AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊಮೊಸ್, ಸ್ಪ್ರಿಂಗ್ ರೋಲ್ ಕಾರ್ಖಾನೆಯ ರೆಫ್ರಿಜರೇಟರ್​ನಲ್ಲಿ ನಾಯಿಯ ಕತ್ತರಿಸಿದ ತಲೆ ಪತ್ತೆ

ಪಂಜಾಬ್​ನ ಮೊಹಾಲಿಯಲ್ಲಿರುವ ಮೊಮೊಸ್, ಸ್ಪ್ರಿಂಗ್​ ರೋಲ್ ಕಾರ್ಖಾನೆಯ ರೆಫ್ರಿಜರೇಟರ್​ನಲ್ಲಿ ನಾಯಿಯ ಕತ್ತರಿಸಿದ ತಲೆ ಪತ್ತೆಯಾಗಿದೆ. ಆರೋಗ್ಯ ಆಧಿಕಾರಿಗಳು ತಪಾಸಣೆ ನಡೆಸುವಾಗ ನಾಯಿಯ ರುಂಡ ಸಿಕ್ಕಿದೆ. ಇದೀಗ ತನಿಖೆಗೆ ಆದೇಶಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಪುರಸಭೆಯು ಕೊಳಕು ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಹಾರ ಘಟಕಗಳ ಮೇಲೆ ನಡೆಸಿದ್ದ ದಾಳಿಯಲ್ಲಿ ಈ ವಿಚಾರ ಹೊರಬಿದ್ದಿದೆ.

ಮೊಮೊಸ್, ಸ್ಪ್ರಿಂಗ್ ರೋಲ್ ಕಾರ್ಖಾನೆಯ ರೆಫ್ರಿಜರೇಟರ್​ನಲ್ಲಿ ನಾಯಿಯ ಕತ್ತರಿಸಿದ ತಲೆ ಪತ್ತೆ
ಮೊಮೊಸ್ Image Credit source: Indian Recipes
ನಯನಾ ರಾಜೀವ್
|

Updated on: Mar 20, 2025 | 9:20 AM

Share

ಪಂಜಾಬ್, ಮಾರ್ಚ್​ 20: ಪಂಜಾಬ್​ನ ಮೊಹಾಲಿಯಲ್ಲಿರುವ ಮೊಮೊಸ್, ಸ್ಪ್ರಿಂಗ್​ ರೋಲ್ ಕಾರ್ಖಾನೆಯ ರೆಫ್ರಿಜರೇಟರ್​ನಲ್ಲಿ ನಾಯಿಯ ಕತ್ತರಿಸಿದ ತಲೆ ಪತ್ತೆಯಾಗಿದೆ. ಆರೋಗ್ಯ ಆಧಿಕಾರಿಗಳು ತಪಾಸಣೆ ನಡೆಸುವಾಗ ನಾಯಿಯ ರುಂಡ ಸಿಕ್ಕಿದೆ. ಇದೀಗ ತನಿಖೆಗೆ ಆದೇಶಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಪುರಸಭೆಯು ಕೊಳಕು ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಹಾರ ಘಟಕಗಳ ಮೇಲೆ ನಡೆಸಿದ್ದ ದಾಳಿಯಲ್ಲಿ ಈ ವಿಚಾರ ಹೊರಬಿದ್ದಿದೆ.

ಮಾತೌರ್ ಗ್ರಾಮದಲ್ಲಿರುವ ಈ ಕಾರ್ಖಾನೆಯ ಶುಚಿಯಾಗಿಲ್ಲ ಎಂದು ತೋರಿಸುವ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿತ್ತು. ಇದರಿಂದ ಅಧಿಕಾರಿಗಳು ಎಚ್ಚೆತ್ತು ದಾಳಿ ನಡೆಸಿದ್ದಾರೆ. ಆಹಾರವನ್ನು ತಯಾರಿಸುತ್ತಿದ್ದ ಜಾಗದ ಸುತ್ತಮುತ್ತ ಬರೀ ಕೊಳಕು ತುಂಬಿಕೊಂಡಿತ್ತು. ಈ ಕಾರ್ಖಾನೆಯು ಕಳೆದ ಎರಡು ವರ್ಷಗಳಿಂದ ಪ್ರತಿದಿನ 100 ಕಿಲೋಗ್ರಾಂಗಳಷ್ಟು ಮೊಮೊಸ್ ಮತ್ತು ಸ್ಪ್ರಿಂಗ್ ರೋಲ್‌ಗಳನ್ನು ಚಂಡೀಗಢ, ಪಂಚಕುಲ ಮತ್ತು ಕಲ್ಕಾದಂತಹ ಪ್ರದೇಶಗಳಿಗೆ ಪೂರೈಸುತ್ತಿತ್ತು ಎಂಬುದು ತಿಳಿದುಬಂದಿದೆ.

