AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುತ್ತಲೂ ಆವರಿಸಿದ ಹೊಂಜು, ದೆಹಲಿಯಲ್ಲಿ ಸತತ 8ನೇ ದಿನ ಹದಗೆಟ್ಟ ಗಾಳಿಯ ಗುಣಮಟ್ಟ

ದೆಹಲಿಯಲ್ಲಿ ಒಟ್ಟಾರೆ AQI ಭಾನುವಾರ ಬೆಳಗ್ಗೆ 10 ಗಂಟೆಗೆ 243 ರಷ್ಟಿತ್ತು. ಕಳೆದ ಸಂಜೆ 265 ರಷ್ಟಿತ್ತು. ಸೋಮವಾರ ದೀಪಾವಳಿ ಆಚರಣೆ ನಂತರ ವಾಯು ಮಾಲಿನ್ಯ ಮತ್ತಷ್ಟು ಹೆಚ್ಚಲಿದೆ

ಸುತ್ತಲೂ ಆವರಿಸಿದ ಹೊಂಜು, ದೆಹಲಿಯಲ್ಲಿ ಸತತ 8ನೇ ದಿನ ಹದಗೆಟ್ಟ ಗಾಳಿಯ ಗುಣಮಟ್ಟ
ದೆಹಲಿ ವಾಯು ಮಾಲಿನ್ಯ
TV9 Web
| Edited By: |

Updated on: Oct 23, 2022 | 4:09 PM

Share

ದೆಹಲಿ: ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (NCR) ಹತ್ತಿರದ ನಗರಗಳಲ್ಲಿ ವಿಷಕಾರಿ ಹೊಗೆ ಆವರಿಸಿದ್ದು ಗಾಳಿಯ ಗುಣಮಟ್ಟವು ಹದಗೆಟ್ಟಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹದಗೆಡುವ ನಿರೀಕ್ಷೆಯಿದೆ. ಭಾನುವಾರ ಸತತ ಎಂಟನೇ ದಿನವೂ ದೆಹಲಿಯ ಗಾಳಿಯ ಗುಣಮಟ್ಟ ‘ಕಳಪೆ’ ವಿಭಾಗದಲ್ಲಿ ದಾಖಲಾಗಿದೆ ಎಂದು ವರದಿಗಳು ಸೂಚಿಸಿವೆ. ದೀಪಾವಳಿ ಆಚರಣೆಯೊಂದಿಗೆ ಗಾಳಿಯ ಗುಣಮಟ್ಟ ಸೂಚ್ಯಂಕವು (AQI) ಮತ್ತಷ್ಟು ತೀವ್ರ ಆಗಬಹುದು. ಬೆಳೆ ತ್ಯಾಜ್ಯ ಸುಡುವಿಕೆಯ ಹೊಗೆ ಮತ್ತು ಇತರ ಅಂಶಗಳು ಕೂಡಾ ಇದಕ್ಕೆ ಕಾರಣವಾಗಬಹುದು. ದೆಹಲಿಯಲ್ಲಿ ಒಟ್ಟಾರೆ AQI ಭಾನುವಾರ ಬೆಳಗ್ಗೆ 10 ಗಂಟೆಗೆ 243 ರಷ್ಟಿತ್ತು. ಕಳೆದ ಸಂಜೆ 265 ರಷ್ಟಿತ್ತು. ಸೋಮವಾರ ದೀಪಾವಳಿ ಆಚರಣೆ ನಂತರ ವಾಯು ಮಾಲಿನ್ಯ ಮತ್ತಷ್ಟು ಹೆಚ್ಚಲಿದೆ ಪ್ರತಿ ವರ್ಷ ದೀಪಾವಳಿಯ ಆಸುಪಾಸಿನಲ್ಲಿ ರಾಷ್ಟ್ರ ರಾಜಧಾನಿಯು ತೀವ್ರ ಮಾಲಿನ್ಯದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಜನರು ಪಟಾಕಿಗಳನ್ನು ಸಿಡಿಸುವುದರಿಂದ ಅತಿ ಸೂಕ್ಷ್ಮವಾದ PM2.5 ಕಣಗಳ (ಗಾಳಿಯಲ್ಲಿನ ಹಾನಿಕಾರಕ ಭಾರೀ ಲೋಹಗಳು ಮತ್ತು ವಿಷಕಾರಿ ರಾಸಾಯನಿಕ ಸಂಯುಕ್ತಗಳು) ಸಾಂದ್ರತೆ ಮತ್ತಷ್ಟು ಹೆಚ್ಚಾಗುತ್ತದೆ.

