Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಷಯರೋಗ ಸೋಲುತ್ತದೆ, ಭಾರತ ಮತ್ತು ಜಗತ್ತು ಗೆಲ್ಲುತ್ತದೆ: ವಿಶ್ವ ಟಿಬಿ ಶೃಂಗಸಭೆಯಲ್ಲಿ ನರೇಂದ್ರ ಮೋದಿ

ವಿಶ್ವ ಟಿಬಿ ಶೃಂಗಸಭೆಯಲ್ಲಿ ವಿವಿಧ ದೇಶಗಳ ಆರೋಗ್ಯ ಸಚಿವರು ಮತ್ತು ಪ್ರತಿನಿಧಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರೋಗವನ್ನು ಎದುರಿಸುವಲ್ಲಿ ಭಾರತದ ಜಾಗತಿಕ ಪಾತ್ರದ ಬಗ್ಗೆ ವಿಶೇಷ ಉಲ್ಲೇಖವನ್ನು ಮಾಡಿದರು.

ಕ್ಷಯರೋಗ ಸೋಲುತ್ತದೆ, ಭಾರತ ಮತ್ತು ಜಗತ್ತು ಗೆಲ್ಲುತ್ತದೆ: ವಿಶ್ವ ಟಿಬಿ ಶೃಂಗಸಭೆಯಲ್ಲಿ ನರೇಂದ್ರ ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Mar 24, 2023 | 9:21 PM

ಲಕ್ನೋ: ಕ್ಷಯರೋಗ (Tuberculosis- TB) ಸೋಲುತ್ತದೆ ಮತ್ತು ಭಾರತ ಮತ್ತು ಜಗತ್ತು ಗೆಲ್ಲುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಕ್ಷಯರೋಗವನ್ನು ಕೊನೆಗೊಳಿಸುವ ಜಾಗತಿಕ ಗುರಿ 2030 ಆಗಿದ್ದರೆ, ಭಾರತವು 2025 ರ ವೇಳೆಗೆ ಅದನ್ನು ನಿರ್ಮೂಲನೆ ಮಾಡಲು ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ವಾರಣಾಸಿಯಲ್ಲಿ ‘ಒನ್ ವರ್ಲ್ಡ್ ಟಿಬಿ ಶೃಂಗಸಭೆ 2023’ (One World TB Summit 2023)ಅನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ನವ ಭಾರತವು ತನ್ನ ಗುರಿಗಳನ್ನು ಸಾಧಿಸಲು ಹೆಸರುವಾಸಿಯಾಗಿದೆ. ಟಿಬಿ ನಿರ್ಮೂಲನೆಯನ್ನು ಪ್ರತಿಜ್ಞೆಯಾಗಿ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ದೇಶದಲ್ಲಿ ಬಯಲು ಶೌಚ ಇಲ್ಲವಾಗಿಸುವುದು, ಸ್ವಚ್ಛ ಭಾರತ ಅಭಿಯಾನ ಮತ್ತು ದಾಖಲೆಯ ಎಥೆನಾಲ್ ಉತ್ಪಾದನೆಯನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ.

ಪ್ರಧಾನಮಂತ್ರಿಯವರು ಟಿಬಿ ಪ್ರಿವೆಂಟಿವ್ ಟ್ರೀಟ್ಮೆಂಟ್ (TPT), ಟಿಬಿ ಉಚಿತ ಪಂಚಾಯತ್ ಉಪಕ್ರಮ, ಟಿಬಿಗಾಗಿ ಕುಟುಂಬ ಕೇಂದ್ರಿತ ಆರೈಕೆ ಮಾದರಿ ಮತ್ತು ಭಾರತದ ವಾರ್ಷಿಕ ಟಿಬಿ ವರದಿ-2023 ಅನ್ನು ಬಿಡುಗಡೆ ಮಾಡಿದರು. ವಾರಣಾಸಿಯಲ್ಲಿ ಮೋದಿ, BSL ಲ್ಯಾಬ್ ಮೆಟ್ರೋಪಾಲಿಟನ್ ಸಾರ್ವಜನಿಕ ಆರೋಗ್ಯ ಕಣ್ಗಾವಲು ಘಟಕಕ್ಕೆ ಶಿಲಾನ್ಯಾಸ ಕಾರ್ಯವನ್ನೂ ನೆರವೇರಿಸಿದ್ದಾರೆ.

