AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Statue of Equality: ದಿವ್ಯ ಸಾಕೇತಂ ಆಶ್ರಮದಲ್ಲಿ ತ್ರಿದಂಡಿ ಚಿನ್ನಜೀಯರ್ ಶ್ರೀಗಳ ಸುದ್ದಿಗೋಷ್ಠಿ

2022ರ ಫೆಬ್ರವರಿ 2ರಿಂದ 14ರವರೆಗೂ ಸಹಸ್ರಮಾನೋತ್ಸವ ನಡೆಯಲಿದೆ. ದೇಶದ ಅತಿರಥ ಮಹಾರಥ ಗಣ್ಯರಿಗೆಲ್ಲಾ ಚಿನ್ನಜೀಯರ್‌ ಸ್ವಾಮೀಜಿ ಜೊತೆಗೆ ‘ಮೈ ಹೋಮ್ ಗ್ರೂಪ್’ ಚೇರ್ಮನ್ ಡಾ.ಜೆ.ರಾಮೇಶ್ವರ್ ರಾವ್ ಭೇಟಿ ಮಾಡಿ ಸ್ವಾಗತಿಸಿದ್ದಾರೆ. ಮಹೋತ್ಸವಕ್ಕೆ ನಡೆದಿರುವ ಸಿದ್ಧತೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಚಿನ್ನಜೀಯರ್ ಶ್ರೀ ವಿವರಣೆ ನೀಡಲಿದ್ದಾರೆ.

Statue of Equality: ದಿವ್ಯ ಸಾಕೇತಂ ಆಶ್ರಮದಲ್ಲಿ ತ್ರಿದಂಡಿ ಚಿನ್ನಜೀಯರ್ ಶ್ರೀಗಳ ಸುದ್ದಿಗೋಷ್ಠಿ
ಶ್ರೀ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ
Follow us
TV9 Web
| Updated By: ಆಯೇಷಾ ಬಾನು

Updated on:Sep 20, 2021 | 1:56 PM

ಹೈದರಾಬಾದ್: ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಮುಚ್ಚಿಂತಲ್ ಸಮೀಪದ ‘ದಿವ್ಯ ಸಾಕೇತಂ’ ಆಶ್ರಮದಲ್ಲಿ ತ್ರಿದಂಡಿ ಚಿನ್ನಜೀಯರ್ ಶ್ರೀಗಳ ಸುದ್ದಿಗೋಷ್ಠಿ ನಡೆಸಿದ್ದಾರೆ. ಶ್ರೀರಾಮಾನುಜರ 216 ಅಡಿ ಪ್ರತಿಮೆ ಅನಾವರಣದ ಉತ್ಸವದ ಮಾಹಿತಿ ನೀಡಿದ್ದಾರೆ.

2022ರ ಫೆಬ್ರವರಿ 2ರಿಂದ 14ರವರೆಗೂ ಸಹಸ್ರಮಾನೋತ್ಸವ ನಡೆಯಲಿದೆ. ದೇಶದ ಅತಿರಥ ಮಹಾರಥ ಗಣ್ಯರಿಗೆಲ್ಲಾ ಚಿನ್ನಜೀಯರ್‌ ಸ್ವಾಮೀಜಿ ಜೊತೆಗೆ ‘ಮೈ ಹೋಮ್ ಗ್ರೂಪ್’ ಚೇರ್ಮನ್ ಡಾ.ಜೆ.ರಾಮೇಶ್ವರ್ ರಾವ್ ಭೇಟಿ ಮಾಡಿ ಸ್ವಾಗತಿಸಿದ್ದಾರೆ. ಮಹೋತ್ಸವಕ್ಕೆ ನಡೆದಿರುವ ಸಿದ್ಧತೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಚಿನ್ನಜೀಯರ್ ಶ್ರೀ ವಿವರಣೆ ನೀಡಲಿದ್ದಾರೆ. ‘ಸಮಾನತೆ ಪ್ರತಿಮೆ’ಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿನ್ನಜೀಯರ್ ಶ್ರೀಗಳ, ಇಂದಿನಿಂದಲೇ ಚಾತುರ್ಮಾಸ ಕಾರ್ಯಕ್ರಮ ಆರಂಭವಾಗಲಿದೆ. ಇಂದಿನಿಂದ ಮಚ್ಚಿಂತಲ್ ಆಶ್ರಮದಲ್ಲಿ ಚಾತುರ್ಮಾಸ ದೀಕ್ಷೆ ನೀಡಲಿದ್ದೇವೆ. ಫೆಬ್ರವರಿಯಲ್ಲಿ ರಾಮಾನುಜಾಚಾರ್ಯರ ಪ್ರತಿಮೆ ಲೋಕಾರ್ಪಣೆ ಮಾಡಲಾಗುತ್ತೆ ಎಂದರು.

