AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪ್ರೀಮ್ ಕೋರ್ಟ್ ವಕೀಲರನ್ನು ಹೈಕೋರ್ಟ್​ ನ್ಯಾಯಾಧೀಶರ ಹುದ್ದೆಗೆ ಬಡ್ತಿ ನೀಡಲು ಮಾಡಿರುವ ಮನವಿಗೆ ಸಿಜೆಐ ಸಮ್ಮತಿ

ಎಸ್​ಸಿಬಿಎ ಕಾರ್ಯನಿರ್ವಾಹಕ ಸಮಿತಿಯು ಸಂಘದ ಅಧ್ಯಕ್ಷ ವಿಕಾಸ್ ಸಿಂಗ್, ಉಪಾಧ್ಯಕ್ಷ ಮತ್ತು ಹಿರಿಯ ಸದಸ್ಯರಾದ ಮಹಾಲಕ್ಷ್ಮಿ ಪಾವನಿ ಬಾರ್​ ಕೌನ್ಸಿಲ್​​ನ ನಾಲ್ವರು ಪ್ರತಿಷ್ಠಿತ ಸದಸ್ಯರಾದ ರಾಕೇಶ್​ ದ್ವೀವೇದಿ, ಶೇಖರ್ ನಫಾಡೆ, ವಿಜಯ್ ಹನ್ಸಾರಿಯಾ ಮತ್ತು ವಿ ಗಿರಿ ಅವರನ್ನೊಳಗೊಂಡಿದೆ.

ಸುಪ್ರೀಮ್ ಕೋರ್ಟ್ ವಕೀಲರನ್ನು ಹೈಕೋರ್ಟ್​ ನ್ಯಾಯಾಧೀಶರ ಹುದ್ದೆಗೆ ಬಡ್ತಿ ನೀಡಲು ಮಾಡಿರುವ ಮನವಿಗೆ ಸಿಜೆಐ ಸಮ್ಮತಿ
ಭಾರತದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎಮ್​ ವಿ ರಮಣ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jun 08, 2021 | 10:10 PM

Share

ನವದೆಹಲಿ: ಸುಪ್ರೀಮ್ ಕೋರ್ಟಿನ ವಕೀಲರನ್ನು ಹೈಕೋರ್ಟ್​ಗಳ ನ್ಯಾಯಾಧೀಶರಾಗಿ ಬಡ್ತಿ ನೀಡುವಂತೆ ಸುಪ್ರೀಮ್ ಕೋರ್ಟ್​ ವಕೀಲರ ಸಂಘ ಮಾಡಿರುವ ಮನವಿಯನ್ನು ಪರಿಗಣಿಸಲು ಭಾರತದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎಮ್​ ವಿ ರಮಣ ಅವರು ಸಮ್ಮತಿಸಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಮ್ ಕೋರ್ಟ್​ ವಕೀಲರ ಸಂಘ (ಎಸ್​ಸಿಬಿಎ) ಮಾಡಿರುವ ಪ್ರಸ್ತಾಪದ ನಂತರ ಈ ಬೆಳವಣಿಗೆ ಬೆಳಕಿಗೆ ಬಂದಿದೆ.

ಸುಪ್ರೀಮ್ ಕೋರ್ಟಿನ ವಕೀಲರು, ಸಿವಿಲ್, ಕ್ರಿಮಿನಲ್, ಸಂವೈಧಾನಿಕ, ವಾಣಿಜ್ಯ ಕಾನೂನು ಮೊದಲಾದ ಎಲ್ಲ ಬಗೆಯ ಪ್ರಕರಣಗಳೊಂದಿಗೆ ಸತತವಾಗಿ ವ್ಯವಹರಿಸುತ್ತಾ ಅಪಾರ ಅನುಭವ ಹೊಂದಿದಾಗ್ಯೂ ಅವರು ಹೈಕೋರ್ಟ್​ಗಳಲ್ಲಿ ಜಾಸ್ತಿ ವಾದಿಸುವುದಿಲ್ಲವಾದ್ದರಿಂದ ಹೈಕೋರ್ಟ್​ ಕೊಲೇಜಿಯಮ್ ಅಪರೂಕ್ಕೊಮ್ಮೆ ಅವರನ್ನು ಬಡ್ತಿಗೆ ಪರಿಗಣಿಸುತ್ತದೆ ಎಂದು ಎಸ್​ಸಿಬಿಎ ಮುಖ್ಯ ನ್ಯಾಯಾಧೀಶನ್ನು ಆಗ್ರಹಿಸಿತ್ತು. ಹೈಕೋರ್ಟ್​ಗಳಲ್ಲಿ ವಾದಿಸುವ ತಮ್ಮ ಸಹೋದ್ಯೋಗಿಗಳಿಗಿಂತ ವೃತ್ತಿಪರವಾಗಿ ತಾವು ಹೆಚ್ಚು ಯೋಗ್ಯ ಮತ್ತು ಅರ್ಹರಾಗಿರುವುದರಿಂದ ಅವಕಾಶ ವಂಚಿತರಾಗುತ್ತಿದ್ದೇವೆ ಎಂದು ವಕೀಲರ ಸಂಘ ಹೇಳಿತ್ತು.

