AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೇಕ್​​ ಸುದ್ದಿ ಟ್ವೀಟ್​​ ಮಾಡಿದ ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಬಂಧನ; ಟ್ವೀಟ್​​ನಲ್ಲಿ ಬಳಸಿದ್ದು ನಕಲಿ ದಾಖಲೆ ಎಂದ ಪೊಲೀಸರು

ಸೇತುವೆಯ ದುರಂತಕ್ಕೆ ಕಾರಣರಾದ ತಪ್ಪಿತಸ್ಥರು ಅಂದರೆ ಸೇತುವೆ ದುರಸ್ತಿ ಮತ್ತು ನಿರ್ವಹಣೆಗಾಗಿ ನೇಮಕಗೊಂಡ ಓರೆವಾ ಕಂಪನಿಯ ಮಾಲೀಕರು ಮುಕ್ತರಾಗಿರುವಾಗ ಈ ಬಗ್ಗೆ ಮಾಡಿದ ಟ್ವೀಟ್‌ಗಾಗಿ ನನ್ನನ್ನು ಬಂಧಿಸಿರುವುದು ಅಣಕ ಅಲ್ಲದೆ ಮತ್ತೇನು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೋಖಲೆ ಹೇಳಿದ್ದಾರೆ.

ಫೇಕ್​​ ಸುದ್ದಿ ಟ್ವೀಟ್​​ ಮಾಡಿದ ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಬಂಧನ; ಟ್ವೀಟ್​​ನಲ್ಲಿ ಬಳಸಿದ್ದು ನಕಲಿ ದಾಖಲೆ ಎಂದ ಪೊಲೀಸರು
ಸಾಕೇತ್ ಗೋಖಲೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 06, 2022 | 7:06 PM

ದೆಹಲಿ: ಸೇತುವೆ ದುರಂತದ ಬಳಿಕ ಗುಜರಾತ್‌ನ (Gujarat) ಮೋರ್ಬಿಗೆ (Morbi) ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಭೇಟಿ ನೀಡಿದ್ದಕ್ಕೆ ಸಂಬಂಧಿಸಿದಂತೆ ಸುಳ್ಳು ಆರೋಪಗಳನ್ನು ಪೋಸ್ಟ್ ಮಾಡಲು ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ (Saket Gokhale) ನಕಲಿ ದಾಖಲೆಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ಆರೋಪಿಸಿವೆ. ತೃಣಮೂಲ ಪಕ್ಷದ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರನ್ನು ನಿನ್ನೆ (ಸೋಮವಾರ) ತಡರಾತ್ರಿ ಜೈಪುರದಲ್ಲಿ ಪ್ರಧಾನಿ ಮೋದಿಯವರ ಬಗ್ಗೆ “ನಕಲಿ ಸುದ್ದಿ” ಹರಡಿದ ಆರೋಪದ ಮೇಲೆ ಬಂಧಿಸಲಾಯಿತು. ಅಹಮದಾಬಾದ್‌ನಲ್ಲಿ ಬಿಜೆಪಿ ನಾಯಕ ಅಮಿತ್ ಕೊಠಾರಿ ಪೊಲೀಸರಿಗೆ ದೂರು ನೀಡಿದ ನಂತರ ಗೋಖಲೆ ಅವರನ್ನು ಬಂಧಿಸಲಾಗಿದೆ.ಅವರು ಫೋರ್ಜರಿ ಮುಂತಾದ ಆರೋಪಗಳನ್ನು ಎದುರಿಸಬೇಕಾಗುತ್ತದೆ, ಇದು ಐದು ವರ್ಷಗಳ ಜೈಲು ಶಿಕ್ಷೆಗೆ ಕಾರಣವಾಗಬಹುದು ಎಂದು ಪೊಲೀಸ್ ಮೂಲಗಳು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.ಮಾಹಿತಿ ಹಕ್ಕು (ಆರ್‌ಟಿಐ) ಉತ್ತರವನ್ನು ಉಲ್ಲೇಖಿಸಿ ಡಿಸೆಂಬರ್ 1 ರಂದು ಮಾಡಿದ ಟ್ವೀಟ್​​ನಲ್ಲಿ “ಪ್ರಧಾನಿ ಅವರ ಮೋರ್ಬಿ ಭೇಟಿಯಿಂದ ಗುಜರಾತ್ ಸರ್ಕಾರಕ್ಕೆ ₹ 30 ಕೋಟಿ ಖರ್ಚಾಗಿದೆ. ಇದು ಸಂತ್ರಸ್ತರಿಗೆ ನೀಡಿದ ಪರಿಹಾರಕ್ಕಿಂತ (ಒಟ್ಟು ₹ 5 ಕೋಟಿ) ಹೆಚ್ಚು ಎಂದಿದ್ದರು. ಅದೇ ದಿನ ಸರ್ಕಾರದ ಫ್ಯಾಕ್ಟ್ ಚೆಕ್ ಘಟಕ ಇದನ್ನು “ನಕಲಿ” ಎಂದು ಹೇಳಿತ್ತು.

