AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಪ್ರೀಮ್ ಕೋರ್ಟ್ ವಕೀಲರನ್ನು ಹೈಕೋರ್ಟ್​ ನ್ಯಾಯಾಧೀಶರ ಹುದ್ದೆಗೆ ಬಡ್ತಿ ನೀಡಲು ಮಾಡಿರುವ ಮನವಿಗೆ ಸಿಜೆಐ ಸಮ್ಮತಿ

ಎಸ್​ಸಿಬಿಎ ಕಾರ್ಯನಿರ್ವಾಹಕ ಸಮಿತಿಯು ಸಂಘದ ಅಧ್ಯಕ್ಷ ವಿಕಾಸ್ ಸಿಂಗ್, ಉಪಾಧ್ಯಕ್ಷ ಮತ್ತು ಹಿರಿಯ ಸದಸ್ಯರಾದ ಮಹಾಲಕ್ಷ್ಮಿ ಪಾವನಿ ಬಾರ್​ ಕೌನ್ಸಿಲ್​​ನ ನಾಲ್ವರು ಪ್ರತಿಷ್ಠಿತ ಸದಸ್ಯರಾದ ರಾಕೇಶ್​ ದ್ವೀವೇದಿ, ಶೇಖರ್ ನಫಾಡೆ, ವಿಜಯ್ ಹನ್ಸಾರಿಯಾ ಮತ್ತು ವಿ ಗಿರಿ ಅವರನ್ನೊಳಗೊಂಡಿದೆ.

ಸುಪ್ರೀಮ್ ಕೋರ್ಟ್ ವಕೀಲರನ್ನು ಹೈಕೋರ್ಟ್​ ನ್ಯಾಯಾಧೀಶರ ಹುದ್ದೆಗೆ ಬಡ್ತಿ ನೀಡಲು ಮಾಡಿರುವ ಮನವಿಗೆ ಸಿಜೆಐ ಸಮ್ಮತಿ
ಭಾರತದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎಮ್​ ವಿ ರಮಣ
TV9 Web
| Edited By: |

Updated on: Jun 08, 2021 | 10:10 PM

Share

ನವದೆಹಲಿ: ಸುಪ್ರೀಮ್ ಕೋರ್ಟಿನ ವಕೀಲರನ್ನು ಹೈಕೋರ್ಟ್​ಗಳ ನ್ಯಾಯಾಧೀಶರಾಗಿ ಬಡ್ತಿ ನೀಡುವಂತೆ ಸುಪ್ರೀಮ್ ಕೋರ್ಟ್​ ವಕೀಲರ ಸಂಘ ಮಾಡಿರುವ ಮನವಿಯನ್ನು ಪರಿಗಣಿಸಲು ಭಾರತದ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎಮ್​ ವಿ ರಮಣ ಅವರು ಸಮ್ಮತಿಸಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಮ್ ಕೋರ್ಟ್​ ವಕೀಲರ ಸಂಘ (ಎಸ್​ಸಿಬಿಎ) ಮಾಡಿರುವ ಪ್ರಸ್ತಾಪದ ನಂತರ ಈ ಬೆಳವಣಿಗೆ ಬೆಳಕಿಗೆ ಬಂದಿದೆ.