ವಿಶ್ವ ಟಿಬಿ ಶೃಂಗಸಭೆಯಲ್ಲಿ ವಿವಿಧ ದೇಶಗಳ ಆರೋಗ್ಯ ಸಚಿವರು ಮತ್ತು ಪ್ರತಿನಿಧಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರೋಗವನ್ನು ಎದುರಿಸುವಲ್ಲಿ ಭಾರತದ ಜಾಗತಿಕ ಪಾತ್ರದ ಬಗ್ಗೆ ವಿಶೇಷ ಉಲ್ಲೇಖವನ್ನು ಮಾಡಿದರು. 2014 ರಿಂದ ಭಾರತವು ಟಿಬಿ ವಿರುದ್ಧ ಜಾಗತಿಕ ಹೋರಾಟದಲ್ಲಿ ಹೊಸ ಮಾದರಿಯಲ್ಲಿ ಕೆಲಸ ಮಾಡುತ್ತಿದೆ ಜಗತ್ತು ಅದರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಜನರ ಸಹಭಾಗಿತ್ವ, ಪೌಷ್ಟಿಕಾಂಶದ ವರ್ಧನೆ, ಔಷಧಿಗಳಲ್ಲಿ ನಾವೀನ್ಯತೆ, ತಾಂತ್ರಿಕ ಪ್ರಗತಿಯ ಬಳಕೆ ಮತ್ತು ಖೇಲೋ ಇಂಡಿಯಾ ಮತ್ತು ಫಿಟ್ ಇಂಡಿಯಾದಂತಹ ಕ್ಷೇಮ ಅಭಿಯಾನಗಳು ಅಥವಾ ಯೋಗಾಭ್ಯಾಸವು ಭಯಾನಕ ಕಾಯಿಲೆಗಳನ್ನು ಎದುರಿಸಲು ಬಳಸುವ ಮುಖ್ಯ ಸಾಧನಗಳಾಗಿವೆ ಎಂದಿದ್ದಾರೆ ಮೋದಿ.

ಇದನ್ನೂ ಓದಿ: Johnson & Johnson: ಭಾರತದಲ್ಲಿ ಪ್ರಮುಖ ಕ್ಷಯರೋಗ ಔಷಧ ಪೇಟೆಂಟ್ ಕಳೆದುಕೊಂಡ ಜಾನ್ಸನ್ ಆಂಡ್​ ಜಾನ್ಸನ್

ಈ ಪ್ರಯತ್ನದಲ್ಲಿ ಜನರ ಭಾಗವಹಿಸುವಿಕೆಯನ್ನು ನಾವು ಖಚಿತಪಡಿಸಿದ್ದೇವೆ. ಟಿಬಿ ಮುಕ್ತ ಭಾರತ ಅಭಿಯಾನಕ್ಕೆ ಸೇರಲು ‘ನಿಕ್ಷಯ ಮಿತ್ರರನ್ನು’ ಮಾಡುವಂತೆ ನಾವು ಅವರಿಗೆ ಕರೆ ನೀಡಿದ್ದೇವೆ. ಈ ಅಭಿಯಾನದ ನಂತರ, ದೇಶದ ಸಾಮಾನ್ಯ ನಾಗರಿಕರು ಸುಮಾರು 10 ಲಕ್ಷ ಟಿಬಿ ರೋಗಿಗಳನ್ನು ದತ್ತು ಪಡೆದರು. 10-12 ವರ್ಷ ವಯಸ್ಸಿನ ಮಕ್ಕಳು ಸಹ ಟಿಬಿ ವಿರುದ್ಧದ ಈ ಹೋರಾಟವನ್ನು ‘ನಿಕ್ಷಯ ಮಿತ್ರ’ ಎಂದು ಮುಂದಕ್ಕೆ ಕೊಂಡೊಯ್ಯುತ್ತಿದ್ದಾರೆ. ಟಿಬಿ ರೋಗಿಗಳನ್ನು ದತ್ತು ತೆಗೆದುಕೊಳ್ಳಲು ಮತ್ತು ರೋಗವನ್ನು ಯಶಸ್ವಿಯಾಗಿ ಎದುರಿಸಲು ಅವರಿಗೆ ಸಹಾಯ ಮಾಡಲು ಅನೇಕ ಮಕ್ಕಳು ತಮ್ಮ ಹುಂಡಿಗಳನ್ನು ಒಡೆದಿದ್ದಾರೆ. ಟಿಬಿ ರೋಗಿಗಳಿಗೆ ‘ನಿಕ್ಷಯ್ ಮಿತ್ರರ’ನ ಈ ಆರ್ಥಿಕ ನೆರವು 1000 ಕೋಟಿ ರೂಪಾಯಿಗಳನ್ನು ತಲುಪಿದೆ ಎಂದು ಪ್ರಧಾನಿ ಹೇಳಿದ್ದಾರೆ.

