
ನವದೆಹಲಿ, ಅಕ್ಟೋಬರ್ 29: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಇಂದು ಬಿಹಾರದಲ್ಲಿ ಚುನಾವಣಾ (Bihar Elections) ಪ್ರಚಾರವನ್ನು ಮಾಡಿದ್ದಾರೆ. ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡಿಕೊಂಡು ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. “ಪ್ರಧಾನಿ ಮೋದಿಯವರಿಗೆ ನಿಮ್ಮ ಮತ ಮಾತ್ರ ಬೇಕು. ನೀವೇನಾದರೂ ಮತಗಳಿಗಾಗಿ ಬದಲಾಗಿ ಡ್ಯಾನ್ಸ್ ಮಾಡಲು ಹೇಳಿದರೆ ಮೋದಿ ವೇದಿಕೆಯಲ್ಲಿ ನೃತ್ಯ ಕೂಡ ಮಾಡುತ್ತಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದರು.
ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿ ಲೋಕಲ್ ಗೂಂಡಾ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದೆ. ಈ ಬಗ್ಗೆ ಬಿಜೆಪಿ ನಾಯಕ ಅಮಿತ್ ಮಾಳವಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, “ರಾಹುಲ್ ಗಾಂಧಿ ತಾವೊಬ್ಬ ರಾಜಕೀಯ ನಾಯಕ ಎಂಬುದನ್ನು ಮರೆತು ಲೋಕಲ್ ಗೂಂಡಾ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ಪ್ರಧಾನಿಗೆ ಮತ ಹಾಕಿದ ಪ್ರತಿಯೊಬ್ಬ ವ್ಯಕ್ತಿಯನ್ನು ಕೂಡ ಅವರು ಅವಮಾನಿಸಿದ್ದಾರೆ” ಎಂದಿದ್ದಾರೆ.
#BiharElection2025 | Muzaffarpur, Bihar: Lok Sabha LoP Rahul Gandhi says, “… There’s no Yamuna there; there’s a pond there. Narendra Modi went to bathe in his swimming pool. He has nothing to do with the Yamuna. He has nothing to do with Chhath Puja. He just wants your vote. If… pic.twitter.com/rCR5jHxhyH
— ANI (@ANI) October 29, 2025
ಇದನ್ನೂ ಓದಿ: ಮತಕ್ಕಾಗಿ ಮೋದಿ ಡ್ಯಾನ್ಸ್ ಬೇಕಿದ್ರೂ ಮಾಡುತ್ತಾರೆ; ಬಿಹಾರದಲ್ಲಿ ರಾಹುಲ್ ಗಾಂಧಿ ಲೇವಡಿ
“ರಾಹುಲ್ ಗಾಂಧಿ ಭಾರತೀಯ ಮತದಾರರು ಮತ್ತು ಪ್ರಜಾಪ್ರಭುತ್ವವನ್ನು ಅಪಹಾಸ್ಯ ಮಾಡಿದ್ದಾರೆ. ಕಾಂಗ್ರೆಸ್ ಬಹಿರಂಗವಾಗಿ ದೇಶದೊಳಗೆ ನುಗ್ಗುವವರೊಂದಿಗೆ ನಿಂತಿದ್ದಾರೆ. ಅಕ್ರಮ ವಲಸಿಗರಿಗೆ ಅವರು ಬೆಂಬಲ ನೀಡುತ್ತಿದ್ದಾರೆ” ಎಂದು ಅಮಿತ್ ಮಾಳವಿಯಾ ಆರೋಪಿಸಿದ್ದಾರೆ.
दो महीने बाद राहुल गांधी ने बिहार चुनाव प्रचार की शुरुआत लोक आस्था के महापर्व छठी मैया के अपमान से की है।
पहले पुरानी तस्वीरों के माध्यम से छठ महापर्व को नीचा दिखाया गया, और अब राहुल गांधी ने बिहार की धरती पर आकर यहाँ के लोकपर्व, करोड़ों लोगों की श्रद्धा और छठ व्रतियों की आस्था… pic.twitter.com/x8lDGly1KC
— Amit Malviya (@amitmalviya) October 29, 2025
” ರಾಹುಲ್ ಗಾಂಧಿ ಜಾನಪದ ನಂಬಿಕೆಯ ಮಹಾನ್ ಹಬ್ಬವಾದ ಛತ್ ಪೂಜಾವನ್ನು ಅವಮಾನಿಸುವ ಮೂಲಕ ತಮ್ಮ ಬಿಹಾರ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ ಬಿಹಾರದ ಭಕ್ತರು ಯಮುನಾದ ವಿಷಕಾರಿ ನೊರೆಯಲ್ಲಿ ಮುಳುಗಿ ಪೂಜೆಯನ್ನು ಮಾಡಬೇಕಾಗಿತ್ತು. ಆದರೆ ಮೋದಿ ಸರ್ಕಾರದ ಅಡಿಯಲ್ಲಿ ಯಮುನಾ ಘಾಟ್ಗಳಲ್ಲಿ ಸರಿಯಾದ ವ್ಯವಸ್ಥೆಗಳನ್ನು ಮಾಡಲಾಗಿತ್ತು” ಎಂದು ಮಾಳವೀಯ ಹೇಳಿದ್ದಾರೆ.
ಇದನ್ನೂ ಓದಿ: ವಿದೇಶಕ್ಕೆ ಹೋಗಿ ಭಾರತದ ವಿರುದ್ಧ ವಿಷ ಕಾರುವ ಮೊದಲ ಸಂಸದ ರಾಹುಲ್ ಗಾಂಧಿ: ಕಿರಣ್ ರಿಜಿಜು
“ರಾಹುಲ್ ಗಾಂಧಿ ಸನಾತನ ಧರ್ಮದ ವಿರುದ್ಧ, ಜಾನಪದ ಉತ್ಸವಗಳ ವಿರುದ್ಧ ಮತ್ತು ಬಿಹಾರದ ವಿರುದ್ಧ ಹೇಳಿಕೆ ನೀಡಿದ್ದಾರೆ. ಬಿಹಾರ ರಾಜ್ಯದ ಹಬ್ಬಗಳು ಮತ್ತು ಜಾನಪದ ಸಂಸ್ಕೃತಿಯನ್ನು ಅವಮಾನಿಸಿರುವ ರಾಹುಲ್ ಗಾಂಧಿ ಬಿಹಾರವನ್ನು ತೊರೆಯುವ ಮೊದಲು ಸಾರ್ವಜನಿಕ ಕ್ಷಮೆಯಾಚಿಸಬೇಕು” ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಒತ್ತಾಯಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