ಏಳು ತಿಂಗಳ ಹಿಂದೆ ಇಬ್ಬರ ಮೇಲೆ ಕಾರು ಹತ್ತಿಸಿದ್ದ 15 ವರ್ಷದ ಬಾಲಕನಿಂದ ಮತ್ತೆ ಅಪಘಾತ

ಒಂದು ಬಾರಿ ಅಪಘಾತ ಮಾಡಿ ಇಬ್ಬರು ಮೃತಪಟ್ಟ ಮೇಲೂ ಬುದ್ಧಿ ಕಲಿಯದ 15 ವರ್ಷದ ಬಾಲಕ ಇದೀಗ ನಾಲ್ಕು ಜನರಿಗೆ ಗುದ್ದಿ ಜೈಲುಪಾಲಾಗಿದ್ದಾನೆ. ಅಷ್ಟು ಚಿಕ್ಕ ಮಕ್ಕಳಿಗೆ ಕಾರು ಚಲಾಯಿಸಲು ಅವಕಾಶ ನೀಡಿರುವ ಪೋಷಕರ ಮೇಲೂ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಬಾಲಕ ವೈದ್ಯರೊಬ್ಬರ ಮಗ ಎಂದು ತಿಳಿದುಬಂದಿದೆ.

ಏಳು ತಿಂಗಳ ಹಿಂದೆ ಇಬ್ಬರ ಮೇಲೆ ಕಾರು ಹತ್ತಿಸಿದ್ದ 15 ವರ್ಷದ ಬಾಲಕನಿಂದ ಮತ್ತೆ ಅಪಘಾತ
ಅಪಘಾತImage Credit source: News 18
Follow us
|

Updated on: May 23, 2024 | 8:05 AM

ಏಳು ತಿಂಗಳ ಹಿಂದೆ ಇಬ್ಬರ ಮೇಲೆ ಕಾರು ಹತ್ತಿಸಿ ಹತ್ಯೆ ಮಾಡಿದ್ದ 15 ವರ್ಷದ ಬಾಲಕ ಈಗ ಮತ್ತೆ ಅಪಘಾತ(Accident) ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪುಣೆಯಲ್ಲಿ 17 ವರ್ಷದ ಬಾಲಕ ಪೋರ್ಷೆ ಕಾರನ್ನು ಇಬ್ಬರು ಟೆಕ್ಕಿಗಳಿಗೆ ಡಿಕ್ಕಿ ಹೊಡೆಸಿ ಅವರ ಸಾವಿಗೆ ಕಾರಣವಾಗಿದ್ದ, ದೇಶಾದ್ಯಂತ ಈತನ ಮೇಲೆ ಆಕ್ರೋಶ ವ್ಯಕ್ತವಾಗಿತ್ತು, ಈ ಘಟನೆ ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಕಾನ್ಪುರದಲ್ಲಿ 15 ವರ್ಷದ ಬಾಲಕನೊಬ್ಬ ಕಳೆದ ಅಕ್ಟೋಬರ್​ನಲ್ಲಿ ಇಬ್ಬರ ಮೇಲೆ ಕಾರು ಹತ್ತಿಸಿ ಹತ್ಯೆಗೈದಿದ್ದ, ಇದೀಗ ಮತ್ತೆ ನಾಲ್ಕು ಮಂದಿಗೆ ಡಿಕ್ಕಿ ಹೊಡೆದು ಜನರ ಆಕ್ರೋಶಕ್ಕೆ ಕಾರಣನಾಗಿದ್ದಾನೆ. ಈ ಕಾನ್ಪುರದ ಬಾಲಕ ವೈದ್ಯರೊಬ್ಬರ ಮಗ, ಆತನನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ. ಆರು ತಿಂಗಳ ಹಳೆಯ ಪ್ರಕರಣದಲ್ಲಿ ಆತನ ವಿರುದ್ಧ ವಿಚಾರಣೆಯನ್ನು ಪುನರಾರಂಭಿಸಲಾಯಿತು. ಆತನ ತಂದೆಯ ಮೇಲೂ ಎರಡೂ ಅಪಘಾತಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ.

ಈಗ ಮಂಗಳವಾರ ನಾಲ್ಕು ಜನರಿಗೆ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ, ಕಳೆದ ವರ್ಷ ಮಾರಣಾಂತಿಕ ಅಪಘಾತಕ್ಕೀಡಾಗಿದ್ದರೂ ಬಾಲಕನಿಗೆ ಕುಟುಂಬವು ಮತ್ತೆ ಕಾರನ್ನು ಓಡಿಸಲು ಅವಕಾಶ ಮಾಡಿಕೊಟ್ಟಿರುವುದು ಬೇಸರದ ಸಂಗತಿ ಕಾನ್ಪುರ ಸಿಟಿ ಕಮಿಷನರ್ ಅಖಿಲ್ ಕುಮಾರ್ ಹೇಳಿದ್ದಾರೆ.

ಮತ್ತಷ್ಟು ಓದಿ: ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ; ಅಪ್ರಾಪ್ತ ಚಾಲಕನ ಜಾಮೀನು ರದ್ದು

ಕಳೆದ ಅಕ್ಟೋಬರ್​ನಲ್ಲಿ ಸಾಗರ್ ನಿಶಾದ್ ಹಾಗೂ ಆಶಿಶ್​ ಚರಣ್​ ಎಂಬುವವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ವೇಗವಾಗಿ ಬಂದು ಇಬ್ಬರ ಮೇಲೆ ಕಾರು ಹತ್ತಿಸಿದ್ದರು. ಅದೇ ರೀತಿಯ ಘಟನೆ ಪುಣೆಯಲ್ಲೂ ನಡೆದಿದೆ. ರಿಯಲ್ ಎಸ್ಟೇಟ್​ ಉದ್ಯಮಿ ಮಗನಾದ ವೇದಾಂತ್​ ಅಗರ್ವಾಲ್​ ಕುಡಿದ ಮತ್ತಿನಲ್ಲಿ ವೇಗವಾಗಿ ಕಾರು ಚಲಾಯಿಸಿ ಇಬ್ಬರನ್ನು ಹತ್ಯೆ ಮಾಡಿದ್ದ, ಬಳಿಕ ಷರತ್ತುಬದ್ಧ ಜಾಮೀನು ನೀಡಲಾಗಿತ್ತು. ಆತನ ತಂದೆಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ ದೇಶಾದ್ಯಂತ ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಜಾಮೀನನ್ನು ರದ್ದುಗೊಳಿಸಿ ಆತನನ್ನು ಬಂಧಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