IT Raid: ನಾವು ತಪ್ಪು ಮಾಡಿಲ್ಲ ಎನ್ನುವ ವಿಶ್ವಾಸವಿದೆ, ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ : CPR

ನಾವು ತಪ್ಪು ಮಾಡಿಲ್ಲ ಎನ್ನುವ ವಿಶ್ವಾಸವಿದೆ ಇದೆ ಎಂದು ಸೆಂಟರ್ ಫಾರ್ ಪಾಲಿಸಿ ರಿಸರ್ಚ್​ ತಿಳಿಸಿದೆ. ಕೆಲವು ಮಾನದಂಡಗಳಿವೆ ಅವುಗಳನ್ನು ಪಾಲಿಸುತ್ತಿದ್ದೇವೆ ಅಷ್ಟೇ, ನಾವು ಯಾವುದೇ ತಪ್ಪು ಮಾಡಿಲ್ಲ ಎನ್ನುವ ವಿಶ್ವಾಸವಿದೆ

IT Raid: ನಾವು ತಪ್ಪು ಮಾಡಿಲ್ಲ ಎನ್ನುವ ವಿಶ್ವಾಸವಿದೆ, ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ : CPR
CPR
Edited By:

Updated on: Sep 09, 2022 | 6:04 PM

ನಾವು ತಪ್ಪು ಮಾಡಿಲ್ಲ ಎನ್ನುವ ವಿಶ್ವಾಸವಿದೆ ಇದೆ ಎಂದು ಸೆಂಟರ್ ಫಾರ್ ಪಾಲಿಸಿ ರಿಸರ್ಚ್​ ತಿಳಿಸಿದೆ. ಕೆಲವು ಮಾನದಂಡಗಳಿವೆ ಅವುಗಳನ್ನು ಪಾಲಿಸುತ್ತಿದ್ದೇವೆ ಅಷ್ಟೇ, ನಾವು ಯಾವುದೇ ತಪ್ಪು ಮಾಡಿಲ್ಲ ಎನ್ನುವ ವಿಶ್ವಾಸವಿದೆ. ಅವರು ಕೇಳುವ ಯಾವುದೇ ಪ್ರಶ್ನೆಗಳಿಗೆ ನಾವು ಉತ್ತರ ನೀಡಲು ಸಿದ್ಧರಿದ್ದೇವೆ, ಎಂದು ಸಿಪಿಆರ್ ಅಧ್ಯಕ್ಷೆ ಯಾಮಿನಿ ಅಯ್ಯರ್ ಟ್ವೀಟ್ ಮಾಡಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿತ್ತು, ಈ ಕುರಿತು ಇದೀಗ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ. ಆದಾಯ ತೆರಿಗೆ ಇಲಾಖೆ ಬುಧವಾರ ದೇಶಾದ್ಯಂತ ಎರಡು ಡಜನ್‌ಗೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ.

ಆದಾಯ ತೆರಿಗೆ ಇಲಾಖೆ ತಂಡವು ನೀತಿ ಸಂಶೋಧನಾ ಕೇಂದ್ರದ ಚಿಂತಕರ ಚಾಣಕ್ಯಪುರಿ ಕಚೇರಿಗೂ ತಲುಪಿದೆ. ತಂಡ ಇಲ್ಲಿ ಹುಡುಕಾಟ ನಡೆಸಿದೆ. ಮೂಲಗಳನ್ನು ನಂಬುವುದಾದರೆ, ಈ ದಾಳಿಯು ರಾಜಕೀಯ ಪಕ್ಷಗಳಿಗೆ ದೇಣಿಗೆ ಸಂಗ್ರಹಿಸಿದವರಿಗೆ ಸಂಬಂಧಿಸಿದೆ. ತೆರಿಗೆ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಆದಾಗ್ಯೂ, ದಾಳಿಗಳ ಬಗ್ಗೆ ನೀತಿ ಸಂಶೋಧನಾ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜಕೀಯ ಪಕ್ಷಗಳಿಗೆ ದೇಣಿಗೆಯ ನೆಪದಲ್ಲಿ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎನ್ನುತ್ತವೆ ಮೂಲಗಳು.

ಇದು ಮೂಲತಃ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಹೆಸರಿನಲ್ಲಿ ಮಾಡಿರುವ ವಂಚನೆ ಮತ್ತು ತೆರಿಗೆ ವಂಚನೆ ಎಂದು ಮೂಲಗಳು ತಿಳಿಸಿವೆ. ದೆಹಲಿ, ಹರಿಯಾಣ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ ಸೇರಿದಂತೆ ಇತರ ರಾಜ್ಯಗಳಲ್ಲಿ ಈ ದಾಳಿಗಳನ್ನು ನಡೆಸಲಾಯಿತು.

 

 

Loading...
Unable to load recommendations.
Follow Us