AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಧಿಯನ್ನು ಕೊಂದವರೇ ನನ್ನ ಮೇಲೆ ದಾಳಿ ನಡೆಸಿದ್ದಾರೆ; ಅಸಾದುದ್ದೀನ್ ಓವೈಸಿ ಆರೋಪ

ಉತ್ತರ ಪ್ರದೇಶದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅಸಾದುದ್ದೀನ್ ಓವೈಸಿ, ನನ್ನ ಮೇಲೆ ದಾಳಿ ಮಾಡಿದವರೇ ಗಾಂಧಿಯನ್ನು ಕೊಂದವರು ಎಂದಿದ್ದಾರೆ.

ಗಾಂಧಿಯನ್ನು ಕೊಂದವರೇ ನನ್ನ ಮೇಲೆ ದಾಳಿ ನಡೆಸಿದ್ದಾರೆ; ಅಸಾದುದ್ದೀನ್ ಓವೈಸಿ ಆರೋಪ
ಅಸಾದುದ್ದೀನ್ ಓವೈಸಿ
TV9 Web
| Updated By: ಸುಷ್ಮಾ ಚಕ್ರೆ|

Updated on: Feb 05, 2022 | 6:10 PM

Share

ಮೀರತ್: ಗಾಂಧಿಯನ್ನು ಕೊಂದವರೇ ಮೀರತ್‌ನಲ್ಲಿ ನನ್ನ ಮೇಲೆ ದಾಳಿ ಮಾಡಿದ್ದಾರೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಆರೋಪಿಸಿದ್ದಾರೆ. ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ಛಪ್ರೌಲಿ ಪಟ್ಟಣದಲ್ಲಿ ಇಂದು ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಓವೈಸಿ ಈ ಹೇಳಿಕೆ ನೀಡಿದ್ದಾರೆ. ಫೆಬ್ರವರಿ 3ರಂದು ಅಸಾದುದ್ದೀನ್ ಓವೈಸಿ ಮೇಲೆ ದಾಳಿ ನಡೆದ ನಂತರ ಇದು ಅವರ ಮೊದಲ ರ್ಯಾಲಿಯಾಗಿದೆ. ಛಪ್ರೌಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಓವೈಸಿ, ನನ್ನ ಮೇಲೆ ದಾಳಿ ಮಾಡಿದವರೇ ಗಾಂಧಿಯನ್ನು ಕೊಂದವರು ಎಂದಿದ್ದಾರೆ. ಓವೈಸಿ ವಿರುದ್ಧದ ದಾಳಿಯಲ್ಲಿ ಬಂಧಿತರಾದ ಇಬ್ಬರು ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ವರದಿಗಳು ಪ್ರಕಟವಾದ ಬೆನ್ನಲ್ಲೇ ಓವೈಸಿ ಈ ಹೇಳಿಕೆಯನ್ನು ನೀಡಿರುವುದು ಬಹಳ ಮುಖ್ಯವಾಗಿದೆ.

ಅವರು ನನ್ನ ಮೇಲೆ 4 ಗುಂಡುಗಳನ್ನು ಹಾರಿಸಿದರು. ಆದರೆ, ಅಲ್ಲಾ ಯಾರನ್ನಾದರೂ ಉಳಿಸಲು ನಿರ್ಧರಿಸಿದರೆ ಅವರನ್ನು ಯಾರಿಗೂ ಕೊಲ್ಲಲು ಸಾಧ್ಯವಿಲ್ಲ. ಅಲ್ಲಾನಿಂದಾಗಿ ನಾನು ಈ ಜಗತ್ತಿನಲ್ಲಿ ಬದುಕಿದ್ದೇನೆ ಎಂದು ಓವೈಸಿ ಹೇಳಿದ್ದಾರೆ.

