AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಜ್ರಿವಾಲ್ ನಿವಾಸದಲ್ಲಿ ಸ್ವಾತಿ ಮಲಿವಾಲ್ ಜಗಳದ ವಿಡಿಯೊ ತುಣುಕು ವೈರಲ್;ಆಪ್ ನಾಯಕಿ ಹೇಳಿದ್ದೇನು?

ವಿಡಿಯೊದಲ್ಲಿ ಮಂಚದ ಮೇಲೆ ಕುಳಿತಿರುವ ಮಲಿವಾಲ್ ಅವರನ್ನು ಅಸ್ಪಷ್ಟವಾಗಿ ತೋರಿಸುತ್ತದೆ. ಭದ್ರತಾ ಅಧಿಕಾರಿಗಳು ಅವರಲ್ಲಿ ಅಲ್ಲಿಂದ ಎದ್ದೇಳಿ, ಆವರಣದಿಂದ ಹೊರಹೋಗಿ ಎಂದು ಹೇಳುತ್ತಾರೆ. ಇದಕ್ಕೆ ಮಲಿವಾಲ್ ಕೋಪದಿಂದ, ನಾನು ಹೋಗಲಾರೆ. ನಾನು ಅದನ್ನು ಮಾಡುತ್ತೇನೆ. ಇಂದು ನಾನು ಈ ಜನರಿಗೆ ಎಲ್ಲವನ್ನೂ ಹೇಳುತ್ತೇನೆ ಅಂತಾರೆ.

ಕೇಜ್ರಿವಾಲ್ ನಿವಾಸದಲ್ಲಿ ಸ್ವಾತಿ ಮಲಿವಾಲ್ ಜಗಳದ ವಿಡಿಯೊ ತುಣುಕು ವೈರಲ್;ಆಪ್ ನಾಯಕಿ ಹೇಳಿದ್ದೇನು?
ಸ್ವಾತಿ ಮಲಿವಾಲ್
Follow us
ರಶ್ಮಿ ಕಲ್ಲಕಟ್ಟ
|

Updated on: May 17, 2024 | 5:05 PM

ದೆಹಲಿ ಮೇ 17: ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಸಹಾಯಕ ಬಿಭವ್ ಕುಮಾರ್ (Bibhav Kumar) ಅವರು ನಗರದ ಸಿವಿಲ್ ಲೈನ್ಸ್‌ನಲ್ಲಿರುವ ದೆಹಲಿ ಮುಖ್ಯಮಂತ್ರಿಯ ಮನೆಯೊಳಗೆ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಎಎಪಿ ನಾಯಕಿ ಸ್ವಾತಿ ಮಲಿವಾಲ್ (Swati Maliwal) ಶುಕ್ರವಾರ ಮಧ್ಯಾಹ್ನ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ 52 ಸೆಕೆಂಡುಗಳ ವಿಡಿಯೊಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೊದಲ್ಲಿ ಆಕೆಯನ್ನು ಅಸ್ಪಷ್ಟವಾಗಿ ಕಾಣಬಹುದು. ಈಕೆ ಕಟ್ಟಡದಿಂದ ಹೊರಹೋಗುವಂತೆ ಹೇಳಿದ ಭದ್ರತಾ ಅಧಿಕಾರಿಗಳೊಂದಿಗೆ ವಾದ ಮಾಡಿ ಬೈದಾಡುತ್ತಿರುವುದನ್ನೂ ಕಾಣಬಹುದು. ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಮಲಿವಾಲ್ ಅವರು “ಪೊಲಿಟಿಕಲ್ ಹಿಟ್‌ಮ್ಯಾನ್” ಎಂದು ಉಲ್ಲೇಖಿಸಿದ್ದಾರೆ. ಇದು ಕೇಜ್ರಿವಾಲ್ ಎಂದು ಹಲವರು ಊಹಿಸಿದ್ದಾರೆ. ಪಕ್ಷವನ್ನು ರಕ್ಷಿಸಲು ಮತ್ತು “ಈ ಅಪರಾಧವನ್ನು ಮಾಡಿದ ನಂತರ ತನ್ನನ್ನು ಉಳಿಸಿಕೊಳ್ಳಲು” ಒಂದು ನಿರೂಪಣೆಯನ್ನು ನಿರ್ಮಿಸಲು “ಹಿಟ್‌ಮ್ಯಾನ್” ಈ ವಿಡಿಯೊವನ್ನು ಹಂಚಿಕೊಳ್ಳಲು “ತನ್ನ ಜನರಿಗೆ” ನಿರ್ದೇಶಿಸಿದ್ದಾರೆ ಎಂದು ಹೇಳಿದ್ದಾರೆ.

