AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Temple 360 ವೆಬ್​ಸೈಟ್ ಲೋಕಾರ್ಪಣೆಗೊಳಿಸಿದ ಕೇಂದ್ರ ಸರ್ಕಾರ; ಏನಿದರ ವೈಶಿಷ್ಟ್ಯತೆ? ಇಲ್ಲಿದೆ ಮಾಹಿತಿ

ಸದ್ಯ ಟೆಂಪಲ್​ 360 ಪೋರ್ಟಲ್​ನಲ್ಲಿ ಗುಜರಾತ್​ನ ಸೋಮನಾಥ ದೇಗುಲ, ಕಾಶಿ ವಿಶ್ವನಾಥ ದೇವಾಲಯ, ಮಹಾರಾಷ್ಟ್ರದ ತೃಯಂಬೇಕಶ್ವರ ಮತ್ತು ಘೃಷ್ಣೇಶ್ವರ ಮಂದಿರಗಳ ದೇವರ ದರ್ಶನ ಪಡೆಯಬಹುದಾಗಿದೆ.

Temple 360 ವೆಬ್​ಸೈಟ್ ಲೋಕಾರ್ಪಣೆಗೊಳಿಸಿದ ಕೇಂದ್ರ ಸರ್ಕಾರ; ಏನಿದರ ವೈಶಿಷ್ಟ್ಯತೆ? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Apr 06, 2022 | 6:51 PM

Share

ಯುಗಾದಿಯಂದು ಕೇಂದ್ರ ಸರ್ಕಾರ ‘Temple 360’ ಎಂಬ ಒಂದು ಪೋರ್ಟಲ್​​ನ್ನು (ವೆಬ್​ಸೈಟ್​) ಹೊರತಂದಿದೆ. ಅಂದು ಕೇಂದ್ರ ಸಂಸ್ಕೃತಿ, ವಿದೇಶಾಂಗ ಇಲಾಖೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಈ ಪೋರ್ಟಲ್​ನ್ನು ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ (IGNCA)ದಲ್ಲಿ ಉದ್ಘಾಟಿಸಿದ್ದಾರೆ. ಈ ಬಾರಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ತ ಕೇಂದ್ರ ಸರ್ಕಾರ ಆಜಾದಿ ಕಾ ಅಮೃತಮಹೋತ್ಸವ ಎಂಬ ವಿಶೇಷ ಅಭಿಯಾನ ಹಮ್ಮಿಕೊಂಡಿದೆ. ಇದರಡಿಯಲ್ಲಿ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಹಾಗೇ, ಈ ಟೆಂಪಲ್​ 360 ಕೂಡ ಹೊರಬಂದಿದೆ. ಇದರ ಮೂಲಕ ದೇಶಾದ್ಯಂತ ಇರುವ ಪವಿತ್ರ ಯಾತ್ರಾಸ್ಥಳಗಳು, ಪ್ರಮುಖ ದೇವಾಲಯಗಳನ್ನು ಭಕ್ತರು ತಾವಿದ್ದ ಸ್ಥಳದಿಂದಲೇ ಆನ್​ಲೈನ್​ ಮೂಲಕ ವೀಕ್ಷಿಸಬಹುದು. ಅಂದರೆ ದೇಗುಲಗಳಲ್ಲಿರುವ ದೇವರ ದರ್ಶನವನ್ನು ಈ ಪೋರ್ಟಲ್​​ನಲ್ಲಿ ಲೈವ್​ ಆಗಿ ಪಡೆಯಬಹುದು. ಇದರಲ್ಲಿ 12 ಜ್ಯೋತಿರ್ಲಿಂಗ​ ಸೇರಿ ಇನ್ನೂ ಹಲವು ಪ್ರಮುಖ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆಯಬಹುದಾಗಿದೆ.

ಸದ್ಯ ಟೆಂಪಲ್​ 360 ಪೋರ್ಟಲ್​ನಲ್ಲಿ ಗುಜರಾತ್​ನ ಸೋಮನಾಥ ದೇಗುಲ, ಕಾಶಿ ವಿಶ್ವನಾಥ ದೇವಾಲಯ, ಮಹಾರಾಷ್ಟ್ರದ ತೃಯಂಬೇಕಶ್ವರ ಮತ್ತು ಘೃಷ್ಣೇಶ್ವರ ಮಂದಿರಗಳ ದೇವರ ದರ್ಶನ ಪಡೆಯಬಹುದಾಗಿದೆ. ಪೂಜೆ, ಮಹಾಮಂಗಳಾರತಿ ಸೇರಿ ಇನ್ನಿತರ ಸೇವೆಗಳನ್ನೆಲ್ಲ ಲೈವ್​ನಲ್ಲಿಯೇ ಭಕ್ತರು ನೋಡಬಹುದಾಗಿದೆ. ಶೀಘ್ರದಲ್ಲಿಯೇ 12 ಜ್ಯೋತಿರ್ಲಿಂಗ ದರ್ಶನ ಮತ್ತು ಗುಜರಾತ್​ನ ದ್ವಾರಕಾ, ಉತ್ತರಾಖಂಡ್​ನ ಬದರಿನಾಥ, ಓಡಿಶಾದ ಪುರಿ ದೇಗುಲ ಮತ್ತು ತಮಿಳುನಾಡಿನ ರಾಮೇಶ್ವರಂ ದೇವಸ್ಥಾನಗಳ ಧಾರ್ಮಿಕ ಆಚರಣೆಗಳ ಲೈವ್​ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಕೇಂದ್ರ ಸಚಿವಾಲಯ ತಿಳಿಸಿದೆ.

ಈ ವೆಬ್​ಸೈಟ್ ಮೂಲಕ ಜನರು ಅಧ್ಯಾತ್ಮ ಪ್ರವಾಸ ಕೈಗೊಳ್ಳಬಹುದು. ಅಂದರೆ ದೇಶದ ಪ್ರಮುಖ ದೇಗುಲಗಳು, ಯಾತ್ರಾ ಸ್ಥಳಗಳ ದರ್ಶನವನ್ನು ಪ್ರಸ್ತುತ ಪೋರ್ಟಲ್​​ ಮೂಲಕ ಪಡೆಯಬಹುದು. ಅಲ್ಲಿ ನಡೆಯುವ ಧಾರ್ಮಿಕ ಆಚರಣೆಗಳು, ಪೂಜೆ, ಸೇವೆಯನ್ನು ಲೈವ್ ಆಗಿ ವೀಕ್ಷಿಸಬಹುದು. ಅಷ್ಟೇ ಅಲ್ಲ, ತಾವಿದ್ದಾ ಜಾಗದಿಂದಲೇ ಸೇವೆಯನ್ನೂ ಮಾಡಬಹುದು. ಇದಕ್ಕಾಗಿ ವೆಬ್​ಸೈಟ್​ನಲ್ಲಿ ಇನ್ನಷ್ಟು ವೈಶಿಷ್ಟ್ಯಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಅಲಿಗಢ, ಬದೌನ್ ಮತ್ತು ಸುಲ್ತಾನ್‌ಪುರ ಸೇರಿದಂತೆ ಉತ್ತರ ಪ್ರದೇಶದ 12 ಜಿಲ್ಲೆಗಳ ಹೆಸರು ಬದಲಾಯಿಸಲಿದೆ ಯೋಗಿ ಸರ್ಕಾರ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