ಸಾಕೇತ್ ಗೋಖಲೆ ಅವರು ತಮ್ಮ ಟ್ವೀಟ್‌ನಲ್ಲಿ ಆರ್‌ಟಿಐ ಪ್ರತ್ಯುತ್ತರ ಎಂದು ತೋರಿಸಲು ಗುಜರಾತ್ ಸಮಾಚಾರ್ ಪತ್ರಿಕೆಯ ಸಲ್ಲಿಸಿದ ಆರ್​​ಟಿಐಗೆ ಉತ್ತರ ಎಂದು ಪ್ರಸ್ತುತ ಪತ್ರಿಕೆಯ ಫಾಂಟ್ ಬಳಸಿದ್ದಾರೆ ಎಂದು ಗುಜರಾತ್ ಪೊಲೀಸರ ಸೈಬರ್ ಸೆಲ್ ಎನ್​​ಡಿಟಿವಿಗೆ ಹೇಳಿದೆ.”ಇಡೀ ಆರ್‌ಟಿಐ ಅನ್ನು ಸಾಕೇತ್ ಗೋಖಲೆ ತಯಾರಿಸಿದ್ದಾರೆ” ಎಂದು ಮೂಲಗಳು ತಿಳಿಸಿವೆ, ಆರ್‌ಟಿಐ ಉತ್ತರಕ್ಕಾಗಿ ಸಾಮಾನ್ಯವಾಗಿ ಎರಡು ತಿಂಗಳು ತೆಗೆದುಕೊಳ್ಳುತ್ತದೆ.

ಸೇತುವೆಯ ದುರಂತಕ್ಕೆ ಕಾರಣರಾದ ತಪ್ಪಿತಸ್ಥರು ಅಂದರೆ ಸೇತುವೆ ದುರಸ್ತಿ ಮತ್ತು ನಿರ್ವಹಣೆಗಾಗಿ ನೇಮಕಗೊಂಡ ಓರೆವಾ ಕಂಪನಿಯ ಮಾಲೀಕರು ಮುಕ್ತರಾಗಿರುವಾಗ ಈ ಬಗ್ಗೆ ಮಾಡಿದ ಟ್ವೀಟ್‌ಗಾಗಿ ನನ್ನನ್ನು ಬಂಧಿಸಿರುವುದು ಅಣಕ ಅಲ್ಲದೆ ಮತ್ತೇನು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೋಖಲೆ ಹೇಳಿದ್ದಾರೆ.

ತೃಣಮೂಲದ ರಾಜ್ಯಸಭಾ ನಾಯಕ ಡೆರೆಕ್ ಒ’ಬ್ರೇನ್ ಟ್ವೀಟ್ ಮಾಡಿ ಬಿಜೆಪಿಯ “ರಾಜಕೀಯ ಸೇಡು” ಎಂದು ಹೇಳಿದ ನಂತರವೇ ಗುಜರಾತ್ ಪೊಲೀಸರು ಗೋಖಲೆಯನ್ನು ಬಂಧಿಸಿದ್ದಾರೆ ಎಂದು ದೃಢಪಡಿಸಿದರು. ಗೋಖಲೆ ಅವರು ಸೋಮವಾರ ರಾತ್ರಿ ದೆಹಲಿಯಿಂದ ಜೈಪುರಕ್ಕೆ ವಿಮಾನದಲ್ಲಿ ಹೋಗಿದ್ದರು, ಅಲ್ಲಿಂದ ಅವರನ್ನು ಗುಜರಾತ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಗೋಖಲೆ ಅವರು ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಜೈಪುರಕ್ಕೆ ಖಾಸಗಿ ಭೇಟಿಯಲ್ಲಿದ್ದರು.

