AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ಡೋಸ್​ ಕೊರೊನಾ ಲಸಿಕೆ ಪಡೆದ ಬಿಜೆಪಿ ನಾಯಕ !-ಸರ್ಟಿಫಿಕೇಟ್​ ಡೌನ್​ಲೋಡ್​ ಮಾಡಿದಾಗ ಬೆಳಕಿಗೆ ಬಂತು ಪ್ರಮಾದ

ಸರ್ಟಿಫಿಕೇಟ್​ ನೋಡಿ ರಾಮಪಾಲ್​ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾನು ಪಡೆದಿದ್ದು ಎರಡೇ ಡೋಸ್​. ಹಾಗಿರುವಾಗ 5 ಡೋಸ್​ ಎಂದು ಹೇಗೆಬಂತು ಎಂದು ಪ್ರಶ್ನಿಸಿದ್ದಾರೆ.

5 ಡೋಸ್​ ಕೊರೊನಾ ಲಸಿಕೆ ಪಡೆದ ಬಿಜೆಪಿ ನಾಯಕ !-ಸರ್ಟಿಫಿಕೇಟ್​ ಡೌನ್​ಲೋಡ್​ ಮಾಡಿದಾಗ ಬೆಳಕಿಗೆ ಬಂತು ಪ್ರಮಾದ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Sep 20, 2021 | 1:00 PM

Share

ಮೀರತ್​:  ಉತ್ತರ ಪ್ರದೇಶದ ಬಿಜೆಪಿ ನಾಯಕರೊಬ್ಬರು  ಕೊರೊನಾ ಲಸಿಕೆ (Covid 19 Vaccine Certificate) ಪಡೆದು ಸರ್ಟಿಫಿಕೇಟ್​ ಡೌನ್​ ಲೋಡ್​ ಮಾಡಿಕೊಂಡರೆ ಅಲ್ಲೊಂದು ವಿಚಿತ್ರ ಸಂಗತಿ ಬಯಲಾಗಿದೆ. ರಾಮಪಾಲ್​ ಸಿಂಗ್​ (73) ಎಂಬುವರು ಕೊರೊನಾ ಲಸಿಕೆ ಪಡೆದು ಸರ್ಟಿಫಿಕೇಟ್​ ಡೌನ್​ ಲೋಡ್​ ಮಾಡಿಕೊಂಡಿದ್ದರು. ಅದರಲ್ಲಿ ಕೊರೊನಾ ಲಸಿಕೆ 5 ಡೋಸ್​ ಪಡೆಯಲಾಗಿದೆ ಎಂದು ಉಲ್ಲೇಖವಾಗಿದ್ದು, ಆರನೇ ಲಸಿಕೆಗೆ ದಿನಾಂಕವನ್ನೂ ತಿಳಿಸಲಾಗಿದೆ. ಇದನ್ನು ನೋಡಿ ಸ್ವತಃ ರಾಮಪಾಲ್​ ಸಿಂಗ್​ ಕಂಗಾಲಾಗಿದ್ದಾರೆ.  

ರಾಮಪಾಲ್​ ಸಿಂಗ್​ ಅವರು ಮೀರತ್​ನ ಸರ್ಧನ ಪ್ರದೇಶದ ಬೂತ್​ ನಂ.79ರ ಬಿಜೆಪಿ ಅಧ್ಯಕ್ಷರು. ಹಿಂದು ಯುವ ವಾಹಿನಿಯ ಸದಸ್ಯರೂ ಹೌದು. ಅವರು ಕೊರೊನಾ ಲಸಿಕೆ ಎರಡೂ ಡೋಸ್​ ಲಸಿಕೆಯನ್ನು ಪಡೆದು, ಅದರ ಸರ್ಟಿಫಿಕೇಟ್​ ಡೌನ್​ಲೋಡ್​ ಮಾಡಿಕೊಂಡಿದ್ದರು. ಆದರೆ ಆ ಸರ್ಟಿಫಿಕೇಟ್​​ನಲ್ಲಿ, ರಾಮಪಾಲ್​ 5 ಡೋಸ್​ ಕೊರೊನಾ ಲಸಿಕೆ ಪಡೆದಿದ್ದಾರೆ ಎಂದು ಉಲ್ಲೇಖವಾಗಿದೆ. ಆರನೇ ಲಸಿಕೆ ಪಡೆಯುವ ದಿನಾಂಕವನ್ನೂ ತಿಳಿಸಿದ್ದಾರೆ.

ಅದನ್ನು ನೋಡಿ ರಾಮಪಾಲ್​ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾನು ಪಡೆದಿದ್ದು ಎರಡೇ ಡೋಸ್​. ಹಾಗಿರುವಾಗ 5 ಡೋಸ್​ ಎಂದು ಹೇಗೆಬಂತು ಎಂದು ಪ್ರಶ್ನಿಸಿದ್ದಾರೆ. ಇದೀಗ ಈ ಬಗ್ಗೆ ತನಿಖೆಯೂ ನಡೆಯುತ್ತಿದೆ.  ಅಂದಹಾಗೆ ರಾಮಪಾಲ್​ ತಮ್ಮ ಮೊದಲ ಡೋಸ್​​ನ್ನು ಮಾರ್ಚ್​ 16ರಂದು, ಎರಡನೇ ಡೋಸ್​​ನ್ನು ಮೇ 8ರಂದು ಪಡೆದಿದ್ದರು. ಆದರೆ ಸರ್ಟಿಫಿಕೇಟ್​ನಲ್ಲಿ ಆರನೇ ಡೋಸ್​ ಲಸಿಕೆಯನ್ನು 2021ರ ಡಿಸೆಂಬರ್​​ನಿಂದ ಜನವರಿ 2022ರೊಳಗೆ ಪಡೆಯಬೇಕು ಎಂದು ಉಲ್ಲೇಖಿಸಲಾಗಿದೆ ಮತ್ತು ರಾಮಪಾಲ್​ ಅವರು ಮೊದಲ ಡೋಸ್​ನ್ನು ಮಾರ್ಚ್​ 16, ಎರಡನೇ ಡೋಸ್​ನ್ನು ಮೇ 8, ಮೂರನೇ ಡೋಸ್​ ಮೇ 15 ಮತ್ತು 4-5ನೇ ಡೋಸ್​​ನ್ನು ಸೆಪ್ಟೆಂಬರ್​ 15ರಂದು ಪಡೆದಿದ್ದಾರೆ ಎಂದೂ ತೋರಿಸಲಾಗಿದೆ.

ಇದನ್ನೂ ಓದಿ: Statue of Equality: ದಿವ್ಯ ಸಾಕೇತಂ ಆಶ್ರಮದಲ್ಲಿ ತ್ರಿದಂಡಿ ಚಿನ್ನಜೀಯರ್ ಶ್ರೀಗಳ ಸುದ್ದಿಗೋಷ್ಠಿ

ವೈರಲ್ ಆಯ್ತು ಚೀಸ್​ ಜತೆಗೆ ಮ್ಯಾಂಗೋ ಐಸ್ಕ್ರೀಮ್ ಚಾಟ್; ಇದ್ಯಾವ್ದಪ್ಪಾ ಹೊಸ ರೆಸಿಪಿ ಎಂದ ನೆಟ್ಟಿಗರು

(Uttar Pradesh BJP leader given 5 doses of Covid 19 vaccine shows Certificate)

ಕಾರವಾರದ ಕಡಲ ತೀರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಜಲಾಂತರ್ಗಾಮಿ ಯಾನ
ಕಾರವಾರದ ಕಡಲ ತೀರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಜಲಾಂತರ್ಗಾಮಿ ಯಾನ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