AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ ವಾರ್ಡ್​ನಲ್ಲೂ ಜೀವನೋತ್ಸಾಹದ ಸಂಗೀತ; ಬಪ್ಪಿ ಲಹರಿ ವಿಡಿಯೋ ವೈರಲ್​

ಕೊವಿಡ್​ ಎರಡನೇ ಅಲೆ ಜೋರಾಗಿ ಹಬ್ಬುತ್ತಿದೆ. ಒಂದೇ ದಿನ 2.94 ಲಕ್ಷ ಜನರಿಗೆ ಕೊರೊನಾ ಅಂಟಿದೆ. ದೇಶವೊಂದರಲ್ಲಿ ಒಂದೇ ದಿನ ಇಷ್ಟೊಂದು ಕೊರೊನಾ ಕೇಸ್​ ಬಂದಿದ್ದು ಇದೇ ಮೊದಲು.

ಕೊವಿಡ್​ ವಾರ್ಡ್​ನಲ್ಲೂ ಜೀವನೋತ್ಸಾಹದ ಸಂಗೀತ; ಬಪ್ಪಿ ಲಹರಿ ವಿಡಿಯೋ ವೈರಲ್​
ರಾಜೇಶ್ ದುಗ್ಗುಮನೆ
|

Updated on:Apr 21, 2021 | 2:44 PM

Share

ಕೊರೊನಾ ವೈರಸ್​ ಎರಡನೇ ಅಲೇ ದೇಶದ್ಯಾಂತ ವೇಗವಾಗಿ ಹಬ್ಬುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಕೆಲವೆಡೆ ಲಾಕ್​ಡೌನ್​ ಕೂಡ ಘೋಷಣೆ ಮಾಡಲಾಗಿದೆ. ಅನೇಕ ಆಸ್ಪತ್ರೆಗಳಲ್ಲಿ ಬೆಡ್​ ಸಿಗದೆ ಜನರು ಪರದಾಡುವಂತಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೊರೊನಾ ಎಂದರೆ ಭಯ ಶುರುವಾಗಿದೆ. ಕೊರೊನಾ ವಾರ್ಡ್​ ಸೇರಿದವರು ನರಕಯಾತನೆ ಅನುಭವಿಸುತ್ತಿರುವ ವಿಡಿಯೋಗಳು ಕೂಡ ವೈರಲ್​ ಆಗುತ್ತಿವೆ. ಹೀಗಿರುವಾಗಲೇ ಕೊರೊನಾ ವಾರಿಯರ್​​ಗಳು ಕೊವಿಡ್​ ರೋಗಿಗಳನ್ನು ಮನರಂಜಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋವನ್ನು ಸಂಗೀತ ನಿರ್ದೇಶಕ ಬಪ್ಪಿ ಲಹರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೊವಿಡ್​ ಎರಡನೇ ಅಲೆ ಜೋರಾಗಿ ಹಬ್ಬುತ್ತಿದೆ. ಒಂದೇ ದಿನ 2.94 ಲಕ್ಷ ಜನರಿಗೆ ಕೊರೊನಾ ಅಂಟಿದೆ. ದೇಶವೊಂದರಲ್ಲಿ ಒಂದೇ ದಿನ ಇಷ್ಟೊಂದು ಕೊರೊನಾ ಕೇಸ್​ ಬಂದಿದ್ದು ಇದೇ ಮೊದಲು. ಕೊವಿಡ್​ ಕೇಸ್​ಗಳು ಹೆಚ್ಚುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ಉಂಟಾಗುತ್ತಿದೆ.

ಪರಿಸ್ಥಿತಿ ಗಂಭೀರವಾಗುತ್ತಿರುವ ಮಧ್ಯೆಯೇ ಕೊವಿಡ್​​ ವಾರಿಯರ್​ಗಳು ತಮ್ಮ ನಿಸ್ವಾರ್ಥ ಸೇವೆ ಒದಗಿಸುತ್ತಿದ್ದು, ರೋಗಿಗಳ ಆರೈಕೆಯಲ್ಲಿ ತೊಡಗುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಕೊವಿಡ್​ ರೋಗಿಗಳನ್ನು ಮನರಂಜಿಸುವ ಕೆಲಸ ಕೂಡ ಮಾಡಲಾಗುತ್ತಿದೆ. ಈಗ ವೈರಲ್​ ಆದ ವಿಡಿಯೋ ಸಾಕಷ್ಟು ಸೆನ್ಸೇಶನ್​ ಸೃಷ್ಟಿ ಮಾಡಿದೆ.

ಕೊವಿಡ್​ ವಾರ್ಡ್​ನಲ್ಲಿ ರೋಗಿಗಳು ಬೆಡ್​ ಮೇಲೆ ಮಲಗಿರುತ್ತಾರೆ. ಆಗ ಕೊವಿಡ್​ ವಾರಿಯರ್​ಗಳು ರೋಗಿಗಳನ್ನು ಮನರಂಜಿಸುವ ಕೆಲಸ ಮಾಡಿದ್ದಾರೆ. ರೋಗಿಗಳು ಕೂಡ ತಮ್ಮ ಆತಂಕವನ್ನು ಮರೆತು ಹಾಡಿಗೆ ಚಪ್ಪಾಳೆ ತಟ್ಟಿದ್ದಾರೆ. ಯೋಚಿಸಬೆಡಿ ಏನಾಗುತ್ತದೆ ನೋಡೋಣ, ನಾಳೆಗೋಸ್ಕರ ಇವತ್ತನ್ನು ಕಳೆದುಕೊಳ್ಳಬೇಡಿ ಎಂಬುದು ಹಾಡಿನ ಅರ್ಥ. ಈ ಹಾಡು ಸಂದರ್ಭಕ್ಕೆ ತುಂಬಾನೇ ಸೂಕ್ತವಾಗಿದೆ. ಈ ಹಾಡು 1990ರಲ್ಲಿ ತೆರೆಕಂಡ ಗಯಾಲ್​ ಚಿತ್ರದ್ದು. ಈ ಹಾಡಿಗೆ ಬಪ್ಪಿ ಲಹರಿ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ.

ಏಪ್ರಿಲ್​ ತಿಂಗಳ ಆರಂಭದಲ್ಲಿ ಬಪ್ಪಿ ಲಹರಿ ಅವರಿಗೆ ಕೊರೊನಾ ವೈರಸ್​ ಅಂಟಿತ್ತು. ನಂತರ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದ ನಂತರದಲ್ಲಿ ಅವರು ಚೇತರಿಕೆ ಕಂಡಿದ್ದರು.

ಇದನ್ನೂ ಓದಿ: ನಟಿ ಅನುಪ್ರಭಾಕರ್​ಗೆ ಕೊರೊನಾ ಪಾಸಿಟಿವ್​; ಎರಡನೇ ಅಲೆಯನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಮನವಿ ಮಾಡಿದ ನಟಿ

ಬೆಂಗಳೂರಿನ ಕೆಲವೆಡೆ ಕೊರೊನಾ ಲಸಿಕೆ ಕೊರತೆ; ಎರಡನೇ ಡೋಸ್ ಪಡೆಯಲು ಬಂದವರಿಗೆ ಲಸಿಕೆಯೇ ಸಿಗುತ್ತಿಲ್ಲ

Published On - 2:38 pm, Wed, 21 April 21

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು