AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ಯ ಏನೂಂತ ‘ನೇಷನ್ ವಾಂಟ್ಸ್ ಟು ನೊ’

ದಿನವಿಡೀ ತನ್ನ ಟಿಆರ್​ಪಿ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದ ರಿಪಬ್ಲಿಕ್ ಟಿವಿ ಮತ್ತು ಅದರ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯ ನಿಜವಾದ ಬಣ್ಣ ಬಯಲಾಗುವ ಸ್ಥಿತಿ ಉದ್ಭವಿಸಿದಂತೆ ಕಾಣುತ್ತಿದೆ. ಮುಂಬೈ ಪೊಲೀಸ್ ಕಮೀಶನರ್ ಪರಮ್ ಬೀರ್ ಸಿಂಗ್ ಗುರುವಾರದಂದು ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ರಿಪಬ್ಲಿಕ್ ಟಿವಿ ಸೇರಿದಂತೆ ಮೂರು ಚ್ಯಾನಲ್​ಗಳು ಟಿಆರ್​ಪಿಯನ್ನು ಅಳೆಯಲು ಬೆಎಆರ್​ಸಿ (ಬ್ರಾಡ್​ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್) ಬಳಸುವ ವಿಧಾನವನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಹೇಳಿದ್ದಾರೆ. ಫಕ್ತ್ ಮರಾಠಿ ಮತ್ತು ಬಾಕ್ಸ್ ಸಿನೆಮಾ ಉಳಿದೆರಡು ಮರಾಠಿ ಚ್ಯಾನೆಲ್​ಗಳು. ಟಿವಿ […]

ಸತ್ಯ ಏನೂಂತ ‘ನೇಷನ್ ವಾಂಟ್ಸ್ ಟು ನೊ’
ಅರುಣ್​ ಕುಮಾರ್​ ಬೆಳ್ಳಿ
|

Updated on: Oct 08, 2020 | 8:51 PM

Share

ದಿನವಿಡೀ ತನ್ನ ಟಿಆರ್​ಪಿ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದ ರಿಪಬ್ಲಿಕ್ ಟಿವಿ ಮತ್ತು ಅದರ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯ ನಿಜವಾದ ಬಣ್ಣ ಬಯಲಾಗುವ ಸ್ಥಿತಿ ಉದ್ಭವಿಸಿದಂತೆ ಕಾಣುತ್ತಿದೆ. ಮುಂಬೈ ಪೊಲೀಸ್ ಕಮೀಶನರ್ ಪರಮ್ ಬೀರ್ ಸಿಂಗ್ ಗುರುವಾರದಂದು ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ರಿಪಬ್ಲಿಕ್ ಟಿವಿ ಸೇರಿದಂತೆ ಮೂರು ಚ್ಯಾನಲ್​ಗಳು ಟಿಆರ್​ಪಿಯನ್ನು ಅಳೆಯಲು ಬೆಎಆರ್​ಸಿ (ಬ್ರಾಡ್​ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್) ಬಳಸುವ ವಿಧಾನವನ್ನು ದುರುಪಯೋಗಪಡಿಸಿಕೊಂಡಿವೆ ಎಂದು ಹೇಳಿದ್ದಾರೆ. ಫಕ್ತ್ ಮರಾಠಿ ಮತ್ತು ಬಾಕ್ಸ್ ಸಿನೆಮಾ ಉಳಿದೆರಡು ಮರಾಠಿ ಚ್ಯಾನೆಲ್​ಗಳು.

ಟಿವಿ ಚ್ಯಾನೆಲ್​ಗಳ ಟಿಆರ್​ಪಿಯನ್ನು ಒಂದು ರಹಸ್ಯವಾದ ಕರಾರಿಗೊಳಪಟ್ಟ ಹಲವು ನಿರ್ದಿಷ್ಟ ಮನೆಗಳಲ್ಲಿ ವಾಸಿಸುವ ಜನರು ಚ್ಯಾನೆಲ್​ಗಳನ್ನು ವೀಕ್ಷಿಸುವ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಮುಂಬೈ ಪೊಲೀಸ್ ಆಯುಕ್ತರು ಹೇಳಿರುವಂತೆ ಆರೋಪಿತರು ಸದರಿ ಮನೆಗಳ ಮಾಲೀಕರನ್ನು ಸಂಪರ್ಕಿಸಿ ಅವರು ಮನೆಯಲ್ಲಿರದ ಸಂದರ್ಭಗಳಲ್ಲೂ ತಮ್ಮ ಚ್ಯಾನೆಲ್​ಗಳನ್ನು ಸತತವಾಗಿ ಆನ್ ಇಟ್ಟಿರುವಂತೆ ಹಣದ ಆಮಿಶವೊಡ್ಡಿ ಬಲೆಗೆ ಹಾಕಿಕೊಂಡಿದ್ದಾರೆ. ಈ ಆರೋಪಗಳಿಗೆ ಸಂಬಂಧಿಸಿದಂತೆ ಬೆಎಆರ್​ಸಿ ಅಧಿಕಾರಿಗಳನ್ನು ಪ್ರಶ್ನಿಸಲಾಗುವುದೆಂದು ಆಯುಕ್ತರು ಹೇಳಿದ್ದಾರೆ.