ಏತನ್ಮಧ್ಯೆ, ಈ ವರ್ಷ ತ್ಯಾಜ್ಯ ಸುಡುವಿಕೆಯಿಂದ ಉಂಟಾಗುವ ಮಾಲಿನ್ಯಕಾರಕಗಳು ಗಾಳಿಯ ವೇಗ ಕಡಿಮೆ ಗ ಆಗಿರುವುದಿಂದಕಡಿಮೆಯಾಗಿದೆ. “ಆದಾಗ್ಯೂ, ಸೋಮವಾರ ಮಧ್ಯಾಹ್ನದಿಂದ ಗಾಳಿಯ ದಿಕ್ಕು ಮತ್ತು ವೇಗವು ತುಂಬಾ ಅನುಕೂಲಕರವಾಗಿರುತ್ತದೆ. ಇದು ಅಕ್ಟೋಬರ್ 25 ಬೆಳೆ ತ್ಯಾಜ್ಯ ಸುಡುವಿಕೆಯಿಂದಾಗಿ ದೆಹಲಿಯ PM2.5 ಮಾಲಿನ್ಯದಲ್ಲಿ 15-18 ಶೇಕಡಾಕ್ಕೆ ಹೆಚ್ಚಿಸುತ್ತದೆ. ಗಾಳಿಯ ಗುಣಮಟ್ಟವನ್ನು ‘ತೀವ್ರ’ ವರ್ಗಕ್ಕೆ ತಳ್ಳುತ್ತದೆ ಎಂದು SAFAR ನ ಸಂಸ್ಥಾಪಕ ಯೋಜನಾ ನಿರ್ದೇಶಕ ಗುಫ್ರಾನ್ ಬೇಗ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ ಮಾಲಿನ್ಯಕ್ಕೆ ಸೂಕ್ಷ್ಮವಾಗಿರುವ ಜನರು ಹೊರಗೆ ಅಡ್ಡಾಡುವುದು ಅಥವಾ ಭಾರೀ ಶ್ರಮವನ್ನು ಕಡಿಮೆ ಮಾಡಬಹೇಕೆಂದು ಸಫರ್ ಸಲಹೆ ನೀಡಿದೆ.ಅಂಥವರು ಆಗಾಗ್ಗೆ ವಿರಾಮ ತೆಗೆದುಕೊಳ್ಳಬೇಕು. “ಆಸ್ತಮಾಟಿಕ್ಸ್, ಕೆಮ್ಮು ಅಥವಾ ಉಸಿರಾಟದ ತೊಂದರೆಯ ಲಕ್ಷಣಗಳು ಕಂಡುಬಂದರೆ ಔಷಧಿಯನ್ನು ಸಿದ್ಧವಾಗಿಡಿ. ಹೃದ್ರೋಗಿಗಳೇ, ಬಡಿತ, ಉಸಿರಾಟದ ತೊಂದರೆ ಅಥವಾ ಅಸಾಮಾನ್ಯ ಆಯಾಸ ಕಂಡುಬಂದಲ್ಲಿ ವೈದ್ಯರನ್ನು ಭೇಟಿ ಮಾಡಿ” ಎಂದು ಸಂಸ್ಥೆ ಹೇಳಿದೆ.

ದೆಹಲಿ ಸರ್ಕಾರವು ಈ ವರ್ಷ ಪಟಾಕಿಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಸಿಡಿಸುವಿಕೆಯ ಮೇಲೆ ಸಂಪೂರ್ಣ ನಿಷೇಧವನ್ನು ವಿಧಿಸಿದೆ. ನಿಯಮ ಉಲ್ಲಂಘಿಸಿದರೆ ದಂಡ ಮತ್ತು ಜೈಲು ಶಿಕ್ಷೆಯನ್ನು ವಿಧಿಸಿದೆ. ವಾಹನಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಮುಂದಿನ ತಿಂಗಳು ಪ್ರಾರಂಭವಾಗಲಿರುವ ‘ರೆಡ್ ಲೈಟ್ ಆನ್ ಗಾಡಿ ಆಫ್’ ಅಭಿಯಾನವನ್ನು ಸಹ ಘೋಷಿಸಲಾಗಿದೆ.

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