AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ಡೋಸ್​ ಕೊರೊನಾ ಲಸಿಕೆ ಪಡೆದ ಬಿಜೆಪಿ ನಾಯಕ !-ಸರ್ಟಿಫಿಕೇಟ್​ ಡೌನ್​ಲೋಡ್​ ಮಾಡಿದಾಗ ಬೆಳಕಿಗೆ ಬಂತು ಪ್ರಮಾದ

ಸರ್ಟಿಫಿಕೇಟ್​ ನೋಡಿ ರಾಮಪಾಲ್​ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾನು ಪಡೆದಿದ್ದು ಎರಡೇ ಡೋಸ್​. ಹಾಗಿರುವಾಗ 5 ಡೋಸ್​ ಎಂದು ಹೇಗೆಬಂತು ಎಂದು ಪ್ರಶ್ನಿಸಿದ್ದಾರೆ.

5 ಡೋಸ್​ ಕೊರೊನಾ ಲಸಿಕೆ ಪಡೆದ ಬಿಜೆಪಿ ನಾಯಕ !-ಸರ್ಟಿಫಿಕೇಟ್​ ಡೌನ್​ಲೋಡ್​ ಮಾಡಿದಾಗ ಬೆಳಕಿಗೆ ಬಂತು ಪ್ರಮಾದ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Sep 20, 2021 | 1:00 PM

Share

ಮೀರತ್​:  ಉತ್ತರ ಪ್ರದೇಶದ ಬಿಜೆಪಿ ನಾಯಕರೊಬ್ಬರು  ಕೊರೊನಾ ಲಸಿಕೆ (Covid 19 Vaccine Certificate) ಪಡೆದು ಸರ್ಟಿಫಿಕೇಟ್​ ಡೌನ್​ ಲೋಡ್​ ಮಾಡಿಕೊಂಡರೆ ಅಲ್ಲೊಂದು ವಿಚಿತ್ರ ಸಂಗತಿ ಬಯಲಾಗಿದೆ. ರಾಮಪಾಲ್​ ಸಿಂಗ್​ (73) ಎಂಬುವರು ಕೊರೊನಾ ಲಸಿಕೆ ಪಡೆದು ಸರ್ಟಿಫಿಕೇಟ್​ ಡೌನ್​ ಲೋಡ್​ ಮಾಡಿಕೊಂಡಿದ್ದರು. ಅದರಲ್ಲಿ ಕೊರೊನಾ ಲಸಿಕೆ 5 ಡೋಸ್​ ಪಡೆಯಲಾಗಿದೆ ಎಂದು ಉಲ್ಲೇಖವಾಗಿದ್ದು, ಆರನೇ ಲಸಿಕೆಗೆ ದಿನಾಂಕವನ್ನೂ ತಿಳಿಸಲಾಗಿದೆ. ಇದನ್ನು ನೋಡಿ ಸ್ವತಃ ರಾಮಪಾಲ್​ ಸಿಂಗ್​ ಕಂಗಾಲಾಗಿದ್ದಾರೆ.  

ರಾಮಪಾಲ್​ ಸಿಂಗ್​ ಅವರು ಮೀರತ್​ನ ಸರ್ಧನ ಪ್ರದೇಶದ ಬೂತ್​ ನಂ.79ರ ಬಿಜೆಪಿ ಅಧ್ಯಕ್ಷರು. ಹಿಂದು ಯುವ ವಾಹಿನಿಯ ಸದಸ್ಯರೂ ಹೌದು. ಅವರು ಕೊರೊನಾ ಲಸಿಕೆ ಎರಡೂ ಡೋಸ್​ ಲಸಿಕೆಯನ್ನು ಪಡೆದು, ಅದರ ಸರ್ಟಿಫಿಕೇಟ್​ ಡೌನ್​ಲೋಡ್​ ಮಾಡಿಕೊಂಡಿದ್ದರು. ಆದರೆ ಆ ಸರ್ಟಿಫಿಕೇಟ್​​ನಲ್ಲಿ, ರಾಮಪಾಲ್​ 5 ಡೋಸ್​ ಕೊರೊನಾ ಲಸಿಕೆ ಪಡೆದಿದ್ದಾರೆ ಎಂದು ಉಲ್ಲೇಖವಾಗಿದೆ. ಆರನೇ ಲಸಿಕೆ ಪಡೆಯುವ ದಿನಾಂಕವನ್ನೂ ತಿಳಿಸಿದ್ದಾರೆ.

ಅದನ್ನು ನೋಡಿ ರಾಮಪಾಲ್​ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾನು ಪಡೆದಿದ್ದು ಎರಡೇ ಡೋಸ್​. ಹಾಗಿರುವಾಗ 5 ಡೋಸ್​ ಎಂದು ಹೇಗೆಬಂತು ಎಂದು ಪ್ರಶ್ನಿಸಿದ್ದಾರೆ. ಇದೀಗ ಈ ಬಗ್ಗೆ ತನಿಖೆಯೂ ನಡೆಯುತ್ತಿದೆ.  ಅಂದಹಾಗೆ ರಾಮಪಾಲ್​ ತಮ್ಮ ಮೊದಲ ಡೋಸ್​​ನ್ನು ಮಾರ್ಚ್​ 16ರಂದು, ಎರಡನೇ ಡೋಸ್​​ನ್ನು ಮೇ 8ರಂದು ಪಡೆದಿದ್ದರು. ಆದರೆ ಸರ್ಟಿಫಿಕೇಟ್​ನಲ್ಲಿ ಆರನೇ ಡೋಸ್​ ಲಸಿಕೆಯನ್ನು 2021ರ ಡಿಸೆಂಬರ್​​ನಿಂದ ಜನವರಿ 2022ರೊಳಗೆ ಪಡೆಯಬೇಕು ಎಂದು ಉಲ್ಲೇಖಿಸಲಾಗಿದೆ ಮತ್ತು ರಾಮಪಾಲ್​ ಅವರು ಮೊದಲ ಡೋಸ್​ನ್ನು ಮಾರ್ಚ್​ 16, ಎರಡನೇ ಡೋಸ್​ನ್ನು ಮೇ 8, ಮೂರನೇ ಡೋಸ್​ ಮೇ 15 ಮತ್ತು 4-5ನೇ ಡೋಸ್​​ನ್ನು ಸೆಪ್ಟೆಂಬರ್​ 15ರಂದು ಪಡೆದಿದ್ದಾರೆ ಎಂದೂ ತೋರಿಸಲಾಗಿದೆ.

ಇದನ್ನೂ ಓದಿ: Statue of Equality: ದಿವ್ಯ ಸಾಕೇತಂ ಆಶ್ರಮದಲ್ಲಿ ತ್ರಿದಂಡಿ ಚಿನ್ನಜೀಯರ್ ಶ್ರೀಗಳ ಸುದ್ದಿಗೋಷ್ಠಿ

ವೈರಲ್ ಆಯ್ತು ಚೀಸ್​ ಜತೆಗೆ ಮ್ಯಾಂಗೋ ಐಸ್ಕ್ರೀಮ್ ಚಾಟ್; ಇದ್ಯಾವ್ದಪ್ಪಾ ಹೊಸ ರೆಸಿಪಿ ಎಂದ ನೆಟ್ಟಿಗರು

(Uttar Pradesh BJP leader given 5 doses of Covid 19 vaccine shows Certificate)

Follow Us
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’