ಅಖಿಲೇಶ್ ಯಾದವ್ ಎದುರಲ್ಲೇ ಸಮಾಜವಾದಿ ಪಕ್ಷದ ನಾಯಕರ ಜಗಳ; ಆಮೇಲೇನಾಯ್ತು?

ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಪೂರ್ವಭಾವಿ ಸಿದ್ಧತೆಗಳಿಗಾಗಿ ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಲಕ್ನೋದಲ್ಲಿ ನಡೆದ ಸಭೆಯಲ್ಲಿ ಇಬ್ಬರು ಹಿರಿಯ ನಾಯಕರು ಪರಸ್ಪರ ನಿಂದಿಸಿಕೊಂಡು ಗಲಾಟೆ ನಡೆಸಿದ ಘಟನೆ ನಡೆದಿದೆ.  ಲಕ್ನೋದಲ್ಲಿ ನಡೆದ ಈ ಸಭೆಗೆ ಎಟಾ ಮತ್ತು ಕಾಸಗಂಜ್ ಜಿಲ್ಲೆಗಳ ಸುಮಾರು 250 ಹಿರಿಯ ನಾಯಕರು ಹಾಗೂ ಪದಾಧಿಕಾರಿಗಳು ಆಗಮಿಸಿದ್ದರು.   ಸಭೆಯಲ್ಲಿ ಎಟಾ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಜುಗೇಂದ್ರ ಸಿಂಗ್ ಯಾದವ್ ಮಾತನಾಡುತ್ತಿದ್ದಾಗ, ಮಾಜಿ ವಿಧಾನ ಪರಿಷತ್ ಅಧ್ಯಕ್ಷ ರಮೇಶ್ ಯಾದವ್ ಅವರ ಸೋದರಳಿಯ ಹಾಗೂ ಎಸ್‌ಪಿ ನಾಯಕ ಮಂಜೀತ್ ಯಾದವ್ ಅವರು ಕೆಲವು ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಮಾತುಕತೆ ತೀವ್ರ ವಾಗ್ವಾದಕ್ಕೆ ತಿರುಗಿ, ಅಖಿಲೇಶ್ ಯಾದವ್ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲೇ ಇಬ್ಬರೂ ನಾಯಕರು ಪರಸ್ಪರ ಬಹಿರಂಗವಾಗಿ ಕೆಟ್ಟ ಮಾತುಗಳಿಂದ ನಿಂದಿಸಿಕೊಳ್ಳಲು ಪ್ರಾರಂಭಿಸಿದರು.

ಅಖಿಲೇಶ್ ಯಾದವ್ ಎದುರಲ್ಲೇ ಸಮಾಜವಾದಿ ಪಕ್ಷದ ನಾಯಕರ ಜಗಳ; ಆಮೇಲೇನಾಯ್ತು?
ಅಖಿಲೇಶ್ ಯಾದವ್
Image Credit source: PTI

