ನಮ್ಮತ್ತ ಬೆರಳು ತೋರಿಸಿ ಪ್ರಯೋಜನವಿಲ್ಲ, ಬಿಜೆಪಿ ದೇಶವನ್ನೇ ಮಾರಿದೆ: ಮಮತಾ ಬ್ಯಾನರ್ಜಿ

Mamata Banerjee: ಸರ್ಕಾರ ದೇಶವನ್ನು ಮಾರಲು ಪ್ರಯತ್ನಿಸುತ್ತಿದೆ. ರೈಲ್ವೇಗಳು, ವಿಮಾನ ನಿಲ್ದಾಣಗಳು, ಪಿಎಸ್ಯು ಎಲ್ಲವನ್ನೂ ಮಾರಾಟ ಮಾಡಲು ಬಯಸುತ್ತಾರೆ. ನೀವು ದೇಶದ ಮಣ್ಣನ್ನು ಮಾರಾಟ ಮಾಡಬಹುದೇ? ಎಂದು ಬ್ಯಾನರ್ಜಿ ಕೇಳಿದ್ದಾರೆ.

ನಮ್ಮತ್ತ ಬೆರಳು ತೋರಿಸಿ ಪ್ರಯೋಜನವಿಲ್ಲ, ಬಿಜೆಪಿ ದೇಶವನ್ನೇ ಮಾರಿದೆ: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Aug 28, 2021 | 5:03 PM

ದೆಹಲಿ: ಕಲ್ಲಿದ್ದಲು ಕಳ್ಳಸಾಗಣೆ ಆರೋಪಿತ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತೃಣಮೂಲ ಸಂಸದ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರನ್ನು ಕರೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಬಿಜೆಪಿ ನಮ್ಮ ವಿರುದ್ಧ ಕೇಂದ್ರ ಏಜೆನ್ಸಿಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಡೈಮಂಡ್ ಹಾರ್ಬರ್  ಸಂಸದ ಅಭಿಷೇಕ್ ಬ್ಯಾನರ್ಜಿ (Abhishek Banerjee) ಸೆಪ್ಟೆಂಬರ್ 6 ರಂದು ನವದೆಹಲಿಯಲ್ಲಿರುವ ಏಜೆನ್ಸಿಯ ಮುಂದೆ ಹಾಜರಾಗುವಂತೆ ಹೇಳಲಾಗಿದ್ದು , ಅವರ ಪತ್ನಿಗೆ ಸೆಪ್ಟೆಂಬರ್ 1 ರಂದು ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

ಬಿಜೆಪಿಯು ತನ್ನ ಪಕ್ಷದ ವಿರುದ್ಧ ರಾಜಕೀಯವಾಗಿ ಹೋರಾಡುವಂತೆ ಸವಾಲು ಹಾಕಿದ ಮುಖ್ಯಮಂತ್ರಿ, “ನೀವು ಯಾಕೆ ನಮ್ಮ ವಿರುದ್ಧ ಇಡಿಯನ್ನು ಬಿಡುತ್ತಿದ್ದೀರಿ. ನೀವು ಒಂದು ಪ್ರಕರಣವನ್ನು ನಮ್ಮತ್ತ ಬಿಟ್ಟರೆ ಮೂಟೆಯಷ್ಟು ಪ್ರಕರಣಗಳನ್ನು ನಾವು ಹೊರಗೆ ಹಾಕುತ್ತೇವೆ. ಹೇಗೆ ಹೋರಾಡಬೇಕೆಂದು ನಮಗೆ ತಿಳಿದಿದೆ. ಗುಜರಾತ್ ಇತಿಹಾಸ ನಮಗೆ ತಿಳಿದಿದೆ . ನೈಸರ್ಗಿಕ ಸಂಪನ್ಮೂಲಗಳಿಗೆ ಹಕ್ಕುಗಳ ಹಂಚಿಕೆ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂದಿದ್ದಾರೆ ಮಮತಾ ಬ್ಯಾನರ್ಜಿ.

