AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರ್ಯಾಕ್ಟರ್​ ಟ್ರಾಲಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು; ಮೂವರ ದುರ್ಮರಣ, ಒಬ್ಬನಿಗೆ ಗಾಯ

ಮೂರು ಮೃತದೇಹಗಳನ್ನು ರೋಹ್ಟಕ್​​ನ ಪಿಜಿಐ ಆಸ್ಪತ್ರೆಗೆ, ಪೋಸ್ಟ್​ಮಾರ್ಟಮ್​​ಗಾಗಿ ಕಳಿಸಲಾಗಿದೆ. ಗಾಯಗೊಂಡ ಒಬ್ಬಾತನನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ.

ಟ್ರ್ಯಾಕ್ಟರ್​ ಟ್ರಾಲಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು; ಮೂವರ ದುರ್ಮರಣ, ಒಬ್ಬನಿಗೆ ಗಾಯ
ರೊಹ್ಟಕ್​​ನಲ್ಲಿ ಕಾರು ಅಪಘಾತ
TV9 Web
| Updated By: Lakshmi Hegde|

Updated on: Feb 06, 2022 | 9:36 AM

Share

ಕಾರೊಂದು ಟ್ರ್ಯಾಕ್ಟರ್​ ಟ್ರಾಲಿಗೆ ಡಿಕ್ಕಿ (Accident) ಹೊಡೆದ ಪರಿಣಾಮ ಮೂವರು ಮೃತಪಟ್ಟು, ಒಬ್ಬರು ಗಾಯಗೊಂಡ ಘಟನೆ ಹರ್ಯಾಣದ ರೊಹ್ಟಕ್​​ ಜಿಲ್ಲೆಯ (Rohtak District)ಲಾಹ್ಲಿಯಲ್ಲಿ ನಡೆದಿದೆ. ಮೃತರಾದ ಮೂವರಲ್ಲಿ ಇಬ್ಬರ ಗುರುತು ಸಿಕ್ಕಿದೆ. ಅದರಲ್ಲಿ ಒಬ್ಬನ ಹೆಸರು ವಿವೇಕ್​ ಎಂದಾಗಿದ್ದು ರೋಹ್ಟಕ್​ನ ಚುನ್ನಿಪುರದವನು. ಇನ್ನೊಬ್ಬಾತ ಪಂಜಾಬ್​ನ ಜಿರಕ್​ಪುರದವನು ಎಂದು ಹೇಳಲಾಗಿದೆ. ಮೂರನೇಯವರ ಹೆಸರಾಗಲಿ, ಊರಾಗಲಿ ಇನ್ನೂ ತಿಳಿದಿಲ್ಲ. 

ಮೂರು ಮೃತದೇಹಗಳನ್ನು ರೋಹ್ಟಕ್​​ನ ಪಿಜಿಐ ಆಸ್ಪತ್ರೆಗೆ, ಪೋಸ್ಟ್​ಮಾರ್ಟಮ್​​ಗಾಗಿ ಕಳಿಸಲಾಗಿದೆ. ಗಾಯಗೊಂಡ ಒಬ್ಬಾತನನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಕಲನೌರ್​ ಸ್ಟೇಶನ್​ ಅಧಿಕಾರಿ ಸುಶೀಲಾ ತಿಳಿಸಿದ್ದಾರೆ. ಪಂಜಾಬ್ ರಾಜ್ಯದ ನಂಬರ್​ ಪ್ಲೇಟ್​ ಇರುವ ಕಾರು ಕಲನೌರ್​​ನಿಂದ ರೋಹ್ಕಟ್​ ಕಡೆಗೆ ಹೋಗುತ್ತಿತ್ತು. ಟ್ರ್ಯಾಕ್ಟರ್​ ಟ್ರಾಲಿ ಎದುರಿನಿಂದ ಬರುತ್ತಿತ್ತು. ಕಾರು ತುಂಬ ವೇಗದಿಂದ ಹೋಗುತ್ತಿತ್ತು. ಒಂದು ತಿರುವಿನಲ್ಲಿ ಟ್ರಾಲಿಯ ಹಿಂಬದಿಗೆ ಕಾರು ಡಿಕ್ಕಿಯಾಗಿದೆ. ಕಾರು ಚೂರುಚೂರಾಗಿದೆ. ಇದೊಂದು ಭಯಾನಕ ಅಪಘಾತವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾಗಿ ಎಎನ್​ಐ ವರದಿ ಮಾಡಿದೆ. ಹಾಗೇ, ಪೊಲೀಸರು ತನಿಖೆಯನ್ನೂ ಪ್ರಾರಂಭ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಯಚೂರು: ತೊಗರಿಯ ಗುಣಮಟ್ಟ ಪರೀಕ್ಷೆಗೆ ಅನುಗುಣವಾಗಿ ಬೆಲೆ ನಿಗದಿ; ದರ ಕುಸಿತದಿಂದ ರೈತರು ಕಂಗಾಲು

ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಅಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು, ಇಲ್ಲಂದ್ರೆ ನಾನೇ ಕೊಲೆ ಮಾಡ್ತೀನಿ ಮಗ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಟೀಂ ಇಂಡಿಯಾಕ್ಕೆ ಗೌತಮ್ ಗಂಭೀರ್ ಮನೆಯಲ್ಲಿ ಆತಿಥ್ಯ
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ಜನರನ್ನು ಕಂಗಾಲಾಗಿಸಿದ ಬೃಹತ್ ಹೆಬ್ಬಾವನ್ನು ಹಿಡಿದ ಟ್ರಾಫಿಕ್ ಪೊಲೀಸ್!
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ವರ್ಷಕ್ಕೊಮ್ಮೆ ಮಾತ್ರ ಏಕೆ ಭಕ್ತರಿಗೆ ಹಾಸನಾಂಬೆ ದರ್ಶನ? ಇಲ್ಲಿದೆ ನೋಡಿ ಕಾರಣ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಚಾಕುವಿನಿಂದ ಇರಿದು ಪತ್ನಿ ಹತ್ಯೆಗೈದ ಪತಿ: ಅಪ್ಪನ ಅಸಲಿ ಬಣ್ಣ ಬಿಚ್ಚಿಟ್ಟ ಮಗ
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ: ಸಚಿವ ದರ್ಶನಾಪುರ ಏನಂದ್ರು?
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
ಸಿಸಿ , ಓಸಿ ಪಡೆಯದೇ ಮನೆ ಕಟ್ಟಿದವರಿಗೆ ಗುಡ್ ನ್ಯೂಸ್
BBK: ಕನ್ನಡಪರ ಹೋರಾಟಗಾರರಿಂದ 15 ಲಕ್ಷ ರೂ. ಡಿಮ್ಯಾಂಡ್; ಸಂಬರಗಿ ಆರೋಪ
BBK: ಕನ್ನಡಪರ ಹೋರಾಟಗಾರರಿಂದ 15 ಲಕ್ಷ ರೂ. ಡಿಮ್ಯಾಂಡ್; ಸಂಬರಗಿ ಆರೋಪ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ
ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