AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಗೋಳ ವಿಜ್ಞಾನದ ಏರಿಸ್ ತರಬೇತಿಯಲ್ಲಿ ಭಾಗವಹಿಸಿದ ಭಾರತದ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು

ವಿದ್ಯಾರ್ಥಿಗಳು, ಏರಿಸ್ ವಿಜ್ಞಾನಿಗಳು, ಪೋಸ್ಟ್ ಡಾಕ್ಟರಲ್ ಫೆಲೋಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳ ಜೊತೆ ಖಗೋಳ ವಿಜ್ಞಾನದಲ್ಲಿ ಭವಿಷ್ಯದಲ್ಲಿ ಲಭ್ಯವಾಗಲಿರುವ ಅವಕಾಶಗಳ ಕುರಿತು ಸಂವಾದ ನಡೆಸಿದರು.

ಖಗೋಳ ವಿಜ್ಞಾನದ ಏರಿಸ್ ತರಬೇತಿಯಲ್ಲಿ ಭಾಗವಹಿಸಿದ ಭಾರತದ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Aug 21, 2021 | 9:50 AM

Share

ದೆಹಲಿ: ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಸಾಮರ್ಥ್ಯ ಅಭಿವೃದ್ಧಿಗಾಗಿ ಆನ್​ಲೈನ್ ಮೂಲಕ ನಡೆಸಿದ ತರಬೇತಿ ಕಾರ್ಯಕ್ರಮದಲ್ಲಿ ಭಾರತದಾದ್ಯಂತ 25ಕ್ಕೂ ಅಧಿಕ ವಿಶ್ವವಿದ್ಯಾಲಯಗಳ ಸುಮಾರು 100 ವಿದ್ಯಾರ್ಥಿಗಳಿಗೆ ಖಗೋಳಶಾಸ್ತ್ರದ ನಾನಾ ಪಾಠಗಳ ಬಗ್ಗೆ ಪರಿಚಯಿಸಲಾಯಿತು. ಅವರಿಗೆ ದೂರದರ್ಶಕ, ನಕ್ಷತ್ರ ರಚನೆ, ವಿಕಸನ, ಎಕ್ಸೋಪ್ಲಾನೆಟ್ ಗಳು ಮತ್ತು ಖಗೋಳಭೌತಶಾಸ್ತ್ರ, ನಕ್ಷತ್ರ ಪುಂಜ ಮತ್ತು ನಕ್ಷತ್ರ ಖಗೋಳ ವಿಜ್ಷಾನ, ಏರೀಸ್​ನ ವೀಕ್ಷಣಾ ಸೌಕರ್ಯಗಳು, 30 ಮೀಟರ್ ದೂರದರ್ಶಕ ಯೋಜನೆ ಮತ್ತು ಆದಿತ್ಯ-1 ಬಾಹ್ಯಾಕಾಶ ಮಿಷನ್ ಮತ್ತಿತರ ಪಾಠಗಳ ಕುರಿತು ಮಾಹಿತಿ ನೀಡಲಾಯಿತು.

‘ಏರಿಸ್ ಖಗೋಳ ವಿಜ್ಞಾನದ ತರಬೇತಿ ಶಾಲೆ (ಎಟಿಎಸ್ಒಎ) -2021’ ಶೀರ್ಷಿಕೆಯಡಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಎಂಟು ದಿನಗಳ ಕಾಲ ನಡೆದ ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ಖಗೋಳ ವಿಜ್ಞಾನದ ದತ್ತಾಂಶ ಪ್ರಕ್ರಿಯೆ ತಂತ್ರಗಳಾದ ಫೊಟೊಮಿಟ್ರಿ, ಸ್ಪೆಕ್ಟ್ರೊಸ್ಕೊಪಿ, ಪೊಲಾರಿಮಿಟ್ರಿ ಮತ್ತು ಯಂತ್ರೋಪಕರಣಗಳ ಕಲಿಕೆ ಕುರಿತಂತೆ ಪ್ರತಿ ದಿನ ಪ್ರಾತ್ಯಕ್ಷಿಕೆಗಳ ಮೂಲಕ ವಿವರ ನೀಡಲಾಯಿತು. ಇದನ್ನು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್​ಟಿ) ಅಡಿ ಬರುವ ಸ್ವಾಯತ್ತ ಸಂಸ್ಥೆ ಖಗೋಳ ವಿಜ್ಞಾನ ಕುರಿತ ಆರ್ಯಭಟ ರಾಷ್ಟ್ರೀಯ ಸಂಸ್ಥೆ (ಏರಿಸ್) ನಡೆಸಿತು.

ಉಪನ್ಯಾಸದ ಸಮಯದಲ್ಲಿ ವಿವರಿಸಲಾಗಿದ್ದ ಪರಿಕಲ್ಪನೆಗಳನ್ನು ಇನ್ನೂ ಚೆನ್ನಾಗಿ ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಲು ನೆರವಾಗುವಂತೆ ಈ ಪ್ರಾತ್ಯಕ್ಷಿಕೆ ಗೋಷ್ಠಿಗಳನ್ನು ರೂಪಿಸಲಾಗಿತ್ತು. ವಿದ್ಯಾರ್ಥಿಗಳು, ಏರಿಸ್ ವಿಜ್ಞಾನಿಗಳು, ಪೋಸ್ಟ್ ಡಾಕ್ಟರಲ್ ಫೆಲೋಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳ ಜೊತೆ ಖಗೋಳ ವಿಜ್ಞಾನದಲ್ಲಿ ಭವಿಷ್ಯದಲ್ಲಿ ಲಭ್ಯವಾಗಲಿರುವ ಅವಕಾಶಗಳ ಕುರಿತು ಸಂವಾದ ನಡೆಸಿದರು.

