Made in India Syrup: ಉಜ್ಬೇಕಿಸ್ತಾನದಲ್ಲಿ 19 ಮಕ್ಕಳ ಸಾವಿಗೆ ಕಾರಣವಾಗಿದ್ದ ಮೇರಿಯನ್ ಬಯೋಟೆಕ್‌ ಸಂಸ್ಥೆ ಪರವಾನಿಗೆ ರದ್ದು

ಉಜ್ಬೇಕಿಸ್ತಾನ್‌ನಲ್ಲಿ 19 ಮಕ್ಕಳ ಸಾವಿಗೆ ಕಾರಣವಾಗಿದ್ದ ಕೆಮ್ಮಿನ ಸಿರಪ್‌ನ ಔಷಧ ತಯಾರಕ ಮೇರಿಯನ್ ಬಯೋಟೆಕ್‌ನ ಉತ್ಪಾದನಾ ಪರವಾನಗಿಯನ್ನು ಉತ್ತರ ಪ್ರದೇಶ ಸರ್ಕಾರ ರದ್ದುಗೊಳಿಸಿದೆ.

Made in India Syrup: ಉಜ್ಬೇಕಿಸ್ತಾನದಲ್ಲಿ 19 ಮಕ್ಕಳ ಸಾವಿಗೆ ಕಾರಣವಾಗಿದ್ದ ಮೇರಿಯನ್ ಬಯೋಟೆಕ್‌ ಸಂಸ್ಥೆ ಪರವಾನಿಗೆ ರದ್ದು
ಸಾಂದರ್ಭಿಕ ಚಿತ್ರ
Image Credit source: google image
Edited By:

Updated on: Jan 10, 2023 | 3:42 PM

ಉಜ್ಬೇಕಿಸ್ತಾನ್‌ನಲ್ಲಿ (Uzbekistan) 19 ಮಕ್ಕಳ ಸಾವಿಗೆ ಕಾರಣವಾಗಿದ್ದ ಕೆಮ್ಮಿನ ಸಿರಪ್‌ನ (Syrup) ಔಷಧ ತಯಾರಕ ಮೇರಿಯನ್ ಬಯೋಟೆಕ್‌ನ ಉತ್ಪಾದನಾ ಪರವಾನಗಿಯನ್ನು ಉತ್ತರ ಪ್ರದೇಶ ಸರ್ಕಾರ ರದ್ದುಗೊಳಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಮಂಗಳವಾರ ವರದಿ ಮಾಡಿದೆ. ಮರಿಯನ್ ಬಯೋಟೆಕ್ ತಯಾರಿಸಿದ ಕೆಮ್ಮಿನ ಸಿರಪ್ ಸೇವಿಸಿದ 19 ಮಕ್ಕಳ ಸಾವಿನ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಉಜ್ಬೇಕಿಸ್ತಾನ್ ಈ ಹಿಂದೆ ನಾಲ್ವರನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ ಇಬ್ಬರು ಔಷಧಿಗಳ ಪ್ರಮಾಣೀಕರಣದ ವೈಜ್ಞಾನಿಕ ಕೇಂದ್ರದ ಹಿರಿಯ ಉದ್ಯೋಗಿಗಳಾಗಿದ್ದು, ಅವರು ಡಾಕ್-1 ಮ್ಯಾಕ್ಸ್ ಕೆಮ್ಮಿನ ಸಿರಪ್‌ಗೆ ಸರಿಯಾದ ಪರೀಕ್ಷಾ ವಿಧಾನ ಮಾಡದೆ ಬಿಡುಗಡೆ ಮಾಡಿದ್ದಾರೆ. ಇನ್ನಿಬ್ಬರು ಮರಿಯನ್ ಬಯೋಟೆಕ್ ಔಷಧಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಕ್ಯುರಾಮ್ಯಾಕ್ಸ್ ಮೆಡಿಕಲ್ ಕಂಪನಿಯ ಕಾರ್ಯನಿರ್ವಾಹಕರಾಗಿದ್ದರು. ಮಾರಿಯನ್ ಬಯೋಟೆಕ್ 19 ಮಕ್ಕಳ ಸಾವಿನ ನಂತರ ಸಿರಪ್ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ ಎಂದು ಹೇಳಿದರು.

ಉಜ್ಬೇಕಿಸ್ತಾನ್‌ನ ಆರೋಗ್ಯ ಸಚಿವಾಲಯವು ಸಿರಪ್‌ನಲ್ಲಿ ಎಥಿಲೀನ್ ಗ್ಲೈಕೋಲ್ ಎಂಬ ವಿಷಕಾರಿ ವಸ್ತುವನ್ನು ಹೊಂದಿದೆ ಮತ್ತು ಮಕ್ಕಳಿಗೆ ಪ್ರಮಾಣಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತಿತ್ತು, ಅವರ ಪೋಷಕರು ಇದನ್ನು ಶೀತ-ವಿರೋಧಿ ಪರಿಹಾರ ಮಾಡುವ ಸಿರಪ್ ಎಂದು ತಪ್ಪಾಗಿ ಗ್ರಹಿಸಿ ಔಷಧಿಕಾರರ ಸಲಹೆಯ ಮೇರೆಗೆ ಇದನ್ನು ಮಕ್ಕಳಿಗೆ ನೀಡಿದ್ದಾರೆ.

ಇದನ್ನು ಓದಿ:Made in India syrup: 18 ಮಕ್ಕಳ ಸಾವಿಗೆ ಕಾರಣವಾದ ನೋಯ್ಡಾ ಫರ್ಮ್ ಬಿಹೈಂಡ್ ಸಿರಪ್ ಉತ್ಪಾದನೆ ಸ್ಥಗಿತ

ಉಜ್ಬೇಕಿಸ್ತಾನ್ ಪ್ರಕರಣದಂತೆ ಗ್ಯಾಂಬಿಯಾದಲ್ಲಿ 70 ಮಕ್ಕಳ ಸಾವು ಸಂಭವಿಸಿತ್ತು. ಸಂಸದೀಯ ಸಮಿತಿಯು ನವದೆಹಲಿ ಮೂಲದ ಮೈಡೆನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ಕೆಮ್ಮು ಮತ್ತು ಶೀತ ಸಿರಪ್‌ನಿಂದ ಗ್ಯಾಂಬಿಯಾದಲ್ಲಿ 70 ಮಕ್ಕಳ ಸಾವನ್ನಪ್ಪಿದ್ದಾರೆ ಎಂಬ ಹೇಳಿಕೆಯನ್ನು ಭಾರತವು ನಿರಾಕರಿಸಿತು ಮತ್ತು ಭಾರತೀಯ ಸರ್ಕಾರಿ ಇನ್ಸ್‌ಪೆಕ್ಟರ್‌ಗಳು ಪರೀಕ್ಷಾ ಮಾದರಿಗಳಲ್ಲಿ ಯಾವುದೇ ಮಾಲಿನ್ಯವನ್ನು ಕಂಡುಕೊಂಡಿಲ್ಲ ಎಂದು ತಿಳಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:29 pm, Tue, 10 January 23