AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ಗುಜರಾತ್​ನಲ್ಲಿ ಎಬಿಪಿ ಸಭೆ ಪ್ರಾರಂಭ; ಆರ್​ಎಸ್​ಎಸ್​ ಶಾಖೆ ವಿಸ್ತರಣೆ, ಇನ್ನಿತರ ವಿಚಾರಗಳ ಸಮಗ್ರ ಚರ್ಚೆ

ದೇಶದಲ್ಲಿ ಸುಮಾರು 59 ಸಾವಿರ ಮಂಡಲಗಳಿವೆ. ಪ್ರತಿ ಮಂಡಲದಲ್ಲೂ 10-12 ಹಳ್ಳಿಗಳು ಇವೆ. ಎಲ್ಲ ಮಂಡಲಗಳಲ್ಲೂ ಶಾಖೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿ ಆರ್​ಎಸ್​ಎಸ್​ ತೊಡಗಿದೆ ಎಂದು ಮನಮೋಹನ್​ ವೈದ್ಯ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇಂದಿನಿಂದ ಗುಜರಾತ್​ನಲ್ಲಿ ಎಬಿಪಿ ಸಭೆ ಪ್ರಾರಂಭ; ಆರ್​ಎಸ್​ಎಸ್​ ಶಾಖೆ ವಿಸ್ತರಣೆ, ಇನ್ನಿತರ ವಿಚಾರಗಳ ಸಮಗ್ರ ಚರ್ಚೆ
ಆರ್​ಎಸ್​ಎಸ್​ ಮುಖಂಡರ ಸುದ್ದಿಗೋಷ್ಠಿ
TV9 Web
| Edited By: |

Updated on:Mar 11, 2022 | 1:53 PM

Share

ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ದ ಉನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸ್ಥೆ ಅಖಿಲ ಭಾರತೀಯ ಪ್ರತಿನಿಧಿ ಸಭಾ (ABP) ಇಂದಿನಿಂದ ಮೂರು ದಿನಗಳ ಸಭೆ ನಡೆಸಲಿದ್ದು, ಈ ಸಭೆ ಗುಜರಾತ್​​ನ ಅಹ್ಮದಾಬಾದ್​ನ ಪಿರಾನಾ ಗ್ರಾಮದಲ್ಲಿ ನಡೆಯಲಿದೆ. ಸಂಘಟನೆಯ ವಿಸ್ತರಣೆ ಸೇರಿ ಇನ್ನೂ ಅನೇಕ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿ ಸುಮಾರು 1200 ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ (ಇದು ಸಾರ್ವಜನಿಕ ಸಭೆಯಲ್ಲ, ಕೇವಲ ಆರ್​ಎಸ್​ಎಸ್​ ಪದಾಧಿಕಾರಿಗಳು, ಮುಖಂಡರಿಗಷ್ಟೇ ಅವಕಾಶ ಇರಲಿದೆ.)

ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಆರ್​ಎಸ್​ಎಸ್​ನ ಸಹ ಸರಕಾರ್ಯವಾಹ (ಜಂಟಿ ಪ್ರಧಾನ ಕಾರ್ಯದರ್ಶಿ) ಮನಮೋಹನ್​ ವೈದ್ಯ, ಆರ್​ಎಸ್​ಎಸ್​ ಸದ್ಯ ದೇಶಾದ್ಯಂತ ದಿನವೂ 60 ಸಾವಿರ ಶಾಖೆಗಳನ್ನು ನಡೆಸುತ್ತಿದೆ. ಕೊವಿಡ್​ ಕಾರಣದಿಂದ ಕೆಲ ಕಾಲ ಶಾಖೆಗಳು ಸ್ಥಗಿತಗೊಂಡಿದ್ದರೂ, ಇದೀಗ ಶೇ.97.5ರಷ್ಟು ಶಾಖೆಗಳು ಮತ್ತೆ ಪ್ರಾರಂಭಗೊಂಡಿವೆ.  ಈ ಶಾಖೆಗಲ್ಲಿ ಶೇ.61ರಷ್ಟು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೇ ಇದ್ದಾರೆ. ಆರ್​ಎಸ್​ಎಸ್​ ಬಗ್ಗೆ ಯುವಕರು ತೋರಿಸುತ್ತಿರುವ ಆಸಕ್ತಿಯನ್ನು ಇದು ತೋರಿಸುತ್ತದೆ. ದೇಶದ ಒಟ್ಟಾರೆ ನಗರಗಳ ಸಂಖ್ಯೆಯಲ್ಲಿ ಶೇ.94ರಷ್ಟು ನಗರಗಳಲ್ಲಿ ಆರ್​ಎಸ್​ಎಸ್​ ಶಾಖೆ ಇದೆ.  ಇದು ನಮ್ಮ ಸಂಘದ ವಿಸ್ತರಣಾ ಬಲವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಸುಮಾರು 59 ಸಾವಿರ ಮಂಡಲಗಳಿವೆ. ಪ್ರತಿ ಮಂಡಲದಲ್ಲೂ 10-12 ಹಳ್ಳಿಗಳು ಇವೆ. ಎಲ್ಲ ಮಂಡಲಗಳಲ್ಲೂ ಶಾಖೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿ ಆರ್​ಎಸ್​ಎಸ್​ ತೊಡಗಿದೆ. ಕೊರೊನಾ ವೈರಸ್ ಕಾರಣದಿಂದ ನಮ್ಮ ಸಂಘಟನೆ ವಿಸ್ತರಣೆಗೆ ತಡೆಯಾಗಿತ್ತು. ಆದರೆ ಈಗ ಮತ್ತೆ ಕಾರ್ಯಗತಗೊಳಿಸುತ್ತಿದ್ದು, ಇನ್ನೆರಡು ವರ್ಷಗಳಲ್ಲಿ ಬಹುತೇಕ ಮಂಡಲಗಳಲ್ಲಿ ಆರ್​ಎಸ್​ಎಸ್ ಶಾಖೆ ವಿಸ್ತರಣೆ ಮಾಡುವುದು ನಮ್ಮ ಮಹದುದ್ದೇಶ ಎಂದೂ ಮನಮೋಹನ್​ ವೈದ್ಯ ಮಾಹಿತಿ ನೀಡಿದ್ದಾರೆ.

