Puri Jagannath Rath Yathra 2024: ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ಭಕ್ತ ಸಾವು, ಹಲವರಿಗೆ ಗಾಯ

|

Updated on: Jul 07, 2024 | 10:45 PM

ಒಡಿಶಾದ ಪುರಿ ನಗರದಲ್ಲಿರುವ ಐತಿಹಾಸಿಕ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತವಾಗಿ ಭಕ್ತಾಧಿ ಒಬ್ಬರು ಮೃತಪಟ್ಟಿದ್ದು ಮತ್ತು 300ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವುದಾಗಿ ವರದಿ ಆಗಿದೆ. ಸದ್ಯ ಗಾಯಾಳುಗಳನ್ನು ಪುರಿ ಜಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಭಗವಾನ್ ಜಗನ್ನಾಥನ ಭವ್ಯ ರಥಯಾತ್ರೆ ಭಾನುವಾರ ಆರಂಭಗೊಂಡಿದ್ದು, ದೇಶಾದ್ಯಂತ ಭಕ್ತರು ಭಾಗಿಯಾಗುತ್ತಾರೆ.

Puri Jagannath Rath Yathra 2024: ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ಭಕ್ತ ಸಾವು, ಹಲವರಿಗೆ ಗಾಯ
ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ಭಕ್ತ ಸಾವು, ಹಲವರಿಗೆ ಗಾಯ
Follow us on

ಒಡಿಶಾ, ಜುಲೈ 07: ಒಡಿಶಾದ ಪುರಿಯಲ್ಲಿ ಭಾನುವಾರ ನಡೆದ ಐತಿಹಾಸಿಕ ಜಗನ್ನಾಥ ರಥಯಾತ್ರೆ (Jagannath Rath Yathra) ಸಂದರ್ಭದಲ್ಲಿ ಕಾಲ್ತುಳಿತ ಉಂಟಾಗಿ ಭಕ್ತರೊಬ್ಬರು (Devotee) ಮೃತಪಟ್ಟಿದ್ದು, 300 ಕ್ಕೂ ಭಕ್ತಾಧಿಗಳಿಗೆ ಗಾಯಗಳಾಗಿರುವುದಾಗಿ ವರದಿ ಆಗಿದೆ. ಘಟನೆ ಬಳಿಕ ಭಕ್ತನನ್ನು ತಕ್ಷಣವೇ ಪುರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಅಷ್ಟರಲ್ಲಿ ಪ್ರಾಣ ಹೋಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಮೃತ ಭಕ್ತ ಯಾರೆಂದು ತಿಳಿದುಬಂದಿಲ್ಲ. ಸದ್ಯ ಗಾಯಾಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇಂದಿನಿಂದ ಎರಡು ದಿನ ನಡೆಯುವ ಭಗವಾನ್ ಜಗನ್ನಾಥ ಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗಿದ್ದಾರೆ.

300ಕ್ಕೂ ಹೆಚ್ಚು ವ್ಯಕ್ತಿಗಳನ್ನು ಪುರಿ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಸುಮಾರು 50 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಒಡಿಶಾ ಆರೋಗ್ಯ ಕಾರ್ಯದರ್ಶಿ ಆಸ್ಪತ್ರೆಗೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ಇದನ್ನೂ ಓದಿ: Jagannath Rath Yatra 2024: ಡ್ರೋನ್​ ಕಣ್ಣಲ್ಲಿ ವಿಶ್ವದ ಅತಿ ದೊಡ್ಡ ಪುರಿ ಜಗನ್ನಾಥ ರಥಯಾತ್ರೆ: ವಿಡಿಯೋ ನೋಡಿ

ಭಗವಾನ್ ಜಗನ್ನಾಥನ ಭವ್ಯ ರಥಯಾತ್ರೆ ಭಾನುವಾರ ಆರಂಭಗೊಂಡಿದ್ದು, ಪದಿ ಮುರ್ಮು ಅವರು ಚಾಲನೆ ನೀಡಿದ್ದಾರೆ. ದೇಶದ ಮೂಲೆ ಮೂಲೆಯಿಂದ ಭಕ್ತರು ಆಗಮಿಸುವ ಮೂಲಕ ಈ ಯಾತ್ರೆಗೆ ಸಾಕ್ಷಿಯಾಗುತ್ತಾರೆ. ಈ ರಥಯಾತ್ರೆಯೂ ಎರಡು ದಿನ ನಡೆಯಲಿದ್ದು, 53 ವರ್ಷಗಳ ಬಳಿಕ ಮೊದಲ ಬಾರಿಗೆ ರಥಯಾತ್ರೆಯು ಎರಡು ದಿನಗಳವರೆಗೆ ನಡೆಯುತ್ತಿರುವುದು ವಿಶೇಷ. ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ದೇವಿ ಸುಭದ್ರಾ ರಥಗಳನ್ನು ‘ಜೈ ಜಗನ್ನಾಥ’ ಘೋಷಣೆಯೊಂದಿಗೆ ಕಂಸಾಳೆ, ಶಂಖಗಳ ಶಬ್ದವು ಮೊಳಗಿದೆ.

ಇದನ್ನೂ ಓದಿ: Puri Janannath Rath Yathra 2024: ಪುರಿ ಜಗನ್ನಾಥನ ರಥಯಾತ್ರೆ ಸಂಭ್ರಮ; ನಿಮ್ಮ ಪ್ರೀತಿಪಾತ್ರರಿಗೆ ಈ ಶುಭ ಸಂದೇಶ ಕಳುಹಿಸಿ

ಧಾರ್ಮಿಕ ವಿಧಿ ವಿಧಾನದ ಪ್ರಕಾರ 11:15ಕ್ಕೆ ದೇವಿ ಸುಭದ್ರೆಯ ರಥವಾದ ದರ್ಪದಲನ್‌ಗೆ ಭಗವಾನ್ ಸುದರ್ಶನನು ಮೊದಲು ಬೆಂಗಾವಲು ಪಡೆಯುತ್ತಾನೆ. ತರುವಾಯ, ಬಲಭದ್ರ ದೇವರನ್ನು ತನ್ನ ತಾಳಧ್ವಜ ರಥಕ್ಕೆ ಕರೆದೊಯ್ಯಲಾಯಿತು. ನಂತರ ಸುಭದ್ರಾ ದೇವಿಯ ವಿಶೇಷ ಮೆರವಣಿಗೆ ಮಾಡಲಾಯಿತು. ಅಂತಿಮವಾಗಿ, ಭಗವಾನ್ ಜಗನ್ನಾಥನನ್ನು ನಂದಿಘೋಷ ರಥಕ್ಕೆ ಕರೆತರಲಾಯಿತು. ಮಧ್ಯಾಹ್ನ 2:15 ರ ಸುಮಾರಿಗೆ ‘ಪಹಂಡಿ’ ಆಚರಣೆಯನ್ನು ಪೂರ್ಣಗೊಳಿಸಲಾಗಿದೆ.

ಈ ರಥಯಾತ್ರೆಯೂ ಮಂಗಳ ಆರತಿ ಮತ್ತು ಮೈಲಂ ಸೇರಿದಂತೆ ಹಲವಾರು ಆಚರಣೆಗಳನ್ನು ಒಳಗೊಂಡಿದೆ. ಮೂರು ಭವ್ಯವಾದ ರಥಗಳು, ಈಗ ದೇವಾಲಯದ ಸಿಂಹ ದ್ವಾರದ ಮುಂದೆ ಪೂರ್ವಾಭಿಮುಖವಾಗಿ ನಿಲ್ಲಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.