“ಕಲ್ಲಿದ್ದಲು ಭ್ರಷ್ಟಾಚಾರಕ್ಕಾಗಿ ತೃಣಮೂಲದತ್ತ ಬೆರಳು ತೋರಿಸಿ ಪ್ರಯೋಜನವಿಲ್ಲ. ಅದು ಕೇಂದ್ರದಲ್ಲಿದೆ. ಅದರ ಮಂತ್ರಿಗಳ ಬಗ್ಗೆ ಏನಂತೀರಿ? ಬಂಗಾಳದ ಕಲ್ಲಿದ್ದಲು ಪ್ರದೇಶ, ಅಸನ್ಸೋಲ್ ಪ್ರದೇಶವನ್ನು ಲೂಟಿ ಮಾಡಿದ ಬಿಜೆಪಿ ನಾಯಕರ ಬಗ್ಗೆ ಏನು ಹೇಳುತ್ತೀರಿ ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಪಕ್ಷದ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಮತಾ ಈ ರೀತಿ ಹೇಳಿದ್ದಾರೆ.

ಕೇಂದ್ರವು ಇತ್ತೀಚೆಗೆ ಘೋಷಿಸಿದ ರಾಷ್ಟ್ರೀಯ ನಗದೀಕರಣ ಯೋಜನೆಯನ್ನು (National Monetisation Pipeline plan) ಗುರಿಯಾಗಿಟ್ಟುಕೊಂಡು ಅಲ್ಲಿ ಖಾಸಗಿ ಬಳಕೆಯಿಂದ ಲಾಭದಾಯಕವಲ್ಲದ ಸರ್ಕಾರಿ ಸ್ವತ್ತುಗಳನ್ನು ನಗದೀಕರಿಸಲಾಗುವುದು. ಬಿಜೆಪಿ ಸರ್ಕಾರವು ದೇಶದ ಆಸ್ತಿಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಸರ್ಕಾರ ದೇಶವನ್ನು ಮಾರಲು ಪ್ರಯತ್ನಿಸುತ್ತಿದೆ. ರೈಲ್ವೇಗಳು, ವಿಮಾನ ನಿಲ್ದಾಣಗಳು, ಪಿಎಸ್ಯು ಎಲ್ಲವನ್ನೂ ಮಾರಾಟ ಮಾಡಲು ಬಯಸುತ್ತಾರೆ. ನೀವು ದೇಶದ ಮಣ್ಣನ್ನು ಮಾರಾಟ ಮಾಡಬಹುದೇ? ಎಂದು ಬ್ಯಾನರ್ಜಿ ಕೇಳಿದ್ದಾರೆ.

ಸರ್ಕಾರವು ರಸ್ತೆ ವಲಯದಿಂದ 6 1.6 ಲಕ್ಷ ಕೋಟಿ, ರೈಲ್ವೆ ವಲಯದಿಂದ 1.5 ಲಕ್ಷ ಕೋಟಿ ಮತ್ತು ವಿದ್ಯುತ್ ವಲಯದಿಂದ ₹ 79,000 ಕೋಟಿ ಮೌಲ್ಯದ ಆಸ್ತಿಯನ್ನು ನಗದೀಕರಿಸಲಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ. ಕೇಂದ್ರವು ವಿಮಾನ ನಿಲ್ದಾಣಗಳಿಂದ ₹ 20,800 ಕೋಟಿ, ಬಂದರುಗಳಿಂದ ₹ 13,000 ಕೋಟಿ, ಟೆಲಿಕಾಂನಿಂದ ₹ 35,000 ಕೋಟಿ, ಕ್ರೀಡಾಂಗಣಗಳಿಂದ 11,500 ಕೋಟಿ ಮತ್ತು ವಿದ್ಯುತ್ ಪ್ರಸರಣ ವಲಯಗಳಿಂದ ₹ 45,200 ಕೋಟಿ ಹಣ ಗಳಿಸಲಿದೆ.

ಇದನ್ನೂ ಓದಿ: Coal Scam: ಅಕ್ರಮ ಹಣ ವರ್ಗಾವಣೆ ಪ್ರಕರಣ; ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ದಂಪತಿಗೆ ಇ.ಡಿಯಿಂದ ಸಮನ್ಸ್ ಜಾರಿ

ಇದನ್ನೂ ಓದಿ:  ‘ನಮ್ಮ ಸ್ವಾತಂತ್ರ್ಯ ಹತ್ತಿಕ್ಕುವವರ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತೋಣ’ -ಮಮತಾ ಬ್ಯಾನರ್ಜಿ ಸಲಹೆ

(Why are you unleashing the ED against us asks West Bengal Chief Minister Mamata Banerjee)

ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