ಸುಪ್ರೀಮ್ ಕೋರ್ಟಿನ ವಕೀಲರು, ಸಿವಿಲ್, ಕ್ರಿಮಿನಲ್, ಸಂವೈಧಾನಿಕ, ವಾಣಿಜ್ಯ ಕಾನೂನು ಮೊದಲಾದ ಎಲ್ಲ ಬಗೆಯ ಪ್ರಕರಣಗಳೊಂದಿಗೆ ಸತತವಾಗಿ ವ್ಯವಹರಿಸುತ್ತಾ ಅಪಾರ ಅನುಭವ ಹೊಂದಿದಾಗ್ಯೂ ಅವರು ಹೈಕೋರ್ಟ್​ಗಳಲ್ಲಿ ಜಾಸ್ತಿ ವಾದಿಸುವುದಿಲ್ಲವಾದ್ದರಿಂದ ಹೈಕೋರ್ಟ್​ ಕೊಲೇಜಿಯಮ್ ಅಪರೂಕ್ಕೊಮ್ಮೆ ಅವರನ್ನು ಬಡ್ತಿಗೆ ಪರಿಗಣಿಸುತ್ತದೆ ಎಂದು ಎಸ್​ಸಿಬಿಎ ಮುಖ್ಯ ನ್ಯಾಯಾಧೀಶನ್ನು ಆಗ್ರಹಿಸಿತ್ತು. ಹೈಕೋರ್ಟ್​ಗಳಲ್ಲಿ ವಾದಿಸುವ ತಮ್ಮ ಸಹೋದ್ಯೋಗಿಗಳಿಗಿಂತ ವೃತ್ತಿಪರವಾಗಿ ತಾವು ಹೆಚ್ಚು ಯೋಗ್ಯ ಮತ್ತು ಅರ್ಹರಾಗಿರುವುದರಿಂದ ಅವಕಾಶ ವಂಚಿತರಾಗುತ್ತಿದ್ದೇವೆ ಎಂದು ವಕೀಲರ ಸಂಘ ಹೇಳಿತ್ತು.

‘ಗೌರವಾನ್ವಿತ ಮುಖ್ಯ ನ್ಯಾಯಾಧೀಶರು ಎಸ್​ಸಿಬಿಎ ಮಾಡಿರುವ ಮನವಿಯನ್ನು ಪರಿಗಣಿಸಲು ಸಮ್ಮತಿಸಿದ್ದಾರೆ ಮತ್ತು ಹೈಕೋರ್ಟ್​ಗಳ ಮುಖ್ಯ ನ್ಯಾಯಾಧೀಶರಿಗೆ ಸುಪ್ರೀಮ್​ ಕೋರ್ಟ್​ಗಳಲ್ಲಿ ವಾದಿಸುವ ವಕೀಲರಿಗೆ ಹೈಕೋರ್ಟ್​ಗಳಲ್ಲಿ ನ್ಯಾಯಾಧೀಶರ ಹುದ್ದೆಗೆ ಬಡ್ತಿ ನೀಡಲು ಹೇಳಿದ್ದಾರೆ ಅಂತ ಸದಸ್ಯರಿಗೆ ತಿಳಿಸಲು ಸಂತೋಷವಾಗುತ್ತದೆ,’ ಎಂದು ಎಸ್​ಸಿಬಿಎ ಕಾರ್ಯನಿರ್ವಾಹಕ ಸಮಿತಿಯು ತನ್ನ ಸದಸ್ಯರಿಗೆ ಪ್ರಕಟನೆಯೊಂದರಲ್ಲಿ ತಿಳಿಸಿದೆ.

ಎಸ್​ಸಿಬಿಎ ಕಾರ್ಯನಿರ್ವಾಹಕ ಸಮಿತಿಯು ಸಂಘದ ಅಧ್ಯಕ್ಷ ವಿಕಾಸ್ ಸಿಂಗ್, ಉಪಾಧ್ಯಕ್ಷ ಮತ್ತು ಹಿರಿಯ ಸದಸ್ಯರಾದ ಮಹಾಲಕ್ಷ್ಮಿ ಪಾವನಿ ಬಾರ್​ ಕೌನ್ಸಿಲ್​​ನ ನಾಲ್ವರು ಪ್ರತಿಷ್ಠಿತ ಸದಸ್ಯರಾದ ರಾಕೇಶ್​ ದ್ವೀವೇದಿ, ಶೇಖರ್ ನಫಾಡೆ, ವಿಜಯ್ ಹನ್ಸಾರಿಯಾ ಮತ್ತು ವಿ ಗಿರಿ ಅವರನ್ನೊಳಗೊಂಡಿದೆ.

