AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಹಠಾತ್ತನೆ ಬ್ರೇಕ್ ಹಾಕಿದ ಚಾಲಕ, ತಾಯಿಯ ಕೈಯಿಂದ ಜಾರಿ ಬಸ್ಸಿಂದ ಹೊರಗೆ ಬಿದ್ದ ಮಗು

ಬಸ್ಸಿನಲ್ಲಿ ಅದರಲ್ಲೂ ಬಾಗಿಲ ಸಮೀಪ ಕುಳಿತಾಗ ತುಂಬಾ ಎಚ್ಚರಿಕೆಯಿಂದಿರಬೇಕು. ಹಠಾತ್ತನೆ ಬ್ರೇಕ್ ಹಾಕಿದಾಗ ತಾಯಿಯ ಕೈಯಿಂದ ಮಗು(Baby) ಜಾರಿ ಕೆಳಗೆ ಬಿದ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಬಸ್ಸಿನ ಮುಂಭಾಗ ಮೊದಲ ಸೀಟಿನಲ್ಲಿ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಕುಳಿತಿದ್ದ ವ್ಯಕ್ತಿ ಮಗುವಿನ ಸಮೇತ ಕೆಳಗೆ ಬಿದ್ದಿದ್ದಾರೆ. ಬಸ್​ ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮ ಹಿಡಿದುಕೊಳ್ಳಲು ಬೆಂಬಲಕ್ಕೇನು ಸಿಗದೆ ಎರಡು ವರ್ಷದ ಮಗುವಿನ ಸಮೇತ ಕೆಳಗೆ ಬಿದ್ದಿದ್ದಾರೆ.

Video: ಹಠಾತ್ತನೆ ಬ್ರೇಕ್ ಹಾಕಿದ ಚಾಲಕ, ತಾಯಿಯ ಕೈಯಿಂದ ಜಾರಿ ಬಸ್ಸಿಂದ ಹೊರಗೆ ಬಿದ್ದ ಮಗು
ಬಸ್
ನಯನಾ ರಾಜೀವ್
|

Updated on: Aug 03, 2025 | 9:58 AM

Share

ಚೆನ್ನೈ, ಆಗಸ್ಟ್​ 03: ಬಸ್ಸಿನಲ್ಲಿ ಅದರಲ್ಲೂ ಬಾಗಿಲ ಸಮೀಪ ಕುಳಿತಾಗ ತುಂಬಾ ಎಚ್ಚರಿಕೆಯಿಂದಿರಬೇಕು. ಹಠಾತ್ತನೆ ಬ್ರೇಕ್ ಹಾಕಿದ್ದಕ್ಕೆ ತಾಯಿಯ ಕೈಯಿಂದ ಮಗು(Baby) ಜಾರಿ ಕೆಳಗೆ ಬಿದ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಬಸ್ಸಿನ ಮುಂಭಾಗ ಮೊದಲ ಸೀಟಿನಲ್ಲಿ ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಕುಳಿತಿದ್ದ ವ್ಯಕ್ತಿ ಕೂಡ ಮಗುವಿನ ಸಮೇತ ಕೆಳಗೆ ಬಿದ್ದಿದ್ದಾರೆ.

ಬಸ್​ ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮ ಹಿಡಿದುಕೊಳ್ಳಲು ಬೆಂಬಲಕ್ಕೇನು ಸಿಗದೆ ಎರಡು ವರ್ಷದ ಮಗುವಿನ ಸಮೇತ ಕೆಳಗೆ ಬಿದ್ದಿದ್ದಾರೆ. ಹಾಗೆಯೇ ಮಹಿಳೆಗೆ ಕೂಡ ಅದೇ ರೀತಿಯಾಗಿ ಏಕಾಏಕಿ ಮಗು ಕೈಜಾರಿ ಕೆಳಗೆ ಬಿದ್ದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಇದರಲ್ಲಿ ಆ ವ್ಯಕ್ತಿಯ ತಪ್ಪಿರುವುದು ಕೂಡ ಗೋಚರಿಸುತ್ತದೆ. ಅಲ್ಲಿ ಕೂತಾಗ ಹಿಡಿದುಕೊಳ್ಳಲು ಯಾವುದೇ ಸಪೋರ್ಟ್​ ಇಲ್ಲದಿದ್ದರೂ ಮಗುವನ್ನು ಕೂರಿಸಿಕೊಂಡು ಮೊಬೈಲ್​​ ನೋಡುತ್ತಿರುವುದನ್ನು ಕಾಣಬಹುದು.

ಬಸ್ ಏಕಾಏಕಿ ಬ್ರೇಕ್ ಹಾಕಿದಾಗ ಒಂದು ಕೈಯಲ್ಲಿ ಮಗು ಇನ್ನೊಂದು ಕೈಯಲ್ಲಿ ಮೊಬೈಲ್ ಇದ್ದ ಕಾರಣ ಕೆಳಗೆ ಬಿದ್ದಿದ್ದಾರೆ. ಶಿಶುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಮತ್ತಷ್ಟು ಓದಿ: Shocking News: ಆಟವಾಡುತ್ತಾ ನಾಗರಹಾವನ್ನು ಕಚ್ಚಿ ಸಾಯಿಸಿದ 1 ವರ್ಷದ ಮಗು!

