AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶ ಚತುರ್ಥಿ ದಿನ ಶುಭಾಶಯ ಟ್ವೀಟ್​​ ಮಾಡಿದ ವಿಜಯ್​​ ಮಲ್ಯ, ಬ್ಯಾಂಕ್​​​ ರಜೆ ಇದ್ದ ದಿನ ಮಾತ್ರ ಇವರು ಟ್ವೀಟ್​​​ ಮಾಡ್ತಾರೆ ಎಂದ ನೆಟ್ಟಿಗರು

ಬ್ಯಾಂಕ್ ರಜೆ ಇರುವಾಗ ಮಾತ್ರ ಏಕೆ ಟ್ವೀಟ್ ಮಾಡುತ್ತಾರೆ ಎಂದು ಟ್ವಿಟರ್‌ನಲ್ಲಿ ಹಲವರು ಮಲ್ಯ ಅವರನ್ನು ಕೇಳಿದ್ದಾರೆ. 66 ವರ್ಷದ ವ್ಯಕ್ತಿಯನ್ನು ಟ್ರೋಲ್ ಮಾಡಲು ಜನರು ಅವಕಾಶವನ್ನು ಬಳಸುತ್ತಿದ್ದಂತೆ...

ಗಣೇಶ ಚತುರ್ಥಿ ದಿನ ಶುಭಾಶಯ ಟ್ವೀಟ್​​ ಮಾಡಿದ ವಿಜಯ್​​ ಮಲ್ಯ, ಬ್ಯಾಂಕ್​​​ ರಜೆ ಇದ್ದ ದಿನ ಮಾತ್ರ ಇವರು ಟ್ವೀಟ್​​​ ಮಾಡ್ತಾರೆ ಎಂದ ನೆಟ್ಟಿಗರು
ವಿಜಯ್ ಮಲ್ಯ
TV9 Web
| Edited By: |

Updated on:Sep 02, 2022 | 8:45 PM

Share

ಬ್ಯಾಂಕ್ ವಂಚನೆ ಆರೋಪದ ನಡುವೆ ಭಾರತದಿಂದ ಪಲಾಯನ ಮಾಡಿ ಐದು ವರ್ಷಗಳಿಂದ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ವಾಸಿಸುತ್ತಿರುವ ಮಾಜಿ ಕಿಂಗ್‌ಫಿಶರ್ ಏರ್‌ಲೈನ್ಸ್ ಮುಖ್ಯಸ್ಥ ವಿಜಯ್ ಮಲ್ಯ(Vijay Mallya) ಟ್ವಿಟರ್ ನಲ್ಲಿ ಗಣೇಶ ಚತುರ್ಥಿಯ ಶುಭಾಶಯ ಕೋರಿದ್ದಾರೆ. ಆದರೆ ನೆಟ್ಟಿಗರು ಈ ಟ್ವೀಟ್​​ನ್ನು ಟ್ರೋಲ್ ಮಾಡಿದ್ದಾರೆ.ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು ಎಂದು ಮಲ್ಯ ಟ್ವಿಟರ್‌ನಲ್ಲಿ ಬರೆದಿದ್ದು, ಡಿಎನ್ ಪಾಂಡೆ ಎಂಬ ಟ್ವೀಟಿಗರು ಈ ವ್ಯಕ್ತಿ ಬ್ಯಾಂಕ್ ರಜಾದಿನಗಳಲ್ಲಿ ಮಾತ್ರ ಟ್ವೀಟ್ ಮಾಡುತ್ತಾರೆ ಎಂದಿದ್ದಾರೆ. ಬ್ಯಾಂಕ್ ರಜೆ ಇರುವಾಗ ಮಾತ್ರ ಏಕೆ ಟ್ವೀಟ್ ಮಾಡುತ್ತಾರೆ ಎಂದು ಟ್ವಿಟರ್‌ನಲ್ಲಿ ಹಲವರು ಮಲ್ಯ ಅವರನ್ನು ಕೇಳಿದ್ದಾರೆ. 66 ವರ್ಷದ ವ್ಯಕ್ತಿಯನ್ನು ಟ್ರೋಲ್ ಮಾಡಲು ಜನರು ಅವಕಾಶವನ್ನು ಬಳಸುತ್ತಿದ್ದಂತೆ, ಆರ್​​ಪಿಜಿ ಗ್ರೂಪ್ ಸಮೂಹದ ಅಧ್ಯಕ್ಷ ಹರ್ಷ್ ಗೋಯೆಂಕಾ ಟ್ವಿಟರ್ ಅನ್ನು “ನಿರ್ದಯ” ಎಂದು ಕರೆದರು.