ವಿಶ್ವದಲ್ಲಿರುವ ಎಲ್ಲರ ಶ್ರೇಯಸ್ಸಿಗಾಗಿ ಮಹತ್ವದ ಕಾರ್ಯ ನಡೆಯಲಿದೆ. ರಾಮಾನುಜಾಚಾರ್ಯರು ಅವತರಿಸಿ 1 ಸಾವಿರ ವರ್ಷವಾಗಿದೆ. ಈ ಸಮಯದಲ್ಲಿ ರಾಮಾನುಜರ ಸಮಾನತೆ ಸಿದ್ಧಾಂತ ಈ ಸಮಾಜಕ್ಕೆ ತಿಳಿಹೇಳಬೇಕು. ಹೀಗಾಗಿ ಈ ಸಮಯದಲ್ಲಿ ಮಹತ್ತರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕೊರೊನಾದಿಂದ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ದೇಶದಲ್ಲಿ ಎರಡು ಅಲೆ ಈಗಾಗಲೇ ಬಂದಿದೆ. ಮೂರನೇ ಅಲೆ ಬರುವುದಾಗಿ ವೈದ್ಯರು ಹೇಳುತ್ತಿದ್ದಾರೆ. ಕೊರೊನಾ ಹಿನ್ನೆಲೆ ಫೆಬ್ರವರಿಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಫೆಬ್ರವರಿಯಲ್ಲಿ 12 ದಿನಗಳ ಕಾಲ ಹೋಮ ಮಾಡಲಾಗುತ್ತೆ. ದೇಶಿ ತಳಿ ಹಸುಗಳ ತುಪ್ಪದಿಂದ ಹೋಮ ಮಾಡಲಾಗುತ್ತದೆ. 5 ಸಾವಿರ ಋಷಿಗಳು ಈ ಹೋಮದಲ್ಲಿ ಭಾಗಿಯಾಗುತ್ತಾರೆ. ಪ್ರತಿ ಹೋಮ ಕುಂಡದ ಬಳಿ ಗೋವಿಗಳಿಗೆ ಪೂಜೆ ಸಲ್ಲಿಸಲಾಗುವುದು. ಈ ಕಾರ್ಯಕ್ರಮ ಒಂದು ಗ್ರಾಮ, ರಾಜ್ಯ, ದೇಶಕ್ಕಾಗಿ ಅಲ್ಲ. ಇಡೀ ಸಮುದಾಯಕ್ಕಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಈ ಮಹೋತ್ಸವಕ್ಕೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಸಚಿವರು ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ಮಾಡಲಾಗಿದೆ. ಎಲ್ಲರೂ ಈ ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದಾರೆ.

ಫೆಬ್ರವರಿ 5ರಂದು ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ. ರಾಮಾನುಜಾಚಾರ್ಯರ ಪ್ರತಿಮೆ ಲೋಕಾರ್ಪಣೆ ಮಾಡ್ತಾರೆ. ಮಹೋತ್ಸವದ ಅಂತ್ಯದ ವೇಳೆಗೆ ರಾಷ್ಟ್ರಪತಿಗಳು ಬರುತ್ತಾರೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು, ರಾಜ್ಯಪಾಲರು. ಕೇಂದ್ರ ಸಚಿವರು, ಸಂಸದರು, ಶಾಸಕರು, ಗಣ್ಯರು ಭಾಗಿಯಾಗ್ತಾರೆ ಎಂದರು.