2018 ರಲ್ಲಿ ಕೇಂದ್ರವು ಘೋಷಿಸಿದ ಯೋಜನೆಯಲ್ಲಿ ಒಟ್ಟು 75 ಲಕ್ಷ ಟಿಬಿ ರೋಗಿಗಳು ತಮ್ಮ ಖಾತೆಗಳಲ್ಲಿ 2000 ಕೋಟಿ ರೂಪಾಯಿಗಳನ್ನು ನೇರ ಬ್ಯಾಂಕ್ ವರ್ಗಾವಣೆ (ಡಿಬಿಟಿ) ಮೂಲಕ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ಸ್ಕ್ರೀನಿಂಗ್ ಮತ್ತು ಚಿಕಿತ್ಸೆಗಾಗಿ, ಟಿಬಿ ರೋಗಿಗಳನ್ನು ಆಯುಷ್ಮಾನ್ ಭಾರತ್ ಯೋಜನೆಗೆ ಲಿಂಕ್ ಮಾಡಲಾಗಿದೆ. ಉಚಿತ ಟಿಬಿ ಪರೀಕ್ಷೆಗಾಗಿ ದೇಶಾದ್ಯಂತ ಲ್ಯಾಬ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಇಂದು ಕ್ಷಯಮುಕ್ತ ಪಂಚಾಯತಿ ಆರಂಭಗೊಂಡಿದ್ದು, ಗ್ರಾಮಗಳ ಚುನಾಯಿತ ಸಾರ್ವಜನಿಕ ಪ್ರತಿನಿಧಿಗಳು ಒಟ್ಟಾಗಿ ಗ್ರಾಮದ ಪ್ರತಿಯೊಬ್ಬ ರೋಗಿ ಆರೋಗ್ಯವಂತರಾಗಿರಬೇಕೆಂಬ ಸಂಕಲ್ಪವನ್ನು ಕೈಗೊಳ್ಳಲಿದ್ದಾರೆ. ನಾವು ಆರು ತಿಂಗಳ ಕೋರ್ಸ್ ಬದಲಿಗೆ ಟಿಬಿ ತಡೆಗಟ್ಟುವಿಕೆಗಾಗಿ ಮೂರು ತಿಂಗಳ ಚಿಕಿತ್ಸೆಯನ್ನು ಪ್ರಾರಂಭಿಸಿದ್ದೇವೆ. ಪ್ರತಿ ರೋಗಿಗೆ ಅಗತ್ಯವಿರುವ ಆರೈಕೆಯನ್ನು ಪತ್ತೆಹಚ್ಚಲು ನಾವು ನಿಕ್ಷಯ್ ಪೋರ್ಟಲ್ ಅನ್ನು ರಚಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:31 pm, Fri, 24 March 23

Daily Horoscope: ಕರ್ಮಕಾರಕ ಶನಿ ಕುಂಭದಿಂದ ಮೀನ ರಾಶಿಯತ್ತ ಪ್ರವೇಶ
Daily Horoscope: ಕರ್ಮಕಾರಕ ಶನಿ ಕುಂಭದಿಂದ ಮೀನ ರಾಶಿಯತ್ತ ಪ್ರವೇಶ
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್