ಕಾರ್ಮಿಕರು ಆಹಾರವನ್ನು ತಯಾರಿಸಲು ಕಲುಷಿತ ನೀರು ಮತ್ತು ಹಾಳಾದ ತರಕಾರಿಗಳನ್ನು ಬಳಸುತ್ತಿರುವುದನ್ನು ವೈರಲ್ ಆದ ವೀಡಿಯೊ ತೋರಿಸಿದ ನಂತರ ಈ ದಾಳಿ ನಡೆಸಲಾಯಿತು, ಇದು ಗಂಭೀರ ಆರೋಗ್ಯ ಕಳವಳಗಳನ್ನು ಉಂಟುಮಾಡಿದೆ. ತಪಾಸಣೆಯ ಸಮಯದಲ್ಲಿ, ಅಧಿಕಾರಿಗಳ ಕಣ್ಣಿಗೆ ಆಹಾರವನ್ನು ತಯಾರಿಸಲು ಕೊಳೆತ ಎಲೆಕೋಸು ಮತ್ತು ಇತರ ಹಾಳಾದ ಪದಾರ್ಥಗಳನ್ನು ಬಳಸುತ್ತಿರುವುದು ಕಂಡುಬಂದಿತು.

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಅಕ್ರಮ ಗೋಮಾಂಸ ಸಾಗಾಟ ದಂಧೆ: ಬರೋಬ್ಬರಿ 1.5 ಮಾಂಸ ಪತ್ತೆ!

ಅವರಿಗೆ ಭಯಾನಕ ಸಂಗತಿಯೆಂದರೆ, ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಲಾದ ಕತ್ತರಿಸಿದ ನಾಯಿಯ ತಲೆಯೂ ಕಂಡುಬಂದಿದೆ. ನಾಯಿಯ ದೇಹದ ಉಳಿದ ಭಾಗವು ಪತ್ತೆಯಾಗಿಲ್ಲ. ಕಾರ್ಖಾನೆಯಲ್ಲಿರುವ ಕೆಲವು ಪಾತ್ರೆಗಳಲ್ಲಿ ಗುರುತಿಸಲಾಗದ ಪ್ರಾಣಿಗಳ ಮಾಂಸವೂ ಇತ್ತು. ಅಧಿಕಾರಿಗಳು ತಲೆಯನ್ನು ಹೆಚ್ಚಿನ ಪರೀಕ್ಷೆಗಾಗಿ ಪಶುವೈದ್ಯಕೀಯ ಇಲಾಖೆಗೆ ಕಳುಹಿಸಿದರು.

ಸುಮಾರು 50 ಕೆಜಿಯಷ್ಟು ಕೋಳಿಯ ಕೊಳೆತ ದೇಹವಿತ್ತು, ಮೊಹಾಲಿ ಪುರಸಭೆಯು ಕಾರ್ಖಾನೆಯ ಮಾಲೀಕರಿಗೆ ಅಕ್ರಮ ಗೋಹತ್ಯೆಗಾಗಿ 12,000 ರೂ. ದಂಡ ವಿಧಿಸಿತು. ಆವರಣದಲ್ಲಿ ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ ಚೀಲಗಳು ಪತ್ತೆಯಾದ ನಂತರ ಅವರು ಹೆಚ್ಚುವರಿಯಾಗಿ 10,000 ರೂ. ದಂಡ ವಿಧಿಸಿದರು.

ಕಾರ್ಖಾನೆಯ ಕೊಳಕು ಪರಿಸ್ಥಿತಿಯಿಂದಾಗಿ ಆರೋಗ್ಯ ಇಲಾಖೆ ಮತ್ತು ಎಂಸಿ ತಂಡಗಳು ಸೋಮವಾರ ಕಾರ್ಖಾನೆಯ ಮೇಲೆ ದಾಳಿ ನಡೆಸಿವೆ ಎಂದು ಪುರಸಭೆ ಆಯುಕ್ತ ಪರ್ಮಿಂದರ್ ಪಾಲ್ ಸಿಂಗ್ ಹೇಳಿದ್ದಾರೆ. ದಂಡ ವಿಧಿಸುವುದರ ಜೊತೆಗೆ, ಅಂತಹ ಆಹಾರ ಘಟಕಗಳು ಗ್ರಾಮದಲ್ಲಿ ಕಾರ್ಯನಿರ್ವಹಿಸಲು ಸರಿಯಾದ ವ್ಯಾಪಾರ ಪರವಾನಗಿಗಳನ್ನು ಹೊಂದಿವೆಯೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಾರೆ.

ಬೀದಿ ಬದಿಯ ಆಹಾರವನ್ನು ಸೇವಿಸುವಾಗ ಅಥವಾ ಅಪರಿಚಿತ ಬ್ರ್ಯಾಂಡ್‌ಗಳಿಂದ ಖರೀದಿಸುವಾಗ ಜನರು ಜಾಗರೂಕರಾಗಿರಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ನೈರ್ಮಲ್ಯ ಮಾನದಂಡಗಳನ್ನು ಪರಿಶೀಲಿಸುವುದು ಮತ್ತು ಆಹಾರವನ್ನು ಸ್ವಚ್ಛ ವಾತಾವರಣದಲ್ಲಿ ತಯಾರಿಸುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!