AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ಮರಗಳು ಬೀಳುವುದನ್ನು ನಿಯಂತ್ರಿಸಲು ಮುಂಬೈನಲ್ಲಿ ವಿನೂತನ ಕ್ರಮ; ಟ್ರೀ ಸರ್ಜನ್​​ಗಳನ್ನು ನೇಮಕ ಮಾಡಿದ ಬಿಎಂಸಿ

ವಿಪರೀತ ಮಳೆ ಬೀಳುವ ಸಂದರ್ಭದಲ್ಲಿ ಅದೆಷ್ಟೋ ಮರಗಳ ಬೇರು, ಕಾಂಡಗಳು ಕೊಳೆಯುತ್ತವೆ. ಯಾವುದಾದರೂ ಫಂಗಸ್​ ಸೋಂಕಿನಿಂದ ದುರ್ಬಲವಾಗುತ್ತವೆ. ಮರಗಳು ಮೇಲಿನಿಂದ ಚೆನ್ನಾಗಿಯೇ ಕಂಡರೂ ಒಳಗೆ ಯಾವುದಾದರೂ ಭಾಗದಲ್ಲಿ ದುರ್ಬಲವಾಗುವ ಸಾಧ್ಯತೆ ಮಳೆಗಾಲದಲ್ಲಿ ಹೆಚ್ಚಾಗಿರುತ್ತದೆ.

ಮಳೆಗಾಲದಲ್ಲಿ ಮರಗಳು ಬೀಳುವುದನ್ನು ನಿಯಂತ್ರಿಸಲು ಮುಂಬೈನಲ್ಲಿ ವಿನೂತನ ಕ್ರಮ; ಟ್ರೀ ಸರ್ಜನ್​​ಗಳನ್ನು ನೇಮಕ ಮಾಡಿದ ಬಿಎಂಸಿ
ಮರಗಳ ಆರೋಗ್ಯಕ್ಕಾಗಿ ಸರ್ಜನ್​ಗಳ ನೇಮಕ
TV9 Web
| Edited By: |

Updated on:Jun 21, 2021 | 1:08 PM

Share

ಮುಂಬೈ ನಗರದಾದ್ಯಂತ ಸಿಕ್ಕಾಪಟೆ ಮಳೆಯಾಗುತ್ತಿದೆ. ಗಾಳಿ-ಮಳೆಯಿಂದ ಹಳೇ ಹಳೇ ಮರಗಳೆಲ್ಲ ಬೀಳುತ್ತಿವೆ. ಹೀಗೆ ಹಳೇ ಹಳೇ ದೊಡ್ಡದೊಡ್ಡ ಮರಗಳನ್ನು ಮುರಿದು ಬೀಳುವುದನ್ನು ತಪ್ಪಿಸಲು ಬೃಹನ್​ ಮುಂಬೈ ಮುನ್ಸಿಪಲ್​ ಕಾರ್ಪೋರೇಶನ್​ (ಬಿಎಂಸಿ) ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮರಗಳ ಶಸ್ತ್ರಚಿಕಿತ್ಸಕರನ್ನು (ಟ್ರೀ ಸರ್ಜನ್ ಅಥವಾ ಅರ್ಬೋರಿಕಲ್ಚರಿಸ್ಟ್​) ನೇಮಕ ಮಾಡಿಕೊಂಡಿದೆ. ಕೆಲವು ಹಳೇ ಮರಗಳು ಮಳೆಗಾಲದಲ್ಲಿ ಫಂಗಸ್ ಇನ್​​ಫೆಕ್ಷನ್​ ಅಥವಾ ಇನ್ಯಾವುದೋ ಕಾರಣಕ್ಕೆ ಕೊಳೆಯಲು ಆರಂಭಿಸುತ್ತವೆ. ಹೀಗಾದಾಗ ಅವರು ತನ್ನಿಂದ ತಾನಾಗಿ ಬಲುಬೇಗನೆ ಉರುಳು ಬೀಳುತ್ತವೆ. ಸಾಧ್ಯವಾದಷ್ಟರ ಮಟ್ಟಿಗೆ ಅದನ್ನು ತಡೆಯಲು ಈ ಟ್ರೀ ಸರ್ಜನ್​ಗಳನ್ನು ನೇಮಕ ಮಾಡಿದ್ದಾಗಿ ಬಿಎಂಸಿ ತಿಳಿಸಿದೆ.