‘ಗೌರವಾನ್ವಿತ ಮುಖ್ಯ ನ್ಯಾಯಾಧೀಶರು ಎಸ್​ಸಿಬಿಎ ಮಾಡಿರುವ ಮನವಿಯನ್ನು ಪರಿಗಣಿಸಲು ಸಮ್ಮತಿಸಿದ್ದಾರೆ ಮತ್ತು ಹೈಕೋರ್ಟ್​ಗಳ ಮುಖ್ಯ ನ್ಯಾಯಾಧೀಶರಿಗೆ ಸುಪ್ರೀಮ್​ ಕೋರ್ಟ್​ಗಳಲ್ಲಿ ವಾದಿಸುವ ವಕೀಲರಿಗೆ ಹೈಕೋರ್ಟ್​ಗಳಲ್ಲಿ ನ್ಯಾಯಾಧೀಶರ ಹುದ್ದೆಗೆ ಬಡ್ತಿ ನೀಡಲು ಹೇಳಿದ್ದಾರೆ ಅಂತ ಸದಸ್ಯರಿಗೆ ತಿಳಿಸಲು ಸಂತೋಷವಾಗುತ್ತದೆ,’ ಎಂದು ಎಸ್​ಸಿಬಿಎ ಕಾರ್ಯನಿರ್ವಾಹಕ ಸಮಿತಿಯು ತನ್ನ ಸದಸ್ಯರಿಗೆ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಎಸ್​ಸಿಬಿಎ ಕಾರ್ಯನಿರ್ವಾಹಕ ಸಮಿತಿಯು ಸಂಘದ ಅಧ್ಯಕ್ಷ ವಿಕಾಸ್ ಸಿಂಗ್, ಉಪಾಧ್ಯಕ್ಷ ಮತ್ತು ಹಿರಿಯ ಸದಸ್ಯರಾದ ಮಹಾಲಕ್ಷ್ಮಿ ಪಾವನಿ ಬಾರ್​ ಕೌನ್ಸಿಲ್​​ನ ನಾಲ್ವರು ಪ್ರತಿಷ್ಠಿತ ಸದಸ್ಯರಾದ ರಾಕೇಶ್​ ದ್ವೀವೇದಿ, ಶೇಖರ್ ನಫಾಡೆ, ವಿಜಯ್ ಹನ್ಸಾರಿಯಾ ಮತ್ತು ವಿ ಗಿರಿ ಅವರನ್ನೊಳಗೊಂಡಿದೆ.

‘ಸ್ನೇಹಿತರೇ, ಭಾರತದಲ್ಲಿ ವಕೀಲ ವೃತ್ತಿಯನ್ನು ನಡೆಸುವ ಪ್ರತಿಯೊಬ್ಬ ಲಾಯರ್ ಭಾರತೀಯನಾಗಿದ್ದಾನೆ ಮತ್ತು ಅವನು ಅಥವಾ ಅವಳು ದೇಶದ ಯಾವುದೇ ಮೂಲೆಯಲ್ಲಿ ಪ್ರ್ಯಾಕ್ಟೀಸ್​ ಮಾಡುತ್ತಿದ್ದರೂ ಕೇವಲ ಅರ್ಹತೆಯ ಮೇಲೆ ಅವನು/ಅವಳನ್ನು ಬಡ್ತಿಗೆ ಪರಿಗಣಿಸಬೇಕು. ಹೈಕೋರ್ಟ್​ಗಳಲ್ಲಿ ಭಾರೀ ಪ್ರಮಾಣದಲ್ಲಿ ಹುದ್ದೆಗಳು ಖಾಲಿಯರುವ ಹಿನ್ನೆಲೆಯಲ್ಲಿ ನಮ್ಮ ಮನವಿಯನ್ನು ಕೂಡಲೇ ಪರಿಗಣಿಸಲಾಗುತ್ತದೆ ಎಂಬ ನಿರೀಕ್ಷೆಯನ್ನು ನಾವಿಟ್ಟುಕೊಂಡಿದ್ದೇವೆ,’ ಎಂದು ಈ ಸಂದರ್ಭದಲ್ಲಿ ಎಸ್​ಸಿಬಿಎ ಅಧ್ಯಕ್ಷ ವಿಕಾಸ ಸಿಂಗ್ ಹೇಳಿದರು.

ಇದನ್ನೂ ಓದಿ: ಕೊವಿಡ್ ನಿರ್ವಹಣೆಯಲ್ಲಿ ನ್ಯಾಯಾಲಯದ ಪಾತ್ರಕ್ಕೆ ಶಾಲಾ ಬಾಲಕಿಯ ಮೆಚ್ಚುಗೆ ಪತ್ರ; ಮುಖ್ಯ ನ್ಯಾಯಮೂರ್ತಿಯ ಮನಮುಟ್ಟುವ ಉತ್ತರ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?