ಟ್ವಿಟರ್ ಬಳಕೆದಾರರಲ್ಲಿ ಒಬ್ಬರು ಮಲ್ಯ ಅವರು ಇಲ್ಲಿ ಹಬ್ಬಗಳನ್ನು ಆಚರಿಸಲು ಭಾರತಕ್ಕೆ ಯಾವಾಗ ಮರಳುತ್ತಾರೆ  ಎಂದು ಕೇಳಿದ್ದಾರೆ. ಅವರು ಏನಾದರೂ  ಟ್ವೀಟ್ ಮಾಡಿದಾಗಲೆಲ್ಲಾ, ಎಲ್ಲರೂ SBI ಪರವಾಗಿ ಹೀಗೆ ಹೇಳ್ತಾರೆ ಟ್ವೀಟಿಗರು ಮೀಮ್ ಕೂಡಾ ಶೇರ್ ಮಾಡಿದ್ದಾರೆ.

ಮಲ್ಯ ಅವರ ಟ್ವಿಟ್ಟರ್ ಟೈಮ್‌ಲೈನ್ ಅನ್ನು ಒಬ್ಬರು ಸೂಕ್ಷ್ಮವಾಗಿ ಗಮನಿಸಿದರೆ, ಸಾರ್ವಜನಿಕ ರಜಾದಿನಗಳಲ್ಲಿ ತಮ್ಮ ಅಭಿಮಾನಿಗಳಿಗೆ ಶುಭ ಹಾರೈಸಲು ಉದ್ಯಮಿ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಮಾತ್ರ ಬರುತ್ತಾರೆ ಎಂದು ತೋರುತ್ತದೆ. ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಅವರ ಎಲ್ಲಾ ಹಿಂದಿನ ಟ್ವೀಟ್‌ಗಳನ್ನು ವಿವಿಧ ಹಬ್ಬಗಳಲ್ಲಿ ಹಂಚಿಕೊಳ್ಳಲಾಗಿದೆ.

ತಮ್ಮ ದುಂದುವೆಚ್ಚದ ಜೀವನಶೈಲಿಯಿಂದಾಗಿ ಒಂದು ಕಾಲದಲ್ಲಿ ‘king of good times’ ಎಂದು ಕರೆಯಲ್ಪಟ್ಟ ಮಲ್ಯ, 90 ಶತಕೋಟಿ ಸಾಲವನ್ನು ಒಳಗೊಂಡ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಆರೋಪಿಯಾದ ನಂತರ 2016 ರಲ್ಲಿ ಯುಕೆಗೆ ಓಡಿಹೋದರು. 2012ರಲ್ಲಿ ಮಲ್ಯ ಸುತ್ತ ವಿವಾದಗಳ ಕರಾಳ ಮೋಡ ಕವಿದಿತ್ತು.

2017 ರಲ್ಲಿ ವಂಚನೆಯ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಅಧಿಕಾರಿಗಳ ಪರವಾಗಿ ಯುಕೆ ಮೆಟ್ರೋಪಾಲಿಟನ್ ಪೊಲೀಸ್ ಹಸ್ತಾಂತರ ಘಟಕದಿಂದ ಉದ್ಯಮಿಯನ್ನು ಬಂಧಿಸಲಾಯಿತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. 11 ಜುಲೈ 2022 ರಂದು ಸುಪ್ರೀಂ ಕೋರ್ಟ್‌ನಿಂದ ಅವರಿಗೆ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು. 2017 ರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮಲ್ಯ ಅವರಿಗೆ ನ್ಯಾಯಾಲಯವು 2,000 ರೂ ದಂಡ ವಿಧಿಸಿದೆ. ಏತನ್ಮಧ್ಯೆ, ಕುಖ್ಯಾತ ಪನಾಮ ಪೇಪರ್ಸ್ ಮತ್ತು ಪ್ಯಾರಡೈಸ್ ಪೇಪರ್‌ಗಳಲ್ಲಿ ಅವರ ಹೆಸರು ಕೂಡ ಕಾಣಿಸಿಕೊಂಡಿದೆ, ಇದು ಸಾಗರೋತ್ತರ ಹೂಡಿಕೆಗೆ ಸಂಬಂಧಿಸಿದ ಗೌಪ್ಯ ದಾಖಲೆಗಳನ್ನು ಸೋರಿಕೆ ಮಾಡಿದೆ.

Published On - 8:41 pm, Fri, 2 September 22