Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗರ್ಭಿಣಿ, ಬಾಣಂತಿಯರಿಗೆ ತೀವ್ರವಾಗಿ ಬಾಧಿಸಿದ ಕೊವಿಡ್​ 19 ಎರಡನೇ ಅಲೆ; ಐಸಿಎಂಆರ್​ ಅಧ್ಯಯನ

ಸುಮಾರು 1530 ಗರ್ಭಿಣಿ-ಬಾಣಂತಿಯರನ್ನು ಅಧ್ಯಯನದಲ್ಲಿ ಒಳಪಡಿಸಿಕೊಳ್ಳಲಾಗಿತ್ತು. ಅವರಲ್ಲಿ 1,143 ಮಂದಿ ಮೊದಲ ಅಲೆಯಲ್ಲಿ ಕೊವಿಡ್​ 19 ಸೋಂಕಿಗೆ ಒಳಗಾದವರು ಹಾಗೂ 387 ಮಂದಿ ಸೋಂಕಿಗೆ ಒಳಗಾದವರಾಗಿದ್ದರು.

ಗರ್ಭಿಣಿ, ಬಾಣಂತಿಯರಿಗೆ ತೀವ್ರವಾಗಿ ಬಾಧಿಸಿದ ಕೊವಿಡ್​ 19 ಎರಡನೇ ಅಲೆ; ಐಸಿಎಂಆರ್​ ಅಧ್ಯಯನ
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: Jun 17, 2021 | 9:12 AM

ಕೊವಿಡ್​ 19 ಮೊದಲನೇ ಅಲೆಗೆ ಹೋಲಿಸಿದರೆ, ಎರಡನೇ ಅಲೆಯಲ್ಲಿ ಗರ್ಭಿಣಿಯರು, ಆಗಷ್ಟೇ ಹೆರಿಗೆಯಾದ ಮಹಿಳೆಯರು ಅಂದರೆ ಬಾಣಂತಿಯರು ಅತಿ ತೀವ್ರವಾಗಿ ಕೊರೊನಾದಿಂದ ಬಾಧಿತರಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ತಿಳಿಸಿದೆ. ಅಲ್ಲದೆ, ಮೊದಲ ಅಲೆಗಿಂತಲೂ ಈ ಅಲೆಯಲ್ಲಿ ಗರ್ಭಿಣಿಯರು, ಬಾಣಂತಿಯರಲ್ಲಿ ರೋಗಲಕ್ಷಣದ ಪ್ರಕರಣ ಮತ್ತು ಸಾವಿನ ಪ್ರಮಾಣ ಜಾಸ್ತಿ ಇತ್ತು ಎಂದೂ ಐಸಿಎಂಆರ್​ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.

ಕೊವಿಡ್​ 19 ಮೊದಲನೇ ಅಲೆಯಲ್ಲಿ ಗರ್ಭಿಣಿ ಮತ್ತು ಬಾಣಂತಿಯರಲ್ಲಿ ರೋಗ ಲಕ್ಷಣದ ಪ್ರಕರಣಗಳು 1143ಕ್ಕೆ ಕೇವಲ 162ರಂತೆ ಅಂದರೆ ಅನುಪಾತ 14.2 ಪರ್ಸಂಟ್​ ಇತ್ತು. ಆದರೆ ಅದು ಎರಡನೇ ಅಲೆಯಲ್ಲಿ ಶೇ.28.7ರಷ್ಟು ಹೆಚ್ಚಾಗಿದ್ದು, 387ಕ್ಕೆ 111ರಷ್ಟಿದೆ ಎಂದು ಐಸಿಎಂಆರ್​ ಮಾಹಿತಿ ನೀಡಿದೆ. ಹಾಗೇ, ಗರ್ಭಿಣಿ-ಬಾಣಂತಿಯರ ಮರಣ ಪ್ರಮಾಣ ಮೊದಲ ಅಲೆಯಲ್ಲಿ 0.7 (8/1143)ರಷ್ಟಿತ್ತು. ಆದರೆ ಎರಡನೇ ಅಲೆಯಲ್ಲಿ ಶೇ.5.7 (22/387)ಆಗಿದೆ ಎಂದೂ ಹೇಳಿದೆ.

ಸುಮಾರು 1530 ಗರ್ಭಿಣಿ-ಬಾಣಂತಿಯರನ್ನು ಅಧ್ಯಯನದಲ್ಲಿ ಒಳಪಡಿಸಿಕೊಳ್ಳಲಾಗಿತ್ತು. ಅವರಲ್ಲಿ 1,143 ಮಂದಿ ಮೊದಲ ಅಲೆಯಲ್ಲಿ ಕೊವಿಡ್​ 19 ಸೋಂಕಿಗೆ ಒಳಗಾದವರು ಹಾಗೂ 387 ಮಂದಿ ಸೋಂಕಿಗೆ ಒಳಗಾದವರಾಗಿದ್ದರು. ಇನ್ನು ಮೊದಲ ಮತ್ತು ಎರಡನೇ ಅಲೆಯಲ್ಲಿ ಅತ್ಯಂತ ಹೆಚ್ಚು ಗರ್ಭಿಣಿ-ಬಾಣಂತಿಯರು ಮೃತಪಟ್ಟಿದ್ದು, ಕೊವಿಡ್​ 19 ಸಂಬಂಧಿತ ನ್ಯೂಮೋನಿಯಾ ಮತ್ತು ಉಸಿರಾಟದ ಸಮಸ್ಯೆಯಿಂದಲೇ ಆಗಿದೆ ಎಂದೂ ಐಸಿಎಂಆರ್​ ತಿಳಿಸಿದೆ. ಹಾಗೇ, ಬೇರೆ ಇತರ ಕಾಯಿಲೆಗಳನ್ನು ಹೊಂದಿರುವ ಗರ್ಭಿಣಿಯರಿಗೆ ಲಸಿಕೆ ನೀಡಲು ಕಳೆದವಾರವೇ ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸ್ಸು ಮಾಡಿದೆ.

ಇದನ್ನೂ ಓದಿ: Gold Rate Today: ಇಳಿಕೆಯ ಹಾದಿ ಹಿಡಿದ ಚಿನ್ನದ ದರ; ಆಭರಣ ಪ್ರಿಯರಿಗೆ ಸಂತಸ

Pregnant postpartum women severely affected in second Covid wave ICMR Study

ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