“ಪ್ರತಿ ಬಾರಿಯಂತೆ ಈ ರಾಜಕೀಯ ಹಿಟ್‌ಮ್ಯಾನ್ ತನ್ನನ್ನು ತಾನು ಉಳಿಸಿಕೊಳ್ಳಲು ಪ್ರಯತ್ನಗಳನ್ನು ಪ್ರಾರಂಭಿಸಿದ್ದಾರೆ. ತನ್ನ ಜನರಲ್ಲಿ ಟ್ವೀಟ್ ಮಾಡಲು ಮತ್ತು ವಿಡಿಯೊಗಳನ್ನು ಪ್ಲೇ ಮಾಡುವಂತೆ ಮಾಡುವ ಮೂಲಕ, ಈ ಅಪರಾಧವನ್ನು ಮಾಡಿದ ನಂತರ ತನ್ನನ್ನು ತಾನು ಉಳಿಸಿಕೊಳ್ಳಬಹುದು ಎಂದು ಅವರು ಭಾವಿಸಿದ್ದಾರೆ. ಯಾರನ್ನಾದರೂ ಥಳಿಸುತ್ತಿರುವ ವಿಡಿಯೊ ಮಾಡುವವರು ಯಾರು? ಮನೆ ಮತ್ತು ಕೊಠಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸತ್ಯಾಂಶ ಬಹಿರಂಗಗೊಳ್ಳಲಿದೆ ಎಂದು ಮಲಿವಾಲ್ ಹೇಳಿದ್ದಾರೆ.

ಸ್ವಾತಿ ಮಲಿವಾಲ್ ಟ್ವೀಟ್

ಯಾವ ಮಟ್ಟಕ್ಕೆ ಬೇಕಾದರೂ ಇಳಿಯಿರಿ, ದೇವರು ನೋಡುತ್ತಿದ್ದಾನೆ. ಒಂದಲ್ಲ ಒಂದು ದಿನ ಸತ್ಯ ಬಯಲಾಗುತ್ತದೆ ಎಂದು ಮಲಿವಾಲ್ ಹೇಳಿದ್ದಾರೆ.

ವಿಡಿಯೊದಲ್ಲೇನಿದೆ?

ವಿಡಿಯೊದಲ್ಲಿ ಮಂಚದ ಮೇಲೆ ಕುಳಿತಿರುವ ಮಲಿವಾಲ್ ಅವರನ್ನು ಅಸ್ಪಷ್ಟವಾಗಿ ತೋರಿಸುತ್ತದೆ. ಭದ್ರತಾ ಅಧಿಕಾರಿಗಳು ಅವರಲ್ಲಿ ಅಲ್ಲಿಂದ ಎದ್ದೇಳಿ, ಆವರಣದಿಂದ ಹೊರಹೋಗಿ ಎಂದು ಹೇಳುತ್ತಾರೆ. ಇದಕ್ಕೆ ಮಲಿವಾಲ್ ಕೋಪದಿಂದ, ನಾನು ಹೋಗಲಾರೆ. ನಾನು ಅದನ್ನು ಮಾಡುತ್ತೇನೆ. ಇಂದು ನಾನು ಈ ಜನರಿಗೆ ಎಲ್ಲವನ್ನೂ ಹೇಳುತ್ತೇನೆ ಅಂತಾರೆ.

ಒಬ್ಬ ಗಾರ್ಡ್ “ಹೌದು, ನೀವು ಮಾಡಿ, ಅದು ನಿಮ್ಮ ತಲೆನೋವು…” ಎಂದು ಪ್ರತಿಕ್ರಿಯಿಸುತ್ತಾರೆ. ಆಗ ಮಲಿವಾಲ್, ನೀವು ಇದೀಗ ನನಗೆ  ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (DCP) ಜೊತೆ ಮಾತನಾಡಲು ಅವಕಾಶ ನೀಡಿ ಎಂದು ಹೇಳುತ್ತಾರೆ. “ಹೌದು… ನಾವು ತಕ್ಷಣ ಡಿಸಿಪಿಗೆ ತಿಳಿಸುತ್ತೇವೆ. ಅಲ್ಲಿಯವರೆಗೆ ನೀವು ನಮ್ಮೊಂದಿಗೆ ಬನ್ನಿ” ಎಂದು ಗಾರ್ಡ್ ಹೇಳುತ್ತಾನೆ.