‘ಸ್ನೇಹಿತರೇ, ಭಾರತದಲ್ಲಿ ವಕೀಲ ವೃತ್ತಿಯನ್ನು ನಡೆಸುವ ಪ್ರತಿಯೊಬ್ಬ ಲಾಯರ್ ಭಾರತೀಯನಾಗಿದ್ದಾನೆ ಮತ್ತು ಅವನು ಅಥವಾ ಅವಳು ದೇಶದ ಯಾವುದೇ ಮೂಲೆಯಲ್ಲಿ ಪ್ರ್ಯಾಕ್ಟೀಸ್​ ಮಾಡುತ್ತಿದ್ದರೂ ಕೇವಲ ಅರ್ಹತೆಯ ಮೇಲೆ ಅವನು/ಅವಳನ್ನು ಬಡ್ತಿಗೆ ಪರಿಗಣಿಸಬೇಕು. ಹೈಕೋರ್ಟ್​ಗಳಲ್ಲಿ ಭಾರೀ ಪ್ರಮಾಣದಲ್ಲಿ ಹುದ್ದೆಗಳು ಖಾಲಿಯರುವ ಹಿನ್ನೆಲೆಯಲ್ಲಿ ನಮ್ಮ ಮನವಿಯನ್ನು ಕೂಡಲೇ ಪರಿಗಣಿಸಲಾಗುತ್ತದೆ ಎಂಬ ನಿರೀಕ್ಷೆಯನ್ನು ನಾವಿಟ್ಟುಕೊಂಡಿದ್ದೇವೆ,’ ಎಂದು ಈ ಸಂದರ್ಭದಲ್ಲಿ ಎಸ್​ಸಿಬಿಎ ಅಧ್ಯಕ್ಷ ವಿಕಾಸ ಸಿಂಗ್ ಹೇಳಿದರು.

ಇದನ್ನೂ ಓದಿ: ಕೊವಿಡ್ ನಿರ್ವಹಣೆಯಲ್ಲಿ ನ್ಯಾಯಾಲಯದ ಪಾತ್ರಕ್ಕೆ ಶಾಲಾ ಬಾಲಕಿಯ ಮೆಚ್ಚುಗೆ ಪತ್ರ; ಮುಖ್ಯ ನ್ಯಾಯಮೂರ್ತಿಯ ಮನಮುಟ್ಟುವ ಉತ್ತರ

ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ನಗಾರಿ ಬಾರಿಸಿ ಐತಿಹಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ
ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!
ಬಾಯ್​ಫ್ರೆಂಡ್ ಜೊತೆ ಜಗಳವಾಡಿ 4ನೇ ಮಹಡಿಯಿಂದ ಹಾರಿದ ಯುವತಿ!
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಜೋಸೈಮನ್ ನಿಧನ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಹೇಳಿದ್ದೇನು?
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಸಿಎಂ ಪೂಜೆ ಸಲ್ಲಿಸುವ ವೇಳೆ ಬಿತ್ತು ಬೆಂಕಿ, ತಪ್ಪಿದ ದೊಡ್ಡ ಅನಾಹುತ
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ಜೋ ಸೈಮನ್ ನಿಧನ ಹೇಗಾಯ್ತು: ಫಿಲಂ ಚೇಂಬರ್​​ನಲ್ಲಿ ಆಗಿದ್ದೇನು?
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಆಫೀಸರ್ಸ್ ಮನೆಯಲ್ಲಿ ಕಂತೆ ಕಂತೆ ಹಣ ನೋಡಿ ಶಾಕ್
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ಬನ್ನೇರುಘಟ್ಟ ಉದ್ಯಾನವನದಲ್ಲಿ ಸಿಬ್ಬಂದಿ ಮೇಲೆ ಚಿರತೆ ದಾಳಿ; ಗಂಭೀರ ಗಾಯ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು