ಕೂಡಲೇ ಖಾರ್ಕಿವ್​ನಿಂದ ಹೊರಟು ಈ ಜಾಗಗಳನ್ನು ಸೇರಿಕೊಳ್ಳಿ; ಉಕ್ರೇನ್​ನಲ್ಲಿರುವ ಭಾರತೀಯರಿಗೆ ಸರ್ಕಾರ ಸೂಚನೆ

ಭಾರತದ ಜನರು ತಮ್ಮ ಸುರಕ್ಷತೆ ಮತ್ತು ಭದ್ರತೆಗಾಗಿ ಕೂಡಲೇ ಖಾರ್ಕಿವ್ ಅನ್ನು ತೊರೆಯಬೇಕು ಎಂದು ಭಾರತೀಯ ರಾಯಭಾರ ಕಚೇರಿ ಸೂಚಿಸಿದೆ.

ಕೂಡಲೇ ಖಾರ್ಕಿವ್​ನಿಂದ ಹೊರಟು ಈ ಜಾಗಗಳನ್ನು ಸೇರಿಕೊಳ್ಳಿ; ಉಕ್ರೇನ್​ನಲ್ಲಿರುವ ಭಾರತೀಯರಿಗೆ ಸರ್ಕಾರ ಸೂಚನೆ
ಯುದ್ಧದ ಭೀಕರತೆ ಸಾರುವ ಚಿತ್ರ
Edited By:

Updated on: Mar 02, 2022 | 6:17 PM

ನವದೆಹಲಿ: ಉಕ್ರೇನ್‌ನ (Ukraine) ಎರಡನೇ ಅತಿ ದೊಡ್ಡ ನಗರದಲ್ಲಿ ರಷ್ಯಾದ ದಾಳಿ ತೀವ್ರಗೊಂಡಿರುವುದರಿಂದ ಖಾರ್ಕಿವ್‌ನಲ್ಲಿರುವ ತನ್ನ ಎಲ್ಲಾ ಪ್ರಜೆಗಳು ತಮ್ಮ ಸುರಕ್ಷತೆಗಾಗಿ ತಕ್ಷಣವೇ ಖಾರ್ಕಿವ್​ನಿಂದ ತೆರಳುವಂತೆ ಭಾರತ ಇಂದು ತುರ್ತು ಮನವಿಯನ್ನು ಮಾಡಿದೆ. ಫೇಸ್​ಬುಕ್, ಟ್ವಿಟ್ಟರ್​ ಸೇರಿದಂತೆ ಎಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್​ ಮಾಡಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯರು ಉಕ್ರೇನಿಯನ್ ಸಮಯ ಸಂಜೆ 6 ಗಂಟೆಯೊಳಗೆ (ಭಾರತೀಯ ಕಾಲಮಾನ ರಾತ್ರಿ 9.30) ಪೆಸೊಚಿನ್, ಬಾಬಾಯೆ ಅಥವಾ ಬೆಜ್ಲ್ಯುಡೋವ್ಕಾವನ್ನು ತಲುಪಬೇಕು ಎಂದು ಭಾರತ ತಿಳಿಸಿದೆ.

ಭಾರತದ ಜನರು ತಮ್ಮ ಸುರಕ್ಷತೆ ಮತ್ತು ಭದ್ರತೆಗಾಗಿ ಕೂಡಲೇ ಖಾರ್ಕಿವ್ ಅನ್ನು ತೊರೆಯಬೇಕು, ಹದಗೆಡುತ್ತಿರುವ ಪರಿಸ್ಥಿತಿಯಲ್ಲಿ ಬೇಗ ಆ ಜಾಗವನ್ನು ಬಿಟ್ಟು ಹೊರಡಬೇಕು ಎಂದು ಭಾರತೀಯ ರಾಯಭಾರ ಕಚೇರಿ ಸೂಚಿಸಿದೆ. 1.4 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಯುದ್ಧ-ಹಾನಿಗೊಳಗಾದ ಖಾರ್ಕಿವ್ ನಗರದಲ್ಲಿ ಸಾರ್ವಜನಿಕ ಸಾರಿಗೆಯ ದೊಡ್ಡ ಕೊರತೆಯ ನಡುವೆ ಈ ಸಲಹೆ ನೀಡಲಾಗಿದೆ.

ರಷ್ಯಾದ ಗಡಿಗೆ ಸಮೀಪದಲ್ಲಿರುವ ಖಾರ್ಕಿವ್ ನಗರದ ಪೂರ್ವ ಭಾಗ ಉಕ್ರೇನ್​ನಲ್ಲಿ ಯುದ್ಧ ಆರಂಭವಾದ ದಿನದಿಂದ ತೀವ್ರತರವಾದ ದಾಳಿಯನ್ನು ಎದುರಿಸುತ್ತಿದೆ. ಇಂದು ಮುಂಜಾನೆ, ರಷ್ಯಾದ ಪ್ಯಾರಾಟ್ರೂಪರ್‌ಗಳು ಖಾರ್ಕಿವ್‌ಗೆ ಬಂದಿಳಿದಿದ್ದು, ಬೀದಿಗಳಲ್ಲಿ ಘರ್ಷಣೆಗಳು ನಡೆದಿವೆ ಎಂದು ಉಕ್ರೇನಿಯನ್ ಪಡೆಗಳು ತಿಳಿಸಿವೆ.

ಸುದ್ದಿ ಸಂಸ್ಥೆ AFP ಭದ್ರತಾ, ಪೊಲೀಸ್ ಮತ್ತು ವಿಶ್ವವಿದ್ಯಾಲಯಗಳ ಕಚೇರಿಗಳ ಕಟ್ಟಡಗಳ ಮೇಲೆ ರಾಕೆಟ್ ದಾಳಿಗಳನ್ನು ವರದಿ ಮಾಡಿದೆ. ನಿರಂತರ ಶೆಲ್ ದಾಳಿಯಿಂದಾಗಿ ರಸ್ತೆ ಸಾರಿಗೆ ಲಭ್ಯವಿಲ್ಲ. ರೈಲಿನಲ್ಲಿ ಹೋಗುವುದು ಕೂಡ ಸುಲಭವಲ್ಲ ಎಂದು ಖಾರ್ಕಿವ್ ನಿಲ್ದಾಣದಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ವೀಡಿಯೊಗಳಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Breaking: ಉಕ್ರೇನ್​​ನಲ್ಲಿ ಭಾರತದ ಇನ್ನೊಬ್ಬ ವಿದ್ಯಾರ್ಥಿ ಸಾವು; ಇಸ್ಕೆಮಿಕ್ ಸ್ಟ್ರೋಕ್​​​ನಿಂದ ಮೃತಪಟ್ಟ ಪಂಜಾಬ್​​ ಯುವಕ

Russia- Ukraine War: ಉಕ್ರೇನ್ ಜೊತೆ ಮತ್ತೆ ಮಾತುಕತೆಗೆ ಸಿದ್ಧ ಎಂದ ರಷ್ಯಾ; 6 ಹೊಸ ಬೆಳವಣಿಗೆಗಳು ಹೀಗಿವೆ