ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್​ ಮನೋಜ್ ಸಿನ್ಹಾರ ಮರಿಮೊಮ್ಮಗ ಆತ್ಮಹತ್ಯೆ, ಆತ್ಮದ ಕಾಟ?

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಮರಿ ಮೊಮ್ಮಗ ಆರವ್ ಸಿನ್ಹಾ ಕಾನ್ಪುರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆರವ್​ಗೆ 16 ವರ್ಷ ವಯಸ್ಸಾಗಿತ್ತು. ಈ ಆಘಾತಕಾರಿ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ವಶಕ್ಕೆ ಪಡೆದರು. ಆರವ್ ರಾಜ್ಯ ಮಟ್ಟದ ಈಜುಗಾರನಾಗಿದ್ದ. ಮೃತನ ಜೇಬಿನಲ್ಲಿ ಪೊಲೀಸರು ಸಣ್ಣ ಪತ್ರವೊಂದು ಸಿಕ್ಕಿದ್ದು, ಪ್ರಕರಣದ ಸುತ್ತಲಿನ ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್​ ಮನೋಜ್ ಸಿನ್ಹಾರ ಮರಿಮೊಮ್ಮಗ ಆತ್ಮಹತ್ಯೆ, ಆತ್ಮದ ಕಾಟ?
ಸಾಂದರ್ಭಿಕ ಚಿತ್ರ

Updated on: Oct 29, 2025 | 10:27 AM

ಕಾನ್ಪುರ, ಅಕ್ಟೋಬರ್ 29: ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಮರಿ ಮೊಮ್ಮಗ ಆರವ್ ಸಿನ್ಹಾ ಕಾನ್ಪುರದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆರವ್​ಗೆ 16 ವರ್ಷ ವಯಸ್ಸಾಗಿತ್ತು. ಈ ಆಘಾತಕಾರಿ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ವಶಕ್ಕೆ ಪಡೆದರು. ಆರವ್ ರಾಜ್ಯ ಮಟ್ಟದ ಈಜುಗಾರನಾಗಿದ್ದ. ಮೃತನ ಜೇಬಿನಲ್ಲಿ ಪೊಲೀಸರು ಸಣ್ಣ ಪತ್ರವೊಂದು ಸಿಕ್ಕಿದ್ದು, ಪ್ರಕರಣದ ಸುತ್ತಲಿನ ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಕುಟುಂಬದವರು ಆರವ್ ಮೊಬೈಲ್ ಫೋನ್ ಪರಿಶೀಲಿಸಿದಾಗ, ಆತನ ನೋಟ್‌ಪ್ಯಾಡ್‌ನಲ್ಲಿ ಇಂಗ್ಲಿಷ್‌ನಲ್ಲಿ ಬರೆದಿದ್ದ ದೀರ್ಘ ಸಂದೇಶ ಕಂಡುಬಂದಿದೆ. ಅದರಲ್ಲಿ ಆರವ್ ಸ್ವಲ್ಪ ಸಮಯದಿಂದ ತೊಂದರೆಗೊಳಗಾಗಿದ್ದಾನೆ ಎಂದು ಬರೆಯಲಾಗಿತ್ತು. ಕನಸಿನಲ್ಲಿ ನಾಲ್ಕು ಜನರ ಆತ್ಮ ಬಂದು ತೊಂದರೆ ಕೊಡುತ್ತಿತ್ತು.

ತನ್ನ ಕುಟುಂಬಕ್ಕೆ ಹಾನಿ ಮಾಡಲು ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿತ್ತು ಎಂದು ಆತ ಬರೆದಿದ್ದಾನೆ. ಘಟನೆ ನಡೆದ ಸಮಯದಲ್ಲಿ, ಆರವ್ ಮನೆಯಲ್ಲಿ ಒಬ್ಬಂಟಿಯಾಗಿದ್ದ.
ಅವನ ಪೋಷಕರು ಮತ್ತು ಸಹೋದರಿ ಛತ್ ಪೂಜೆಗೆ ಭಾಗಲ್ಪುರಕ್ಕೆ ಹೋಗಿದ್ದರು.ಆರವ್‌ನ ಸಹೋದರಿ ಮನೆಗೆ ಹಿಂತಿರುಗಿದಾಗ, ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿದ್ದಳು.

ಮತ್ತಷ್ಟು ಓದಿ: ಹಲೋ ಎಲ್ಲಾ ಕೇಳಿಸ್ಕೊಳ್ಳಿ: ವಿಡಿಯೋ ಮಾಡಿಟ್ಟು ನವ ವಿವಾಹಿತ ಆತ್ಮಹತ್ಯೆ, ಹೆಂಡ್ತಿ ವಿರುದ್ಧ ಗಂಭೀರ ಆರೋಪ

ಕೂಡಲೇ ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಪೊಲೀಸರು ಆತನ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ ಮತ್ತು ವಿಧಿವಿಜ್ಞಾನ ತಂಡ ತನಿಖೆ ನಡೆಸುತ್ತಿದೆ.

ಅವರ ಆತ್ಮಹತ್ಯೆಯ ಹಿಂದಿನ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸಲು ಅವರ ಕುಟುಂಬ ಸದಸ್ಯರನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ. ಆರವ್ ಒಬ್ಬ ಅತ್ಯುತ್ತಮ ರಾಜ್ಯ ಮಟ್ಟದ ಈಜುಗಾರ ಎಂಬುದು ತಿಳಿದುಬಂದಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:27 am, Wed, 29 October 25