ಕೇಜ್ರಿವಾಲ್ ವಾಸಿಸುವ ಪ್ರದೇಶದ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ತಾನು ಪೊಲೀಸರಿಗೆ ದೂರು ನೀಡುವುದಾಗಿ ಮಲಿವಾಲ್ ಹೇಳುತ್ತಾರೆ. “ಅದು ಇಲ್ಲಿ ಆಗುವುದಿಲ್ಲ… ನೀವು ದಯವಿಟ್ಟು ನಮ್ಮೊಂದಿಗೆ ಬನ್ನಿ” ಎಂದು ಗಾರ್ಡ್ ಮತ್ತೆ ಹೇಳುತ್ತಾನೆ. ಅದಕ್ಕೆ ಮಲಿವಾಲ್ “ಇಲ್ಲ. ಈಗ ಇಲ್ಲಿ ಅದು ಆಗಬೇಕು” ಎಂದು ಖಡಾಖಂಡಿತವಾಗಿ ಹೇಳುತ್ತಾರೆ.

“ಇದು ಇಲ್ಲಿ ಈಗ ಆಗಲೇ ಬೇಕು. ನೀವು ನನ್ನನ್ನು ಮುಟ್ಟಿದರೆ ನಿಮ್ಮ ಕೆಲಸ ಕಳೆದುಕೊಳ್ಳುತ್ತೀರಿ ಎಂದು ಮಲಿವಾಲ್ ಹೇಳಿದ್ದಾರೆ. ಈ ಸಮಯದಲ್ಲಿ ವಿಡಿಯೊ ನೆಲವನ್ನು ತೋರಿಸುತ್ತಿದ್ದು ಅಧಿಕಾರಿ ನಂತರ ಮಲಿವಾಲ್ ಅವರನ್ನು ತೋರಿಸುತ್ತದೆ. ಆಕೆ ಗುಲಾಬಿ ಬಣ್ಣದ ಟಾಪ್ ಧರಿಸಿದ್ದು ಮಂಚದ ಮೇಲೆ ಕುಳಿತಿರುವುದು ಕಾಣುತ್ತದೆ. ನಾವು ದಯವಿಟ್ಟು ಇಲ್ಲಿಂದ ಹೋಗಿ ಎಂದು ಎಂದು ಭದ್ರತಾ ಸಿಬ್ಬಂದಿ ಹೇಳುತ್ತಿರುವುದು ವಿಡಿಯೊದಲ್ಲಿದೆ.

ಈ ಹಂತದಲ್ಲಿ ಮಲಿವಾಲ್ ಅವರು ಪೊಲೀಸರಿಗೆ ತುರ್ತು ಕರೆ ಮಾಡಿರುವುದಾಗಿ ಹೇಳಿದ್ದು, “ಪೊಲೀಸರು ಬರಲಿ…” ಎಂದು ಮತ್ತೆ ಸಿಬ್ಬಂದಿಯೊಂದಿಗೆ ವಾದಿಸಿದ್ದಾರೆ.

