AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನವರಿ 26ರಂದು ರಾಜಪಥ್​ನಲ್ಲಿ ಮೊಳಗಲಿದೆ ಕನ್ನಡದ ಧ್ವನಿ

ದೆಹಲಿ: ವಿವಿಧತೆಯಲ್ಲಿ ಏಕತೆ… ಹಲವು ಧರ್ಮಗಳಿದ್ದರೂ ಒಂದೇ ಭಾವೈಕ್ಯತೆ… ಸರ್ವಜನಾಂಗದ ಶಾಂತಿಯ ತೋಟವೇ ಭಾರತ… ಗಣರಾಜ್ಯೋತ್ಸವ ಅಂದ್ರೆ ಇಡೀ ರಾಷ್ಟ್ರಪ್ರೇಮ ಎಲ್ಲರನ್ನೂ ಉಕ್ಕುತ್ತೆ. ಅದ್ರಲ್ಲೂ, ಭಾರತಾಂಬೆಯ ನೆಲದ ಅಷ್ಟೂ ಸಾಂಸ್ಕೃತಿಕ ಭಾವೈಕ್ಯತೆ ಬಿಂಬಿಸುವ ಸ್ತಬ್ಧಚಿತ್ರಗಳೇ ಸೆಂಟರ್​ ಹಾಫ್​ ಅಟ್ರ್ಯಾಕ್ಷನ್. ದೆಹಲಿಯ ರಾಜಪಥ್​ನಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​ ಈ ಬಾರಿ ಕರ್ನಾಟಕಕ್ಕೆ ವಿಶೇಷವಾಗಿದೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅನುಭವ ಮಂಟಪ! ದೆಹಲಿಯ ರಾಜಪಥ್​ ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಜ್ಜಾಗಿದೆ. ಈ ಬಾರಿಯ ಪರೇಡ್​ನಲ್ಲಿ ಕರ್ನಾಟಕದ 12ನೇ ಶತಮಾನದ ಲಾರ್ಡ್​ […]

ಜನವರಿ 26ರಂದು ರಾಜಪಥ್​ನಲ್ಲಿ ಮೊಳಗಲಿದೆ ಕನ್ನಡದ ಧ್ವನಿ
ಸಾಧು ಶ್ರೀನಾಥ್​
|

Updated on: Jan 23, 2020 | 10:27 AM

Share

ದೆಹಲಿ: ವಿವಿಧತೆಯಲ್ಲಿ ಏಕತೆ… ಹಲವು ಧರ್ಮಗಳಿದ್ದರೂ ಒಂದೇ ಭಾವೈಕ್ಯತೆ… ಸರ್ವಜನಾಂಗದ ಶಾಂತಿಯ ತೋಟವೇ ಭಾರತ… ಗಣರಾಜ್ಯೋತ್ಸವ ಅಂದ್ರೆ ಇಡೀ ರಾಷ್ಟ್ರಪ್ರೇಮ ಎಲ್ಲರನ್ನೂ ಉಕ್ಕುತ್ತೆ. ಅದ್ರಲ್ಲೂ, ಭಾರತಾಂಬೆಯ ನೆಲದ ಅಷ್ಟೂ ಸಾಂಸ್ಕೃತಿಕ ಭಾವೈಕ್ಯತೆ ಬಿಂಬಿಸುವ ಸ್ತಬ್ಧಚಿತ್ರಗಳೇ ಸೆಂಟರ್​ ಹಾಫ್​ ಅಟ್ರ್ಯಾಕ್ಷನ್. ದೆಹಲಿಯ ರಾಜಪಥ್​ನಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​ ಈ ಬಾರಿ ಕರ್ನಾಟಕಕ್ಕೆ ವಿಶೇಷವಾಗಿದೆ.

