Pegasus Case ಪೆಗಾಸಸ್ ಪ್ರಕರಣದ ತನಿಖೆಗೆ ಬಂಗಾಳ ಸರ್ಕಾರ ನೇಮಿಸಿದ ಲೋಕೂರ್ ಆಯೋಗದ ಎಲ್ಲಾ ಪ್ರಕ್ರಿಯೆಗಳಿಗೆ ಸುಪ್ರೀಂಕೋರ್ಟ್ ತಡೆ

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು ಪ್ರಕರಣದ ತನಿಖೆಗಾಗಿ ಸುಪ್ರೀಂಕೋರ್ಟ್ ಸ್ವತಂತ್ರ ಸಮಿತಿಯನ್ನು ರಚಿಸಿರುವಾಗ ಮದನ್ ಬಿ ಲೋಕೂರ್ ನೇತೃತ್ವದಆಯೋಗವು ವಿಚಾರಣೆ ನಡೆಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

Pegasus Case ಪೆಗಾಸಸ್ ಪ್ರಕರಣದ ತನಿಖೆಗೆ ಬಂಗಾಳ ಸರ್ಕಾರ ನೇಮಿಸಿದ ಲೋಕೂರ್ ಆಯೋಗದ ಎಲ್ಲಾ ಪ್ರಕ್ರಿಯೆಗಳಿಗೆ ಸುಪ್ರೀಂಕೋರ್ಟ್ ತಡೆ
ಸುಪ್ರೀಂಕೋರ್ಟ್
Edited By: ರಶ್ಮಿ ಕಲ್ಲಕಟ್ಟ

Updated on: Dec 17, 2021 | 1:36 PM

ದೆಹಲಿ: ಪೆಗಾಸಸ್ ಸ್ಪೈವೇರ್ (Pegasus spyware) ಬಳಸಿ ಗೂಢಚರ್ಯೆ ಮಾಡಿದ ಆರೋಪದ ಬಗ್ಗೆ ತನಿಖೆ ನಡೆಸಲು ಪಶ್ಚಿಮ ಬಂಗಾಳ (West Bengal) ರಚಿಸಿರುವ ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಮದನ್ ಬಿ ಲೋಕೂರ್ (Madan B Lokur) ನೇತೃತ್ವದ ನ್ಯಾಯಾಂಗ ತನಿಖಾ ಆಯೋಗದ ವಿಚಾರಣೆಗೆ ಸುಪ್ರೀಂಕೋರ್ಟ್ (Supreme Court) ಶುಕ್ರವಾರ ತಡೆ ನೀಡಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ  (NV Ramana)ನೇತೃತ್ವದ ಪೀಠವು ಪ್ರಕರಣದ ತನಿಖೆಗಾಗಿ ಸುಪ್ರೀಂಕೋರ್ಟ್ ಸ್ವತಂತ್ರ ಸಮಿತಿಯನ್ನು ರಚಿಸಿರುವಾಗ ಆಯೋಗವು ವಿಚಾರಣೆ ನಡೆಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣವನ್ನು ಕೈಗೆತ್ತಿಕೊಂಡಾಗ ಅರ್ಜಿದಾರ ಎನ್‌ಜಿಒ ಗ್ಲೋಬಲ್ ವಿಲೇಜ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಪರವಾಗಿ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಪಶ್ಚಿಮ ಬಂಗಾಳ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ವಾದಿಸಿದರು.  ಸಿಜೆಐ ರಮಣ ಅವರು ಪಶ್ಚಿಮ ಬಂಗಾಳ ರಾಜ್ಯವನ್ನು ಪ್ರತಿನಿಧಿಸುವ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಅವರನ್ನು ರಾಜ್ಯ ಸರ್ಕಾರವು ಈ ವಿಷಯವನ್ನು ಮುಂದುವರಿಸುವುದಿಲ್ಲ ಎಂದು ಅವರು ನೀಡಿದ ಮೌಖಿಕ ಭರವಸೆ ಏನಾಯಿತು ಎಂದು ಕೇಳಿದರು.  ಸಿಂಘ್ವಿ ಅವರೇ ಏನು ಇದು? ಕಳೆದ ಬಾರಿ ನೀವು ಭರವಸೆ ನೀಡಿದ್ದೀರಿ.  ನಾವು ರೆಕಾರ್ಡ್ ಮಾಡಲು ಬಯಸಿದಾಗ ನೀವು ರೆಕಾರ್ಡ್ ಮಾಡಬೇಡಿ ಎಂದಿದ್ದೀರಿ. ಮತ್ತೆ ನೀವು ವಿಚಾರಣೆ ಆರಂಭಿಸಿದ್ದೀರಾ? ಎಂದು ಸಿಜೆಐ ಸಿಂಘ್ವಿಯನ್ನು ಪ್ರಶ್ನಿಸಿದರು.