ಸೋಮವಾರ ದೆಹಲಿ ಪೊಲೀಸರು ಮಲಿವಾಲ್ ನೀಡಿದ ಹೇಳಿಕೆಯ ಆಧಾರದ ಮೇಲೆ ಬಿಭವ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೇಜ್ರಿವಾಲ್ ಅವರ ನಿವಾಸದಿಂದ ಎರಡು ಕರೆಗಳು ಬಂದಿವೆ ಎಂದು ಹೇಳಿದರು. ಫೋನ್ ಸಂಖ್ಯೆಯನ್ನು ಮಲಿವಾಲ್ ಅವರುಹೆಸರಿನಿಂದ ನೋಂದಾಯಿಸಲಾಗಿದೆ ಆದರೆ ಕರೆ ಮಾಡಿದವರು ತಮ್ಮನ್ನು ಗುರುತಿಸಲಿಲ್ಲ ಎಂದು ಪೊಲೀಸರು ಹೇಳಿದರು. ವಿಡಿಯೊದ ಕೊನೆಯ ಸೆಕೆಂಡ್‌ಗಳಲ್ಲಿ ಮಲಿವಾಲ್, ಆಕೆಯ ಹೇಳಿಕೆಯನ್ನು ದಾಖಲಿಸಲು ಆಕೆಯ ನಿವಾಸದಲ್ಲಿ ಪೊಲೀಸ್ ತಂಡವನ್ನು ಭೇಟಿಯಾದಾಗ ಧೈರ್ಯವಿದ್ದರೆ ನನ್ನನ್ನು ಹೊರಹಾಕಿ ಎಂದು ಗಾರ್ಡ್ ಗಳಿಗೆ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: Swati Maliwal assault case: 7-8 ಬಾರಿ ಕಪಾಳಮೋಕ್ಷ, ಎದೆ, ಹೊಟ್ಟೆಗೆ ಒದೆದಿದ್ದಾನೆ ಬಿಭವ್ ಕುಮಾರ್: ಎಫ್‌ಐಆರ್‌ನಲ್ಲಿ ಸ್ವಾತಿ ಮಲಿವಾಲ್

ಅವಳು ಒಬ್ಬ ಅಧಿಕಾರಿಗೆ ಶಾಪ ಹಾಕುತ್ತಿದ್ದಾಗ “ಮೇಡಂ, ನೀವು ಈ ರೀತಿ ಮಾತನಾಡಬಾರದು ಎಂದು ಗಾರ್ಡ್ ಪ್ರತಿಕ್ರಿಯಿಸುತ್ತಾನೆ, ಅದಕ್ಕೆ ಮಲಿವಾಲ್, ಓಹೋ, ನಿಮ್ಮ ಬಳಿ ಸಿಸಿಟಿವಿ ಕ್ಯಾಮೆರಾ ಇರುವುದರಿಂದಲೇ ಎಂದು ಪ್ರತಿಕ್ರಿಯಿಸಿದ್ದು ಇಲ್ಲಿ ವಿಡಿಯೊ ಕೊನೆಗೊಳ್ಳುತ್ತದೆ. ಆದಾಗ್ಯೂ, ಈ ವಿಡಿಯೊ ಮತ್ತು ಮಲಿವಾಲ್ ಅವರ ಟ್ವೀಟ್ ಗೆ ಎಎಪಿ ಇನ್ನೂ ಪ್ರತಿಕ್ರಿಯಿಸಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಉಡುಪಿ: ಬೈಕ್​ಗೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ವಿಡಿಯೋ ವೈರಲ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಸೋಪಿಗೆ ತಮನ್ನಾ ಭಾಟಿಯಾ ಏಕೆ ಬೇಡ, ಸ್ಪಷ್ಟ ಕಾರಣ ನೀಡಿದ ಸಂಸದ ಯದುವೀರ್
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ಆಡ್ತೀನಿ, ಆಡಲ್ಲ.. ಯಾವುದನ್ನು ಖಚಿತವಾಗಿ ಹೇಳಲಾರೆ ಎಂದ ಧೋನಿ
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ತಮ್ಮ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ರೂ. ಸಹಾಯ ಮಾಡಿದ ಸಚಿವ ಜಮೀರ್
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಸುದೀಪ್ ಕೈಗೆ ಗಾಯ, ಕಿಚ್ಚನ ಕೈಗೆ ಏನಾಯ್ತು? ಅಭಿಮಾನಿಗಳ ಪ್ರಶ್ನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್​: ಬದಲಿ ಮಾರ್ಗ ಸೂಚನೆ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆದ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಚಿಕ್ಕಮಗಳೂರಿನಲ್ಲಿ ಮಳೆಗೆ ಸಾಲು ಸಾಲು ಅವಾಂತರ:ನದಿಗೆ ಬಿದ್ದ 2 ಕಾರುಗಳು
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಕೂದಲು ಹಿಡಿದು ತಾಯಿಯನ್ನು ಮನಬಂದಂತೆ ಥಳಿಸಿದ ಸಾಕು ಮಗ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ
ಮಡೆನೂರು ಮನು ವಿವಾದದಲ್ಲಿ ಅಪ್ಪಣ್ಣ ಹೆಸರು ಕೇಳಿಬಂದಿದ್ದಕ್ಕೆ ನಟನ ಸ್ಪಷ್ಟನೆ