AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲ್​ ಸೈನ್ಯಕ್ಕೆ ಸೇರ್ಪಡೆಯಾದ ಗುಜರಾತ್​​ ಸೋದರಿಯರು; ಸಾಧನೆಗೆ ಮೆಚ್ಚುಗೆಯ ಮಹಾಪೂರ

ನಿಶಾ ಇಸ್ರೇಲ್​ ಸೈನ್ಯದ ಸಂವಹನ ಮತ್ತು ಸೈಬರ್​ ಭದ್ರತಾ ಇಲಾಖೆಯ ಮುಂಚೂಣಿ ಘಟಕವೊಂದರ ಮುಖ್ಯಸ್ಥೆಯಾಗಿದ್ದಾರೆ. ರಿಯಾ ಇತ್ತೀಚೆಗಷ್ಟೇ ತಮ್ಮ 12ನೇ ತರಗತಿ ಮುಗಿಸಿ ಸೈನ್ಯ ಸೇರಿಸಿದ್ದಾರೆ.

ಇಸ್ರೇಲ್​ ಸೈನ್ಯಕ್ಕೆ ಸೇರ್ಪಡೆಯಾದ ಗುಜರಾತ್​​ ಸೋದರಿಯರು; ಸಾಧನೆಗೆ ಮೆಚ್ಚುಗೆಯ ಮಹಾಪೂರ
ಗುಜರಾತ್​​ನ ಸೋದರಿಯರು
TV9 Web
| Edited By: |

Updated on:Jun 02, 2021 | 9:56 AM

Share

ಗುಜರಾತ್​​ನ ಸಹೋದರಿಯರಿಬ್ಬರು ಇಸ್ರೇಲ್​ ಸೈನ್ಯವನ್ನು ಸೇರ್ಪಡೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇವರಿಬ್ಬರಲ್ಲಿ ಒಬ್ಬರು ಇಸ್ರೇಲ್​ ಸೇನೆಯ ನಿರ್ವಹಣಾ ವಿಭಾಗದ ಮುಖ್ಯಸ್ಥಳಾಗಿದ್ದರೆ ಮತ್ತೊಬ್ಬರು ಕಮಾಂಡೋ ಆಗಿ ತರಬೇತಿ ಪಡೆಯುತ್ತಿದ್ದಾರೆ. ಇವರಿಗೆ ತರಬೇತಿ ಮುಗಿಯುತ್ತಿದ್ದಂತೆ ಇಸ್ರೇಲ್​ ಸೇನೆಯಲ್ಲಿ ಶಾಶ್ವತ ಕಮಾಂಡೋ ಆಗಿ ನೇಮಕಗೊಳ್ಳಲಿದ್ದಾರೆ. ಸಹೋದರಿಯರು ಗುಜರಾತ್​ನ ಜುನಾಗಡ್​ ಜಿಲ್ಲೆಯವರಾಗಿದ್ದು, ಇವರ ಸಾಧನೆಗೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.

ಗುಜರಾತ್​ನ ಕೋಠಿ ಗ್ರಾಮದ ಜೀವಾಬಾಯ್​ ಜೀವಭಾಯ್ ಮುನಿಯಾಸಿಯಾ ಎಂಬುವರು ಹಲವು ವರ್ಷಗಳ ಹಿಂದೆ ತನ್ನ ಸಹೋದರನೊಂದಿಗೆ ಇಸ್ರೇಲ್​ನ ತೆಲ್​ ಅವಿವ್​ಗೆ ಹೋಗಿ ನೆಲೆಸಿದ್ದರು. ಮುನಾಸಿಯಾ ಅವರ ಸೋದರರು ಇಸ್ರೇಲ್​​ನಲ್ಲಿ ಕಿರಾಣಿ ಉದ್ಯಮ ಮಾಡುತ್ತಿದ್ದಾರೆ. ಇದೇ ಕುಟುಂಬದ ಸಹೋದರಿಯರಾದ ನಿಶಾ ಮತ್ತು ರಿಯಾ ಇಬ್ಬರೂ ಇಸ್ರೇಲ್​ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರಲ್ಲಿ ನಿಶಾ ಇಸ್ರೇಲ್​ ಸೈನ್ಯದ ಸಂವಹನ ಮತ್ತು ಸೈಬರ್​ ಭದ್ರತಾ ಇಲಾಖೆಯ ಮುಂಚೂಣಿ ಘಟಕವೊಂದರ ಮುಖ್ಯಸ್ಥೆಯಾಗಿದ್ದಾರೆ. ರಿಯಾ ಇತ್ತೀಚೆಗಷ್ಟೇ ತಮ್ಮ 12ನೇ ತರಗತಿ ಮುಗಿಸಿ ಸೈನ್ಯ ಸೇರಿಸಿದ್ದಾರೆ. ಇವರು ಸದ್ಯ ಕಮಾಂಡೋ ತರಬೇತಿ ಹಂತದಲ್ಲಿದ್ದಾರೆ.

ಇದನ್ನೂ ಓದಿ: ಮೈಸೂರು; ಒಂದು ತಿಂಗಳಲ್ಲಿ ಕೊರೊನಾಗೆ 320 ಸಾವು, ಪೋಷಕರನ್ನು ಕಳೆದುಕೊಂಡು ತಬ್ಬಲಿಯಾದ ಮಕ್ಕಳು

Published On - 9:55 am, Wed, 2 June 21

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್