Updated on: Sep 20, 2026 | 9:54 PM

ಲಕ್ನೋ, ಸೆಪ್ಟೆಂಬರ್ 20: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಿದ್ಧತೆಗಳ ಕುರಿತು ಚರ್ಚಿಸಲು ಲಕ್ನೋದಲ್ಲಿ ಕರೆದಿದ್ದ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಎದುರಲ್ಲೇ ಎಸ್​ಪಿಯ ಇಬ್ಬರು ಹಿರಿಯ ನಾಯಕರು ಪರಸ್ಪರ ಕೆಟ್ಟ ಪದಗಳಿಂದ ನಿಂದಿಸಿಕೊಂಡು ಜಗಳವಾಡಿದ ಘಟನೆ ನಡೆದಿದೆ. ಈ ಘಟನೆಯ ಬೆನ್ನಲ್ಲೇ ಉತ್ತರ ಪ್ರದೇಶದ ಎಟಾ ಮತ್ತು ಕಾಸಗಂಜ್ ಜಿಲ್ಲೆಗಳ ಪಕ್ಷದ ಸಂಘಟನಾ ಘಟಕಗಳನ್ನು ಸಮಾಜವಾದಿ ಪಾರ್ಟಿಯಿಂದ ತಕ್ಷಣದಿಂದಲೇ ವಿಸರ್ಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಈ ಸಭೆಯಲ್ಲಿ ಎಟಾ ಮತ್ತು ಕಾಸಗಂಜ್ ಜಿಲ್ಲೆಗಳ ಸುಮಾರು 250 ಹಿರಿಯ ನಾಯಕರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಉತ್ತರ ಪ್ರದೇಶದ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ರಮೇಶ್ ಯಾದವ್ ಅವರ ಸೋದರಳಿಯ, ಎಸ್‌ಪಿ ನಾಯಕ ಮಂಜೀತ್ ಯಾದವ್ ಮತ್ತು ಎಟಾ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಯೋಗೇಂದ್ರ ಸಿಂಗ್ ಯಾದವ್ ನಡುವೆ ತೀವ್ರ ವಾಗ್ವಾದ ನಡೆಯಿತು.

ಈ ಸಭೆಯಲ್ಲಿ ಎಟಾ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಜುಗೇಂದ್ರ ಸಿಂಗ್ ಯಾದವ್ ನೀಡಿದ ಕೆಲವು ಹೇಳಿಕೆಗಳಿಗೆ ಮಂಜೀತ್ ಯಾದವ್ ಆಕ್ಷೇಪ ವ್ಯಕ್ತಪಡಿಸಿದ ನಂತರ ಈ ಗಲಾಟೆ ಪ್ರಾರಂಭವಾಯಿತು. ಈ ಭಿನ್ನಾಭಿಪ್ರಾಯವು ತಾರಕಕ್ಕೇರಿ, ಅಖಿಲೇಶ್ ಯಾದವ್ ಹಾಗೂ ಇತರ ಹಿರಿಯ ನಾಯಕರ ಸಮ್ಮುಖದಲ್ಲೇ ಇಬ್ಬರೂ ಪರಸ್ಪರ ಬಹಿರಂಗವಾಗಿ ಕೆಟ್ಟ ಮಾತುಗಳಿಂದ ನಿಂದಿಸಿಕೊಳ್ಳಲು ಶುರು ಮಾಡಿದರು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಮಮತಾ,ಉದ್ಧವ್ ಬಳಿಕ ಈಗ ಅಖಿಲೇಶ್ ಯಾದವ್ ಸರದಿ: ಸಮಾಜವಾದಿ ಪಕ್ಷದಲ್ಲೂ ಒಡಕು?

ಈ ಘಟನೆಯ ನಂತರ, ಸಮಾಜವಾದಿ ಪಾರ್ಟಿಯು ಎಟಾ ಮತ್ತು ಕಾಸಗಂಜ್ ಎರಡೂ ಜಿಲ್ಲೆಗಳ ಜಿಲ್ಲಾ ಕಾರ್ಯಕಾರಿ ಸಮಿತಿಗಳನ್ನು ಹಾಗೂ ಅವುಗಳ ಎಲ್ಲಾ ಪೋಷಕ ಸಂಘಟನೆಗಳನ್ನು ವಿಸರ್ಜಿಸಿದೆ. 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಎಸ್‌ಪಿ ತನ್ನ ಸಿದ್ಧತೆಗಳನ್ನು ಚುರುಕುಗೊಳಿಸುತ್ತಿರುವ ಬೆನ್ನಲ್ಲೇ ಈ ಸಭೆಯನ್ನು ಆಯೋಜಿಸಲಾಗಿತ್ತು. ರಾಜಕೀಯವಾಗಿ ಪ್ರಮುಖವಾಗಿರುವ ಈ ಎರಡೂ ಜಿಲ್ಲೆಗಳಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸಲು ಎಸ್‌ಪಿ ಯತ್ನಿಸುತ್ತಿದೆ. ಪ್ರಸ್ತುತ ಎಟಾ ಜಿಲ್ಲೆಯ ಎಲ್ಲಾ 4 ವಿಧಾನಸಭಾ ಕ್ಷೇತ್ರಗಳನ್ನು ಬಿಜೆಪಿ ಹೊಂದಿದ್ದರೆ, ಕಾಸಗಂಜ್ ಜಿಲ್ಲೆಯ 4 ಕ್ಷೇತ್ರಗಳ ಪೈಕಿ ಮೂರರಲ್ಲಿ ಬಿಜೆಪಿ ಮತ್ತು ಒಂದರಲ್ಲಿ ಎಸ್‌ಪಿ ಶಾಸಕರಿದ್ದಾರೆ.