ಇವರು ಮರಗಳನ್ನು ಪರೀಕ್ಷಿಸಿ, ಅವುಗಳಲ್ಲಿ ಏನಾದರೂ ದುರ್ಬಲತೆ ಕಂಡು ಬಂದರೆ ರಕ್ಷಿಸುವ ಮಾರ್ಗವನ್ನು ಹೇಳುತ್ತಾರೆ. ಅದಕ್ಕೆ ತಕ್ಕಂತೆ ಔಷಧ ಸಿಂಪಡಣೆ, ಆರೈಕೆ ಮಾಡಬಹುದು. ಇದರಿಂದ ಮರಗಳು ಧರೆಗುರುಳುವುದನ್ನು ತಡೆಯಬಹುದು ಎಂಬುದು ಬಿಎಂಸಿ ಅಭಿಪ್ರಾಯ. ಈ ಯೋಜನೆ ಪ್ರಾಯೋಗಿಕವಾಗಿ ಶುರುವಾಗಿದ್ದು, ಮಲ್ಬಾರ್​ ಹಿಲ್​​, ಟರೇಡೋ ಮತ್ತು ಪೆಡ್ಡರ್​ ರೋಡ್​​ಗಳನ್ನೊಳಗೊಂಡ ಬಿಎಂಸಿಯ ಡಿ ವಾರ್ಡ್​​​ಗೆ ಟ್ರೀ ಸರ್ಜನ್​ ಆಗಿ ವೈಭವ್​ ರಾಜೆ ನೇಮಕಗೊಂಡಿದ್ದಾರೆ. ಈ ಪ್ರದೇಶದಲ್ಲಿರುವ ಸುಮಾರು 100-150 ಮರಗಳನ್ನು ಇವರು ಅಧ್ಯಯನ ಮಾಡಲಿದ್ದಾರೆ.

ವಿಪರೀತ ಮಳೆ ಬೀಳುವ ಸಂದರ್ಭದಲ್ಲಿ ಅದೆಷ್ಟೋ ಮರಗಳ ಬೇರು, ಕಾಂಡಗಳು ಕೊಳೆಯುತ್ತವೆ. ಯಾವುದಾದರೂ ಫಂಗಸ್​ ಸೋಂಕಿನಿಂದ ದುರ್ಬಲವಾಗುತ್ತವೆ. ಮರಗಳು ಮೇಲಿನಿಂದ ಚೆನ್ನಾಗಿಯೇ ಕಂಡರೂ ಒಳಗೆ ಯಾವುದಾದರೂ ಭಾಗದಲ್ಲಿ ದುರ್ಬಲವಾಗುವ ಸಾಧ್ಯತೆ ಮಳೆಗಾಲದಲ್ಲಿ ಹೆಚ್ಚಾಗಿರುತ್ತದೆ. ಇದನ್ನು ಅಧ್ಯಯನ ಮಾಡಿ, ಅಗತ್ಯವಿದ್ದರೆ ಸೂಕ್ತ ರೀತಿಯಲ್ಲಿ ಔಷಧಗಳ ಸಿಂಪಡಣೆ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ರಾಜೆ ವಿವರಿಸಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರಕ್ಕೆ ಸದ್ಯದಲ್ಲೇ ರಾಜ್ಯದ ಸ್ಥಾನಮಾನ; ಯಾವುದೇ ಕಾರಣಕ್ಕೂ ವಿಶೇಷ ಸ್ಥಾನ ನೀಡಲ್ಲ- ಮೋದಿ ಲೆಕ್ಕಾಚಾರವೇನು?

Published On - 1:02 pm, Mon, 21 June 21

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