ರಾಜ್ಯ ಸರ್ಕಾರ ಆಯೋಗವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಸಿಂಘ್ವಿ ಉತ್ತರಿಸಿದರು.
ನಾನು ಆಯೋಗವನ್ನು ನಿಯಂತ್ರಿಸುವುದಿಲ್ಲ. ನಾನು ಇತಿಮಿತಿಗಳನ್ನು ತಿಳಿಸುತ್ತೇನೆ ಎಂದು ಹೇಳಿದೆ. ಆಯೋಗ ಪ್ರಾರಂಭವಾಯಿತು. ದಯವಿಟ್ಟು ಅವರ ಸಲಹೆಗಾರರನ್ನು ಕರೆ ಮಾಡಿ  ಆದೇಶಗಳನ್ನು ರವಾನಿಸಿ. ರಾಜ್ಯವಾಗಿ, ನಾನು ಆಯೋಗವನ್ನು ತಡೆಯಲು ಸಾಧ್ಯವಿಲ್ಲ” ಎಂದು ಸಿಂಘ್ವಿ ಹೇಳಿದರು.

ರಾಜ್ಯದ ದುಸ್ಥಿತಿ ನಮಗೆ ಅರ್ಥವಾಗಿದೆ. ಎಲ್ಲಾ ಕಕ್ಷಿದಾರರಿಗೆ ನೋಟಿಸ್ ಜಾರಿ ಮಾಡಿ. ನಾವು ವಿಚಾರಣೆಯನ್ನು ಮುಂದುವರಿಸುತ್ತೇವೆ ಎಂದು ಸಿಜೆಐ ಹೇಳಿದರು.

ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿ ಅದರ ವಿಚಾರಣೆಗೆ ತಡೆ ನೀಡಿದೆ. ಪ್ರಕರಣದಲ್ಲಿ ಆಯೋಗದ ಕಾರ್ಯದರ್ಶಿಗೆ ಮನವಿ ಸಲ್ಲಿಸಲು ಪೀಠವು ಅರ್ಜಿದಾರರಿಗೆ ಅನುಮತಿ ನೀಡಿತು.

ಗುರುವಾರ ಅರ್ಜಿದಾರ ಎನ್‌ಜಿಒ “ಗ್ಲೋಬಲ್ ವಿಲೇಜ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್” ಈ ವಿಷಯದ ತುರ್ತು ಪಟ್ಟಿಯನ್ನು ಕೋರಿದ್ದು, ಪೆಗಾಸಸ್ ಆರೋಪಗಳನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ ಸ್ವತಂತ್ರ ತಜ್ಞರ ಸಮಿತಿಯನ್ನು ರಚಿಸಿದಾಗಲೂ ಪಶ್ಚಿಮ ಬಂಗಾಳ ಆಯೋಗವು ತನಿಖೆಯೊಂದಿಗೆ ಮುಂದುವರಿಯುತ್ತಿದೆ ಎಂದು ಹೇಳಿದೆ.

ಸುಪ್ರೀಂಕೋರ್ಟ್ ರಚಿಸಿರುವ ಆಯೋಗಕ್ಕೆ ಸಮಾನಾಂತರವಾಗಿ ಸಮಿತಿ ಕಾರ್ಯನಿರ್ವಹಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಭರವಸೆ ನೀಡಿದೆ ಎಂದು ವಿಷಯ ಪ್ರಸ್ತಾಪಿಸಿದ ವಕೀಲರು ಸೂಚಿಸಿದರು. ಶುಕ್ರವಾರ ಅಥವಾ ಚಳಿಗಾಲದ ವಿರಾಮದ ನಂತರ ತಕ್ಷಣವೇ ಈ ವಿಷಯವನ್ನು ಕೈಗೆತ್ತಿಕೊಳ್ಳುವಂತೆ ವಕೀಲರು ನ್ಯಾಯಾಲಯವನ್ನು ಒತ್ತಾಯಿಸಿದರು.