ಈ ಶಾಖೆಗಳ ಮೂಲಕವಷ್ಟೇ ಅಲ್ಲ, ಅನೇಕ ಜನರು ನಮ್ಮ ಆರ್​ಎಸ್​ಎಸ್ ಸೇರಿ (Join RSS) ಎಂಬ ಅಭಿಯಾನದ ಮೂಲಕವೇ ಸಂಘಕ್ಕೆ ಸೇರ್ಪಡೆಗೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಈ ಅಭಿಯಾನವನ್ನು ನಮ್ಮ ಸಂಘದ ವೆಬ್​ಸೈಟ್​​ನಲ್ಲಿ ನಡೆಸಲಾಗುತ್ತಿದೆ. ಆರ್​ಎಸ್​ಎಸ್​ನ್ನು ತಳದಿಂದಲೇ ವಿಸ್ತರಿಸುವ ಬಗ್ಗೆ, ಶಾಖೆ ವಿಸ್ತರಣೆ ಕುರಿತಾಗಿ ಈ ಮೂರು ದಿನಗಳ ಸಮಾವೇಶದಲ್ಲಿ ಸಮಗ್ರವಾಗಿ ಚರ್ಚಿಸಲಾಗುತ್ತದೆ. ಈ ಮೂಲಕ ಯೋಜನೆ ರೂಪಿಸಲಾಗುತ್ತದೆ. ಇದರೊಂದಿಗೆ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಮತ್ತು ನೈಸರ್ಗಿಕ ಕೃಷಿ ಉತ್ತೇಜನ ವಿಚಾರಗಳೂ ಚರ್ಚೆಯಾಗಲಿವೆ ಎಂದು ಹೇಳಿದ್ದಾರೆ.   2017ರಿಂದ 2021ರವರೆಗೆ ಸುಮಾರು 1ರಿಂದ 1.25 ಲಕ್ಷ ಜನರು ಆರ್​ಎಸ್​ಎಸ್ ಸೇರಲು ಆಸಕ್ತಿ ತೋರಿಸಿದ್ದಾರೆ.  ದೇಶದ ಕೇಂದ್ರ ಭಾಗದಿಂದ ಮತ್ತು ಪಶ್ಚಿಮ ಬಂಗಾಳದಿಂದ ಅನೇಕ ಮನವಿಗಳು ಬಂದಿದ್ದವೂ ಎಂದೂ ಮನಮೋಹನ್​ ವೈದ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ಇನ್ನಾದರೂ ಪುಸ್ತಕ ತೆರೆದು ಓದಲಿ; ಅನಗತ್ಯವಾಗಿ ಆರ್​ಎಸ್​ಎಸ್​ ಬಗ್ಗೆ ಮಾತಾಡುವುದು ಸರಿಯಲ್ಲ: ಡಿಕೆ ಸುರೇಶ್ ಟ್ವೀಟ್​ಗೆ ಬಿಸಿ ನಾಗೇಶ್ ಪ್ರತಿಕ್ರಿಯೆ

Published On - 1:52 pm, Fri, 11 March 22

ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