‘ಮಗುವನ್ನು ಕೊಲ್ಲಲು ಸಾಧ್ಯವಿಲ್ಲ’: ಗರ್ಭಪಾತ ಪ್ರಕರಣ ವಿಚಾರಣೆ ವೇಳೆ ಸುಪ್ರೀಂಕೋರ್ಟ್

|

Updated on: Oct 12, 2023 | 6:24 PM

ಅಕ್ಟೋಬರ್ 9 ರ ಆದೇಶವನ್ನು ಹಿಂಪಡೆಯಲು ಕೇಂದ್ರದ ಅರ್ಜಿಯ ಮೇಲೆ ದ್ವಿಸದಸ್ಯ ಪೀಠವು ಬುಧವಾರ ಭಿನ್ನ ತೀರ್ಪು ನೀಡಿದ ನಂತರ ಪ್ರಕರಣವನ್ನು ಸಿಜೆಐ ನೇತೃತ್ವದ ಪೀಠಕ್ಕೆ ನೀಡಲಾಯಿತು. ಇದರಲ್ಲಿ ಇಬ್ಬರು ಮಕ್ಕಳ ತಾಯಿಗೆ ಆಕೆಯ 26 ವಾರಗಳ ಭ್ರೂಣವನ್ನು ಗರ್ಭಪಾತ ಮಾಡಲು ಈ ಮೊದಲು ಅನುಮತಿ ನೀಡಲಾಗಿತ್ತು. 

ಮಗುವನ್ನು ಕೊಲ್ಲಲು ಸಾಧ್ಯವಿಲ್ಲ: ಗರ್ಭಪಾತ ಪ್ರಕರಣ ವಿಚಾರಣೆ ವೇಳೆ ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Follow us on

ದೆಹಲಿ ಅಕ್ಟೋಬರ್ 12: ವಿವಾಹಿತ ಮಹಿಳೆಗೆ ತನ್ನ 26 ವಾರದ ಭ್ರೂಣವನ್ನು ಗರ್ಭಪಾತ (abortion) ಮಾಡಲು ಅವಕಾಶ ನೀಡಿದ ಅಕ್ಟೋಬರ್ 9 ರ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಕೇಂದ್ರದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ “ನಾವು ಮಗುವನ್ನು ಕೊಲ್ಲಲು ಸಾಧ್ಯವಿಲ್ಲ” ಎಂದು ಸಿಜೆಐ ಡಿವೈ ಚಂದ್ರಚೂಡ್ (CJI DY Chandrachud) ನೇತೃತ್ವದ ಸುಪ್ರೀಂಕೋರ್ಟ್(Supreme Court) ಪೀಠ ಹೇಳಿದೆ. ಆದಾಗ್ಯೂ, “ಜೀವಂತವಿರುವ” ಭ್ರೂಣದ ಹಕ್ಕು ತಾಯಿಯ ನಿರ್ಧಾರದ ಹಕ್ಕಿನೊಂದಿಗೆ ಸಮತೋಲನಗೊಳಿಸಬೇಕು ಎಂದು ನ್ಯಾಯಾಲಯವು ಕೇಂದ್ರಕ್ಕೆ ಹೇಳಿದೆ. ಕೆಲವು ವಾರಗಳವರೆಗೆ ಗರ್ಭಧಾರಣೆಯನ್ನು ಉಳಿಸಿಕೊಳ್ಳುವ ಬಗ್ಗೆ ಮಹಿಳೆಯೊಂದಿಗೆ ಮಾತನಾಡಲು ನ್ಯಾಯಾಲಯವು ಕೇಂದ್ರ ಮತ್ತು ಮಹಿಳೆಯ ವಕೀಲರನ್ನು ಕೇಳಿದೆ.