ಸದ್ಯದ ಜಗತ್ತು ಖಗೋಳ ವಿಜ್ಞಾನದ ತಿಳುವಳಿಕೆ ನಿರಂತರ ಬೆಳವಣಿಗೆಯ ಮೇಲೆ ಮಾತ್ರವಲ್ಲದೆ ಈ ಸೌಲಭ್ಯಗಳಿಂದ ಉಂಟಾಗುವ ದತ್ತಾಂಶವನ್ನು ಬಳಸುವ ಜನರನ್ನೂ ಸಹ ಅವಲಂಬಿಸಿರುತ್ತದೆ. ಈ ತಂತ್ರಜ್ಞಾನಗಳ ಬೆಳವಣಿಗೆಯೊಂದಿಗೆ ಪ್ರಪಂಚದಾದ್ಯಂತ ಮತ್ತು ಬಾಹ್ಯಾಕಾಶದಲ್ಲಿ ವಿವಿಧ ವಿದ್ಯುತ್ ಕಾಂತೀಯ ತರಂಗಾಂತರ ಬ್ಯಾಂಡ್ ಗಳಲ್ಲಿ ಹಲವಾರು ಕಾರ್ಯಾಚರಣೆ ಮತ್ತು ಮುಂಬರುವ ಖಗೋಳಶಾಸ್ತ್ರ ಸೌಕರ್ಯಗಳ ಬಗ್ಗೆ ತಿಳಿಯಬಹುದಾಗಿದೆ. ಈ ಸೌಕರ್ಯಗಳು ಭಾರೀ ಪ್ರಮಾಣದ ದತ್ತಾಂಶವನ್ನು ಸೃಷ್ಟಿಸುತ್ತವೆ. ಆ ದತ್ತಾಂಶವನ್ನು ಬಳಸಿಕೊಳ್ಳಲು ಮತ್ತು ಆಕಾಶಕಾಯಗಳನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಖ್ಯೆಯ ಸಂಶೋಧನಾ ವಿದ್ಯಾರ್ಥಿಗಳ ಅಗತ್ಯವಿದೆ.

ವಾರ್ಷಿಕವಾಗಿ ಇಂತಹ ತರಬೇತಿ ಶಾಲೆಗಳನ್ನು ನಡೆಸುವ ಮೂಲಕ ಯುವ ವಿದ್ಯಾರ್ಥಿಗಳಲ್ಲಿ ಆಪ್ಟಿಕಲ್ ತರಂಗಾಂತರಗಳಲ್ಲಿ ಖಗೋಳ ವಿಜ್ಞಾನದ ದತ್ತಾಂಶ ವಿಶ್ಲೇಷಣೆಗೆ ಪರಿಣಿತಿ/ ಕೌಶಲ್ಯವನ್ನು ಅಭಿವೃದ್ಧಿಪಡಿಸುವುದಲ್ಲದೆ, ಪ್ರತಿಭಾನ್ವಿತರ ತಂಡವನ್ನು ಸೃಷ್ಟಿಸುವುದು ಏರಿಸ್ ಗುರಿಯಾಗಿದೆ. ಆ ನಿಟ್ಟಿನಲ್ಲಿ ಎಟಿಎಸ್ಒಎ-2021 ಪ್ರಮುಖ ಹೆಜ್ಜೆಯಾಗಿದೆ. 2021ರ ಮೇ 17 ರಿಂದ 24ರ ವರೆಗೆ ಏರಿಸ್​ನಲ್ಲಿ ನಡೆದ ಈ ಕಾರ್ಯಕ್ರಮ 75ನೇ ಸ್ವಾತಂತ್ರ್ಯೋತ್ಸವ; ಆಜಾದಿ ಕ ಅಮೃತ ಮಹೋತ್ಸವದ ಸ್ಮರಣಾರ್ಥ ಕೈಗೊಂಡಿರುವ ಚಟುವಟಿಕೆಗಳ ಭಾಗವೂ ಆಗಿದೆ.

ಇದನ್ನೂ ಓದಿ: ಕೊರೊನಾ ವೇಳೆ ಮಕ್ಕಳಿಗೆ ಶಿಕ್ಷಣ ನೀಡಬೇಕು; ರಾಜ್ಯ ಸರ್ಕಾರಕ್ಕೆ ಬೇಡಿಕೆಯಿಟ್ಟ ರುಪ್ಸಾ

Published On - 10:05 pm, Tue, 25 May 21

ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಸಂಜಯ್ ರಾವತ್ ಮನೆ ಮುಂದೆ ಬಾಂಬ್ ಬೆದರಿಕೆ ಸಂದೇಶವಿರುವ ಕಾರು ಪತ್ತೆ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?