AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರನ ಕುಟುಂಬಕ್ಕೆ ಸಿಗಲಿಲ್ಲ ವಧುವಿನ ಮನೆ ವಿಳಾಸ, ರಾತ್ರಿಯೆಲ್ಲಾ ಹುಡುಕಾಟ, ಮದುವೆ ದಿನದ ಪೇಚಾಟ

ಮದುವೆ ಸಂಬಂಧ ಜೋಡಿಸಿದ್ದ ದಲ್ಲಾಳಿಯನ್ನು ಹುಡುಗನ ಕಡೆಯವರು ಕೂಡಿಹಾಕಿದ್ದಾರೆ. ಈ ಘಟನೆಯು ಊರಲ್ಲೆಲ್ಲಾ ಸದ್ದು ಮಾಡಿದ್ದು, ನಗರದ ಪೊಲೀಸರು ಮಧ್ಯಸ್ಥಿಕೆ ವಹಿಸುವಂತಾಗಿದೆ.

ವರನ ಕುಟುಂಬಕ್ಕೆ ಸಿಗಲಿಲ್ಲ ವಧುವಿನ ಮನೆ ವಿಳಾಸ, ರಾತ್ರಿಯೆಲ್ಲಾ ಹುಡುಕಾಟ, ಮದುವೆ ದಿನದ ಪೇಚಾಟ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Apr 07, 2022 | 10:41 AM

Share

ಲಖನೌ: ಮದುವೆ ದಿಬ್ಬಣ ಹೊರಟ ವರನ ಕಡೆಯವರಿಗೆ ವಧುವಿನ ಮನೆಯ ವಿಳಾಸ ಸಿಗದೇ ಪೇಚಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಹುಡುಗನ ಕಡೆಯವರು ಹುಡುಗಿಗಾಗಿ ರಾತ್ರಿಯೆಲ್ಲಾ ಹುಡುಕಾಡಿದರೂ ಮದುವೆ ಹೆಣ್ಣು ಪತ್ತೆಯಾಗದೆ, ಕೊನೆಗೆ ಬರಿಗೈಯ್ಯಲ್ಲಿ ಮನೆಗೆ ವಾಪಾಸಾಗಿದ್ದಾರೆ.

ಈ ಘಟನೆ ನಡೆದ ಮರುದಿವಸ ಮದುವೆ ಸಂಬಂಧ ಜೋಡಿಸಿದ್ದ ದಲ್ಲಾಳಿಯನ್ನು ಹುಡುಗನ ಕಡೆಯವರು ಕೂಡಿಹಾಕಿದ್ದಾರೆ. ಈ ಘಟನೆಯು ಉತ್ತರ ಪ್ರದೇಶದ ಕೊತ್ವಾಲಿ ಊರಲ್ಲೆಲ್ಲಾ ಸದ್ದು ಮಾಡಿದ್ದು, ನಗರದ ಪೊಲೀಸರು ಮಧ್ಯಸ್ಥಿಕೆ ವಹಿಸುವಂತಾಗಿದೆ. ಮದುವೆಯಾಗಬೇಕಿದ್ದ ಹುಡುಗಿಯು ಮೊದಲೇ ಬಿಹಾರದ ಮತ್ತೊಬ್ಬ ಹುಡುಗನನ್ನು ವರಿಸಿದ್ದಳು ಎಂದು ತಿಳಿದುಬಂದಿದೆ.

ಇದೇ ಹುಡುಗಿಯನ್ನು ವರಿಸುವ ಸಲುವಾಗಿ ಕೇವಲ ಬ್ರೋಕರ್ ಒಬ್ಬಳ ಮೂಲಕ ಕೊತ್ವಾಲಿಯ ಹುಡುಗ ಮಾತುಕತೆ ನಡೆಸಿದ್ದ. ಹುಡುಗನ ಕೈಯಿಂದ ಮದುವೆಯ ತಯಾರಿಗೆಂದು ₹ 20 ಸಾವಿರ ಹಣವನ್ನೂ ಪಡೆಯಲಾಗಿತ್ತು. ಹುಡುಗಿಯನ್ನು ನೋಡಲು ವರನಾಗಲಿ ಆತನ ಮನೆಯವರಾಗಲಿ ಅವಳ ಮನೆಗೆ ಭೇಟಿ ಕೊಟ್ಟಿಲ್ಲ. ಇದು ಸಮಸ್ಯೆ ಬಿಗಡಾಯಿಸಲು ಮುಖ್ಯ ಕಾರಣವಾಗಿದೆ.

ಮದುವೆಯ ದಿನದಂದು ವರನ ಕಡೆಯ ದಿಬ್ಬಣ ಬಂದಾಗ ಹುಡುಗಿಯ ವಿಳಾಸ ಸಿಗದೇ ಪರದಾಡುವಂತಾಗಿದೆ. ರಾತ್ರಿಯೆಲ್ಲಾ ಹುಡುಗಿಯನ್ನು ಹುಡುಕಿ ಬಳಿಕ ಖಾಲಿ ಕೈಯಲ್ಲಿ ವಾಪಾಸಾಗುವಂತಾಗಿದೆ. ವರನ ಕಡೆಯವರು ವಧು-ವರರನ್ನು ಹೊಂದಿಸಿದ್ದ ಹೆಂಗಸನ್ನು ಮನೆಯಲ್ಲಿ ಕೂಡಿ ಹಾಕಿದ್ದರು. ಈ ಮಾಹಿತಿ ತಿಳಿದ ಪೊಲೀಸರು ದಲ್ಲಾಳಿ ಮಹಿಳೆ, ವರನ ತಾಯಿ ಮತ್ತು ಕುಟುಂಬದ ಕೆಲವರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ತನಿಖೆ ಆರಂಭಿಸಿದ್ದಾರೆ.

ಮಾತು ಬಾರದ ಮೌನ ಹಕ್ಕಿಗಳ ಪ್ರೇಮರಾಗಕ್ಕೆ ಮದುವೆಯ ಅನುಬಂಧ.. ಎಂಥಾ ಸಂಬಂಧ!

Published On - 9:17 pm, Tue, 15 December 20

ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್