ಪೆಗಾಸಸ್ ಸ್ಪೈವೇರ್ ಹಗರಣಕ್ಕೆ ಸಂಬಂಧಿಸಿದ ಆರೋಪಗಳನ್ನು ತನಿಖೆ ಮಾಡಲು ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ನೇತೃತ್ವದ ತನಿಖಾ ಆಯೋಗವನ್ನು ರಚಿಸುವ ಪಶ್ಚಿಮ ಬಂಗಾಳ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ತಡೆಹಿಡಿಯಲು ಟ್ರಸ್ಟ್‌ನ ಮನವಿಯನ್ನು ಸುಪ್ರೀಂಕೋರ್ಟ್ ಆಗಸ್ಟ್‌ನಲ್ಲಿ ತಿರಸ್ಕರಿಸಿತ್ತು.

ಆದಾಗ್ಯೂ, ಈ ವಿಷಯವು ನ್ಯಾಯಾಲಯದ ಪರಿಗಣನೆಯಲ್ಲಿರುವಾಗ ಆಯೋಗವು ಕಾರ್ಯನಿರ್ವಹಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ರಾಜ್ಯದ ಪರವಾಗಿ ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಘ್ವಿ ಅವರಿಂದ ಪೀಠವು ಮೌಖಿಕ ವಾಗ್ದಾನ ನೀಡಿತ್ತು.

ಅಕ್ಟೋಬರ್ 27 ರಂದು ಪೆಗಾಸಸ್ ಆರೋಪಗಳ ಬಗ್ಗೆ ತನಿಖೆ ನಡೆಸಲು ಸುಪ್ರೀಂಕೋರ್ಟ್, ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ನೇತೃತ್ವದಲ್ಲಿ ಸ್ವತಂತ್ರ ಸಮಿತಿಯನ್ನು ಕೋರ್ಟ್ ರಚಿಸಿತ್ತು. ಕೇಂದ್ರ ಸರ್ಕಾರವು ಎತ್ತಿರುವ ರಾಷ್ಟ್ರೀಯ ಭದ್ರತೆಯ ಮನವಿಯನ್ನು ತಿರಸ್ಕರಿಸಿದ ಪೀಠವು ಅರ್ಜಿದಾರರು ಪ್ರೈಮಾಫೇಸಿ ಪ್ರಕರಣ ಮಾಡಿದ್ದಾರೆ ಎಂದು ಗಮನಿಸಿದರು.

ಭಾರತ ಸೇರಿದಂತೆ ವಿವಿಧ ಸರ್ಕಾರಗಳಿಗೆ ಎನ್ಎಸ್ಒ ಕಂಪನಿ ನೀಡಿದ ಸ್ಪೈವೇರ್ ಸೇವೆಯ ಸಂಭಾವ್ಯ ಗುರಿಯಾಗಿರುವ ಮೊಬೈಲ್ ಸಂಖ್ಯೆಗಳ ಕುರಿತು ದಿ ವೈರ್ ಮತ್ತು ಹಲವಾರು ಇತರ ಅಂತಾರಾಷ್ಟ್ರೀಯ ಪ್ರಕಟಣೆಗಳು ವರದಿಗಳನ್ನು ಪ್ರಕಟಿಸಿದ ನಂತರ ಪೆಗಾಸಸ್ ವಿವಾದವು ಜುಲೈ 18 ರಂದು ಸ್ಫೋಟಗೊಂಡಿತು. 40 ಭಾರತೀಯ ಪತ್ರಕರ್ತರು, ರಾಜಕೀಯ ನಾಯಕರು ರಾಹುಲ್ ಗಾಂಧಿ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್, ಮಾಜಿ ಇಸಿಐ ಸದಸ್ಯ ಅಶೋಕ್ ಲವಾಸ್ಸಾ ಮುಂತಾದವರು ಗುರಿಗಳ ಪಟ್ಟಿಯಲ್ಲಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.

ಇದನ್ನೂ ಓದಿ: Pegasus Scandal ಪೆಗಾಸಸ್ ತನಿಖೆಗಾಗಿ ನ್ಯಾಯಮೂರ್ತಿ ಮದನ್ ಲೋಕೂರ್ ನೇತೃತ್ವದ ಸಮಿತಿ ರಚಿಸಿದ ಪಶ್ಚಿಮ ಬಂಗಾಳ ಸರ್ಕಾರ

Published On - 1:20 pm, Fri, 17 December 21

TV9 Web

TV9 Kannada

Read More
Follow Us