ಗುಜರಾತ್ ಪೊಲೀಸರು ಅವರನ್ನು ಅಹಮದಾಬಾದ್‌ಗೆ ಕರೆದೊಯ್ದರು. ಅವರ ಮೊಬೈಲ್ ವಶಪಡಿಸಿಕೊಳ್ಳುವ ಮೊದಲು 1.5 ರಿಂದ 2 ನಿಮಿಷಗಳ ಫೋನ್ ಕರೆಯನ್ನು ನೀಡಲಾಯಿತು ಎಂದು ಮೂಲಗಳು ಹೇಳುತ್ತವೆ. ಆಗ ಅವರು ತಮ್ಮ ತಾಯಿಗೆ ಕರೆ ಮಾಡಿ ಚಿಂತಿಸಬೇಡಿ ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ. ಸಾಕೇತ್ ಗೋಖಲೆ ಅವರು ಸುದ್ದಿ ವರದಿಗಳೆಂದು ಭಾವಿಸಿದ್ದನ್ನು ಮಾತ್ರ ಟ್ವೀಟ್ ಮಾಡಿದ್ದಾರೆ. “ಇದು ಸೇಡಿನ ವರ್ತನೆ. ನಾನು ಇದನ್ನು ಖಂಡಿಸುತ್ತೇನೆ” ಎಂದು ಅವರು ಅಜ್ಮೀರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಗುಜರಾತ್‌ನ ಮೊರ್ಬಿ ಪಟ್ಟಣದಲ್ಲಿ ಅಕ್ಟೋಬರ್‌ನಲ್ಲಿ ನವೀಕರಿಸಿದ ವಸಾಹತುಶಾಹಿ ಯುಗದ ಸೇತುವೆ ಕುಸಿದು 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಪ್ರಧಾನಿ ಮೋದಿ ನವೆಂಬರ್ 1 ರಂದು ತಮ್ಮ ತವರು ರಾಜ್ಯಕ್ಕೆ ಭೇಟಿ ನೀಡಿದ್ದು ದುರಂತ ಸ್ಥಳಕ್ಕೆ ಹೋಗುವುದರ ಜೊತೆಗೆ ಗಾಯಾಳುಗಳನ್ನು ಭೇಟಿ ಮಾಡಿದ್ದರು.

ಟಿಎಂಸಿ ನಾಯಕನ್ನು ಬಂಧಿಸುವ ಮುನ್ನ ಗುಜರಾತ್ ರಾಜಸ್ಥಾನ ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ: ಮೂಲಗಳು

ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ  ಅವರನ್ನು ಗುಜರಾತ್ ಪೊಲೀಸರು ತಮ್ಮ ರಾಜಸ್ಥಾನದ ಸಹವರ್ತಿಗಳಿಗೆ ತಿಳಿಯದಂತೆ ಬಂಧಿಸಿದ್ದಾರೆ ಎಂದು ಗುಜರಾತ್‌ನ ಸೈಬರ್ ಸೆಲ್ ಘಟಕದ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ. ನಾವು ರಾಜಸ್ಥಾನ ಪೊಲೀಸ್ ತಂಡಕ್ಕೆ ಮಾಹಿತಿ ನೀಡಿಲ್ಲ. ಗುಜರಾತ್ ರಾಜ್ಯದಲ್ಲಿ ನಡೆದ ಪ್ರಕರಣವೊಂದರಲ್ಲಿ ಸಾಕೇತ್ ಗೋಖಲೆ ಆರೋಪಿಯಾಗಿದ್ದ. ಗುಜರಾತ್ ಪೊಲೀಸರು ಹೋಗಿ ಆತನನ್ನು ವಶಕ್ಕೆ ಪಡೆದರು. ನಾವು ಕಾನೂನು ಪ್ರಕ್ರಿಯೆಯನ್ನು ಅನುಸರಿಸಿದ್ದೇವೆ. ಸಾಕೇತ್ ಗೋಖಲೆ ಅವರಿಗೆ ಮಾಹಿತಿ ನೀಡಲಿಲ್ಲ ಅಥವಾ ಗುಜರಾತ್‌ಗೆ ಬರುವಂತೆ ಹೇಳಲಿಲ್ಲ. ನಾವು ಅವರನ್ನು ರಾಜಸ್ಥಾನದಲ್ಲಿ ತಡೆಹಿಡಿದು ಅಲ್ಲಿಂದ ಕರೆದೊಯ್ದಿದ್ದೇವೆ ಎಂದು ಮೂಲವೊಂದು ಎನ್‌ಡಿಟಿವಿಗೆ ತಿಳಿಸಿದೆ.

ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್
ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್
ರಷ್ಯಾದಲ್ಲಿ ರೈಲು ಹಾದುಹೋಗುತ್ತಿದ್ದಂತೆ ಕುಸಿದ ಸೇತುವೆ
ರಷ್ಯಾದಲ್ಲಿ ರೈಲು ಹಾದುಹೋಗುತ್ತಿದ್ದಂತೆ ಕುಸಿದ ಸೇತುವೆ