ಸಿಂಗ್ ಅವರ ಪ್ರೆಸ್ಸರ್ ನಂತರ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಬೆಎಆರ್​ಸಿ, ‘‘ ನಮ್ಮ ಸಂಸ್ಥೆ ಶಿಸ್ತು ಮತ್ತು ಜಾಗರೂಕತೆಗೆ ಸಂಬಂಧಿಸಿದ ವಿಷಯಗಳೊಂದಿಗೆ ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಈ ಹಿಂದೆ ಇಂಥ ಆರೋಪಗಳು ಎದುರಾದಾಗ ತೆಗೆದುಕೊಂಡ ಕ್ರಮವನ್ನೇ ಈಗಲೂ ತೆಗೆದುಕೊಳ್ಳಲಾಗುವುದು. ‘ಭಾರತ ಏನು ವೀಕ್ಷಿಸುತ್ತಿದೆ’ ವರದಿಯನ್ನು ನಿಖರವಾಗಿ ಮತ್ತು ವಿಶ್ವಾಸಪೂರ್ಣವಾಗಿ ನೀಡಲು ನಾವು ಬದ್ಧರಾಗಿದ್ದೇವೆ. ಮುಂಬೈ ಪೊಲೀಸ್ ಮಾಡಿರುವ ಪ್ರಯತ್ನಗಳನ್ನು ಶ್ಲಾಘಿಸುತ್ತಾ ಅವರಿಗೆ ಎಲ್ಲ ಸಹಕಾರ ಒದಗಿಸುವ ಭರವಸೆಯನ್ನು ನಾವು ನೀಡುತ್ತೇವೆ,’’ ಎಂದು ಹೇಳಿದೆ.

ಆಯುಕ್ತರು ಹೇಳಿರುವ ಪ್ರಕಾರ ಟಿಆರ್​ಪಿಯನ್ನು ಮಾನಿಟರ್ ಮಾಡಲು ಬೆಎಆರ್​ಸಿ, ಮುಬೈಯಲ್ಲಿ 2,000 ಬಾರೊಮೀಟರ್​ಗಳನ್ನು ಅಳವಡಿಸಿದೆ ಮತ್ತು ಅವುಗಳನ್ನು ಮಾನಿಟರ್ ಮಾಡಲು ಹಂಸ ರೀಸರ್ಚ್ ಎಂಬ ಸಂಸ್ಥೆಯೊಂದಿಗೆ ರಹಸ್ಯಮಯ ಒಪ್ಪಂದ ಮಾಡಿಕೊಂಡಿದೆ. ಆರೋಪಿತರು ಈ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ತಾವು ಮನೆಯಲ್ಲಿರದ ಸಂದರ್ಭಗಳಲ್ಲೂ ತಮ್ಮ ಚ್ಯಾನೆಲ್​ಗಳನ್ನು ಆನ್ ಇಡುವಂತೆ ಪುಸಲಾಯಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದ ನಂತರ ಮುಂಬೈ ಪೊಲೀಸ್ ತನ್ನ ವಶಕ್ಕೆ ತೆಗೆದುಕೊಂಡಿದೆ. ಒಬ್ಬ ಆರೋಪಿತನಲ್ಲಿ ರೂ. 20 ಲಕ್ಷ ಹಣ ದೊರೆತರೆ ಮತ್ತೊಬ್ಬನ ಲಾಕರ್​ನಲ್ಲಿ ರೂ 8.5 ಲಕ್ಷ ಪತ್ತೆಯಾಗಿದೆ ಎಂದು ಸಿಂಗ್ ಹೇಳಿದ್ದಾರೆ.

ಮುಂದುವರಿದು ಹೇಳಿರುವ ಸಿಂಗ್, ಫಕ್ತ್ ಮರಾಠಿ ಮತ್ತು ಬಾಕ್ಸ್ ಸಿನಿಮಾ ಚ್ಯಾನೆಲ್​ಗಳ ಮಾಲೀಕರನ್ನು ಐಪಿಸಿ ಸೆಕ್ಷನ್ 409 ಮತ್ತು 420 ಅನ್ವಯ ಬಂಧಿಸಲಾಗಿದೆ. ರಿಪಬ್ಲಿಕ್ ಟಿವಿ ಸಹ ಟಿಆರ್​ಪಿಯನ್ನು ತನಗೆ ಅನುಕೂಲವಾಗುವ ರೀತಿಯಲ್ಲಿ ಬಳಸಿಕೊಂಡಿರುವ ಶಂಕೆಯನ್ನು ಬೆಎಆರ್​ಸಿ ವ್ಯಕ್ತಪಡಿಸಿದೆಯೆಂದು ಕಮೀಶನರ್ ಹೇಳಿದ್ದಾರೆ. ಇಂಥ ವಂಚನೆ ಮುಂಬೈಯಂಥ ನಗರದಲ್ಲೇ ಆಗುತ್ತಿರಬೇಕಾದರೆ ಅದು ಬೇರೆ ನಗರಗಳಲ್ಲೂ ನಡೆದಿರುವ ಸಾಧ್ಯತೆಯಿದೆ ಎಂದು ಸಿಂಗ್ ಹೇಳಿದ್ದಾರೆ.

ಹಂಸ ರಿಸರ್ಚ್ ಸಂಸ್ಥೆ ಮತ್ತು ಅದರ ಮಾಜಿ ಉದ್ಯೋಗಿಗಳ ವಿರುದ್ಧವೂ ದೂರುಗಳನ್ನು ದಾಖಲಿಸಲಾಗಿದೆ, ರಿಪಬ್ಲಿಕ್ ಟಿವಿಯ ಪ್ರಮೋಟರ್ ಮತ್ತು ಉದ್ಯೋಗಿಗಳನ್ನು ವಿಚಾರಣೆಗೆ ಕರೆಸುಲಾಗುವುದೆಂದು ಆಯುಕ್ತರು ಹೇಳಿದ್ದಾರೆ.

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?