AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ಹಿಂದೂಸ್ತಾನಿ ಸಂಗೀತ ಕಲಾವಿದ ಪದ್ಮಭೂಷಣ ರಾಜನ್ ಮಿಶ್ರಾ ನಿಧನ

Rajan Mishra: ಬನಾರಸ್ ಘರಾಣೆಯ ಖ್ಯಾತ ಗಾಯಕರಾದ ರಾಜನ್​ ಮಿಶ್ರಾ ತಮ್ಮ ಸೋದರ ಸಾಜನ್ ಮಿಶ್ರಾ ಜೊತೆಗೂಡಿ ಹಲವು ದಶಕಗಳಿಂದ ಭಾರತ ಮತ್ತು ವಿದೇಶಗಳಲ್ಲಿ ಸಾವಿರಾರು ಕಛೇರಿಗಳನ್ನು ನಡೆಸಿಕೊಟ್ಟಿದ್ದರು.

ಖ್ಯಾತ ಹಿಂದೂಸ್ತಾನಿ ಸಂಗೀತ ಕಲಾವಿದ ಪದ್ಮಭೂಷಣ ರಾಜನ್ ಮಿಶ್ರಾ ನಿಧನ
ಹಿಂದೂಸ್ತಾನಿ ಸಂಗೀತ ಕಲಾವಿದ ಪಂಡಿತ್ ರಾಜನ್ ಮಿಶ್ರಾ
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 25, 2021 | 9:28 PM

Share

ದೆಹಲಿ: ಖಾತ ಹಿಂದೂಸ್ತಾನಿ ಸಂಗೀತ ಕಲಾವಿದ ರಾಜನ್ ಮಿಶ್ರಾ ದೆಹಲಿಯಲ್ಲಿ ಭಾನುವಾರ (ಏಪ್ರಿಲ್ 25) ಕೋವಿಡ್-19ರಿಂದ ನಿಧನರಾದರು. ಕೊರೊನಾ ಸೋಂಕಿನ ಜೊತೆಗೆ ಹೃದಯದ ತೊಂದರೆ ಕಾರಣಕ್ಕೆ ಅವರನ್ನು ದೆಹಲಿಯ ಸ್ಟೀಫನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ರಾಷ್ಟ್ರೀಯ ಸುದ್ದಿಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಹೇಳಿವೆ. ರಾಜನ್​ ಮಿಶ್ರಾ ಕುಟುಂಬದ ಸದಸ್ಯರೂ ಮರಣದ ವಿಚಾರವನ್ನು ದೃಢಪಡಿಸಿದ್ದಾರೆ ಎಂದು ಎಎನ್​ಐ ಸುದ್ದಿಸಂಸ್ಥೆ ತಿಳಿಸಿದೆ.

ಸಾಜನ್ ಮಿಶ್ರಾ ನಿಧನದ ಬಗ್ಗೆ ಯುವ ಸಂಗೀತ ಕಲಾವಿದ ಸಲೀಂ ಮರ್ಚೆಂಟ್ ಟ್ವೀಟ್ ಮಾಡಿದ್ದಾರೆ. ‘ಬನಾರಸ್ ಘರಾಣೆಯ ಖ್ಯಾತ ಕಲಾವಿದರಾದ ಪದ್ಮಶ್ರೀ ರಾಜನ್​ ಮಿಶ್ರಾ ನಮ್ಮನ್ನು ಅಗಲಿದ್ದಾರೆ. ಅವರು ಕೋವಿಡ್​ನಿಂದಾಗಿ ದೆಹಲಿಯಲ್ಲಿ ನಿಧನರಾದರು. ಪಂಡಿತ್​ ರಾಜನ್ ಸಾಜನ್​ ಮಿಶ್ರಾ ಕಲಾವಿದ ಜೋಡಿಯ ಮೊದಲ ಹೆಸರು ಅವರದೇ ಆಗಿತ್ತು.