ಅಕ್ಟೋಬರ್ 9 ರ ಆದೇಶವನ್ನು ಹಿಂಪಡೆಯಲು ಕೇಂದ್ರದ ಅರ್ಜಿಯ ಮೇಲೆ ದ್ವಿಸದಸ್ಯ ಪೀಠವು ಬುಧವಾರ ಭಿನ್ನ ತೀರ್ಪು ನೀಡಿದ ನಂತರ ಪ್ರಕರಣವನ್ನು ಸಿಜೆಐ ನೇತೃತ್ವದ ಪೀಠಕ್ಕೆ ನೀಡಲಾಯಿತು. ಇದರಲ್ಲಿ ಇಬ್ಬರು ಮಕ್ಕಳ ತಾಯಿಗೆ ಆಕೆಯ 26 ವಾರಗಳ ಭ್ರೂಣವನ್ನು ಗರ್ಭಪಾತ ಮಾಡಲು ಈ ಮೊದಲು ಅನುಮತಿ ನೀಡಲಾಗಿತ್ತು.

ಮಹಿಳೆಯು ಖಿನ್ನತೆಯಿಂದ ಬಳಲುತ್ತಿದ್ದ. “ಭಾವನಾತ್ಮಕವಾಗಿ, ಆರ್ಥಿಕವಾಗಿ ಮತ್ತು ಮಾನಸಿಕವಾಗಿ” ಮೂರನೇ ಮಗುವನ್ನು ಬೆಂಬಲಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕಾಗಿ ಮಹಿಳೆಗೆ ವೈದ್ಯಕೀಯವಾಗಿ ತನ್ನ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ನ್ಯಾಯಾಲಯ ಅನುಮತಿ ನೀಡಿತ್ತು.

ಭ್ರೂಣದ ಹೃದಯವನ್ನು ನಿಲ್ಲಿಸಲು ನಾವು AIIMS ನಲ್ಲಿನ ವೈದ್ಯರಿಗೆ ಹೇಳಲು ನೀವು ಬಯಸುತ್ತೀರಾ?” ಎಂದು ನ್ಯಾಯಾಲಯವು 27 ವರ್ಷದ ಮಹಿಳೆಯ ವಕೀಲರಲ್ಲಿ ಕೇಳಿತ್ತು.. ವಕೀಲರು “ಇಲ್ಲ” ಎಂದು ಪ್ರತಿಕ್ರಿಯಿಸಿದಾಗ , ಮಹಿಳೆ ಇನ್ನೂ ಕೆಲವು ವಾರಗಳವರೆಗೆ ಭ್ರೂಣವನ್ನು ಉಳಿಸಿಕೊಳ್ಳಬಹುದೇ ಎಂದು ಪೀಠ ವಕೀಲರಿಗೆ ಕೇಳಿತು.

ಇದನ್ನೂ ಓದಿ: ಗರ್ಭಪಾತದ ಅರ್ಜಿ: ಎರಡು ಭಿನ್ನ ಆದೇಶ, ಒಮ್ಮತಕ್ಕೆ ಬಾರದ ಸುಪ್ರೀಂನ ದ್ವಿಸದಸ್ಯ ಪೀಠ

ನಾವು ಮಗುವನ್ನು ಕೊಲ್ಲಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯವು ಮಹಿಳೆಗೆ ಈ ಬಗ್ಗೆ ನಿರ್ಧರಿಸಲು 24 ಗಂಟೆಗಳ ಕಾಲಾವಕಾಶ ನೀಡಿದೆ.

ಬಲವಂತದ ಗರ್ಭಧಾರಣೆ ಅಥವಾ ಮಗುವಿಗೆ ಜನ್ಮ ನೀಡುವ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಅಪ್ರಾಪ್ತ ವಯಸ್ಕರಲ್ಲಿ ಭ್ರೂಣವನ್ನು ಅಂತ್ಯಗೊಳಿಸುವ ಆಯ್ಕೆಯನ್ನು ಬಳಸಬಹುದು ಎಂದು ನ್ಯಾಯಾಲಯ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