ಮುಂಬರುವ ಚುನಾವಣೆಗೆ ಪಕ್ಷದ ಕೆಳಹಂತದ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸುವ ಎಸ್‌ಪಿ ಪ್ರಯತ್ನಗಳ ನಡುವೆಯೇ ಈ ವಿಸರ್ಜನೆಯ ನಿರ್ಧಾರ ಹೊರಬಿದ್ದಿದೆ. 2027ರ ಚುನಾವಣೆಯ ಸಿದ್ಧತೆಯ ಭಾಗವಾಗಿ ಪಕ್ಷದ ನಾಯಕತ್ವವು ಶೀಘ್ರದಲ್ಲೇ ಈ ಜಿಲ್ಲಾ ಘಟಕಗಳನ್ನು ಪುನಾರೂಪಿಸಿ ಹೊಸ ಪದಾಧಿಕಾರಿಗಳನ್ನು ನೇಮಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: ಉತ್ತರ ಪ್ರದೇಶ: ರಾಹುಲ್, ಪ್ರಿಯಾಂಕಾ, ಅಖಿಲೇಶ್ ಸಭೆ, ಮುಂಬರುವ ಅಸೆಂಬ್ಲಿ ಚುನಾವಣೆಯ ಸೀಟು ಹಂಚಿಕೆ ಲೆಕ್ಕಾಚಾರ ಶುರು

ನಾಯಕರ ಜಗಳಕ್ಕೆ ಅಖಿಲೇಶ್ ಯಾದವ್ ಹೇಳಿದ್ದೇನು?:

ಸಭೆಯಲ್ಲಿ ನಡೆದ ಈ ರಂಪಾಟದಿಂದ ತೀವ್ರ ಅಸಮಾಧಾನಗೊಂಡ ಅಖಿಲೇಶ್ ಯಾದವ್, ಇಬ್ಬರೂ ನಾಯಕರನ್ನು ತಕ್ಷಣವೇ ಸಭೆಯಿಂದ ಹೊರಹೋಗುವಂತೆ ಸೂಚಿಸಿದರು ಹಾಗೂ ಭದ್ರತಾ ಸಿಬ್ಬಂದಿ ಅವರನ್ನು ಆಫೀಸ್‌ನಿಂದ ಹೊರಗೆ ಕಳುಹಿಸಿದರು.   “ಇಂತಹ ಘಟನೆಗಳು ನಡೆಯುತ್ತಿರುತ್ತವೆ, ಪರವಾಗಿಲ್ಲ. ಇದೆಲ್ಲವೂ ದುಡ್ಡಿನಿಂದ ಬರುವ ಅಹಂಕಾರ ಮತ್ತು ಗರ್ವ. ನೆನಪಿಟ್ಟುಕೊಳ್ಳಿ, ಯಾರ ಬಳಿ ಅತಿಯಾದ ಹಣ ಹಾಗೂ ಶ್ರೀಮಂತಿಕೆ ಬರುತ್ತದೋ ಅವರು ನಿಮ್ಮನ್ನು ಬಿಟ್ಟು ಹೋಗುತ್ತಾರೆ. ಈಗ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us