ರಾಜನ್ ಮಿಶ್ರಾ ಸಾವಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ‘ಪಂಡಿತ್ ರಾಜನ್ ಮಿಶ್ರಾ ನಿಧನಕ್ಕೆ ಶೋಕ ವ್ಯಕ್ತಪಡಿಸುತ್ತೇನೆ’ ಎಂದಿದ್ದಾರೆ.

ಬನಾರಸ್ ಘರಾಣೆಯ ಖ್ಯಾತ ಗಾಯಕರಾದ ರಾಜನ್​ ಮಿಶ್ರಾ ತಮ್ಮ ಸೋದರ ಸಾಜನ್ ಮಿಶ್ರಾ ಜೊತೆಗೂಡಿ ಹಲವು ದಶಕಗಳಿಂದ ಭಾರತ ಮತ್ತು ವಿದೇಶಗಳಲ್ಲಿ ಸಾವಿರಾರು ಕಛೇರಿಗಳಲ್ಲಿ ನಡೆಸಿಕೊಟ್ಟಿದ್ದರು. ವಾರಾಣಸಿಯಲ್ಲಿ 1951ರಲ್ಲಿ ಜನಿಸಿದ ರಾಜನ್ ಮಿಶ್ರಾ ತಮ್ಮ ತಂದೆ ಹನುಮಾನ್ ಪ್ರಸಾದ್, ತಾತ ಬಡೇ ರಾಮ್​ ದಾಸ್​ ಜಿ ಮಿಶ್ರಾ ಮತ್ತು ಚಿಕ್ಕಪ್ಪ ಸಾರಂಗಿ ಕಲಾವಿದ ಗೋಪಾಲ್ ಪ್ರಸಾದ್ ಮಿಶ್ರಾರಿಂದ ಸಂಗೀತ ಪಾಠ ಕಲಿತಿದ್ದರು.

ಹಿಂದೂಸ್ತಾನಿ ಸಂಗೀತದ ಖ್ಯಾಲ್​ ಪ್ರಕಾರದ ಹಾಡುಗಾರಿಕೆಯಲ್ಲಿ ಸೋದರರು ಪ್ರಸಿದ್ಧರಾಗಿದ್ದರು. ಪದ್ಮಭೂಷಣ, ಸಂಗೀತ ನಾಟಕ ಪ್ರಶಸ್ತಿ ಮತ್ತು ಗಂಧರ್ವ ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ರಾಜನ್​ ಮಿಶ್ರಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಶಾಸ್ತ್ರೀಯ ಸಂಗೀತದ ಮಹಾನ್ ಗಾಯಕ ರಾಜನ್​ ಮಿಶ್ರಾ ಜಿ ಅವರ ನಿಧನದಿಂದ ತುಂಬಾ ದುಃಖವಾಗಿದೆ. ಇದು ಕಲೆ ಮತ್ತು ಸಂಗೀತ ಪ್ರಪಂಚಕ್ಕೆ ದೊಡ್ಡ ನಷ್ಟ’ ಎಂದು ಹೇಳಿದ್ದಾರೆ.

(Rajan Mishra of Hindustani Classical Singers Rajan Sajan Mishra duo dies due to Covid-19 related complications in Delhi)

ಇದನ್ನೂ ಓದಿ: Shravan Rathod: ಖ್ಯಾತ ಸಂಗೀತ ನಿರ್ದೇಶಕ ಶ್ರವಣ್​ ರಾಥೋಡ್​ ಕೊರೊನಾ ವೈರಸ್​ನಿಂದ ನಿಧನ; ಚಿತ್ರರಂಗಕ್ಕೆ ಆಘಾತ

ಇದನ್ನೂ ಓದಿ:  ಕೊವಿಡ್​ ವಾರ್ಡ್​ನಲ್ಲೂ ಜೀವನೋತ್ಸಾಹದ ಸಂಗೀತ; ಬಪ್ಪಿ ಲಹರಿ ವಿಡಿಯೋ ವೈರಲ್​

Published On - 9:20 pm, Sun, 25 April 21

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