AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್​ ಪೆಂಡಾಲ್​; ಆಮ್ಲಜನಕ ಕೊರತೆ ನೀಗಿಸಲು ತಮಿಳುನಾಡು ವೈದ್ಯನ ವಿನೂತನ ಕ್ರಮ

ಡಾ. ಶಕ್ತಿವೇಲ್ ತಿರುಪ್ಪೂರಿನಲ್ಲಿ ಕಳೆದ 7ವರ್ಷಗಳಿಂದಲೂ ಶಕ್ತಿ ಆಸ್ಪತ್ರೆಯೆಂಬ ಮಲ್ಟಿ ಸ್ಪೆಶಾಲಿಟಿ ನರ್ಸಿಂಗ್ ಹೋಂ ನಡೆಸುತ್ತಿದ್ದಾರೆ. ಇವರೀಗ ತಮ್ಮ ನರ್ಸಿಂಗ್​ ಹೋಂ ಆವರಣದಲ್ಲಿ ಆಕ್ಸಿಜನ್​ ಪೂರೈಕೆಯ ಚಪ್ಪರವನ್ನೂ ನಿರ್ಮಿಸಿಕೊಂಡಿದ್ದಾರೆ.

ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್​ ಪೆಂಡಾಲ್​; ಆಮ್ಲಜನಕ ಕೊರತೆ ನೀಗಿಸಲು ತಮಿಳುನಾಡು ವೈದ್ಯನ ವಿನೂತನ ಕ್ರಮ
ಆಕ್ಸಿಜನ್​ ಸಿಲಿಂಡರ್​ಗಳು
Lakshmi Hegde
|

Updated on:May 12, 2021 | 3:40 PM

Share

ತಿರುಪ್ಪುರ್​​: ದೇಶದಲ್ಲಿ ಕೊವಿಡ್​ 19 ಹೆಚ್ಚಾದ ಬೆನ್ನಲ್ಲೆ ಆಕ್ಸಿಜನ್ ಕೊರತೆ ಉಂಟಾಗಿದೆ. ಕೊವಿಡ್​ ರೋಗಿಗಳಷ್ಟೇ ಅಲ್ಲದೆ ಇನ್ನಿತರ ರೋಗಗಳಿಂದ ಬಳಲುತ್ತಿರುವವರಿಗೂ ವೈದ್ಯಕೀಯ ಆಕ್ಸಿಜನ್ ಸಿಗುತ್ತಿಲ್ಲ. ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಕ್ಸಿಜನ್​ ಕೊರತೆಯುಂಟಾಗಿ ರೋಗಿಗಳು ಜೀವ ಕಳೆದುಕೊಂಡಿದ್ದಾರೆ. ಈ ಮಧ್ಯೆ ಆಸ್ಪತ್ರೆಗೆ ದಾಖಲಾಗಿರುವ ಕುಟುಂಬದವರು, ಆಪ್ತರಿಗಾಗಿ ಒಂದಷ್ಟು ಜನ ಆಕ್ಸಿಜನ್ ಸಿಲಿಂಡರ್​ ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ಹೀಗಿರುವಾಗ ತಮಿಳುನಾಡಿನ ತಿರುಪ್ಪೂರಿನ ವೈದ್ಯರೊಬ್ಬರು ತಮ್ಮದೇ ನರ್ಸಿಂಗ್​ ಹೋಂನಲ್ಲಿ ಆಕ್ಸಿಜನ್ ಪೆಂಡಾಲ್​ ನಿರ್ಮಿಸುವ ಮೂಲಕ ಆಕ್ಸಿಜನ್ ಕೊರತೆ ನೀಗಿಸಿದ್ದಾರೆ.

ಈ ವೈದ್ಯನ ಹೆಸರು ಡಾ. ಶಕ್ತಿವೇಲ್​. ತಿರುಪ್ಪೂರಿನಲ್ಲಿ ಕಳೆದ 7ವರ್ಷಗಳಿಂದಲೂ ಶಕ್ತಿ ಆಸ್ಪತ್ರೆಯೆಂಬ ಮಲ್ಟಿ ಸ್ಪೆಶಾಲಿಟಿ ನರ್ಸಿಂಗ್ ಹೋಂ ನಡೆಸುತ್ತಿದ್ದಾರೆ. ಇವರೀಗ ತಮ್ಮ ನರ್ಸಿಂಗ್​ ಹೋಂ ಆವರಣದಲ್ಲಿ ಆಕ್ಸಿಜನ್​ ಪೂರೈಕೆಯ ಚಪ್ಪರವನ್ನೂ ನಿರ್ಮಿಸಿಕೊಂಡಿದ್ದಾರೆ. ಇದರಿಂದಾಗಿ ಅಲ್ಲಿರುವ ಕೊವಿಡ್ ಮತ್ತು ಬೇರೆ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಆಕ್ಸಿಜನ್​ಗೆ ಯಾವುದೇ ಸಮಸ್ಯೆಯಿಲ್ಲದಂತಾಗಿದೆ. ಮಧ್ಯರಾತ್ರಿಯಲ್ಲಿ ಬಂದು ಆಕ್ಸಿಜನ್​, ಬೆಡ್​ ಕೇಳಿದರೂ ಶಕ್ತಿ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡುತ್ತಾರೆ. ತಿರಪ್ಪೂರಿನಲ್ಲಿ ಉಳಿದ್ಯಾವ ಆಸ್ಪತ್ರೆಗಳಲ್ಲೂ ಈ ವ್ಯವಸ್ಥೆ ಇಲ್ಲ.

