AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡನನ್ನು ಮರಕ್ಕೆ ಕಟ್ಟಿ ಹೊಡೆದು ಕೊಂದು, ಗಂಗಾ ನದಿಗೆ ಎಸೆದ ಹೆಂಡತಿ

ಪ್ರಯಾಗ್‌ರಾಜ್​ನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಹಾಕಿದ ಆತನ ಪತ್ನಿ ಮತ್ತು ಪುತ್ರರು ಆತನನ್ನು ಹೊಡೆದು ಕೊಂದಿದ್ದಾರೆ. ಆತನ ಶವವನ್ನು ಗಂಗಾ ನದಿಗೆ ಎಸೆದಿದ್ದಾರೆ. ಮಂದಾ ಖಾಸ್ ನಿವಾಸಿ 58 ವರ್ಷದ ದಿನೇಶ್ ಕುಮಾರ್ ಮೌರ್ಯ ಕೆಲವು ದಿನಗಳ ಹಿಂದೆ ತನ್ನ ಕುಟುಂಬ ಸದಸ್ಯರೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರು ಮನೆಯಲ್ಲಿ ಇರಿಸಲಾಗಿದ್ದ ಸುಮಾರು 50 ಕೆಜಿ ಸಾಸಿವೆಯನ್ನು ಮಾರಾಟ ಮಾಡಿದ್ದಾರೆಂದು ಗೊತ್ತಾದ ನಂತರ ಅವರ ಮತ್ತು ಅವರ ಕುಟುಂಬ ಸದಸ್ಯರ ನಡುವೆ ಘರ್ಷಣೆ ಪ್ರಾರಂಭವಾಯಿತು.

ಗಂಡನನ್ನು ಮರಕ್ಕೆ ಕಟ್ಟಿ ಹೊಡೆದು ಕೊಂದು, ಗಂಗಾ ನದಿಗೆ ಎಸೆದ ಹೆಂಡತಿ
Representative Image
ಸುಷ್ಮಾ ಚಕ್ರೆ
|

Updated on: May 16, 2025 | 7:07 PM

Share

ಪ್ರಯಾಗ್‌ರಾಜ್, ಮೇ 16: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ (Prayagraj) ಬುಧವಾರ ನಡೆದ ದುರಂತ ಘಟನೆಯೊಂದರಲ್ಲಿ, ರೈತನೊಬ್ಬನನ್ನು ಅವನ ಹೆಂಡತಿ ಮತ್ತು ಪುತ್ರರು ಅವನ ಮನೆಯ ಹೊರಗೆ ಮರಕ್ಕೆ ಕಟ್ಟಿಹಾಕಿ ಥಳಿಸಿ ಕೊಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಅಳಿಸಿಹಾಕುವ ಪ್ರಯತ್ನದಲ್ಲಿ ಆರೋಪಿಯು ಮೃತನ ಶವವನ್ನು ಗಂಗಾ ನದಿಗೆ (Ganga River) ಎಸೆದಿದ್ದಾನೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿದ್ದರೂ ಈ ಘಟನೆಯ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಈ ವಿಷಯದ ಬಗ್ಗೆ ತನಿಖೆ ಪ್ರಾರಂಭವಾಯಿತು. ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಂದ ಖಾಸ್ ನಿವಾಸಿ 58 ವರ್ಷದ ದಿನೇಶ್ ಕುಮಾರ್ ಮೌರ್ಯ ಕೆಲವು ದಿನಗಳ ಹಿಂದೆ ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರು ಮನೆಯಲ್ಲಿ ಇರಿಸಲಾಗಿದ್ದ ಸುಮಾರು 50 ಕೆಜಿ ಸಾಸಿವೆಯನ್ನು ಮಾರಾಟ ಮಾಡಿದ್ದಾರೆಂದು ವರದಿಯಾದ ನಂತರ ಅವರ ಮತ್ತು ಅವರ ಕುಟುಂಬ ಸದಸ್ಯರ ನಡುವೆ ಘರ್ಷಣೆ ಪ್ರಾರಂಭವಾಯಿತು. ದಿನೇಶ್ ತನ್ನ ಪತ್ನಿ ಮತ್ತು ಪುತ್ರರೊಂದಿಗೆ ಸಮಾಲೋಚಿಸದೆ ಸಾಸಿವೆಯನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. ಇದು ಅವರ ಪತ್ನಿಯ ಕೋಪಕ್ಕೆ ಕಾರಣವಾಯಿತು. ಇದಾದ ನಂತರ ಗಲಾಟೆ ನಡೆಯಿತು.

ಇದನ್ನೂ ಓದಿ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ: ವಿಡಿಯೋ ನೋಡಿ

ಜಗಳದ ನಂತರ ದಿನೇಶ್ ಅವರನ್ನು ಮನೆಯ ಹೊರಗಿನ ಬೇವಿನ ಮರಕ್ಕೆ ಕಟ್ಟಿಹಾಕಿ ಕೋಲುಗಳಿಂದ ಹೊಡೆದು ಕೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಾಕ್ಷ್ಯವನ್ನು ಮರೆಮಾಡಲು ಆರೋಪಿ ನಂತರ ಅವರ ದೇಹವನ್ನು ಗಂಗಾ ನದಿಗೆ ಎಸೆದಿದ್ದಾರೆ. ಆದರೆ, ದಿನೇಶ್ ಅವರ ಸೋದರಳಿಯ ಈ ದುರಂತ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ದೂರು ಸ್ವೀಕರಿಸಲು ಹಿಂಜರಿದರು ಎಂದು ವರದಿಯಾಗಿದ್ದರೂ, ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ತನಿಖೆ ಪ್ರಾರಂಭವಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