ಶ್ರೀವಿಲ್ಲಿಪುತೂರ್ ಬಳಿಯ ಮುತ್ತುಲಿಂಗಪುರಂನ ಮದನ್ ಕುಮಾರ್ ತನ್ನ ಸಹೋದರಿ ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಮಹಿಳೆ ತನ್ನ ಒಂದು ವರ್ಷದ ಮಗನನ್ನು ಹಿಡಿದುಕೊಂಡು ಕುಳಿತಿದ್ದರೆ, ಅವರ ಹಿರಿಯ ಮಗ 2 ವರ್ಷದ ಮದನ್ ಕುಮಾರ್ ಜೊತೆಗಿದ್ದ. ಮಧುರೈನಿಂದ ಶ್ರೀವಿಲ್ಲಿಪುತೂರ್‌ಗೆ ಬಸ್ ಸಂಚರಿಸುತ್ತಿತ್ತು. ಮೀನಾಕ್ಷಿಪುರಂ ಗ್ರಾಮದ ಬಳಿ ಬಂದಾಗ ಚಾಲಕ ಹಠಾತ್ ಬ್ರೇಕ್ ಹಾಕಿದ್ದರು. ಆ ಆಘಾತದಿಂದಾಗಿ, ಮಹಿಳೆ ತನ್ನ ಮಗನ ಹಿಡಿತವನ್ನು ಕಳೆದುಕೊಂಡಿದ್ದರು.

ಮತ್ತು ಅವನು ಬಸ್ಸಿನ ಹೊರಗೆ ಬಿದ್ದಿದ್ದಾನೆ. ರಸ್ತೆಬದಿಯಲ್ಲಿ ನಿಂತಿದ್ದ ವೃದ್ಧರೊಬ್ಬರು ಮಗುವಿಗೆ ಸಹಾಯ ಮಾಡಲು ಧಾವಿಸಿದರು, ನಂತರ ಅವರನ್ನು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಯಿತು. ಮದನ್ ಕುಮಾರ್ ಮತ್ತು ಅವರ ಸೋದರಳಿಯ ಬಸ್ಸಿನೊಳಗೆ ನೆಲದ ಮೇಲೆ ಬಿದ್ದರು. ಈ ಸಂದರ್ಭದಲ್ಲಿ ಕುಮಾರ್ ಅವರ ಮುಖಕ್ಕೆ ಗಾಯಗಳಾಗಿವೆ.

ಚೆನ್ನೈನ ಪೂನಮಲ್ಲಿಯಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ, ಕುಡಿದ ಮತ್ತಿನಲ್ಲಿದ್ದ ಚಾಲಕನೊಬ್ಬ ಚಲಾಯಿಸಿಕೊಂಡು ಬಂದ ನೀರಿನ ಟ್ಯಾಂಕರ್ ದ್ವಿಚಕ್ರ ವಾಹನ ಮತ್ತು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಸೆನ್ನೀರ್ಕುಪ್ಪಂನಲ್ಲಿ ಟ್ಯಾಂಕರ್ ನೀರು ತುಂಬಿಸಿ ಅವಡಿ-ಪೂನಮಲ್ಲಿ ರಸ್ತೆಯಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ರೇಣುಕಾಸ್ವಾಮಿ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ
ರೇಣುಕಾಸ್ವಾಮಿ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ
‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ
‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ಸರ್ಕಾರಕ್ಕೆ ಮುಜುಗರ ಆಗ್ತಿದೆ: ಗೃಹ ಸಚಿವರು ಸದನದಲ್ಲೇ ಹೀಗಂದಿದ್ದೇಕೆ?
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ದಾವಣಗೆರೆ ಬೈ ಎಲೆಕ್ಷನ್: ಹೊಸ ಬಾಂಬ್ ಸಿಡಿಸಿದ ಜೆಡಿಎಸ್ ಮುಖಂಡ
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಹೊಟ್ಟೆ ಆಯ್ತು ಈಗ ಬಟ್ಟೆಗೂ ತಟ್ಟಿದ ಯುದ್ಧದ ಎಫೆಕ್ಟ್​​!
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಡೆಡ್ಲಿ ರೋಡ್​ರೇಜ್, ಕಾರು ಬಾನೆಟ್​ನಲ್ಲಿ ನೇತಾಡಿದ ಪೊಲೀಸ್! ವಿಡಿಯೋ ವೈರಲ್
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಕ್ಯೂ ನೆಟ್, ವಿಹಾನ್ ಬಗ್ಗೆ ಸುಳ್ಳು ಸುದ್ದಿ ಬೇಡ: ಹೈಕೋರ್ಟ್ ತಡೆಯಾಜ್ಞೆ!
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಕ್ಯಾನ್ಸರ್​​ ಬರಬಹುದು ಎಂದ ಡಾಕ್ಟರ್ಸ್​
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ
ಸೆಲ್ಫಿಗೆ ಕಾಜೋಲ್ ಮೇಲೆ ಮುಗಿಬಿದ್ದ ಫ್ಯಾನ್ಸ್; ಭಯಪಡುತ್ತಾ ಸಾಗಿದ ನಟಿ