ತಮಿಳುನಾಡಿನಲ್ಲಿ ಪ್ರತಿಮೆ ಸ್ಥಾಪಿಸಲು ಅಂದುಕೊಂಡಿದ್ದೆವು ‘ಮೈ ಹೋಮ್ ಗ್ರೂಪ್’ ಚೇರ್ಮನ್ ರಾಮೇಶ್ವರ್ ರಾವ್ ಪ್ರತಿಮೆ ಸ್ಥಾಪನೆಗೆ ಜಾಗ ತೋರಿಸಿದ್ದರು. ಜೆ.ರಾಮೇಶ್ವರ್ ರಾವ್ ತೋರಿಸಿದ ಜಾಗ ಅತ್ಯದ್ಭುತವಾಗಿದೆ. ಆದ್ರೆ ಈ ಹಿಂದೆ ತಮಿಳುನಾಡಿನಲ್ಲಿ ಪ್ರತಿಮೆ ಸ್ಥಾಪಿಸಲು ಅಂದುಕೊಂಡಿದ್ದೆವು. ಆದರೆ ಇದೇ ಜಾಗದಲ್ಲಿ ಸ್ಥಾಪನೆಯಾಗಬೇಕೆಂದು ನಿಶ್ಚಯವಾಗಿದೆ. ಜೆ.ರಾಮೇಶ್ವರ್ ರಾವ್‌ರವರು ಭೂಮಿ ತೋರಿಸಿದ್ದರು ಅದೇ ಜಾಗದಲ್ಲಿ ಈಗ ಸಮಾನತೆ ಪ್ರತಿಮೆ ಸ್ಥಾಪಿಸ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಕೇವಲ ಉಭಯ ಆಂಧ್ರದವರಲ್ಲ ದೇಶದ ಎಲ್ಲ ರಾಜ್ಯದ ಜನರಿಗೂ ಆಹ್ವಾನ ನೀಡಲಾಗಿದೆ ಎಂದರು.

ವಿಜಯದಶಮಿ ದಿನ ಯಾಗ ಶಾಲೆ ನಿರ್ಮಾಣ ಮಾಡ್ತೇವೆ ರಾಮಾನುಜಾಚಾರ್ಯರ ಬಗ್ಗೆ ಮಾಹಿತಿ ನೀಡುವುದಕ್ಕೆ ಆಡಿಯೋ ಡಿವೈಸ್ ಕೂಡ ಇರುತ್ತೆ. ಎಲ್ಲ ಭಾಷೆಗಳಲ್ಲಿ ಮಾಹಿತಿ ಲಭ್ಯವಾಗಲಿದೆ. ಎಲ್ಲರೂ ಕೂಡ ಕಾರ್ಯಕ್ರಮಕ್ಕೆ ಬನ್ನಿ. ವಿಜಯದಶಮಿ ದಿನ ಯಾಗ ಶಾಲೆ ನಿರ್ಮಾಣ ಮಾಡ್ತೇವೆ. 100 ಎಕರೆ ಪ್ರದೇಶದಲ್ಲಿ ಯಾಗ ಶಾಲೆ ನಿರ್ಮಿಸುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Statue of Equality: ಹೈದರಾಬಾದ್‌ನಲ್ಲಿ ತಲೆ ಎತ್ತಲಿದೆ ವಿಶ್ವದ ಎರಡನೇ ಅತೀ ಎತ್ತರದ ಶ್ರೀ ರಾಮಾನುಜಾಚಾರ್ಯರ ಬೃಹತ್ ಪ್ರತಿಮೆ‌

Published On - 12:35 pm, Mon, 20 September 21

Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್