AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶ: ಪೊಲೀಸ್​ ಆಗಲು ಬಯಸಿದ್ದ ಮಹಿಳೆ ಈಗ ಬಸ್​ ಡ್ರೈವರ್

ಜೀವನವು ಬದುಕಲು ಅವಕಾಶಗಳನ್ನು ನೀಡಿದಾಗ ನಿರ್ಭಯವಾಗಿ ಮುನ್ನುಗ್ಗಬೇಕು ಎಂಬುದನ್ನು ಈ ಮಹಿಳೆಯನ್ನು ನೋಡಿ ಕಲಿಯಬೇಕು. ಪೊಲೀಸ್​ ಆಗಲು ಬಯಸಿದ್ದ ವೇದ್ ಕುಮಾರಿ ಈಗ ಬಸ್​ ಡ್ರೈವರ್ ಆಗಿದ್ದಾರೆ. ಕೌಶಂಬಿ-ಗಾಜಿಯಾಬಾದ್‌ನಿಂದ ಬುಡೌನ್ ಮಾರ್ಗದಲ್ಲಿ ಚಲಿಸುವ ಬಸ್‌ನ ಮೊದಲ ಮಹಿಳಾ ಚಾಲಕಿಯಾಗಿ ಅನೇಕ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಉತ್ತರ ಪ್ರದೇಶ: ಪೊಲೀಸ್​ ಆಗಲು ಬಯಸಿದ್ದ ಮಹಿಳೆ ಈಗ ಬಸ್​ ಡ್ರೈವರ್
ವೇದ್ ಕುಮಾರಿImage Credit source: India Today
Follow us
ನಯನಾ ರಾಜೀವ್
|

Updated on: Nov 08, 2023 | 8:14 AM

ಜೀವನವು ಬದುಕಲು ಅವಕಾಶಗಳನ್ನು ನೀಡಿದಾಗ ನಿರ್ಭಯವಾಗಿ ಮುನ್ನುಗ್ಗಬೇಕು ಎಂಬುದನ್ನು ಈ ಮಹಿಳೆಯನ್ನು ನೋಡಿ ಕಲಿಯಬೇಕು. ಪೊಲೀಸ್​ ಆಗಲು ಬಯಸಿದ್ದ ವೇದ್ ಕುಮಾರಿ ಈಗ ಬಸ್​ ಡ್ರೈವರ್ ಆಗಿದ್ದಾರೆ. ಕೌಶಂಬಿ-ಗಾಜಿಯಾಬಾದ್‌ನಿಂದ ಬುಡೌನ್ ಮಾರ್ಗದಲ್ಲಿ ಚಲಿಸುವ ಬಸ್‌ನ ಮೊದಲ ಮಹಿಳಾ ಚಾಲಕಿಯಾಗಿ ಅನೇಕ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಅದೇ ಬಸ್ಸಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುವ ಪತಿ ಮುಕೇಶ್ ಪ್ರಜಾಪತಿ ಕೆಲಸದಲ್ಲಿ ಕುಮಾರಿ ಅವರಿಗೆ ಸಹಾಯ ಮಾಡುತ್ತಾರೆ. ಇಂಡಿಯಾ ಟುಡೇ ವರದಿಯ ಪ್ರಕಾರ , ಕೌಶಲ ಅಭಿವೃದ್ಧಿ ಮಿಷನ್ ಅಡಿಯಲ್ಲಿ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ (UPSRTC) ಬೆಂಬಲದೊಂದಿಗೆ 2021 ರಲ್ಲಿ ಕಾನ್ಪುರದ ಮಾದರಿ ಚಾಲನಾ ತರಬೇತಿ ಮತ್ತು ಸಂಶೋಧನಾ ಸಂಸ್ಥೆಯಿಂದ ಹೆವಿ ವೆಹಿಕಲ್ ಡ್ರೈವಿಂಗ್ ತರಬೇತಿಯನ್ನು ಪಡೆದರು. ಇದರ ನಂತರ, ಏಪ್ರಿಲ್ 2023 ರಲ್ಲಿ ಕೌಶಂಬಿ ಡಿಪೋಗೆ 10 ತಿಂಗಳ ಕಾಲ ತರಬೇತಿ ಕಾರ್ಯಕ್ರಮಕ್ಕಾಗಿ ಕಳುಹಿಸಲಾಗಿದೆ.

ದೆಹಲಿ ಪೊಲೀಸ್‌ನಲ್ಲಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿದ್ದು, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ ಎಂದು ಮಹಿಳಾ ಚಾಲಕ ಹೇಳಿದ್ದಾರೆ. ದೆಹಲಿ ಪೊಲೀಸ್ ತಯಾರಿ ನಡೆಸುತ್ತಿರುವಾಗ ಚಾಲಕನ ಉದ್ಯೋಗದ ಜಾಹೀರಾತು ಕಣ್ಣಿಗೆ ಬಿದ್ದಿತ್ತು ಎಂದು ಕುಮಾರಿ ಹೇಳಿದ್ದಾರೆ. ಯಾವುದೇ ಕೆಲಸವು ಕಷ್ಟಕರವಲ್ಲ, ಸಾಧಿಸುವ ಛಲವೊಂದಿದ್ದರೆ ಗಂಡು, ಹೆಣ್ಣು ಎನ್ನುವ ಬೇಧವಿಲ್ಲ.

ಮತ್ತಷ್ಟು ಓದಿ: ಮಚ್ಚು ತೋರಿಸಿ ದರೋಡೆ ಯತ್ನ, ದಿಟ್ಟ ಮಹಿಳೆ ಮಾಡಿದ್ದೇನು ಗೊತ್ತಾ?

ಎರಡು ಮಕ್ಕಳ ತಾಯಿ, ಕುಮಾರಿ ಮತ್ತು ಅವರ ಪತಿ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ ಮತ್ತು ಅವರ ಹಿರಿಯ ಮಗ, 10 ನೇ ತರಗತಿ ಓದುತ್ತಿದ್ದು, ಮಗಳು ಇನ್ನೂ ಚಿಕ್ಕವಳು.

ಸಾಮಾಜಿಕ ಮಾನದಂಡಗಳನ್ನು ಧಿಕ್ಕರಿಸಿ, ಎಲ್ಲರಂತೆಯೇ ಮಹಿಳೆಯರು ಕೂಡ ಎಲ್ಲವನ್ನೂ ಸಾಧಿಸಬಲ್ಲರು, ಸಾಧಿಸುವ ಛಲವಿದ್ದರೆ ಯಾವ ಉದ್ಯೋಗವೂ ಕಷ್ಟವೆನಿಸಲು ಎಂದು ಮಹಿಳೆಯರಿಗೆ ಸಲಹೆ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