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅನುಭವ ಮಂಟಪ! ದೆಹಲಿಯ ರಾಜಪಥ್​ ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಜ್ಜಾಗಿದೆ. ಈ ಬಾರಿಯ ಪರೇಡ್​ನಲ್ಲಿ ಕರ್ನಾಟಕದ 12ನೇ ಶತಮಾನದ ಲಾರ್ಡ್​ ಬಸವೇಶ್ವರ ಹಾಗೂ ಅನುಭವ ಮಂಟಪ ಸ್ತಬ್ಧ ಚಿತ್ರ ರಾರಾಜಿಸಲಿದೆ. ಜಾತಿ, ಮತ, ಲಿಂಗಭೇದ, ಧರ್ಮಭೇದದಿಂದ ನಲುಗಿದ್ದ ಸಮಾಜದಲ್ಲಿ ಪರಿವರ್ತನೆಗಾಗಿ ಬಸವೇಶ್ವರರು ನಡೆಸಿದ ಸಾಮಾಜಿಕ ಕ್ರಾಂತಿರೂಪವೇ ಅನುಭವ ಮಂಟಪ. ದೆಹಲಿಯ ಮಿಲಿಟರಿ ಕಂಟೋನ್‌ಮೆಂಟ್‌ನಲ್ಲಿ ಕಳೆದ 20 ದಿನಗಳಿಂದ ಈ ಸ್ತಬ್ಧಚಿತ್ರ ನಿರ್ಮಿಸಲಾಗಿದೆ. ಕಲಾವಿದ ಶಶಿಧರ್ ಅಡಪ ನೇತೃತ್ವದಲ್ಲಿ ಈ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ. ಸ್ತಬ್ಧಚಿತ್ರದ ಮುಂಭಾಗ ಕಾಯಕವೇ ಕೈಲಾಸ ಪರಿಕಲ್ಪನೆಗೆ ಒತ್ತುಕೊಟ್ಟ ಲಾರ್ಡ್ ಬಸವೇಶ್ವರರ ಮೂರ್ತಿ ನಿರ್ಮಿಸಲಾಗಿದೆ. ಸ್ತಬ್ಧ ಚಿತ್ರದೊಂದಿಗೆ ಸಾಣೆಹಳ್ಳಿಯ ಶಿವಸಂಚಾರ ನಾಟಕ ತಂಡದ 27 ಕಲಾವಿದರು ಭಾಗವಹಿಸುತ್ತಿದ್ದು, ಈ ಕಲಾವಿದರು ವಿವಿಧ ಶರಣರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೇ ನೃತ್ಯ ಪ್ರದರ್ಶನ ಮಾಡಲಿದ್ದಾರೆ.

ಅನುಭವ ಮಂಟಪದಲ್ಲಿ ಮಾದಾರ ಚೆನ್ನಯ್ಯ, ಮೊಳಿಗೆ ಮಾರಯ್ಯ, ಅಕ್ಕಮಹಾದೇವಿ, ಉಡುತಡಿಯ ಮಹಾದೇವಿ, ಮಡಿವಾಳ ಮಾಚಿದೇವ ಪಾತ್ರಧಾರಿ ಕಲಾವಿದರು ಸ್ತಬ್ಧಚಿತ್ರದಲ್ಲಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ಮೋದಿ ಹಾಗೂ ಈ ಬಾರಿ ವಿದೇಶಿ ಅತಿಥಿ ಬ್ರೆಜಿಲ್ ಅಧ್ಯಕ್ಷ ಜೈರ್‌ ಬಲಸನೋರ್‌ ಈ ದೃಶ್ಯಗಳನ್ನ ಕಣ್ತುಂಬಿಕೊಳ್ಳಲಿದ್ದಾರೆ.

ಸ್ತಬ್ಧಚಿತ್ರಕ್ಕೆ ಸಂಬಂಧಿಸಿದ ಹಾಡು, ವಚನಗಳು ಕೂಡ ಮಾರ್ದನಿಸಲಿವೆ. ಜನವರಿ 26ರಂದು ರಾಜಪಥ್​ನಲ್ಲಿ ಕನ್ನಡದ ಧ್ವನಿ ಮೊಳಗಲಿದೆ. ನಾಡಿದ್ದು ರಾಜಪಥ್ ನಲ್ಲಿ ಪರೇಡ್ ರಿಹರ್ಸಲ್‌ ನಡೆಯಲಿದೆ. ಕಳೆದ 20 ವರ್ಷಗಳಲ್ಲಿ 11ನೇ ಭಾರಿಗೆ ಕರ್ನಾಟಕದ ಸ್ತಬ್ದಚಿತ್ರವು ಪರೇಡ್‌ಗೆ ಆಯ್ಕೆಯಾಗಿದೆ.

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು