುಷ್ಕೋಡಿ ಬಳಿ, ರಾಮಸೇತುವನ್ನು ನಿರ್ಮಿಸಿದ ಸ್ಥಳ ಎಂದು ಹೇಳಲಾಗುವ ಅರಿಚಲ್ ಮುನೈಗೆ ಪ್ರಧಾನಿ ಭೇಟಿ ನೀಡಲಿದ್ದಾರೆ.

ಶ್ರೀ ರಂಗನಾಥಸ್ವಾಮಿ ದೇವಸ್ಥಾನ

ತಿರುಚ್ಚಿಯ ಶ್ರೀರಂಗಂನಲ್ಲಿರುವ ಈ ದೇವಾಲಯವು ದೇಶದ ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಪುರಾಣಗಳು ಮತ್ತು ಸಂಗಮ್ ಯುಗದ ಪಠ್ಯಗಳು ಸೇರಿದಂತೆ ವಿವಿಧ ಪುರಾತನ ಗ್ರಂಥಗಳಲ್ಲಿ ಇದರ ಉಲ್ಲೇಖವಿದೆ ಇದು ತನ್ನ ವಾಸ್ತುಶಿಲ್ಪದ ವೈಭವ ಮತ್ತು ಅದರ ಹಲವಾರು ಸಾಂಪ್ರದಾಯಿಕ ಗೋಪುರಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಪೂಜಿಸುವ ಮುಖ್ಯ ದೇವರು ಶ್ರೀ ರಂಗನಾಥ ಸ್ವಾಮಿ, ಭಗವಾನ್ ವಿಷ್ಣುವಿನ ಒರಗಿರುವ ರೂಪ. ವೈಷ್ಣವ ಗ್ರಂಥಗಳು ಈ ದೇವಾಲಯದಲ್ಲಿ ಪೂಜಿಸುವ ವಿಗ್ರಹಕ್ಕೂ ಅಯೋಧ್ಯೆಗೂ ಇರುವ ಸಂಬಂಧವನ್ನು ಉಲ್ಲೇಖಿಸುತ್ತವೆ. ಶ್ರೀರಾಮ ಮತ್ತು ಅವನ ಪೂರ್ವಜರಿಂದ ಪೂಜಿಸಲ್ಪಟ್ಟ ವಿಷ್ಣುವಿನ ಚಿತ್ರಣವನ್ನು ಅವನು ವಿಭೀಷಣನಿಗೆ ಲಂಕೆಗೆ ಕೊಂಡೊಯ್ಯಲು ಕೊಟ್ಟನೆಂದು ನಂಬಲಾಗಿದೆ. ದಾರಿಯಲ್ಲಿ ಶ್ರೀರಂಗದಲ್ಲಿ ಈ ವಿಗ್ರಹವನ್ನು ಸ್ಥಾಪಿಸಲಾಯಿತು.

ಇದನ್ನೂ ಓದಿಜ.19 ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮನ; ಸಂಚಾರ ಮಾರ್ಗ ಬದಲಾವಣೆ ವಿವರ ಇಲ್ಲಿದೆ

ಮಹಾನ್ ತತ್ವಜ್ಞಾನಿ ಮತ್ತು ಸಂತ ಶ್ರೀ ರಾಮಾನುಜಾಚಾರ್ಯರು ಕೂಡ ಈ ದೇವಾಲಯದ ಇತಿಹಾಸದೊಂದಿಗೆ ಆಳವಾಗಿ ಸಂಬಂಧ ಹೊಂದಿದ್ದಾರೆ. ಇದಲ್ಲದೆ, ಈ ದೇವಾಲಯದಲ್ಲಿ ವಿವಿಧ ಪ್ರಮುಖ ಸ್ಥಳಗಳಿವ ಉದಾಹರಣೆಗೆ, ಪ್ರಸಿದ್ಧ ಕಂಬ ರಾಮಾಯಣವನ್ನು ಮೊದಲು ತಮಿಳು ಕವಿ ಕಂಬನ್ ಈ ಸಂಕೀರ್ಣದಲ್ಲಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಸಾರ್ವಜನಿಕವಾಗಿ ಪ್ರಸ್ತುತಪಡಿಸಿದರು ಎನ್ನಲಾಗಿದ

ಶ್ರೀ ಅರುಲ್ಮಿಗು ರಾಮನಾಥಸ್ವಾಮಿ ದೇವಸ್ಥಾನ, ರಾಮೇಶ್ವರಂ

ಈ ದೇವಾಲಯದಲ್ಲಿ ಪೂಜಿಸಲ್ಪಡುವ ಮುಖ್ಯ ದೇವರು ಶ್ರೀ ರಾಮನಾಥಸ್ವಾಮಿ, ಇದು ಭಗವಾನ್ ಶಿವನ ರೂಪವಾಗಿದೆ. ಈ ದೇವಾಲಯದಲ್ಲಿನ ಮುಖ್ಯ ಲಿಂಗವನ್ನು ಶ್ರೀ ರಾಮ ಮತ್ತು ಮಾತೆ ಸೀತೆ ಪ್ರತಿಷ್ಠಾಪಿಸಿ ಪೂಜಿಸಿದರು ಎಂಬುದು ವ್ಯಾಪಕವಾದ ನಂಬಿಕೆಯಾಗಿದೆ. ಈ ದೇವಾಲಯವು ಅತ್ಯಂತ ಉದ್ದವಾದ ಕಾರಿಡಾರ್ ಅನ್ನು ಹೊಂದಿದ್ದು ಸುಂದರವಾದ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಬದರಿನಾಥ್, ದ್ವಾರಕಾ, ಪುರಿ ಮತ್ತು ರಾಮೇಶ್ವರಂ-ಚಾರ್ ಧಾಮಗಳಲ್ಲಿ ಇದೂ ಒಂದು. ಅಷ್ಟೇ ಅಲ್ಲ ಇದು 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ.

ಕೋದಂಡರಾಮಸ್ವಾಮಿ ದೇವಸ್ಥಾನ, ಧನುಷ್ಕೋಡಿ

ಈ ದೇವಾಲಯವು ಶ್ರೀ ಕೋದಂಡರಾಮ ಸ್ವಾಮಿಗೆ ಸಮರ್ಪಿತವಾಗಿದೆ. ಕೋದಂಡರಾಮ ಎಂಬ ಹೆಸರು, ಬಿಲ್ಲು ಹೊಂದಿರುವ ರಾಮ ಎಂದರ್ಥ. ಇದು ಧನುಷ್ಕೋಡಿ ಎಂಬ ಸ್ಥಳದಲ್ಲಿದೆ. ವಿಭೀಷಣನು ಮೊದಲು ಶ್ರೀರಾಮನನ್ನು ಭೇಟಿಯಾಗಿ ಆಶ್ರಯವನ್ನು ಕೇಳಿದ್ದು ಇಲ್ಲಿಯೇ ಎಂದು ಹೇಳಲಾಗುತ್ತದೆ. ಶ್ರೀರಾಮನು ವಿಭೀಷಣನ ಪಟ್ಟಾಭಿಷೇಕವನ್ನು ನಡೆಸಿದ ಸ್ಥಳ ಇದಾಗಿದೆ ಎಂದು ಕೆಲವು ಪುರಾಣಗಳು ಹೇಳುತ್ತವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