ನಮ್ಮಲ್ಲಿ ದ್ರವರೂಪದ ಆಕ್ಸಿಜನ್ ಉತ್ಪತ್ತಿ ಮಾಡುವ ಒಂದು ಘಟಕವಿತ್ತು. ಅದರಲ್ಲಿ ಹೆಚ್ಚುವರಿ ಉಳಿಯುತ್ತಿತ್ತು. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್​ ಉತ್ಪಾದನೆ ಮಾಡಿದರೆ ಮತ್ತಷ್ಟು ರೋಗಿಗಳಿಗೆ ಅನುಕೂಲ ಆಗುತ್ತದೆ ಎಂದು ಯೋಚಿಸಿ, ನರ್ಸಿಂಗ್​ ಹೋಂನ ಕಾರ್​ ಶೆಡ್​ ಇರುವ ಜಾಗದಲ್ಲಿ ಆಮ್ಲಜನಕ ಉತ್ಪತ್ತಿ ಪೆಂಡಾಲ್ ಹಾಕಿದ್ದಾಗಿ ಡಾ. ಶಕ್ತಿವೇಲ್​ ತಿಳಿಸಿದ್ದಾರೆ.

ಇದನ್ನೂ ಓದಿ: 

ಲಾಕ್​ಡೌನ್​ ಸಂದರ್ಭದ ಒತ್ತಡ ನಿವಾರಣೆಗೆ ಯೋಗಾಭ್ಯಾಸ; ಮನೆಯಲ್ಲೇ ಕಳೆಯುವ ಸಮಯಕ್ಕೆ ಸಿಗಲಿದೆ ಸ್ಪೂರ್ತಿ

ನೀನು ಪ್ಯಾಂಟ್ ಆದರೂ ಹಾಕಬೇಕಿತ್ತು! ದಿನೇಶ್ ಕಾರ್ತಿಕ್ ಕಾಲೆಳೆದ ಲಿನ್​ಗೆ ಖಡಕ್ ಉತ್ತರ ಕೊಟ್ಟ ವಿಕೆಟ್‌ಕೀಪರ್

Tiruppur Doctor Has Opened Oxygen Pandal in His hospital premises

Published On - 3:40 pm, Wed, 12 May 21

ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಆಗ ವೀರಪ್ಪನ್‌ ಕೇಸ್‌ನಲ್ಲಿ ಗಿಫ್ಟ್‌: ಹೆಚ್​ಡಿ ಕುಮಾರಸ್ವಾಮಿ ಹೊಸ ಬಾಂಬ್‌
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಔಟ್?
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು ಪೊಲೀಸರ ಪ್ಲ್ಯಾನ್: ಏನದು?
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಮೂಲಕ ಧರ್ಮ ಪ್ರಚಾರದ ವಾಹನವಾದ ಪಂಚಾಯ್ತಿ ಸ್ವಚ್ಛತಾ ಗಾಡಿ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಲಕ್ಕುಂಡಿ ಸಂಪತ್ತು ಕಾಯ್ತಾ ಇದೆಯಾ ಘಟಸರ್ಪ? ಬೃಹತ್ ಘಟಸರ್ಪ ಮೂರ್ತಿ ಪತ್ತೆ!
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಸಿದ್ದರಾಮಯ್ಯ ಆಗಮನಕ್ಕೂ ಮುನ್ನ ಬೃಹತ್ ಕಟೌಟ್​ಗಳು ಬಿದ್ದು ನಾಲ್ವರಿಗೆ ಗಾಯ
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಮಗನ ‘ಕಲ್ಟ್’ ಸಿನಿಮಾ ನೋಡಿ ವಿಮರ್ಶೆ ತಿಳಿಸಿದ ಜಮೀರ್ ಅಹ್ಮದ್
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ
ಕುಮಾರ ಷಷ್ಠಿ ಆಚರಣೆಯ ವಿಧಾನ ಹಾಗೂ ಮಹತ್ವ