ಅಸಾದುದ್ದೀನ್ ಓವೈಸಿ ಅವರು ಲೋನಿ, ಛಪ್ರೌಲಿ ಮತ್ತು ಗಢಮುಕ್ತೇಶ್ವರದಲ್ಲಿ ಮೂರು ರ್ಯಾಲಿಗಳಲ್ಲಿ ಭಾಗವಹಿಸಬೇಕಾಗಿತ್ತು. ಆದರೆ, ಸ್ಥಳೀಯ ಆಡಳಿತದಿಂದ ಹೆಲಿಕಾಪ್ಟರ್ ಲ್ಯಾಂಡಿಂಗ್​ಗೆ ಅನುಮತಿಯನ್ನು ನೀಡದ ಹಿನ್ನೆಲೆಯಲ್ಲಿ ಅವರು ಛಪ್ರೌಲಿಯಲ್ಲಿ ಕೇವಲ ಒಂದು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. ಮೀರತ್‌ನಲ್ಲಿ ಇತ್ತೀಚಿನ ಘಟನೆಗಳ ನಂತರ ಉತ್ತರ ಪ್ರದೇಶ ಪೊಲೀಸರು ಹೆಚ್ಚುವರಿ ಭದ್ರತೆ ವ್ಯವಸ್ಥೆ ಮಾಡುತ್ತಿದ್ದಾರೆ.

ಫೆಬ್ರವರಿ 3ರಂದು ಅಸಾದುದ್ದೀನ್ ಓವೈಸಿ ಉತ್ತರ ಪ್ರದೇಶದ ಮೀರತ್‌ನಲ್ಲಿ ಚುನಾವಣಾ ಸಂಬಂಧಿತ ಕಾರ್ಯಕ್ರಮ ಮುಗಿಸಿ ದೆಹಲಿಗೆ ಹಿಂದಿರುಗುತ್ತಿದ್ದಾಗ ಛಜರ್ಸಿ ಟೋಲ್ ಪ್ಲಾಜಾ ಬಳಿ ಅವರ ವಾಹನದ ಮೇಲೆ ಗುಂಡು ಹಾರಿಸಲಾಯಿತು. ಆದರೆ, ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.

ನಿನ್ನೆ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಎರಡನೇ ಅತ್ಯುನ್ನತ ಝಡ್ ವರ್ಗದ ಭದ್ರತೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದರು. ಗುರುವಾರ ರಾತ್ರಿ ಉತ್ತರ ಪ್ರದೇಶದ ಮೀರತ್‌ನ ಕಿತೌಧ್ ಪ್ರದೇಶದಲ್ಲಿ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ ನಡೆದ ಒಂದು ದಿನದ ನಂತರ ಕೇಂದ್ರ ಸರ್ಕಾರ ಅವರಿಗೆ ‘ಝಡ್’ ಭದ್ರತೆ ಒದಗಿಸಲು ಮುಂದಾಗಿತ್ತು. ಆದರೆ, ಓವೈಸಿ ಅದನ್ನು ತಿರಸ್ಕರಿಸಿದ್ದರು.

ಉತ್ತರ ಪ್ರದೇಶದ ಕಿಥೌರ್​​ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೆಹಲಿಗೆ ತೆರಳುತ್ತಿದ್ದ ವೇಳೆ ಓವೈಸಿ ಅವರ ಬೆಂಗಾವಲು ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು. ಮೀರತ್​ನಿಂದ ದೆಹಲಿಗೆ ತೆರಳುತ್ತಿದ್ದಾಗ ಛಜರ್ಸಿ ಟೋಲ್ ಪ್ಲಾಜಾ ಬಳಿ ಓವೈಸಿ ಕಾರಿನ ಮೇಲೆ 3ರಿಂದ 4 ಸುತ್ತು ಗುಂಡು ಹಾರಿಸಲಾಗಿತ್ತು. ಈ ವೇಳೆ ಕಾರಿನ ಟೈರ್​ಗಳು ಪಂಕ್ಚರ್​​ ಆಗಿದ್ದವು. ಆದರೆ, ಓವೈಸಿಗೆ ಯಾವುದೇ ಗಾಯಗಳಾಗಿರಲಿಲ್ಲ.

ಇದನ್ನೂ ಓದಿ: ಅಸಾದುದ್ದೀನ್ ಓವೈಸಿ ಇದ್ದ ಕಾರಿನ ಮೇಲೆ ಗುಂಡಿನ ದಾಳಿ; ಘಟನೆ ಸಂದರ್ಭ ವಿವರಿಸಿದ ಎಐಎಂಐಎಂ ಮುಖ್ಯಸ್ಥ

ಝೆಡ್ ಕೆಟಗರಿ ಭದ್ರತೆ ತಿರಸ್ಕರಿಸಿದ ಅಸಾದುದ್ದೀನ್ ಓವೈಸಿ; ಶೂಟರ್‌ಗಳ ವಿರುದ್ಧ ಯುಎಪಿಎ ವಿಧಿಸಲು ಒತ್ತಾಯ